ಆ್ಯಪ್ನಗರ

Love Marriage: ನೀವು ಪ್ರೇಮ ವಿವಾಹವಾಗಬೇಕೆಂದರೆ ತಪ್ಪದೇ ಈ ಕೆಲಸ ಮಾಡಿ..!

Marriage Remedies: ನೀವು ಪ್ರೇಮ ವಿವಾಹವಾಗಲು ಬಯಸುವುದಾದರೆ ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇಲ್ಲಿ ಹೇಳಿರುವ ಕೆಲವು ವಿಶೇಷ ಪರಿಹಾರಗಳನ್ನು ಪ್ರಯತ್ನಿಸಿ. ಯಾವ ಪರಿಹಾರಗಳು ಮತ್ತು ಮಂತ್ರಗಳು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗುವುದು..?

Authored byಸಹನಾ | Agencies 23 Dec 2023, 1:56 pm

ಹೈಲೈಟ್ಸ್‌:

  • ಪ್ರೇಮ ವಿವಾಹವಾಗಲು ಈ ಪರಿಹಾರಗಳನ್ನು ಪ್ರಯತ್ನಿಸಿ
  • ಈ ಮಂತ್ರ ಪಠಿಸಿದರೆ ಪ್ರೇಮ ವಿವಾಹವಾಗಬಹುದು
  • ಈ ಕೆಲಸ ಮಾಡಿದರೆ ಪ್ರೇಮ ವಿವಾಹವಾಗುವುದು ಗ್ಯಾರಂಟಿ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Love Marriage
ಪ್ರೇಮ ವಿವಾಹ
ಸನಾತನ ಧರ್ಮದಲ್ಲಿ 8 ವಿಧದ ವಿವಾಹಗಳನ್ನು ಉಲ್ಲೇಖಿಸಲಾಗಿದೆ. ಇಂದಿನ ಕಾಲದಲ್ಲಿ, ಎರಡು ರೀತಿಯ ವಿವಾಹಗಳಿವೆ, ಒಂದು ಪೋಷಕರು ಮತ್ತು ಕುಟುಂಬದ ಒಪ್ಪಿಗೆಯೊಂದಿಗೆ ನಡೆಯುವ ವಿವಾಹ ಮತ್ತು ಇನ್ನೊಂದು ಪ್ರೇಮ ವಿವಾಹ, ಇದನ್ನು ವಧು ಮತ್ತು ವರರು ತಮ್ಮ ಇಚ್ಛೆಯಂತೆ ಆಗುತ್ತಾರೆ. ಆದ್ದರಿಂದ, ನಿಮಗೆ ಪ್ರೇಮ ವಿವಾಹವಾಗಬೇಕೆಂಬ ಆಸೆ ಇದ್ದರೆ, ಇಲ್ಲಿ ಕೆಲವು ವಿಶೇಷ ಪರಿಹಾರಗಳನ್ನು ಹೇಳಲಾಗಿದೆ. ಈ ಪರಿಹಾರಗಳು ತಪ್ಪದೇ ಪ್ರಯತ್ನಿಸಿ.
Saturday Shopping: ಶನಿವಾರ ಅಪ್ಪಿತಪ್ಪಿಯೂ ಈ ವಸ್ತುವನ್ನು ಖರೀದಿಸಲೇ ಬೇಡಿ..!

ದುರ್ಗಾ

ಶುಕ್ರವಾರ ಈ ಪರಿಹಾರಗಳನ್ನು ಮಾಡಿ
ಶುಕ್ರವಾರ ಸ್ನಾನದ ನಂತರ, ಕೆಂಪು ಬಟ್ಟೆಯನ್ನು ಧರಿಸಿ. ಇದರ ನಂತರ, ದುರ್ಗಾ ಮಾತೆಯ ದೇವಸ್ಥಾನಕ್ಕೆ ಹೋಗಿ ಮತ್ತು ದುರ್ಗಾ ದೇವಿಗೆ ಮುತ್ತೈದೆಯರು ಬಳಸುವ ವಸ್ತುಗಳನ್ನು ಅರ್ಪಿಸಿ. ಕನಿಷ್ಠ 16 ಶುಕ್ರವಾರಗಳವರೆಗೆ ಈ ಪರಿಹಾರವನ್ನು ಮಾಡಿ. ಈ ರೀತಿಯಾಗಿ, ನೀವು ಪ್ರೇಮ ವಿವಾಹದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಬಹುದು.
Vaikuntha Ekadashi 2023: ವೈಕುಂಠ ಏಕಾದಶಿ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಮಂತ್ರಗಳು..!
ಈ ಮಂತ್ರವನ್ನು ಪಠಿಸಿ
ಶುಕ್ಲ ಪಕ್ಷದ ಮೊದಲ ಗುರುವಾರದಂದು, ಸ್ನಾನದ ನಂತರ ಹಳದಿ ಬಟ್ಟೆಯನ್ನು ಧರಿಸಿ. ಇದರ ನಂತರ, ವಿಧಿ ವಿಧಾನಗಳಿಂದ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಿ. ಜೊತೆಗೆ, ಈ ಮಂತ್ರಗಳನ್ನು ಪಠಿಸಿ.

'ಓಂ ಲಕ್ಷ್ಮಿ ನಾರಾಯಣ ನಮಃ'

ಈ ಪರಿಹಾರವನ್ನು 11 ಗುರುವಾರಗಳವರೆಗೆ ನಿರಂತರವಾಗಿ ಮಾಡುವುದರಿಂದ, ಪ್ರೇಮ ವಿವಾಹದಲ್ಲಿ ಬರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

ವಿವಾಹ

ಪ್ರೀತಿಯ ಬೀಜ ಮಂತ್ರ
'ಓಂ ಕ್ಲೀಂ ನಮಃ'


ಈ ಮಂತ್ರವನ್ನು ಪ್ರೇಮ ವಿವಾಹದ ಬೀಜ ಮಂತ್ರ ಎಂದು ಕರೆಯಲಾಗುತ್ತದೆ. ಇದಲ್ಲದೆ, ಈ ಮಂತ್ರವನ್ನು ಪಠಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

'ಓಂ ಕ್ಲೀಂ ಕೃಷ್ಣಾಯ ಗೋಪಿಜನ ವಲ್ಲಭಾಯ ಸ್ವಾಹಾ'

ಶ್ರೀಕೃಷ್ಣ

ಶ್ರೀಕೃಷ್ಣನ ಆರಾಧನೆ
ನಿಮ್ಮ ಪ್ರೇಮ ವಿವಾಹದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ಪ್ರೀತಿಯ ಸಂಕೇತ ಎಂದು ಕರೆಯಲ್ಪಡುವ ಶ್ರೀಕೃಷ್ಣನ ಸೇವೆ ಮಾಡಿ. ಶ್ರೀಕೃಷ್ಣನ ದೇವಾಲಯಕ್ಕೆ ಹೋಗಿ ವಿಧಿ ವಿಧಾನಗಳಿಂದ ಕ್ರಮಬದ್ಧವಾಗಿ ಆತನನ್ನು ಪೂಜಿಸಿ. ಇದರ ನಂತರ, ಶ್ರೀಕೃಷ್ಣನಿಗೆ ಆತನ ನೆಚ್ಚಿನ ಕೊಳಲನ್ನು ಅರ್ಪಿಸಿ. ಈ ಸಮಯದಲ್ಲಿ, ಈ ವಿಶೇಷ ಮಂತ್ರವನ್ನು ಪಠಿಸಬೇಕು.

"ಓಂ ಕ್ಲೀಂ ಕೃಷ್ಣಾಯ ನಮಃ"
Puja Rules: ದೇವರ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಿ..
ಕುಟುಂಬದ ಸಮ್ಮತಿಗೆ
ನಿಮ್ಮ ಪ್ರೇಮ ವಿವಾಹಕ್ಕೆ ಕುಟುಂಬವು ಒಪ್ಪದಿದ್ದರೆ, ಗುರುವಾರ, ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಶ್ರದ್ದಾ ಭಕ್ತಿಯಿಂದ ಆತನನ್ನು ಪೂಜಿಸಿ ಮತ್ತು ಪ್ರಸಾದವನ್ನು ಅರ್ಪಿಸಿ. ಇದರ ನಂತರ, ಈ ಪ್ರಸಾದವನ್ನು ಎಲ್ಲರಿಗೂ ವಿತರಿಸಿ. ಈ ಕ್ರಮಗಳನ್ನು ಸತತ ಮೂರು ತಿಂಗಳು ತೆಗೆದುಕೊಂಡರೆ, ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
New Year 2024: ಹೊಸ ವರ್ಷದಲ್ಲಿ ತುಳಸಿಯಿಂದ ಈ ಒಂದು ಕೆಲಸ ಮಾಡಿ ಸಾಕು, ನಿಮ್ಮ ಲಕ್ ಚೇಂಜ್..!
ಲೇಖಕರ ಬಗ್ಗೆ
ಸಹನಾ
ಸಹನ ಇವರು ಎರಡು ವರ್ಷಗಳ ಕಾಲ ಡಿಜಿಟಲ್ ವಿಭಾಗದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡಿದ್ದು, ಪ್ರಸ್ತುತ ವಿಜಯ ಕರ್ನಾಟಕದ ಜ್ಯೋತಿಷ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಹೊರತಾಗಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಹಾಗು ಕಲಿಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸ್ಕೆಚ್ ಹಾಗು ಪೇಂಟಿಂಗ್ ಮಾಡುವುದು, ಕರಕುಶಲ ಕಲೆ, ಸಂಗೀತ ಕೇಳುವುದು, ಫೋಟೋಗ್ರಫಿ, ಯೋಗ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ