ಆ್ಯಪ್ನಗರ

ಸಗಣಿ ದೀಪದಿಂದ ದೃಷ್ಟಿ ದೋಷ ಮಾಯ..! ಇಲ್ಲಿದೆ ದೃಷ್ಟಿ ದೋಷಕ್ಕೆ ಪರಿಹಾರ

ಹಿಂದಿನ ಕಾಲದಲ್ಲಿ ಹಿರಿಯರು ಚಿಕ್ಕ ಮಗುವಿಗೆ ಅಥವಾ ಮನೆಯಿಂದ ಹೊರಗೆ ಹೋಗಿ ಬಂದಾಗಲೆಲ್ಲಾ ಅಥವಾ ಅನಾರೋಗ್ಯದ ಸಮಯದಲ್ಲಿ ದೃಷ್ಟಿ ತೆಗೆಯುವ ಪದ್ಧತಿಯಿತ್ತು. ನಮ್ಮ ಹಿರಿಯರು ಯಾವುದರಿಂದ ದೃಷ್ಟಿ ತೆಗೆಯುತ್ತಿದ್ದರು ಗೊತ್ತೇ..? ದೃಷ್ಟಿ ತೆಗೆಯುವುದು ಹೇಗೆ.? ದೃಷ್ಟಿ ತೆಗೆಯುವುದರ ಪ್ರಯೋಜನವೇನು...?

Navbharat Times 19 Jan 2021, 1:13 pm
ನಿಮ್ಮ ಮೆಲೆ ಕೆಟ್ಟ ದೃಷ್ಟಿ ಬಿದ್ದಿರುವುದು ಅಥವಾ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿರುವುದು ನಿಮ್ಮ ಅರಿವಿಗೆ ಬಂದಾಗ ಜ್ಯೋತಿಷ್ಯರನ್ನು ಮನೆಗೆ ಕರೆಸಿ ಅವರಿಂದ ಪರಿಹಾರವನ್ನು ಪಡೆಯುವ ಅವಶ್ಯಕತೆಯಿಲ್ಲ. ಬದಲಾಗಿ, ನೀವು ಹಳೆಯ ಕಾಲದಲ್ಲಿ ಅಜ್ಜ - ಅಜ್ಜಿಯರು ಹೇಳುವ ಈ ಉಪಾಯಗಳನ್ನು ಕೂಡ ಮಾಡಬಹುದು. ನಮ್ಮ ಹಿರಿಯರ ಈ ಸಲಹೆಯು ಕೆಟ್ಟ ದೃಷ್ಟಿಯನ್ನು ದೂರಾಗಿಸುತ್ತದೆ. ಅಜ್ಜ - ಅಜ್ಜಿಯ ಅಥವಾ ನಮ್ಮ ಹಿರಿಯರ ಮಾತಿನ ಪ್ರಕಾರ ಕೆಟ್ಟ ದೃಷ್ಟಿಯನ್ನು ದೂರಾಗಿಸಿಕೊಳ್ಳುವುದು ಹೇಗೆ..?
Vijaya Karnataka Web Drishti Dosha
ದೃಷ್ಟಿ ದೋಷ


ಹನುಮಾನ್ ಪೂಜೆಯ ಬಗ್ಗೆ ನಿಮಗೆಷ್ಟು ಗೊತ್ತು..? ಈ ಧ್ಯಾನ ಮಂತ್ರವನ್ನೇ ಜಪಿಸಿ..!
1. ರೊಟ್ಟಿಯಿಂದ ಈ ಉಪಾಯಗಳನ್ನು ಮಾಡಬಹುದು:
ನೀವು ಕೆಟ್ಟ ದೃಷ್ಟಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಆಗ ನೀವು ಜೋಳದ ರೊಟ್ಟಿಯ ಮೂಲಕ ಹೀಗೆ ಮಾಡಬಹುದು. ಜೋಳದ ರೊಟ್ಟಿಯನ್ನು ಬೇಯಿಸುವಾಗ ಒಂದು ಕಡೆ ರೊಟ್ಟಿ ಬೇಯಿಸುತ್ತಿದ್ದರೆ, ಇನ್ನೊಂದು ಕಡೆ ಅದನ್ನು ತಯಾರಿಸುತ್ತಿರಬೇಕು. ಅಲ್ಲದೆ, ಬೇಯಿಸಿದ ಭಾಗಕ್ಕೆ ತುಪ್ಪ ಹಚ್ಚಿ ಮತ್ತು ರೋಟಿಯನ್ನು ಹಳದಿ ದಾರದಿಂದ ಕಟ್ಟಿಕೊಳ್ಳಿ. ನಂತರ ಅದನ್ನು 7 ಬಾರಿ ದೃಷ್ಟಿ ಇರುವ ವ್ಯಕ್ತಿಯ ತಲೆಯಿಂದ ಕಾಲಿನವರೆಗೆ ಸುಳಿದು ನಂತರ ನಾಯಿಗಳಿಗೆ ಆಹಾರವಾಗಿ ನೀಡಬೇಕು. ಹಾಗೆ ಮಾಡುವುದರಿಂದ ದೃಷ್ಟಿ ದೋಷವು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.

ಭಗವದ್ಗೀತೆಯ ಈ ಸಾಲು ಸಂಪತ್ತನ್ನೇ ನೀಡುವುದು..! ಇವು ಪ್ರಾಚೀನ ಪರಿಹಾರಗಳು

ಕೆಟ್ಟ ದೃಷ್ಟಿ


ಇದರಿಂದ ಹಣದ ಸಮಸ್ಯೆಯೇ ಬಾರದು ಎನ್ನುತ್ತಾನೆ ಚಾಣಕ್ಯ..! ಏನು ಮಾಡಬೇಕು..?
2. ದೃಷ್ಟಿ ದೋಷದ ನಿವಾರಣೆಗೆ ಹೀಗೆ ಮಾಡಿ:
ಗೋಧಿ ಹಿಟ್ಟಿನಿಂದ ತಯಾರಿಸಿದ ದೀಪವು ದೃಷ್ಟಿ ದೋಷವನ್ನು ನಿವಾರಿಸುವಲ್ಲಿ ಸಹಕರಿಸುತ್ತದೆ. ನಿಮ್ಮಲ್ಲಿ ಕೆಟ್ಟ ದೃಷ್ಟಿ ದೋಷವಿದ್ದರೆ ಆಗ ನೀವು ಗೋಧಿ ಹಿಟ್ಟಿನಿಂದ ದೀಪವನ್ನು ತಯಾರಿಸಿ, ಕಪ್ಪು ದಾರವನ್ನು ಬತ್ತಿಯನ್ನಾಗಿ ಮಾಡಿ. ಆ ಜ್ವಾಲೆಯಲ್ಲಿ ಎರಡು ಕೆಂಪು ಮೆಣಸಿನಕಾಯಿಗಳನ್ನು ಇರಿಸಿ ನಂತರ ಕೆಟ್ಟ ದೃಷ್ಟಿ ದೋಷಕ್ಕೆ ಒಳಗಾದ ವ್ಯಕ್ತಿಗೆ ಬೆಳಗಿ. ಹಾಗೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂದು ಹಿರಿಯರು ನಂಬುತ್ತಾರೆ.

ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ..? ಗುರುಸ್ವಾಮಿಗಳೆಂದರೆ ಯಾರು..?
3. ಹಸುವಿನಿಂದ ನಂಬಲಾಗದ ಪ್ರಯೋಜನಗಳು:
ಜೋಳದಿಂದ ತಯಾರಿಸಿದ ಮತ್ತು ಗೋಧಿಯಿಂದ ತಯಾರಿಸಿದ ರೊಟ್ಟಿಯನ್ನು ಹೊರತುಪಡಿಸಿ, ಹಸುವಿನ ಸಗಣಿಯಿಂದಲೂ ಕೂಡ ಅನೇಕ ಪ್ರಯೋಜನಗಳಿವೆ. ನಮ್ಮ ಹಿರಿಯರು ಹೇಳುವ ಪ್ರಕಾರ, ಗೋವಿನ ಸಗಣಿಯಿಂದ 4 ಮುಖವುಳ್ಳ ದೀಪವನ್ನು ತಯಾರಿಸಿ, ಎಳ್ಳಣ್ಣೆಯನ್ನು ಮತ್ತು ಸ್ವಲ್ಪ ಬೆಲ್ಲವನ್ನು ಹಾಕಿ ಸಗಣಿ ದೀಪವನ್ನು ಬೆಳಗಿ ನಂತರ ಅದನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸಿ. ಹಾಗೆ ಮಾಡುವುದರಿಂದ ಕೆಟ್ಟ ಕಣ್ಣಿನ ದೃಷ್ಟಿ ನಾಶವಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.

ಈ ದಿನ ನೆಲ್ಲಿಕಾಯಿ ತಿಂದರೆ ದುರಾದೃಷ್ಟ ಖಂಡಿತ..! ನೆಲ್ಲಿಕಾಯಿ ಪ್ರಯೋಜನವೇನು..?

ಹಸು


ಈ ಕನಸುಗಳು ಬಿದ್ದರೆ ಬರ್ಬಾತ್‌ ಆಗೋದು ಗ್ಯಾರೆಂಟಿ..! ಅಶುಭ ಕನಸಿದು
4. ಇದು ಅದ್ಭುತವಾದ ಫಲವನ್ನು ನೀಡುತ್ತದೆ:
ಕೆಟ್ಟ ಕಣ್ಣು ದೃಷ್ಟಿ ದೋಷದಿಂದ ಮುಕ್ತಿಯನ್ನು ಪಡೆಯಲು, ಭಾನುವಾರ ಅಥವಾ ಶನಿವಾರದ ದಿನದಂದು, ದೃಷ್ಟಿ ದೋಷಕ್ಕೆ ಒಳಗಾದ ವ್ಯಕ್ತಿಯ ತಲೆಯ ಸುತ್ತ 7 ಬಾರಿ ಸುಳಿದು ನಂತರ ಆ ಹಾಲನ್ನು ನಾಯಿಗೆ ನೀಡಬೇಕು. ಇದನ್ನು ಮಾಡುವುದರಿಂದ, ನಿಮಗಿದ್ದ ಕೆಟ್ಟ ಕಣ್ಣು ದೋಷವು ದೂರಾಗುತ್ತದೆ. ಆದರೆ ಅದನ್ನು ನಿಯಮಿತವಾಗಿ ಮಾಡಬೇಕಾಗಿದೆ ಎಂಬುದನ್ನು ನೆನಪಿನಲ್ಲಿಡಿ.

ಗೋ ದಾನದಿಂದ ಜನ್ಮ ಜನ್ಮದ ಪಾಪಗಳು ದೂರ..! ದಾನದ ವಿಧಗಳಾವುವು..?
ಕೆಟ್ಟ ಕಣ್ಣು ದೃಷ್ಟಿ ದೋಷವನ್ನು ನಿವಾರಿಸಿಕೊಳ್ಳಲು ನಮ್ಮ ಹಿರಿಯರು ಮಾಡುತ್ತಿದ್ದ ಉಪಾಯಗಳಿವು. ನಿಮಗೂ ಕೂಡ ಸಹಕಾರಿಯಾಗಬಹುದು. ಹಿಂದಿನ ಕಾಲದಲ್ಲಿ ಇವುಗಳನ್ನೇ ಅಳವಡಿಸಿಕೊಂಡು ತಮ್ಮ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ