ಆ್ಯಪ್ನಗರ

ನೀವು ಈ ತಪ್ಪುಗಳನ್ನು ಮಾಡಿದ್ದೇ ಆದರೆ ದರಿದ್ರವಂತರಾಗೋದು ಗ್ಯಾರೆಂಟಿ.. ಎಚ್ಚರ..!

ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ನಾವು ಮಾಡಿದ ಈ ತಪ್ಪುಗಳಿಂದ ಲಕ್ಷ್ಮಿ ದೇವಿಯು ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾಳೆ. ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣಗಳಾವುವು..? ಲಕ್ಷ್ಮಿ ದೇವಿ ಕೋಪಿಸಿಕೊಂಡರೆ ಏನಾಗುವುದು..?

Vijaya Karnataka Web 21 Oct 2021, 6:25 pm
ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎನ್ನುವ ನಂಬಿಕೆಯಿದೆ. ಪ್ರತಿಯೊಬ್ಬರೂ ಆಕೆಯನ್ನು ಸಂತೋಷಪಡಿಸಲು ಬಯಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಉಳಿಯಬೇಕು ಮತ್ತು ತಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆಯಾಗಬಾರದು ಮತ್ತು ಎಲ್ಲರೂ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ. ಆದರೆ ತಿಳಿದೋ ತಿಳಿಯದೆಯೋ ನಾವು ಇಂತಹ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಅದರಿಂದಾಗಿ ಲಕ್ಷ್ಮಿ ದೇವಿಯು ಕೋಪ ಮಾಡಿಕೊಳ್ಳುತ್ತಾಳೆ. ಆ ತಪ್ಪುಗಳಾವುವು..?
Vijaya Karnataka Web if you do these mistakes goddess lakshmi never bless you
ನೀವು ಈ ತಪ್ಪುಗಳನ್ನು ಮಾಡಿದ್ದೇ ಆದರೆ ದರಿದ್ರವಂತರಾಗೋದು ಗ್ಯಾರೆಂಟಿ.. ಎಚ್ಚರ..!


​ಗಂಡ ಹೆಂಡತಿಯ ನಡುವೆ ಜಗಳ

ಪತಿ - ಪತ್ನಿಯರ ನಡುವೆ ಆಗಾಗ ಜಗಳ ನಡೆಯುವ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ನಿಲ್ಲುವುದಿಲ್ಲ. ಅಂತಹ ಜನರಿಗೆ ಹಣ ಎಂದಿಗೂ ಬರುವುದಿಲ್ಲ. ಆದರೆ ಈ ಜನರಿಗೆ ಹಣವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಅಂದರೆ, ಅಂತಹ ಜನರು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಅವರು ಆದಾಯದ ಮೂಲಗಳನ್ನು ಹೊಂದಿದ್ದರೂ ಕೂಡ ಅವರಿಗೆ ಹಣವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.

ಕನಸಿನಲ್ಲಿ ಯಾವ ದೇವರನ್ನು ನೋಡಿದರೆ ಶುಭ..? ಯಾವ ದೇವರನ್ನು ನೋಡಿದರೆ ಅಶುಭ..?

​ತಡವಾಗಿ ಏಳುವುದು

ಬೆಳಿಗ್ಗೆ ತಡವಾಗಿ ಏಳುವಂತಹ ಜನರನ್ನು ಲಕ್ಷ್ಮಿ ದೇವಿ ಎಂದಿಗೂ ಇಷ್ಟಪಡುವುದಿಲ್ಲ. ಲಕ್ಷ್ಮಿ ದೇವಿ ಇಂತವರ ಮೇಲೆ ಯಾವಾಗಲೂ ಕೋಪವನ್ನು ಹೊಂದಿರುತ್ತಾಳೆ. ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ನಾವೆಲ್ಲರೂ ಹಾಸಿಗೆಯನ್ನು ಬಿಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಕೆಲವರು ಬೆಳಿಗ್ಗೆ 9 ಗಂಟೆಯವರೆಗೂ ಮಲಗಿರುತ್ತಾರೆ. ಅಂತಹ ಜನರೊಂದಿಗೆ ತಾಯಿ ಲಕ್ಷ್ಮಿ ಎಂದಿಗೂ ಸಂತೋಷವಾಗಿರುವುದಿಲ್ಲ. ಬೆಳಿಗ್ಗೆ ತಡವಾಗಿ ಏಳುವುದು ಮನೆಗೆ ಬಡತನವನ್ನು ಆಹ್ವಾನಿಸುತ್ತದೆ.

ಇವುಗಳು ಮನೆಯಲ್ಲಿದ್ದರೆ ಜಗಳ ತಪ್ಪಿದ್ದಲ್ಲ ಎನ್ನುತ್ತೆ ಗರುಡ ಪುರಾಣ..! ಇಲ್ಲಿದೆ ಪರಿಹಾರ..

​ಈ ರೀತಿ ಹಣ ಗಳಿಸಬಾರದು

ಕೆಲವು ಜನರು ತಪ್ಪು ರೀತಿಯಲ್ಲಿ ಹಣ ಗಳಿಸುವ ಮಾರ್ಗವನ್ನು ಅನುಸರಿಸುತ್ತಾರೆ, ಅಂತಹ ಜನರು ಲಕ್ಷ್ಮಿ ದೇವಿಯ ಕೋಪಕ್ಕೆ ಬಲಿಯಾಗುತ್ತಾರೆ. ಹಣದ ಮೇಲಿನ ಅತಿಯಾದ ವ್ಯಾಮೋಹದಿಂದ ಅದನ್ನು ಗಳಿಸಲು ಎಂದಿಗೂ ತಪ್ಪು ವಿಧಾನಗಳನ್ನು ಬಳಸಬೇಡಿ. ಈ ರೀತಿಯ ಹಣವನ್ನು ಗಳಿಸುವವರ ಮನೆಯಲ್ಲಿ ಎಂದಿಗೂ ಲಕ್ಷ್ಮಿ ದೇವಿಯು ವಾಸಿಸುವುದಿಲ್ಲ. ಅಂತಹ ಜನರ ಮೇಲೆ ದೇವಿ ಯಾವಾಗಲೂ ಕೋಪಗೊಳ್ಳುತ್ತಾಳೆ.

ಪೂಜಾ ವಿಧಿಗಳುಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡಿದರೆ ಪರಮ ಪುಣ್ಯ..! ಈ ಮಂತ್ರವನ್ನೇ ಪಠಿಸಿ..

​ಬಡವರನ್ನು ಅವಮಾನಿಸದಿರಿ

ಬಾಗಿಲಿಗೆ ಬರುವ ಭಿಕ್ಷುಕನನ್ನು ಧಿಕ್ಕರಿಸುವವರ ಮನೆಗೆ ಲಕ್ಷ್ಮಿ ದೇವಿ ಎಂದಿಗೂ ಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಇತರರಿಗೆ ಸಹಾಯ ಮಾಡುವವರಿಗೆ ಮತ್ತು ಬಡವರಿಗೆ ದಾನ ಮಾಡುವವರಿಗೆ ಲಕ್ಷ್ಮಿ ದೇವಿಯು ತನ್ನ ಅನುಗ್ರಹವನ್ನು ನೀಡುತ್ತಾಳೆ. ಅಂತವರ ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ.

ಹಬ್ಬಗಳು2021 ಕಾರ್ತಿಕ ಮಾಸ: ಈ ಮಾಸದಲ್ಲಿ ಮರೆತೂ ಇವುಗಳನ್ನು ತಿನ್ನದಿರಿ..! ಇವುಗಳಿಂದ ದೂರಿರಬೇಕು..

​ದೇವರ ಪೂಜೆ ಮಾಡುವ ಮನೆ

ಬೆಳಿಗ್ಗೆ ಮತ್ತು ಸಂಜೆ ಯಾರ ಮನೆಯಲ್ಲಿ ದೇವರ ನಾಮ ಸ್ಮರಣೆ ಕೇಳುವುದಿಲ್ಲವೋ ಇಂತಹ ಮನೆಯಲ್ಲಿ ಉಳಿಯಲು ಸಂಪತ್ತಿನ ದೇವತೆ ಎಂದಿಗೂ ಇಷ್ಟಪಡುವುದಿಲ್ಲ. ಬೆಳಿಗ್ಗೆ ಮನೆಯ ದೇವರ ಕೋಣೆಯಲ್ಲಿ ಕಡ್ಡಾಯವಾಗಿ ದೀಪವನ್ನು ಹಚ್ಚಬೇಕು ಮತ್ತು ಸ್ವಲ್ಪ ಸಮಯದವರೆಗೆ ಸರಿಯಾಗಿ ದೇವರನ್ನು ಸ್ಮರಿಸಬೇಕು.

ಪೂಜಾ ವಿಧಿಗಳುಗುರುವಾರ ಈ ಕೆಲಸ ಮಾಡಿದರೆ ಅದೃಷ್ಟ..! ವಿಷ್ಣು ಮತ್ತು ಬೃಹಸ್ಪತಿಯನ್ನು ಪೂಜಿಸಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ