ಆ್ಯಪ್ನಗರ

ಶವ ಸಂಸ್ಕಾರದ ವೇಳೆ ನೀರಿನ ಮಡಕೆಯನ್ನು ಒಡೆಯಲು ಕಾರಣವೇನು ಗೊತ್ತೇ..?

ಶವ ಸಂಸ್ಕಾರವನ್ನು ಮಾಡುವಾಗ ಹಿಂದೂ ಧರ್ಮದಲ್ಲಿ ಅನೇಕ ಸಂಸ್ಕಾರ ಕಾರ್ಯಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ನೀರು ತುಂಬಿದ ಮಣ್ಣಿನ ಮಡಕೆಯನ್ನು ಒಡೆಯುವುದಾಗಿದೆ. ಅಂತ್ಯ ಸಂಸ್ಕಾರದ ವೇಳೆ ನೀರು ತುಂಬಿದ ಮಣ್ಣಿನ ಮಡಕೆಯನ್ನು ಏಕೆ ಒಡೆಯಲಾಗುತ್ತದೆ..? ಇದರ ಅರ್ಥವೇನು ಗೊತ್ತೇ..?

Vijaya Karnataka Web 13 Oct 2022, 12:47 pm
ಹಿಂದೂ ಆಚರಣೆಗಳ ಪ್ರಕಾರ, ಶವಸಂಸ್ಕಾರ ಸಮಾರಂಭದಲ್ಲಿ ನೀರು ತುಂಬಿದ ಮಣ್ಣಿನ ಮಡಕೆಯನ್ನು ಒಯ್ಯುವುದು ಅನೇಕ ಹಿಂದೂ ಸಮುದಾಯಗಳಿಗೆ ಅತ್ಯಗತ್ಯವಾಗಿದೆ ಮತ್ತು ಇದು ಬಹಳ ಆಳವಾದ ಅರ್ಥವನ್ನು ಹೊಂದಿದೆ, ಇದು ಅಂತ್ಯವನ್ನು ಕಂಡ ಮಾನವ ದೇಹ ಮತ್ತು ಆತ್ಮದ ನಮ್ಮ ಕಲ್ಪನೆಯೊಂದಿಗೆ ಸಂಪರ್ಕ ಹೊಂದಿದೆ.
Vijaya Karnataka Web know the reason behind carrying a mud water pot during the cremation ceremony in hinduism
ಶವ ಸಂಸ್ಕಾರದ ವೇಳೆ ನೀರಿನ ಮಡಕೆಯನ್ನು ಒಡೆಯಲು ಕಾರಣವೇನು ಗೊತ್ತೇ..?


ಚಿತೆಗೆ ಬೆಂಕಿಯಿಡುವ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಯು ತನ್ನ ಹೆಗಲ ಮೇಲೆ ನೀರಿನ ಪಾತ್ರೆಯೊಂದಿಗೆ ಸತ್ತ ವ್ಯಕ್ತಿಯ ಚಿತೆಯ ಸುತ್ತಲೂ ನಡೆಯುತ್ತಾನೆ. ಆ ಚಿತೆಯ ಸುತ್ತ ಒಂದೊಂದು ಸುತ್ತು ಬಂದಾಗಲು ನೀರಿನ ಮಡಕೆಯು ರಂಧ್ರವನ್ನು ಪಡೆಯುತ್ತದೆ ಇದರಿಂದ ನೀರು ಹರಿಯುತ್ತದೆ ಮತ್ತು ಅಂತ್ಯಕ್ರಿಯೆಯ ಚಿತೆಯ ಸುತ್ತಲೂ ಬೀಳುತ್ತದೆ. ಅಂತಿಮವಾಗಿ ಮಡಿಕೆಯನ್ನು ಹೊತ್ತ ವ್ಯಕ್ತಿಯು ನೀರು ತುಂಬಿದ ಮಣ್ಣಿನ ಮಡಕೆಯನ್ನು ತನ್ನ ಹಿಂದೆ ಬೀಳಿಸಿ ಒಡೆಯುವಂತೆ ಮಾಡುತ್ತಾನೆ. ಹಿಂದೂ ಧರ್ಮದಲ್ಲಿ ಮಣ್ಣಿನ ಮಡಿಕೆಯನ್ನು ಒಡೆಯುವುದರ ಹಿಂದೆ ಪ್ರತ್ಯೇಕ ಅರ್ಥವಿದೆ. ಅವುಗಳ ಅರ್ಥವೇನು ಎಂಬುದನ್ನು ನಾವಿಲ್ಲಿ ನೋಡೋಣ..

​ದೇಹದಿಂದ ಆತ್ಮ ಮುಕ್ತಿ

ಸತ್ತ ವ್ಯಕ್ತಿಯ ಆತ್ಮವು ದೇಹವನ್ನು ತೊರೆಯುವ ಸಮಯ ಎಂದು ಹೇಳಲು ಇದನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಆತ್ಮ ತನ್ನ ದೇಹದೊಂದಿಗಿನ ಸಂಬಂಧವನ್ನು ತೊರೆಯುತ್ತದೆ ಎಂದು ಹೇಳಲಾಗುತ್ತದೆ.

Sai Baba Mantra: ಈ 12 ಸಾಯಿ ಮಂತ್ರಗಳಿಂದ ನಿಮ್ಮೆಲ್ಲಾ ತೊಂದರೆಗಳು ಮಾಯ..!

​ಅಂತಿಮ ಸತ್ಯ

ಮಡಕೆಯಂತೆ ದೇಹವೂ ಒಂದು ದಿನ ಒಡೆದು ನಾಶವಾಗುತ್ತದೆ. ಮಡಕೆ ಅಂತಿಮವಾಗಿ ನೆಲದಲ್ಲಿ ಬಿದ್ದು ಒಡೆದು ಹೋಗಿ ಮಣ್ಣಿನೊಂದಿಗೆ ಮಣ್ಣಾಗಿ ಹೋಗುತ್ತದೆ. ಅದೇ ರೀತಿ ಓರ್ವ ವ್ಯಕ್ತಿಯು ಇಂದಲ್ಲ ನಾಳೆ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾನೆ ಎಂಬುದನ್ನು ಸೂಚಿಸುತ್ತದೆ. ಅವನಿಗೂ ಕೂಡ ಅಂತಿಮ ಕ್ಷಣಗಳು ಇದ್ದೇ ಇರುತ್ತದೆ ಎಂಬುದನ್ನು ಇದು ಅರ್ಥೈಸುತ್ತದೆ.

Buddha Thoughts: ಈ 8 ಗುಣಗಳಿದ್ದರೆ ಮಾತ್ರ ಸ್ನೇಹ ಮಾಡಿ ಎನ್ನುತ್ತಾನೆ ಗೌತಮ ಬುದ್ಧ..!

​ಅರ್ಥೈಸುವುದು

ಮಣ್ಣಿನ ಮಡಿಕೆಯನ್ನು ಹೆಗಲ ಮೇಲೆ ಇಟ್ಟುಕೊಂಡು ಶವಸಂಸ್ಕಾರದ ಚಿತೆಯ ಸುತ್ತಲೂ ಹೋಗುವಾಗ ಮಡಕೆಯಿಂದ ಬೀಳುವ ನೀರು ಸಮಯ ಹೇಗೆ ಹೋಗುತ್ತದೆ ಎಂಬುದರ ಸಂಕೇತವಾಗಿದೆ.

Thursday Rules: ಅಬ್ಬಾ.. ಉಗುರು, ಕೂದಲನ್ನು ಕತ್ತರಿಸಿದರೆ ಇಷ್ಟೆಲ್ಲಾ ಸಮಸ್ಯೆಗಳೇ..!

​ಆತ್ಮ ಶಾಶ್ವತವಲ್ಲ ಎಂಬುದಾಗಿದೆ

ಕೊನೆಯ ಹಂತದಲ್ಲಿ ಮಡಕೆಯು ಒಡೆದು ನೀರು ಹೊರಕ್ಕೆ ಹರಿಯುವಂತೆ ದೇಹವು ತನ್ನ ಮನೆಯಲ್ಲ ಎಂಬುದು ಆತ್ಮಕ್ಕೆ ಖಚಿತವಾಗಿ ತಿಳಿಸುವುದಾಗಿದೆ. ಆತ್ಮವು ಕೂಡ ಮಡಕೆಯಲ್ಲಿದ್ದ ನೀರಿನಂತೆ ಒಂದಲ್ಲ ಒಂದು ದೇಹವನ್ನು ಬಿಟ್ಟು ಹೋಗಬೇಕು ಎಂಬುದನ್ನು ಇದು ಹೇಳುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಪೂಜೆ ಮಾಡುವುದು ಹೇಗೆ..? ಈ ಮಂತ್ರಗಳನ್ನೇ ಪಠಿಸಿ.

​ಇವುಗಳನ್ನು ಸೂಚಿಸುತ್ತದೆ

ಮಡಕೆಯು ಭೂಮಿಯ ಮೇಲಿನ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅನುಭವಿಸಿದ ಅವನ ಸಂಬಂಧಗಳು ಮತ್ತು ಹಣದಂತಹ ಎಲ್ಲಾ ವಸ್ತುಗಳನ್ನು ಸಹ ಸೂಚಿಸುತ್ತದೆ.

ಯಶಸ್ವಿ ಉದ್ಯಮಿಯಾಗಬೇಕಾದರೆ ಈ 3 ಗುಣಗಳಿರಲೇಬೇಕು ಎನ್ನುತ್ತಾನೆ ಚಾಣಕ್ಯ..!

​ಆತ್ಮದ ಅಂತಿಮ ಪ್ರಯಾಣ

ಬಲದಿಂದ ಮಡಕೆಯನ್ನು ಒಡೆದಾಗ ಆತ್ಮವು ಎಲ್ಲವನ್ನೂ ತ್ಯಜಿಸಿ ಪರಮ ಸತ್ಯದೊಂದಿಗೆ ವಿಲೀನಗೊಳ್ಳಲು ಪ್ರಯಾಣವನ್ನು ಪ್ರಾರಂಭಿಸಬೇಕೆನ್ನುವುದನ್ನು ಕೇಳಿಕೊಳ್ಳುವುದಾಗಿದೆ.

Durga Saptashloki: ದುರ್ಗಾ ದೇವಿಯ ಅನುಗ್ರಹಕ್ಕಾಗಿ ತಪ್ಪದೇ ಪಠಿಸಿ ದುರ್ಗಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ