ಆ್ಯಪ್ನಗರ

Lalita Panchami 2022: ಲಲಿತಾ ದೇವಿ ಯಾರು ಗೊತ್ತಾ..? ಲಲಿತಾ ದೇವಿಯ ಈ 2 ಮಂತ್ರಗಳನ್ನು ಪಠಿಸಿ..!

ನವರಾತ್ರಿ ಹಬ್ಬದ 5ನೇ ದಿನವನ್ನು ಲಲಿತಾ ಪಂಚಮಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಸತಿ ದೇವಿಯ ರೂಪವಾದ ಲಲಿತಾ ದೇವಿಯನ್ನು ಪೂಜಿಸಲಾಗುತ್ತದೆ. ಈ ಬಾರಿ ಲಲಿತಾ ಪಂಚಮಿಯನ್ನು ಸೆಪ್ಟೆಂಬರ್‌ 30 ರಂದು ಶುಕ್ರವಾರ ಆಚರಿಸಲಾಗುತ್ತಿದೆ. ಲಲಿತಾ ದೇವಿ ಎಂದರೆ ಯಾರು..? ಲಲಿತಾ ದೇವಿಯ ಪೌರಾಣಿಕ ಮಹತ್ವವೇನು..? ಈ ದಿನ ಲಲಿತಾ ದೇವಿಯ ಯಾವ ಮಂತ್ರಗಳನ್ನು ಪಠಿಸಬೇಕು..?

Vijaya Karnataka Web 29 Sep 2022, 6:33 am
ಶಾರದೀಯ ನವರಾತ್ರಿಯ ಐದನೇ ದಿನದಂದು ತಾಯಿ ಸ್ಕಂದಮಾತೆಯನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ತಾಯಿ ಲಲಿತೆಯನ್ನು ತಾಯಿ ಸತಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಲಲಿತಾ ಪಂಚಮಿ 2022 ನ್ನು ಸೆಪ್ಟೆಂಬರ್‌ 30 ರಂದು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಈ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳ ಪ್ರಕಾರ, ಮಾತಾ ಲಲಿತಾ ಹತ್ತು ಮಹಾವಿದ್ಯೆಗಳಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿದೆ. ಆಕೆಯನ್ನು ಮಹಾತ್ರಿಪುರಸುಂದರಿ, ಷೋಡಶೀ, ಲಲಿತಾ, ಲೀಲಾವತಿ, ಲೀಲಾಮತಿ, ಲಾಲಿತಾಂಬಿಕಾ, ಲೀಲೇಶಿ, ಲೀಲೇಶ್ವರಿ, ಲಲಿತಗೌರಿ ಎಂದೂ ಕರೆಯುತ್ತಾರೆ. ಲಲಿತ ದೇವಿಯ ಬಗ್ಗೆ ನಮಗೆ ತಿಳಿದುಕೊಳ್ಳಲು ಸಾಕಷ್ಟು ವಿಚಾರಗಳಿವೆ. ಲಲಿತ ದೇವಿಗೆ ಸಂಬಂಧಿಸಿದ ರಹಸ್ಯಗಳಾವುವು ಗೊತ್ತೇ..?
Vijaya Karnataka Web lalita panchami 2022 on 30 september know who is lalita devi and her mantra
Lalita Panchami 2022: ಲಲಿತಾ ದೇವಿ ಯಾರು ಗೊತ್ತಾ..? ಲಲಿತಾ ದೇವಿಯ ಈ 2 ಮಂತ್ರಗಳನ್ನು ಪಠಿಸಿ..!



ಶಕ್ತಿಪೀಠ

ಭಾರತದ ತ್ರಿಪುರಾ ರಾಜ್ಯದಲ್ಲಿ ನಾವು ತ್ರಿಪುರ ಸುಂದರಿಯ ಶಕ್ತಿಪೀಠವನ್ನು ನೋಡಬಹುದಾಗಿದೆ. ತಾಯಿ ಸತಿಯು ಮರಣದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳು ಇಲ್ಲಿ ಬಿದ್ದಿವೆ ಎಂದು ನಂಬಲಾಗಿದೆ. ತ್ರಿಪುರ ಸುಂದರಿ ಶಕ್ತಿಪೀಠವು ಭಾರತದ ಅಜ್ಞಾತ 108 ಮತ್ತು 51 ಪೀಠಗಳಲ್ಲಿ ಒಂದಾಗಿದೆ. ದಕ್ಷಿಣ-ತ್ರಿಪುರವು ಉದಯಪುರ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದು ಇಲ್ಲಿನ ರಾಧಾ ಕಿಶೋರ್ ಗ್ರಾಮವು ರಾಜ-ರಾಜೇಶ್ವರಿ ತ್ರಿಪುರ ಸುಂದರಿಯ ಭವ್ಯವಾದ ದೇವಾಲಯವನ್ನು ಹೊಂದಿದೆ, ಇದು ಉದಯಪುರ ನಗರದ ನೈಋತ್ಯದಲ್ಲಿದೆ. ಇಲ್ಲಿ ಸತಿ ದೇವಿಯ ಪಾದವು ಬಿದ್ದಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಶಕ್ತಿ ತ್ರಿಪುರ ಸುಂದರಿ ಮತ್ತು ಶಿವ ತ್ರಿಪುರೇಶ. ಈ ಆಸನವನ್ನು 'ಕುರ್ಭಪೀಠ' ಎಂದೂ ಕರೆಯುತ್ತಾರೆ.

Navratri 2022 Day 4: ಯಾರೀ ಕೂಷ್ಮಾಂಡ ದೇವಿ..? ಇಲ್ಲಿದೆ ಮಂತ್ರ, ಪೂಜೆ ವಿಧಾನ, ಮಹತ್ವ, ಕಥೆ, ಪ್ರಯೋಜನ..!

​ತ್ರಿಪುರ ಸುಂದರಿ

ಲಲಿತಾ ದೇವಿಯನ್ನು ತ್ರಿಪುರ ಸುಂದರಿ ಎಂದೂ ಕರೆಯುತ್ತಾರೆ. ಷೋಡಶಿಯು ಮಹೇಶ್ವರಿ ಶಕ್ತಿಯ ರೂಪವಾಗಿದೆ. ಷೋಡಶಿಯು ನಾಲ್ಕು ಕೈಗಳನ್ನು ಮತ್ತು ಮೂರು ಕಣ್ಣುಗಳನ್ನು ಹೊಂದಿದ್ದಾಳೆ. ಈಕೆಯಲ್ಲಿ ಹದಿನಾರು ಕಲೆಗಳು ಪೂರ್ಣವಾಗಿರುವುದರಿಂದ ಇದನ್ನು ಷೋಡಶಿ ಎಂದೂ ಕರೆಯುತ್ತಾರೆ. ಮಹಾವಿದ್ಯಾ ಸಮುದಾಯದಲ್ಲಿ ತ್ರಿಪುರ ಎಂಬ ಹೆಸರಿನ ಅನೇಕ ದೇವತೆಗಳಿರುವುದು ಗಮನಾರ್ಹವಾಗಿದೆ, ಅವುಗಳಲ್ಲಿ ತ್ರಿಪುರ-ಭೈರವಿ, ತ್ರಿಪುರ ಮತ್ತು ತ್ರಿಪುರ ಸುಂದರಿ ವಿಶೇಷವಾಗಿ ಗಮನಾರ್ಹವಾಗಿವೆ.

Navratri 2022 4th Day: 4ನೇ ದಿನ ಕೂಷ್ಮಾಂಡ ದೇವಿಯನ್ನು ಈ ಮುಹೂರ್ತದಲ್ಲೇ ಪೂಜಿಸಿ..!

​ತ್ರಿಪುರ ಸುಂದರಿ ಅಥವಾ ಲಲಿತಾ ಮಾತೆಯ ಮಂತ್ರ

ಲಲಿತಾ ದೇವಿಗೆ ಸಂಬಂಧಿಸಿದಂತೆ ಎರಡು ಮಂತ್ರಗಳು ಪ್ರಮುಖವಾದುದ್ದಾಗಿದೆ. ಈ ಎರಡು ಮಂತ್ರಗಳನ್ನು ಇಲ್ಲಿ ಉಲ್ಲೇಖಿಸಲಾಗಿದ್ದು, ಇವುಗಳನ್ನು ಪಠಿಸುವಾಗ ಕೈಯಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಪಠಿಸಬೇಕು. ರುದ್ರಾಕ್ಷಿ ಮಾಲೆಯು 10 ಸುತ್ತು ಸಂಪೂರ್ಣಗೊಳ್ಳುವವರೆಗೆ ಮಂತ್ರವನ್ನು ಪಠಿಸಬೇಕು. ನೀವು ಲಲಿತಾ ದೇವಿಯ ಮಂತ್ರಗಳನ್ನು ಜಪಿಸುವ ಮುನ್ನ ತಜ್ಞರ ಸಲಹೆಯನ್ನು ತೆಗೆದುಕೊಂಡು ನಂತರ ಮಂತ್ರವನ್ನು ಪಠಿಸಲು ಪ್ರಾರಂಭಿಸಬೇಕು. ಲಲತಾ ದೇವಿಯ ಆ 2 ಮಂತ್ರಗಳು ಹೀಗಿವೆ.

- ಏಂ ಹ್ರೀಂ ಶ್ರೀಂ ತ್ರಿಪುರ ಸುಂದರಿಯೈ ನಮಃ

- ಓಂ ಶ್ರೀಂ ಹ್ರೀಂ ಕ್ಲೀಂ ಏಂ ಸೌಃ ಓಂ ಹ್ರೀಂ ಶ್ರೀಂ ಕ ಏ ಮ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ ಸೌಃ ಏಂ ಕ್ಲೀಂ ಹ್ರೀಂ ಶ್ರೀಂ ನಮಃ

Navratri 2022: ದುರ್ಗಾ ಪೂಜೆಯಲ್ಲಿ ಮರೆತು ಈ 4 ವಸ್ತುಗಳನ್ನು ಬಳಸಿದರೂ ಅಪಶಕುನ..!

​ಲಲಿತಾ ದೇವಿಯ ಸಾಧನಾ

ಲಲಿತಾ ಮಾತೆಯ ಆರಾಧನೆ, ಉಪವಾಸ ಮತ್ತು ಸಾಧನೆ ಮನುಷ್ಯನಿಗೆ ಶಕ್ತಿ ನೀಡುತ್ತದೆ. ಲಲಿತಾ ದೇವಿಯ ಆರಾಧನೆಯಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ದಕ್ಷಿಣ ಶಾಕ್ತರ ಅಭಿಪ್ರಾಯದ ಪ್ರಕಾರ ಲಲಿತಾ ದೇವಿಗೆ ಚಂಡಿ ದೇವಿಯ ಸ್ಥಾನ - ಮಾನವನ್ನು ನೀಡಲಾಗಿದೆ. ಈಕೆಯನ್ನು ಪೂಜಿಸುವ ವಿಧಿ - ವಿಧಾನ ಚಂಡಿ ದೇವಿಯಂತೆಯೇ ಇದ್ದು ಲಲಿತೋಪಾಖ್ಯಾನ, ಲಲಿತಾ ಸಹಸ್ರನಾಮ, ಲಲಿತಾತ್ರಿಶತಿ ಪಠಣವನ್ನು ಮಾಡಲಾಗುತ್ತದೆ.

Vinayak Chaturthi 2022: ಚತುರ್ಥಿ ಮುಹೂರ್ತ, ಪೂಜೆ ವಿಧಾನ, ಮಂತ್ರ, ಮಹತ್ವ, ಶುಭ

​ಪುರಾಣದಲ್ಲಿ ಲಲಿತಾ ದೇವಿ

ದೇವಿ ಪುರಾಣದಲ್ಲಿ ದೇವಿ ಲಲಿತಾಳನ್ನು ಆದಿಶಕ್ತಿಯ ರೂಪವೆಂದು ವರ್ಣಿಸಲಾಗಿದೆ. ಭಗವಾನ್ ಶಂಕರನನ್ನು ಹೃದಯದಲ್ಲಿ ಇಟ್ಟುಕೊಂಡ ನಂತರ, ಸತಿಯು ನೈಮಿಷದಲ್ಲಿ ಲಿಂಗಧಾರಿಣಿ ಎಂಬ ಹೆಸರಿನಿಂದ ಪ್ರಸಿದ್ಧಳಾದಳು, ತದನಂತರ ಅವಳು ಲಲಿತಾ ದೇವಿ ಎಂದು ಕರೆಯಲ್ಪಟ್ಟಳು. ಇನ್ನೊಂದು ದಂತಕಥೆಯ ಪ್ರಕಾರ, ಭಗವಂತ ಬಿಟ್ಟ ಚಕ್ರದಿಂದ ಭೂಮಿಯು ಅಂತ್ಯಗೊಳ್ಳಲು ಪ್ರಾರಂಭಿಸಿದಾಗ ಲಲಿತಾ ದೇವಿಯ ದರ್ಶನವಾಗುತ್ತದೆ. ಭಗವಂತನು ಪ್ರಯೋಗಿಸಿದ ಚಕ್ರದಿಂದ ಭೂಮಿಯು ಮುಳಗಲು ಪ್ರಾರಂಬಿಸುತ್ತದೆ ಮತ್ತು ಸಕಲ ಜೀವಸಂಕುಲಗಳು ಸಂಕಷ್ಟಕ್ಕೆ ಸಿಲುಕುತ್ತದೆ. ಈ ಪರಿಸ್ಥಿತಿಯಿಂದ ವಿಚಲಿತರಾದ ಋಷಿಗಳು ಮಾತೆ ಲಲಿತಾ ದೇವಿಯನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಅವರ ಪ್ರಾರ್ಥನೆಯಿಂದ ಸಂತೋಷಗೊಂಡ ದೇವಿಯು ಕಾಣಿಸಿಕೊಂಡು ಈ ವಿನಾಶಕಾರಿ ಚಕ್ರವನ್ನು ನಿಲ್ಲಿಸುತ್ತಾಳೆ. ಜಗತ್ತು ಮತ್ತೆ ಹೊಸ ಜೀವನವನ್ನು ಕಂಡುಕೊಳ್ಳುತ್ತದೆ.

Durga Aarti: ದುರ್ಗೆಗೆ ಆರತಿ ಮಾಡುವಾಗ ಈ 4 ವಸ್ತುಗಳನ್ನು ಬಳಸಿದರೆ ಎಲ್ಲಿಯೂ ಶುಭ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ