Please enable javascript.Shiva And Brahma: ಸಾಕ್ಷಾತ್‌ ಪರಶಿವನೇ ಬ್ರಹ್ಮನ ತಲೆಯನ್ನೇಕೆ ಕತ್ತರಿಸಿದ ಗೊತ್ತೇ..? - must know why lord shiva cut lord brahma's 5th head - Vijay Karnataka

Shiva And Brahma: ಸಾಕ್ಷಾತ್‌ ಪರಶಿವನೇ ಬ್ರಹ್ಮನ ತಲೆಯನ್ನೇಕೆ ಕತ್ತರಿಸಿದ ಗೊತ್ತೇ..?

Authored byಮನಿಷಾ ಆನಂದ | TNN & Agencies 30 Oct 2023, 2:53 pm
Subscribe

ಭಗವಾನ್ ಬ್ರಹ್ಮನು ಐದು ತಲೆಗಳನ್ನು ಹೊಂದಿದ್ದನು. ಆದರೆ, ನಾವು ಫೋಟೋ ಅಥವಾ ಚಿತ್ರಗಳಲ್ಲಿ ಬ್ರಹ್ಮನ ನಾಲ್ಕು ತಲೆಗಳನ್ನು ಮಾತ್ರ ನೋಡಬಹದು. ಬ್ರಹ್ಮನು ತನ್ನ ಒಂದು ತಲೆಯನ್ನು ಕಳೆದುಕೊಳ್ಳಲು ಕಾರಣವೇನು? ಬ್ರಹ್ಮ ತನ್ನ ಐದನೇ ತಲೆಯನ್ನು ಹೇಗೆ ಕಳೆದುಕೊಂಡನು? ಬ್ರಹ್ಮನ ಐದನೇ ತಲೆಯ ನಿಜವಾದ ಕಥೆ ಏನು ಗೊತ್ತೇ..?

ಹೈಲೈಟ್ಸ್‌:

  • ಬ್ರಹ್ಮನಿಗೆ ಎಷ್ಟು ತಲೆಗಳಿವೆ.?
  • ಶಿವನೇಕೆ ಬ್ರಹ್ಮನ ತಲೆ ಕತ್ತರಿಸಿದ.?
  • ಶಿವನನ್ನೂ ಬಿಡದ ಬ್ರಹ್ಮ ಹತ್ಯೆ ದೋಷ..!
Lord Shiva And Brahma
ಬ್ರಹ್ಮ ಮತ್ತು ಶಿವ - PC: Pixabay, Shiva Trbe Facebook
ತ್ರಿಮೂರ್ತಿಗಳಲ್ಲಿ ಬ್ರಹ್ಮನು ಸೃಷ್ಟಿಕರ್ತನಾದರೆ, ವಿಷ್ಣು ಸೃಷ್ಟಿಯ ಸಂರಕ್ಷಕ ಹಾಗೂ ಶಿವನು ವಿನಾಶಕ. ಈ ಮೂವರ ಹಿಡಿತದಲ್ಲಿ ಸೃಷ್ಟಿಯು ಕಾರ್ಯನಿರ್ವಹಿಸುತ್ತದೆ. ಬ್ರಹ್ಮ ದೇವನಿಗೆ 4 ತಲೆಗಳಿದ್ದವು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಬ್ರಹ್ಮ ದೇವನನ್ನು ವಿಷ್ಣುವಿನ ನಾಭಿಯಿಂದ ಅಂದರೆ ವಿಷ್ಣುವಿನ ಹೊಕ್ಕಳಿನಿಂದ ಜನಿಸಿದವನು ಎಂದು ಹೇಳಲಾಗುತ್ತದೆ. ಬ್ರಹ್ಮನು ವಿಷ್ಣುವಿನ ನಾಭಿಯಿಂದ ಹೊದಬಂದಾಕ್ಷಣ ನಾಲ್ಕು ದಿಕ್ಕುಗಳನ್ನು ಗಮನಿಸುತ್ತಾನೆ. ಪ್ರತಿ ದಿಕ್ಕಿಗೆ ಒಂದರಂತೆ ನಾಲ್ಕು ತಲೆಗಳು ಪ್ರಕಟಗೊಂಡವು. ಇನ್ನು ಕೆಲವು ಪುರಾಣ ಕಥೆಗಳ ಪ್ರಕಾರ, ಬ್ರಹ್ಮನಿಗೆ 4 ತಲೆಗಳಲ್ಲ 5 ತಲೆಗಳಿದ್ದವು ಎಂದೂ ಹೇಳಲಾಗಿದೆ. ಹಾಗಾದರೆ, ಬ್ರಹ್ಮನ ಈ 5ನೇ ತಲೆಯ ರಹಸ್ಯವೇನು..?
Mantras: ಈ 5 ಮಂತ್ರ ಪಠಿಸಿದರೆ ಎಷ್ಟೇ ಚಿಂತೆಗಳಿದ್ದರೂ ಕ್ಷಣದಲ್ಲೇ ಮಾಯ..!
Lord Shiva

ಶಿವ

- PC: Pixabay" />1. ಶಿವನಿಗೆ ಬ್ರಹ್ಮ ಹತ್ಯೆ ದೋಷ:
ಕೆಲವೊಂದು ಕಥೆಗಳಲ್ಲಿನ ಉಲ್ಲೇಖಗಳ ಪ್ರಕಾರ, ಶಿವನು ಬ್ರಹ್ಮ ದೇವನ ಒಂದು ತಲೆಯನ್ನು ಕತ್ತರಿಸಿದನು ಎಂದು ಹೇಳಲಾಗಿದೆ. ಇದರಿಂದಾಗಿ ಶಿವನು ಬ್ರಹ್ಮ ದೋಷವನ್ನು ಎದುರಿಸಬೇಕಾಯಿತು. ಆದರೆ, ಶಿವನು ಬ್ರಹ್ಮನ ತಲೆಯನ್ನು ಕತ್ತರಿಸಲು ಕಾರಣವೇನು..?

Satyanarayan Puja: ಮನೆಯಲ್ಲೇ ಸುಲಭವಾಗಿ ಸತ್ಯನಾರಾಯಣ ಪೂಜೆ ಮಾಡೋದು ಹೀಗೆ.!
2. ಬ್ರಹ್ಮ ದೇವನ ಅಹಂಕಾರ:
ವಾಸ್ತವವಾಗಿ ಬ್ರಹ್ಮ ದೇವನ 5 ನೇ ತಲೆಯು ಅಹಂಕಾರ ಮತ್ತು ಕೋಪದ ಪ್ರತಿರೂಪವಾಗಿತ್ತು. ಈ ತಲೆಯಿಂದಾಗಿ ಬ್ರಹ್ಮ ದೇವನು ಅಪಾರ ಅಹಂಕಾರವನ್ನು ಹೊಂದಿದ್ದು, ತನಗಿಂತ ಶ್ರೇಷ್ಟರು ಯಾರೂ ಇಲ್ಲ ಎಂಬುದನ್ನು ತಲೆಯಲ್ಲಿಟ್ಟುಕೊಂಡಿದ್ದನು. ಸ್ವತಃ ತನ್ನನ್ನು ತಾನು ಶ್ರೇಷ್ಟನೆಂದು ಬ್ರಹ್ಮ ದೇವನು ತಿಳಿದುಕೊಂಡಿದ್ದನು.

Lord Brahma

ಬ್ರಹ್ಮ ದೇವ

3. ಬ್ರಹ್ಮನ ತಲೆಯನ್ನೇ ಕತ್ತಿರಿಸಿದ್ದ ಶಿವ:
ಬ್ರಹ್ಮ ದೇವನಲ್ಲಿದ್ದ ಅಹಂಕಾರದಿಂದಲೇ ಅವನು ವಿಷ್ಣು ದೇವನನ್ನು ಯಾವಾಗಲೂ ಅವಮಾನಿಸುತ್ತಿದ್ದ ಹಾಗೂ ಕೀಳಾಗಿ ನೋಡುತ್ತಿದ್ದ. ಇದನ್ನು ಗಮನಿಸಿದ ಶಿವನು ಕೋಪಗೊಂಡು ಬ್ರಹ್ಮ ದೇವನ ತಲೆಯನ್ನು ಕತ್ತರಿಸುತ್ತಾನೆ. ಇದರಿಂದ ಶಿವನು ಬ್ರಹ್ಮ ಹತ್ಯೆ ದೋಷದಂತಹ ಘೋರ ದೋಷಕ್ಕೆ ಒಳಗಾಗುತ್ತಾನೆ ಎಂದು ಕಥೆಗಳಲ್ಲಿ ಹೇಳಲಾಗಿದೆ.

Karna Story: ಕರ್ಣ ಎಷ್ಟೇ ಒಳ್ಳೆಯವನಾದರೂ ಆತನ ಸಾವಿಗೆ ಶಾಪವೇ
4. ಬ್ರಹ್ಮ ದೇವನ ತಲೆಯನ್ನು ಕತ್ತರಿಸಿರುವುದರ ಅರ್ಥ:
ಶಿವನು ಬ್ರಹ್ಮ ದೇವನ 5ನೇ ತಲೆಯನ್ನು ಕತ್ತರಿಸಿರುವುದರ ಅರ್ಥವೇನೆಂದರೆ ಒಬ್ಬ ವ್ಯಕ್ತಿ ಎಂದಿಗೂ ಇತರರನ್ನು ತನಗಿಂತ ಶ್ರೇಷ್ಟವಲ್ಲ ಎಂದು ಭಾವಿಸಬಾರದು. ಹಾಗೂ ಇತರರ ದೌರ್ಬಲ್ಯವನ್ನು ಕಂಡು ಅವಮಾನ ಮಾಡಬಾರದು ಎಂಬುದಾಗಿದೆ. ನಾವು ಕೋಪ ಮತ್ತು ಅಹಂಕಾರವನ್ನು ತ್ಯಜಿಸಬೇಕೆಂಬುದು ಇದರ ಅರ್ಥವಾಗಿದೆ.

Lord Shiva

ಶಿವ - PC:Pixabay

5. ಬ್ರಹ್ಮ ದೇವನ ಅಹಂಕಾರವೇ ನಾಶ:
ಶಿವನು ಬ್ರಹ್ಮ ದೇವನ ತಲೆಯನ್ನು ಕತ್ತರಿಸಿದಾಗ ಆ ತಲೆ ನೆಲಕ್ಕೆ ಬೀಳುತ್ತದೆ. ಅದರಂತೆ ಓರ್ವ ಮನುಷ್ಯನೂ ನೆಲಕ್ಕುರುಳುತ್ತಾನೆ. ಇದರರ್ಥ ಶಿವನು ಕತ್ತರಿಸಿರುವುದು ಕೇವಲ ಬ್ರಹ್ಮ ದೇವನ ಒಂದು ತಲೆಯಲ್ಲ. ಬದಲಾಗಿ, ಬ್ರಹ್ಮನ ತಲೆಗೆ ಹೊಂದಿಕೊಂಡಿರುವ ದೇಹ ಎಂಬುದಾಗಿದೆ. ಈ ದೇಹವು ಅಳತೆಗೂ ಮೀರಿದ ಕೋಪವನ್ನು ಹಾಗೂ ಅಹಂಕಾರವನ್ನು ಹೊಂದಿರುವುದರ ಮೂಲಕ ಬ್ರಹ್ಮನನ್ನು ಕೆಡುಕನನ್ನಾಗಿ ಚಿತ್ರಿಸಿತ್ತು.

Monday Dos: ಸೋಮವಾರ ಈ ಕೆಲಸ ಮಾಡಿದರೆ ನಿಮಗೆ ಸಮಸ್ಯೆಗಳೇ ಬಾರದು..!
ಬ್ರಹ್ಮನು ಅಹಂಕಾರ ಮತ್ತು ಅತಿಯಾದ ಕೋಪವನ್ನು ಹೊಂದಿರದಿದ್ದರೆ ಶಿವನು ಅವನ ತಲೆಯನ್ನು ಕತ್ತರಿಸುತ್ತಲೂ ಇರಲಿಲ್ಲ. ಶಿವನಿಗೆ ಬ್ರಹ್ಮ ಹತ್ಯೆ ದೋಷ ಎದುರಾಗುತ್ತಲೂ ಇರಲಿಲ್ಲ.
ಮನಿಷಾ ಆನಂದ
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ