ಆ್ಯಪ್ನಗರ

ಗ್ರಹಣಕ್ಕೆ ಪೌರಾಣಿಕ ಹಾಗೂ ವೈಜ್ಞಾನಿಕ ಕಾರಣವೇನು ಗೊತ್ತಾ..? ಇಲ್ಲಿದೆ ಗ್ರಹಣದ ಕಥೆ

ಸೂರ್ಯಗ್ರಹಣದ ಕುರಿತು ಪೌರಾಣಿಕ ದೃಷ್ಣಿಕೋನ ಹಾಗೂ ವೈಜ್ಞಾನಿಕ ದೃಷ್ಟಿಕೋನವು ಭಿನ್ನಭಿನ್ನವಾಗಿದೆ. ಪೌರಾಣಿಕ ದೃಷ್ಟಿಕೋನದ ಪ್ರಕಾರ ಗ್ರಹಣವೆಂದರೇನು ಗೊತ್ತಾ..? ಗ್ರಹಣ ಸಂಭವಿಸಲು ಕಾರಣವೇನು ಗೊತ್ತಾ..? ವೈಜ್ಞಾನಿಕ ದಷ್ಟಿಕೋನದಲ್ಲಿ ಗ್ರಹಣಕ್ಕೆ ಕಾರಣವೇನು ಗೊತ್ತಾ..? ಇಲ್ಲಿದೆ ಇವೆರಡರ ಭಿನ್ನತೆ.

Agencies 19 Jun 2020, 10:53 am
ಪೌರಾಣಿಕ ನಂಬಿಕೆಗಳ ಪ್ರಕಾರ, ಗ್ರಹಣ ಮತ್ತು ಗ್ರಹಣದ ಸೂತಕ ಸಮಯದಲ್ಲಿ ಯಾವುದೇ ರೀತಿಯ ದೇವರ ಪೂಜೆಯನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಗ್ರಹಣಕ್ಕೂ ಮುಂಚಿತವಾಗಿ ಸೂತಕದ ಸಮಯ ಪ್ರಾರಂಭವಾಗುತ್ತದೆ. ಈ ಬಾರಿ ಜೂನ್‌ 21 ರಂದು ಸೂರ್ಯಗ್ರಹಣದ ಸೂತಕದ ಅವಧಿಯು ಜೂನ್‌ 20 ರ ರಾತ್ರಿ 10 ಗಂಟೆ 14 ನಿಮಿಷಗಳಿಂದ ಪ್ರಾರಂಭವಾಗುತ್ತದೆ. ಸೂತಕದ ಅವಧಿಯು ಜೂನ್‌ 21 ರಂದು 1 ಗಂಟೆ 38 ನಿಮಿಷದವರೆಗೆ ಇರುತ್ತದೆ.
Vijaya Karnataka Web here is a scientific and mythological story about eclipse
ಗ್ರಹಣಕ್ಕೆ ಪೌರಾಣಿಕ ಹಾಗೂ ವೈಜ್ಞಾನಿಕ ಕಾರಣವೇನು ಗೊತ್ತಾ..? ಇಲ್ಲಿದೆ ಗ್ರಹಣದ ಕಥೆ


ಬೆತ್ತಲೆಯನ್ನು ಪಾಪ ಎನ್ನುತ್ತಾನೆ ಶ್ರೀಕೃಷ್ಣ.. ಇಲ್ಲಿದೆ ನಿರ್ವಸ್ತ್ರಧಾರಿಗಳ ವಾಸಸ್ಥಳ

2020 ಸೂರ್ಯಗ್ರಹಣ


ಸೂರ್ಯಗ್ರಹಣದ ಹಿಂದೆ ಒಂದು ರೋಚಕವಾದ ಕಥೆಯಿದೆ. ಈ ಕಥೆಯನ್ನು ನೀವು ಕೇಳಿಯೂ ಇರಬಹುದು ಅಥವಾ ಕೇಳದೇ ಕೂಡ ಇದ್ದಿರಬಹುದು. ಸೂರ್ಯಗ್ರಹಣದ ಕುರಿತಿರುವ ಪೌರಾಣಿಕ ಕಥೆಗೂ ವೈಜ್ಞಾನಿಕ ಕಾರಣಕ್ಕೂ ತುಂಬಾನೇ ವ್ಯತ್ಯಾಸವನ್ನು ಹೊಂದಿದೆ. ಹಾಗಾದರೆ ಸೂರ್ಯಗ್ರಹಣದ ಕುರಿತಿರುವ ಕಥೆಯಾದರೂ ಏನು..? ಇಲ್ಲಿದೆ ನೋಡಿ ಸೂರ್ಯಗ್ರಹಣ ಹೇಗಾಗುತ್ತದೆ ಎನ್ನುವುದರ ಕಥೆ.

ನಿಮಗೆ ಭಗವದ್ಗೀತೆಯ ತತ್ವಗಳು ಗೊತ್ತಾ..? ಜೀವನವನ್ನು ಬದಲಾಯಿಸುತ್ತೆ ಭಗವದ್ಗೀತೆ

1) ಇದು ಸೂರ್ಯಗ್ರಹಣ ಕಥೆ:
ಸೂರ್ಯಗ್ರಹಣದ ಕಥೆಯು ಸಮುದ್ರ ಮಥನಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಅಮೃತವನ್ನು ಸವಿದು, ಅಮರರಾಗಲು ದೇವಾನುದೇವತೆಗಳು ಮತ್ತು ಅಸುರರು ಒಟ್ಟಾಗಿ ಸೇರಿ ಸಮುದ್ರವನ್ನು ಕಡೆದರು. ಸಮುದ್ರ ಮಂಥನದಲ್ಲಿ 14 ರತ್ನಗಳು ದೊರೆತವು. ಸಮುದ್ರ ಮಂಥನದಲ್ಲಿ ಅಮೃತವು ಹೊರಹೊಮ್ಮಿದಾಗ ಅದನ್ನು ಸವಿಯಲು ದೇವರುಗಳ ಮತ್ತು ಅಸುರರ ನಡುವೆ ಯುದ್ಧವೇ ನಡೆದು ಹೋಯಿತು.

ಶಕುನಿ ಗುಣವಂತನೇ..? ಕೆಡುಕನೇ..? ಇಲ್ಲಿದೆ ಶಕುನಿಯ ಆಸಕ್ತಿಕರ ಸಂಗತಿಗಳು

ದೇವತೆಗಳ ಮತ್ತು ಅಸುರರ ಯುದ್ಧವನ್ನು ನಿಲ್ಲಿಸಲು ಶ್ರೀಹರಿ ಮೋಹಿನಿ ಅವತಾರವನ್ನು ಪಡೆಯಬೇಕಾಯಿತು. ಮೋಹಿನಿ ಅವತಾರದಲ್ಲಿದ್ದ ಶ್ರೀಹರಿಯ ರೂಪವನ್ನು, ಸೌಂದರ್ಯವನ್ನು ಕಂಡು ರಾಕ್ಷಸರು ಮನಸೋತರು. ರಾಕ್ಷಸರು ಮೋಹಿನಿಯ ಸೌಂದರ್ಯವನ್ನು ನೋಡುವುದರೊಳಗೆ ದೇವತೆಗಳು ಅಮೃತವನ್ನು ಅದಾಗಲೇ ಸೇವಿಸಿದ್ದರು. ಆದರೆ ರಾಕ್ಷಸರ ಗುಂಪಿನಲ್ಲಿದ್ದ ರಾಹು ಎಂಬ ರಾಕ್ಷಸನು ದೇವತೆಗಳ ವೇಷವನ್ನು ಧರಿಸಿ ಅಮೃತವನ್ನು ಸವಿಯಲು ದೇವರುಗಳ ಮಧ್ಯ ಬಂದು ಕುಳಿತುಕೊಳ್ಳುತ್ತಾನೆ.

ಸಮುದ್ರ ಮಂಥನ


ದೇವತೆಗಳೆಲ್ಲರಿಗೂ ಅಮೃತವನ್ನು ವಿತರಿಸಲಾಗುತ್ತದೆ. ಅದೇ ಸಮಯದಲ್ಲಿ ದೇವತೆಗಳ ವೇಷಧಾರಿಯಾಗಿದ್ದ ರಾಹು ಕೂಡ ಅಮೃತವನ್ನು ಸೇವಿಸುತ್ತಾನೆ. ಆದರೆ ಚಂದ್ರ ಮತ್ತು ಸೂರ್ಯ ದೇವನಿಗೆ ರಾಹು ಕುಳಿತಿರುವುದು ತಿಳಿಯುತ್ತದೆ ಹಾಗೂ ಇದನ್ನು ಹೋಗಿ ವಿಷ್ಣುವಿನಲ್ಲಿ ಹೇಳುತ್ತಾರೆ. ಆಗ ವಿಷ್ಣು ಕೋಪಗೊಂಡು ತನ್ನ ಸುದರ್ಶನ ಚಕ್ರದಿಂದ ರಾಹುವಿನ ತಲೆಯನ್ನು ಕತ್ತರಿಸುತ್ತಾನೆ. ಆದರೆ ಅದಾಗಲೇ ರಾಹು ಅಮೃತವನ್ನು ಸವಿದು ಅಮರನಾಗಿದ್ದನು. ಅಂದಿನಿಂದ ಆತನ ದೇಹವು ರಾಹು ಮತ್ತು ಕೇತುವೆಂದು ವಿಭಜನೆಗೊಂಡಿತು. ಹಾಗೂ ರಾಹು ಅಂದಿನಿಂದ ಚಂದ್ರ ಮತ್ತು ಸೂರ್ಯನನ್ನು ತನ್ನ ಶತ್ರುವೆಂದು ಪರಿಗಣಿಸುತ್ತಾನೆ. ಈ ಗ್ರಹಗಳು ಕಾಲಕಾಲಕ್ಕೆ ಹಿಂಬಾಲಿಸುತ್ತದೆ. ಧರ್ಮಗ್ರಂಥಗಳಲ್ಲಿ ಈ ವಿದ್ಯಾಮಾನವನ್ನೇ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವೆಂದು ಕರೆಯಲಾಗುತ್ತದೆ.

ಮಾವು ಭಾರತವನ್ನು ಪ್ರವೇಶಿಸಿದ್ದು ಹೇಗೆ ಗೊತ್ತಾ..? ರಾಮಾಯಣದಲ್ಲಿದೆ ಮಾವಿನ ಕಥೆ

2) ಗ್ರಹಣದ ಕುರಿತಿರುವ ವೈಜ್ಞಾನಿಕ ದೃಷ್ಟಿಕೋನಗಳು:
ಗ್ರಹಣವು ಒಂದು ಖಗೋಳಕ್ಕೆ ಸಂಬಂಧಿಸಿದ ಘಟನೆಯಾಗಿದೆ ಎಂದು ವಿಜ್ಞಾನದಲ್ಲಿ ಹೇಳಲಾಗುತ್ತದೆ. ಗ್ರಹಣದ ವೇಳೆ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯ ಹಾದುಹೋಗುತ್ತಾನೆ. ಇದನ್ನು ಭೂಮಿಯಿಂದ ನೋಡಿದಾಗ, ಸೂರ್ಯನು ಸಂಪೂರ್ಣವಾಗಿ ಅಥವಾ ಭಾಗಶಃ ಚಂದ್ರನಿಂದ ಆವೃತ್ತವಾದಂತೆ ಕಾಣುತ್ತದೆ. ಅಂದರೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಚಂದನ ಹಿಂದಿರುವ ಸೂರ್ಯನು ಸ್ವಲ್ಪ ಸಮಯದವರೆಗೆ ಮರೆಯಾಗುತ್ತಾನೆ. ಈ ಘಟನೆಯನ್ನೇ ಸೂರ್ಯಗ್ರಹಣ ಎನ್ನಲಾಗುತ್ತದೆ.

ನೀರಿಗೆ ನಾಣ್ಯವನ್ನು ಯಾಕೆ ಎಸೆಯಲಾಗುತ್ತೆ ಗೊತ್ತಾ..? ಇಲ್ಲಿದೆ ಇದರ ಉಪಯೋಗ

3) 2020 ರ ಸೂರ್ಯಗ್ರಹಣ:
2020 ರ ಜೂನ್‌ 21 ರಂದು ಸೂರ್ಯಗ್ರಹಣವು ನಡೆಯಲಿದ್ದು, ಈ ಗ್ರಹಣವು ಮಧ್ಯಾಹ್ನ 3 ಗಂಟೆ 25 ನಿಮಿಷಗಳವರೆಗೆ ಇರುತ್ತದೆ. ಈ ಸೂರ್ಯಗ್ರಹಣವು ಸಂಪೂರ್ಣ ಸೂರ್ಯಗ್ರಹಣವಾಗಲಿದೆ. ಇದೇ ಜೂನ್‌ 21 ರ ಭಾನುವಾರ ಬೆಳಗ್ಗೆ 9 ಗಂಟೆ 15 ನಿಮಿಷ 58 ಸೆಕೆಂಡುಗಳಿಂದ ಆರಂಭವಾಗಿ ಮಧ್ಯಾಹ್ನ 2.58 ಕ್ಕೆ ಅಂತ್ಯಗೊಳ್ಳಲಿದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾದರೆ, ವರ್ಷದ ಎರಡನೇ ಸೂರ್ಯಗ್ರಹಣವು 2020 ರ ಕೊನೆಯಲ್ಲಿ ಮತ್ತೊಂದು ಸಂಭವಿಸಲಿದೆ.

ಬರೀಗಣ್ಣಿನಲ್ಲಿ ಗ್ರಹಣವನ್ನು ನೋಡದಿರಿ


ಕಾಳಿಯ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಆಕೆಯ 10 ನೈಜ ಸಂಗತಿಗಳು

ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಬರೀಗಣ್ಣಿನಿಂದ ನೇರವಾಗಿ ನೋಡಬಾರದು. ಗ್ರಹಣವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಈ ವೇಳೆ ಸೂರ್ಯನ ಕಿರಣಗಳು ನಮ್ಮ ಕಣ್ಣುಗಳ ಮೇಲೆ ನೇರವಾಗಿ ಬೀಳುವುದುರಿಂದ ದೃಷ್ಟಿ ಸಮಸ್ಯೆ ಬರಬಹುದೆಂಬ ವೈಜ್ಞಾನಿಕ ಕಾರಣವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ