ಆ್ಯಪ್ನಗರ

ಓಂ ಶಾಂತಿ ಮಂತ್ರ ಪಠಿಸಿದರೆ ಏನಾಗುತ್ತೆ ಗೊತ್ತಾ..? ಮಿಸ್‌ ಮಾಡದೇ ಪಠಿಸಿ..!

ಪೂಜೆಯಲ್ಲಿ ಪಠಿಸುವ ಪ್ರತಿಯೊಂದು ಮಂತ್ರಕ್ಕೂ ತನ್ನದೇ ಆದ ವಿಶೇಷ ಮಹತ್ವವಿರುವುದರಿಂದ ಯಾವುದನ್ನೂ ಕೂಡ ಅರ್ಥವಿಲ್ಲದೆ ಓದುವುದಿಲ್ಲ. ಪೂಜೆಯ ಕೊನೆಯಲ್ಲಿ 'ಓಂ ಶಾಂತಿ' ಎಂದು ಹೇಳುವುದರ ರಹಸ್ಯವೇನು..? ಓಂ ಶಾಂತಿ ಎನ್ನುವ ಮಂತ್ರವನ್ನು ಏಕೆ ಪಠಿಸಬೇಕು..?

Vijaya Karnataka Web 18 Nov 2021, 5:43 pm
ಪೂಜೆಯ ಸಮಯದಲ್ಲಿ ಮಂತ್ರ ಪಠಣದ ಕೊನೆಯಲ್ಲಿ ನೀವು 'ಓಂ ಶಾಂತಿ' ಎಂಬ ಮಂತ್ರ ಪಠಿಸುವುದನ್ನು ಕೇಳಿರಬಹುದು ಅಥವಾ ನೋಡಿರಬಹುದು. ಹಾಗಾದರೆ, ಈ ಮಂತ್ರ ಉಚ್ಛಾರಣೆಯ ಅರ್ಥವೇನು..? ಇದನ್ನು ಯಾಕೆ ಪಠಿಸಲಾಗುತ್ತದೆ ಎಂಬುದನ್ನು ನೀವೆಂದಾದರೂ ಯೋಚಿಸಿದ್ದೀರಾ..? ಪೂಜೆಯಲ್ಲಿ ಪಠಿಸುವ ಪ್ರತಿಯೊಂದು ಮಂತ್ರಕ್ಕೂ ತನ್ನದೇ ಆದ ವಿಶೇಷ ಮಹತ್ವವಿರುವುದರಿಂದ ಯಾವುದನ್ನೂ ಕೂಡ ಅರ್ಥವಿಲ್ಲದೆ ಓದುವುದಿಲ್ಲ. ಪೂಜೆಯ ಕೊನೆಯಲ್ಲಿ 'ಓಂ ಶಾಂತಿ' ಎಂದು ಹೇಳುವ ರಹಸ್ಯವೇನು..?
Vijaya Karnataka Web know the secrets and benefits of chanting om shanti mantra
ಓಂ ಶಾಂತಿ ಮಂತ್ರ ಪಠಿಸಿದರೆ ಏನಾಗುತ್ತೆ ಗೊತ್ತಾ..? ಮಿಸ್‌ ಮಾಡದೇ ಪಠಿಸಿ..!


​3 ಬಾರಿ ಪುನರಾವರ್ತನೆ

ಪೂಜೆ - ಮಂತ್ರವನ್ನು ಪಠಿಸಿದ ನಂತರ, 'ಓಂ ಶಾಂತಿ' ಮಂತ್ರವನ್ನು ಮೂರು ಬಾರಿ ಪುನರಾವರ್ತಿಸಲಾಗುತ್ತದೆ. ಇದಕ್ಕೆ ವಿಶೇಷ ಕಾರಣವೆಂದರೆ 'ತ್ರಿವರಂ ಸತ್ಯಂ' ಅಂದರೆ ಮೂರು ಬಾರಿ ಹೇಳಿದ್ದು ನಿಜವಾಗುತ್ತದೆ. ಅದಕ್ಕಾಗಿಯೇ ನಮ್ಮ ವಿಷಯವನ್ನು ಒತ್ತಿಹೇಳಲು ನಾವು ಮೂರು ಬಾರಿ ಪುನರಾವರ್ತಿಸುತ್ತೇವೆ.

ಕಾರ್ತಿಕ ಮಾಸದಂದೇ ಚಂದ್ರಗ್ರಹಣ: ಯಾವ ಮಂತ್ರ ಪಠಿಸಬೇಕು..? ಇದರ ಪ್ರಯೋಜನವೇನು..?

​ಈ ಸಮಸ್ಯೆಗಳಿಂದ ಮುಕ್ತಿ ನೀಡುವುದು

'ಓಂ ಶಾಂತಿ' ಎಂದು ಹೇಳುವ ಹಿಂದಿನ ಎರಡನೇ ಕಾರಣವೆಂದರೆ ಜೀವನದಲ್ಲಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇದನ್ನು ಪಠಿಸಲಾಗುತ್ತದೆ. ಇದು ದೈವಿಕ, ಅಧಿದೈವಿಕ, ದೈಹಿಕ ಮತ್ತು ಅಪಘಾತಗಳಂತಹ ನಮ್ಮ ಸುತ್ತಲಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಕಾರ್ತಿಕ ಹುಣ್ಣಿಮೆಯಂದು ಲಕ್ಷ್ಮಿಗೆ ಈ 5 ವಸ್ತುಗಳನ್ನು ಅರ್ಪಿಸಿದರೆ ಏನಾಗುತ್ತೆ ಗೊತ್ತಾ..?

​ಜವಬ್ದಾರಿ ಪೂರ್ಣವಾಗುವುದು

ಮೂರು ಬಾರಿ 'ಓಂ ಶಾಂತಿ' ಪಠಣಕ್ಕೆ ಸಂಬಂಧಿಸಿದಂತೆ, ನಾವು ಒಂದು ಪದವನ್ನು ಮೂರು ಬಾರಿ ಜಪಿಸಿದಾಗ, ನಾವು ಒಂದು ನಿರ್ದಿಷ್ಟ ಕೆಲಸದ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ ಎಂದರ್ಥ. ಇದು ನಮಗೆ ದೇವರ ಆಶಿರ್ವಾದವನ್ನು ನೀಡುತ್ತದೆ. ಸಾಮಾನ್ಯ ಜೀವನದಲ್ಲಿನ ಅಡೆತಡೆಗಳು ದೂರಾಗುತ್ತದೆ ಮತ್ತು ದೇವರ ದಯೆಯಿಂದ ಎಲ್ಲವೂ ಚೆನ್ನಾಗಿರುತ್ತದೆ.

ಪೂಜಾ ವಿಧಿಗಳುಕಾರ್ತಿಕ ಪೂರ್ಣಿಮಾದಂದು ಹೀಗೆ ಮಾಡಿದರೆ ಸುಖ, ಸೌಭಾಗ್ಯ, ಸಮೃದ್ಧಿ ಖಚಿತ..

​ಓಂ ಶಾಂತಿಯ ಅರ್ಥವೇನು..?

ಮೂರು ಬಾರಿ 'ಓಂ ಶಾಂತಿ' ಅಂದರೆ ಮೊದಲ ಬಾರಿಗೆ ದೊಡ್ಡ ಧ್ವನಿಯಲ್ಲಿ ದೈವಿಕ ಶಕ್ತಿಯನ್ನು ಸಂಬೋಧಿಸುವುದು ಎಂದರ್ಥ. ಎರಡನೆಯ ಬಾರಿ ನಿಮ್ಮ ಸುತ್ತಲಿನ ಪರಿಸರವನ್ನು ಸಂಬೋಧಿಸುವುದು ಎಂದರ್ಥ. ಕಡಿಮೆ ಧ್ವನಿಯಲ್ಲಿ ಮತ್ತು ಮೂರನೇ ಬಾರಿ ಅತ್ಯಂತ ಕಡಿಮೆ ಧ್ವನಿಯಲ್ಲಿ, ಅದು ತನ್ನನ್ನು ತಾನೇ ಸಂಬೋಧಿಸುತ್ತದೆ. ಈ ರೀತಿಯಾಗಿ ಪೂಜೆಯನ್ನು ಉತ್ತಮವಾಗಿ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಎಲ್ಲಾ ದೇವಾನುದೇವತೆಗಳ ಕೃಪೆಯೂ ನಮ್ಮ ಮೇಲಿರುತ್ತದೆ.

ಹಬ್ಬಗಳು2021 ಕಾರ್ತಿಕ ಪೂರ್ಣಿಮಾ: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ದಾನದ ಮಹತ್ವ..!

​ದಿನಕ್ಕೆ 3 ಬಾರಿ ಈ ಮಂತ್ರ ಉಚ್ಚರಿಸುವುದರ ಪ್ರಯೋಜನ

- ಮಾನಸಿಕ ಒತ್ತಡ ದೂರಾಗುವುದು.

- ಮನಸ್ಸಿಗೆ ಹೊಸ ಶಕ್ತಿಯನ್ನು ನೀಡುತ್ತದೆ.

- ಮಾಡುವ ಕೆಲಸದಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ.

- ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಗಳು ದೂರಾಗುವುದು.

- ಸಕಾರಾತ್ಮಕ ಶಕ್ತಿ ಹೆಚ್ಚಾಗುವುದು.

ಪೂಜಾ ವಿಧಿಗಳುದೇವರಿಗೆ ಪದ್ಧತಿಯಂತೆ ಆರತಿ ಮಾಡುವುದು ಹೇಗೆ..? ಈ ನಿಯಮಗಳನ್ನು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ