ಆ್ಯಪ್ನಗರ

Radha Krishna: ರಾಧಾ - ಕೃಷ್ಣ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರೂ ವಿವಾಹವಾಗದಿರಲು ಕಾರಣವೇನು..?

ಶ್ರೀಕೃಷ್ಣ ಮತ್ತು ರಾಧೆಗೆ ಸಂಬಂಧಿಸಿದ ಅನೇಕ ಕಥೆಗಳನ್ನು ನೀವೀಗಾಗಲೇ ಕೇಳಿರಬಹುದು. ಅವುಗಳಲ್ಲಿ ಆಸಕ್ತಿದಾಯಕವೆಂದರೆ ರಾಧಾ ಮತ್ತು ಶ್ರೀಕೃಷ್ಣನ ವಿವಾಹ ಕಥೆ. ರಾಧಾ ಮತ್ತು ಕೃಷ್ಣ ಒಬ್ಬರನ್ನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ವಿವಾಹವಾಗದಿರಲು ಕಾರಣವೇನು..? ರಾಧಾ ಮತ್ತು ಶ್ರೀಕೃಷ್ಣನ ಮಿಲನದ ಆಸಕ್ತಿದಾಯಕ ಕಥೆ ಹೀಗಿದೆ..!

Authored byಮನಿಷಾ ಆನಂದ | Agencies 14 Dec 2022, 11:17 am

ಹೈಲೈಟ್ಸ್‌:

ಹೈಲೈಟ್ಸ್‌:
  • ರಾಧಾ - ಕೃಷ್ಣನ ವಿವಾಹ
  • ರಾಧಾ ಕೃಷ್ಣನು ವಿವಾಹವಾಗದಿರಲು ಕಾರಣ
  • ರಾಧಾ - ಕೃಷ್ಣನ ಭೇಟಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Radha Krishna
ರಾಧಾ ಕೃಷ್ಣ
ಇಂದಿಗೂ ಪವಿತ್ರ ಪ್ರೀತಿಗೆ ಉತ್ತಮ ಉದಾಹರಣೆಯೆಂತಿದ್ದರೆ ಅದು ಕೇವಲ ರಾಧಾ - ಕೃಷ್ಣನ ಪ್ರೀತಿ ಮಾತ್ರ. ನಾವು ಯಾವಾಗಲೂ ಜನ್ಮಾಷ್ಟಮಿಯನ್ನು ಆಚರಿಸುತ್ತೇವೆ, ಆದರೆ ರಾಧಾ ಮತ್ತು ಶ್ರೀಕೃಷ್ಣ ಹೇಗೆ ಭೇಟಿಯಾದರು ಎಂದು ತಿಳಿಯಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ. ಶ್ರೀಕೃಷ್ಣನಿಲ್ಲದೆ ರಾಧೆಯು ಅಪೂರ್ಣಳು ಮತ್ತು ರಾಧೆಯಿಲ್ಲದೆ ಶ್ರೀಕೃಷ್ಣನು ಅಪೂರ್ಣನು ಎಂಬ ಒಂದು ಮಾತನ್ನು ನಾವು ಕೃಷ್ಣನ ಕಥೆಯನ್ನು ಕೇಳುವಾಗ, ಓದುವಾಗ ಕೇಳಿರುತ್ತೇವೆ.
Bhagavad Gita: ಜೀವನದ ಯಾವೆಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರಗಳಿವೆ..?

ರಾಧಾ ಕೃಷ್ಣ


Cloud Dream: ಕನಸಿನಲ್ಲಿ ಮೋಡಗಳು ಈ ರೀತಿ ಕಾಣಿಸಿಕೊಂಡರೆ ಅದೃಷ್ಟವೇ ಸರಿ..!
ಆದರೆ ಈ ಇಬ್ಬರೂ ಒಬ್ಬರಿಗೊಬ್ಬರು ಇಲ್ಲದೆ ಅಪೂರ್ಣವಾಗಿರುವಾಗ ಅವರು ಏಕೆ ಮದುವೆಯಾಗಲಿಲ್ಲ ಎಂದು ತಿಳಿಯಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ? ಅನೇಕ ಜನರು ಇದನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಮದುವೆಯಾಗದಿದ್ದರೂ, ರಾಧಾ - ಕೃಷ್ಣನನ್ನು ಯಾವಾಗಲೂ ಒಟ್ಟಿಗೆ ಪೂಜಿಸುತ್ತಾರೆ. ಭಗವಾನ್ ಕೃಷ್ಣ ಮತ್ತು ರಾಧೆಯನ್ನು ತಮ್ಮ ಸ್ಫೂರ್ತಿ ಎಂದು ಪರಿಗಣಿಸುವ ಅನೇಕ ದಂಪತಿಗಳು ಜಗತ್ತಿನಲ್ಲಿದ್ದಾರೆ. ನೀವು ಜೀವನದಲ್ಲಿ ಕೇಳಲೇಬೇಕಾದ ರಾಧಾ ಮತ್ತು ಶ್ರೀಕೃಷ್ಣನ ಕಥೆಯು ಹೀಗಿದೆ..

ತಮಿಳುನಾಡಿನ ಈ ದೇವಾಲಯಗಳಲ್ಲಿ ಮೊಬೈಲ್‌ ಬಳಸಿದರೆ ಫೈನ್‌ ಫಿಕ್ಸ್‌..!
1. ಭಗವಾನ್ ಕೃಷ್ಣ ಮತ್ತು ರಾಧಾ ಭೂಮಿಯಲ್ಲಿ ಜನಿಸಿದ ನಂತರ ಹೇಗೆ ಭೇಟಿಯಾದರು..?
ಭಗವಾನ್ ಕೃಷ್ಣನು ನಾಲ್ಕೈದು ವರ್ಷದವನಾಗಿದ್ದಾಗ, ಅವನು ತನ್ನ ತಂದೆಯೊಂದಿಗೆ ಹಸುಗಳನ್ನು ಮೇಯಿಸಲು ಹೊಲಗಳಿಗೆ ಹೋಗುತ್ತಿದ್ದನು ಎಂದು ಪೌರಾಣಿಕ ಕಥೆಗಳು ಹೇಳುತ್ತದೆ. ಅವನ ತಂದೆಗೆ ಆಶ್ಚರ್ಯವಾಗುವಂತೆ, ಅವನು ವಸಂತ ಋತುವಿನಲ್ಲಿ ಬಿರುಗಾಳಿಯನ್ನು ಉಂಟುಮಾಡಿದನು ಮತ್ತು ತನಗೆ ಏನೂ ತಿಳಿದಿಲ್ಲವೆಂದು ನಟಿಸಿದನು. ಇದ್ದಕ್ಕಿದ್ದಂತೆ ಜೋರಾಗಿ ಮಳೆ ಸುರಿಯಲಾರಂಭಿಸಿತು ಮತ್ತು ಕೃಷ್ಣನು ಅಳಲು ಪ್ರಾರಂಭಿಸಿದನು.

Garuda Purana: ಅದೃಷ್ಟಶಾಲಿ ಪತ್ನಿಯಾಗಬೇಕಾದರೆ ಈ 4 ಗುಣಗಳಿರಬೇಕು ಎನ್ನುತ್ತೆ ಗರುಡ ಪುರಾಣ..!

ಶ್ರೀಕೃಷ್ಣ


Hanuman Names: ಹನುಮಂತನ ಈ 5 ಹೆಸರುಗಳ ಹಿಂದಿದೆ ಅದ್ಭುತವಾದ ಕಥೆ..!
ಕೃಷ್ಣನು ಅಳುತ್ತಿರುವುದನ್ನು ನೋಡಿ ಅವರ ತಂದೆ ಅವನನ್ನು ಬಿಗಿಯಾಗಿ ತಬ್ಬಿಕೊಂಡರು. ಶ್ರೀಕೃಷ್ಣನ ತಂದೆಗೆ ಈ ಋತುವಿನಲ್ಲಿ ಕೃಷ್ಣನ ಆರೈಕೆಯ ಜೊತೆಗೆ ಗೋವುಗಳನ್ನು ನೋಡಿಕೊಳ್ಳಬೇಕಲ್ಲ ಎನ್ನುವ ಚಿಂತೆ ಉಂಟಾಯಿತು. ಅದೇ ಸಮಯಕ್ಕೆ ಒಬ್ಬ ಸುಂದರ ಹುಡುಗಿ ಬರುವುದನ್ನು ಕೃಷ್ಣನ ತಂದೆ ನೋಡಿದರು. ಕೃಷ್ಣನು ಆ ಹುಡುಗಿಯನ್ನು ನೋಡಿದಾಕ್ಷಣ ತನ್ನ ಕಳ್ಳ ಅಳುವನ್ನು ನಿಲ್ಲಿಸುತ್ತಾನೆ. ಆಗ ಕೃಷ್ಣನ ತಂದೆ ಆ ಹುಡುಗಿಯ ಬಳಿ ತನ್ನ ನೋಡಿಕೊಳ್ಳಬಹುದೇ ಎಂದು ಕೇಳುತ್ತಾರೆ. ಇದಕ್ಕೆ ಒಪ್ಪಿದ ಹುಡುಗಿಯ ಬಳಿ ಶ್ರೀಕೃಷ್ಣನನ್ನು ಬಿಟ್ಟು ಆತನ ತಂದೆ ಹಸುಗಳನ್ನು ಮೇಯಿಸಲು ಹೋಗುತ್ತಾರೆ.

Tanah Lot Temple: ವಿಷ ಸರ್ಪಗಳ ಕಾವಲಿನಲ್ಲಿ ಸಮುದ್ರದ ಮಧ್ಯಯಿದೆ ಈ ನಿಗೂಢ ಹಿಂದೂ
ಶ್ರೀಕೃಷ್ಣ ಮತ್ತು ಹುಡುಗಿ ಒಬ್ಬರೇ ಇದ್ದಾಗ, ಕೃಷ್ಣನು ಯುವತಿಯ ಮುಂದೆ ಕಿತ್ತಳೆ ಬಣ್ಣದ ವಸ್ತ್ರವನ್ನು ಧರಿಸಿ, ತಲೆಯ ಮೇಲೆ ನವಿಲು ಗರಿ, ನೀಲ ಬಣ್ಣದ ಮೈಕಾಂತಿ ಮತ್ತು ಕೈಯಲ್ಲಿ ಕೊಳಲು ಹಿಡಿದುಕೊಂಡು ಕಾಣಿಸಿಕೊಂಡನು. ಹುಡುಗಿಯನ್ನು ಕುರಿತು ಶ್ರೀಕೃಷ್ಣನು ನಾವಿಬ್ಬರೂ ಸ್ವರ್ಗದಲ್ಲಿದ್ದಿರುವುದು ನಿನಗೆ ನೆನಪಾಗುತ್ತಿದೆಯೇ ಎಂದು ಹೇಳಿದನು. ಆಗ ಆ ಹುಡುಗಿಗೆ ತಾನು ರಾಧೆ ಎಂಬುದು ಅರಿವಾಗುತ್ತದೆ.

Lord Shiva 3rd Eye: ಶಿವನಿಗೇಕೆ 3 ಕಣ್ಣುಗಳಿವೆ..? ಶಿವನ ಮೂರನೇ ಕಣ್ಣಿನ ರಹಸ್ಯವೇನು..?

ಶ್ರೀಕೃಷ್ಣ


India's Beautiful Festivals: ಭಾರತದಲ್ಲೇ ಆಚರಿಸಲಾಗುವ 11 ಸುಂದರ ಹಬ್ಬಗಳಿವು ಗೊತ್ತೇ..?
2. ಭಗವಾನ್ ಕೃಷ್ಣ ಮತ್ತು ರಾಧಾ ಎಲ್ಲಿ ಭೇಟಿಯಾಗುತ್ತಿದ್ದರು..?
ವೃಂದಾವನದಲ್ಲಿ ಶ್ರೀಕೃಷ್ಣ ಮತ್ತು ರಾಧಾ ಆಗಾಗ ಭೇಟಿಯಾಗುತ್ತಿದ್ದರು ಎಂದು ನಂಬಲಾಗಿದೆ. ಪ್ರತಿದಿನ ಶ್ರೀಕೃಷ್ಣನು ಜಲಪಾತದ ಬಳಿ ಕೊಳಲಿನ ಸುಮಧುರ ರಾಗವನ್ನು ನುಡಿಸುತ್ತಿದ್ದನು ಮತ್ತು ರಾಧಾಳು ಅದೇ ಮಧುರವಾದ ಧ್ವನಿಯನ್ನು ಆಲಿಸಿ ಅವನನ್ನು ಭೇಟಿಯಾಗಲು ಬರುತ್ತಿದ್ದಳು.

Temple Bell: ದೇವಸ್ಥಾನದಿಂದ ಹೊರಗಡೆ ಬರುವಾಗ ಗಂಟೆಯನ್ನೇಕೆ ಬಾರಿಸಬೇಕು
3. ಶ್ರೀಕೃಷ್ಣ ಮತ್ತು ರಾಧೆ ಎಂದಿಗೂ ಬೇರಾದವರಲ್ಲ:
ನಂಬಿಕೆಗಳ ಪ್ರಕಾರ, ರಾಧೆ ಎಂದಿಗೂ ಕೃಷ್ಣನಿಂದ ಬೇರ್ಪಟ್ಟಿಲ್ಲ. ಭಗವಾನ್ ಕೃಷ್ಣ ಮತ್ತು ರಾಧೆಯ ನಡುವಿನ ಪ್ರೀತಿಯ ಸಂಬಂಧವು ಭೌತಿಕವಾಗಿರಲಿಲ್ಲ, ಬದಲಿಗೆ ಅದು ಭಕ್ತಿಯ ಶುದ್ಧ ರೂಪವಾಗಿತ್ತು. ಭಗವಾನ್ ಕೃಷ್ಣ ಮತ್ತು ರಾಧಾ ದೈವಿಕ ಸ್ವರೂಪದ ಎರಡು ವಿಭಿನ್ನ ತತ್ವಗಳು ಎಂದು ಹೇಳಲಾಗುತ್ತದೆ.

Garuda Purana: ಈ 4 ಕೆಲಸಗಳನ್ನು ತಪ್ಪಿ ಮಾಡಿದರೂ ನಿಮ್ಮ ಆಯಸ್ಸೇ ನಾಶ..!

ರಾಧಾ ಕೃಷ್ಣ ವಿವಾಹ


Monday Special: ಸೋಮವಾರದ ಪುಷ್ಯ ನಕ್ಷತ್ರದಲ್ಲಿ ಈ ಶನಿ ಮಂತ್ರಗಳನ್ನು ಪಠಿಸಿದರೆ
4. ಶ್ರೀಕೃಷ್ಣ ಮತ್ತು ರಾಧೆ ಏಕೆ ಪರಸ್ಪರ ಮದುವೆಯಾಗಲಿಲ್ಲ?
ಶ್ರೀಕೃಷ್ಣ ಮತ್ತು ರಾಧೆ ಪರಸ್ಪರ ಮದುವೆಯಾಗದಿರಲು ನಿರ್ಧರಿಸಿದ್ದರು. ಏಕೆಂದರೆ ಪ್ರೀತಿ ಮತ್ತು ಮದುವೆ ಪರಸ್ಪರ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ನಂಬಿದ್ದರು. ಪ್ರೀತಿ ದೇಹದಿಂದಲ್ಲ, ಭಕ್ತಿ ಮತ್ತು ಶುದ್ಧತೆಯಿಂದ ಸಂಭವಿಸುತ್ತದೆ ಎಂದು ಸಾಬೀತುಪಡಿಸಲು ಒಬ್ಬರನ್ನೊಬ್ಬರು ಮದುವೆಯಾಗದೆ, ಇಬ್ಬರೂ ಪ್ರೀತಿಯ ಪರಮ ಭಕ್ತಿಯನ್ನು ಇಡೀ ಪ್ರಪಂಚದ ಮುಂದೆ ಇಡುತ್ತಾರೆ. ಕೆಲವು ನಂಬಿಕೆಗಳ ಪ್ರಕಾರ, ರಾಧಾ ತಾನು ಹಸು ಮೇಯಿಸುವವಳು ಎಂಬ ಕಾರಣಕ್ಕೆ ಕೃಷ್ಣನಿಗೆ ತಾನು ಸರಿಯಲ್ಲ ಎಂದು ತಿಳಿದು ಶ್ರೀಕೃಷ್ಣನನ್ನು ಮದುವೆಯಾಗುವುದಿಲ್ಲ ಎಂಬ ನಿರ್ಧಾರದಲ್ಲಿ ಅವಳು ಅಚಲವಾಗಿದ್ದಳು ಎಂದು ಹೇಳಲಾಗಿದೆ. ಇದಲ್ಲದೆ, ಶ್ರೀಕೃಷ್ಣ ಮತ್ತು ರಾಧೆ ಒಬ್ಬರನ್ನೊಬ್ಬರು ಒಂದೇ ಆತ್ಮವೆಂದು ಪರಿಗಣಿಸುತ್ತಾರೆ ಎಂಬ ಇನ್ನೊಂದು ನಂಬಿಕೆ ಇದೆ, ಆದ್ದರಿಂದ ಅವರು ತಮ್ಮ ಒಂದೇ ಆತ್ಮದೊಂದಿಗೆ ಹೇಗೆ ಮದುವೆ ಮಾಡಿಸುವುದು ಎಂದು ಮದುವೆಯಾಗಲಿಲ್ಲ ಎಂದು ಹೇಳಲಾಗಿದೆ.

Chanakya Niti: ಗುರು, ಸ್ತ್ರೀ, ಧರ್ಮ, ಸಂಬಂಧಿಕರನ್ನು ಈ ವೇಳೆ ದೂರವಿಡಲೇಬೇಕು ಎನ್ನುತ್ತಾರೆ
ಸೂಚನೆ: ಶ್ರೀಕೃಷ್ಣ ಮತ್ತು ರಾದೆಯ ವಿವಾಹಕ್ಕೆ ಸಂಬಂಧಿಸಿದ ಈ ಕಥೆಯು ಇನ್ನೊಂದು ಕಥೆಗಳಿಗೆ ಹೋಲಿಸಿದರೆ ಒಂದಿಷ್ಟು ಭಿನ್ನವಾಗಿಬಹುದು. ಪ್ರದೇಶಗಳಿಗನುಗುಣವಾಗಿ, ನಂಬಿಕೆಗಳಿಗನುಗುಣವಾಗಿ ಕಥೆಯು ಭಿನ್ನವಾಗಿರಬಹುದು.
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ