ಆ್ಯಪ್ನಗರ

ಶ್ರಾವಣದಲ್ಲಿ ತುಳಸಿ ಗಿಡ ನೆಟ್ಟರೆ ಅದೃಷ್ಟ ಕೈಹಿಡಿಯುವುದು..! ಈ ವಾಸ್ತು ಪಾಲಿಸಿ..

2021 ರ ಆಗಸ್ಟ್‌ 8 ರಂದು ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಆರಂಭವಾಗುವುದು. ಈ ಮಾಸದಲ್ಲಿ ನಾವು ಶಿವನ ಕೃಪೆಗೆ ಪಾತ್ರರಾಗಲು ಯಾವ ರೀತಿಯ ವಾಸ್ತುವನ್ನು ಪಾಲಿಸಬೇಕು ಗೊತ್ತೇ..? ಮನೆಯಲ್ಲಿ ಯಾವ ಗಿಡ ನೆಡಬೇಕು..? ಮನೆಯಲ್ಲಿ ಶಿವನ ಯಾವ ರೂಪವನ್ನು ಪೂಜಿಸಬೇಕು..?

Vijaya Karnataka Web 27 Jul 2021, 7:02 pm
ಶ್ರಾವಣ ತಿಂಗಳು ಶಿವನ ಕೃಪೆಯಿಂದ ಕೂಡಿದ್ದು, ಈ ತಿಂಗಳಲ್ಲಿ ಶಿವನು ಅತ್ಯಂತ ಪ್ರಸನ್ನ ಭಂಗಿಯಲ್ಲಿ ವಾಸಿಸುತ್ತಾನೆ ಮತ್ತು ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ. ಶ್ರಾವಣ ಮಾಸದಲ್ಲಿ ಮನೆಯ ವಾಸ್ತುವಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ, ನಮ್ಮ ಆಸೆಗಳನ್ನು ಅತ್ಯಂತ ಸರಳವಾಗಿ ಈಡೇರಿಸಿಕೊಳ್ಳಬಹುದು. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ 2021 ರ ಆಗಸ್ಟ್‌ 8 ರಂದು ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಆರಂಭವಾಗುವುದು. ಈ ಮಾಸದಲ್ಲಿ ನಾವು ಶಿವನ ಕೃಪೆಗೆ ಪಾತ್ರರಾಗಲು ಯಾವ ರೀತಿಯ ವಾಸ್ತುವನ್ನು ಪಾಲಿಸಬೇಕು ಗೊತ್ತೇ..?
Vijaya Karnataka Web shravan maas vastu these vastu tips will bring you wealth and luck
ಶ್ರಾವಣದಲ್ಲಿ ತುಳಸಿ ಗಿಡ ನೆಟ್ಟರೆ ಅದೃಷ್ಟ ಕೈಹಿಡಿಯುವುದು..! ಈ ವಾಸ್ತು ಪಾಲಿಸಿ..



​ಈ ದಿಕ್ಕಿನಲ್ಲಿ ನೀರಿನ ಮೂಲವನ್ನು ಇರಿಸಿ

ಶಿವನು ನೀರನ್ನು ಹೆಚ್ಚು ಪ್ರೀತಿಸುತ್ತಾನೆ. ಇದನ್ನು ಗಮನದಲ್ಲಿಟ್ಟುಕೊಂಡು, ಶ್ರಾವಣ ತಿಂಗಳಲ್ಲಿ ಉತ್ತರ ದಿಕ್ಕಿನಲ್ಲಿ ನೀರಿನ ಮೂಲವನ್ನು ಸ್ಥಾಪಿಸುವುದು ನಿಮಗೆ ತುಂಬಾ ಶುಭವಾಗಿರುತ್ತದೆ. ಇದನ್ನು ಮಾಡುವುದರ ಮೂಲಕ, ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವುದರ ಜೊತೆಗೆ, ಹಣದ ಹರಿವು ಸಹ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಉತ್ತರ ದಿಕ್ಕಿನಲ್ಲಿ ಅದು ಸಾಧ್ಯವಾಗದಿದ್ದರೆ, ನೀವು ಪೂರ್ವ ದಿಕ್ಕಿನಲ್ಲಿಯೂ ಕೃತಕ ನೀರಿನ ಕಾರಂಜಿಯನ್ನು ಹಾಕಬಹುದು. ಇದನ್ನು ಮಾಡುವುದರಿಂದ ನೀವು ಪ್ರಮುಖ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ.

ದಾನವೇ ನಿಜವಾದ ಸಂಪತ್ತು ಎನ್ನುತ್ತಾನೆ ಚಾಣಕ್ಯ..! ಎಷ್ಟು ಹಣವನ್ನು ದಾನ ಮಾಡಬೇಕು..?

​ಈ ದಿಕ್ಕಿನಲ್ಲಿ ಮನಿಪ್ಲಾಂಟ್‌ ಇಡಿ

ಶ್ರಾವಣ ತಿಂಗಳು ಸಂಪೂರ್ಣ ಮಳೆಯನ್ನು ಅವಲಂಭಿಸಿದ್ದು, ಮನಿ ಪ್ಲಾಂಟ್‌ ಸಸ್ಯದ ಬೆಳವಣಿಗೆಗೆ ಈ ತಿಂಗಳು ಉತ್ತಮವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್‌ ನೆಡುವುದರ ಮೂಲಕ ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ಧಿಯು ಬರುತ್ತದೆ ಎನ್ನುವ ನಂಬಿಕೆಯಿದೆ. ಮನೆಯಲ್ಲಿ ಮನಿ ಪ್ಲಾಂಟ್‌ನ್ನು ಇಡಲು ಶ್ರಾವಣ ತಿಂಗಳು ಅತ್ಯುತ್ತಮ ಸಮಯ. ಮನೆಯಲ್ಲಿ ಮನಿ ಪ್ಲಾಂಟ್‌ ಬೆಳೆದಂತೆ ನಿಮ್ಮ ಮನೆಯ ಸಂಪತ್ತು ಕೂಡ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ.

ಸಮುದ್ರ ಮಂಥನದಲ್ಲಿ ಜನಿಸಿದ 6 ದೇವಾನುದೇವತೆಗಳಿವರು..! ನಿಮಗಿವರು ಗೊತ್ತೇ..?

​ಶಿವನ ಈ ವಿಗ್ರಹವನ್ನು ಮನೆಗೆ ತನ್ನಿ

ಶ್ರಾವಣ ತಿಂಗಳಲ್ಲಿ ಶಿವನ ಅರ್ಧನಾರೀಶ್ವರ ರೂಪವನ್ನು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಮನೆಯ ಪೂರ್ವ ದಿಕ್ಕಿನಲ್ಲಿ ಅರ್ಧನಾರೀಶ್ವರ ರೂಪವನ್ನು ಪೂಜಿಸುವುದು ಈ ತಿಂಗಳಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಶ್ರಾವಣ ತಿಂಗಳಲ್ಲಿ, ಅರ್ಧನಾರೀಶ್ವರ ವಿಗ್ರಹವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ವಿಶೇಷ ಲಾಭವಾಗುತ್ತದೆ. ಇದನ್ನು ಮಾಡುವುದರಿಂದ, ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿ ಹೆಚ್ಚಾಗುತ್ತದೆ ಮತ್ತು ಆ ಮನೆಯಲ್ಲಿ ಹಣದ ಸಮೃದ್ಧಿ ಹೆಚ್ಚಾಗುತ್ತದೆ.

ಭಾನುವಾರ ಈ 9 ತಪ್ಪುಗಳನ್ನು ಮಾಡಿದರೆ ಸೂರ್ಯ ದೋಷ ತಪ್ಪಿದ್ದಲ್ಲ..! ಎಚ್ಚರ...

​ತುಳಸಿ ಸಸ್ಯ

ಮನೆಯಲ್ಲಿ ತುಳಸಿಯನ್ನು ಹೊಂದಿರುವುದು ಸಂತೋಷ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿ ತುಳಸಿ ಇಲ್ಲದಿದ್ದರೆ, ಶ್ರಾವಣ ತಿಂಗಳಲ್ಲಿ ತುಳಸಿ ಗಿಡವನ್ನು ನೆಡಬೇಕು. ಇದನ್ನು ಮಾಡುವುದರಿಂದ ನಿಮಗೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ತುಳಸಿ ಸಸ್ಯವನ್ನು ಉತ್ತರ ದಿಕ್ಕಿನಲ್ಲಿ ನೆಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಅವಿವಾಹಿತ ಹುಡುಗಿಯರು ಶ್ರಾವಣ ತಿಂಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ, ಶೀಘ್ರದಲ್ಲೇ ಅವರ ವಿವಾಹದ ಸಾಧ್ಯತೆಗಳು ರೂಪುಗೊಳ್ಳುತ್ತವೆ ಎನ್ನುವ ನಂಬಿಕೆಯಿದೆ.

ಅಂಗಾರಕಿ ಸಂಕಷ್ಟ ಚತುರ್ಥಿ 2021: ಈ ಮಂತ್ರಗಳಿಂದ ಅದೃಷ್ಟ, ದೀರ್ಘಾಯುಷ್ಯ, ಯಶಸ್ಸು ಪ್ರಾಪ್ತಿ..!

​ಇದನ್ನು ಪ್ರತಿದಿನ ಮಾಡಿ

ಶ್ರಾವಣ ತಿಂಗಳಲ್ಲಿ, ನಮ್ಮ ಸುತ್ತಲೂ ಸಾಕಷ್ಟು ಶಕ್ತಿಯಿರುತ್ತದೆ ಎಂದು ನಂಬಲಾಗಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಗಂಗಾಜಲವನ್ನು ಮನೆಯ ಪ್ರತಿಯೊಂದು ಮೂಲೆಯಲ್ಲೂ ಚಿಮುಕಿಸಿದರೆ, ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ ರೀತಿಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಆದ್ದರಿಂದ, ಶ್ರಾವಣ ತಿಂಗಳಲ್ಲಿ, ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಮತ್ತು ಗಂಗಾಜಲವನ್ನು ಮನೆಯ ಪ್ರತೀ ಮೂಲೆಯಲ್ಲೂ ಸಿಂಪಡಿಸಿ. ಇದು ಇಡೀ ಮನೆಯ ನಕಾರಾತ್ಮಕತೆಯನ್ನು ನಾಶಪಡಿಸುತ್ತದೆ.

ನಾಳೆ ಸಂಕಷ್ಟ ಚತುರ್ಥಿ: ಇಲ್ಲಿದೆ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ ಮತ್ತು ಅರ್ಥ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ