ಆ್ಯಪ್ನಗರ

ಮನೆಯಿಂದ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುವ 7 ಮಾರ್ಗಗಳಿವು..! ಇವುಗಳನ್ನು ಮನೆಯಲ್ಲಿಡಿ..

ಮನೆಯಲ್ಲಿ ಋಣಾತ್ಮಕ ಶಕ್ತಿ ಇದ್ದಾಗ ಕೌಟುಂಬಿಕ ಕಲಹಗಳು ಸರ್ವೇ ಸಾಮಾನ್ಯ. ಹಾಗಾದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದು ಹೇಗೆ..? ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುವ 7 ಪ್ರಮುಖ ಕ್ರಮಗಳಿವು..!

Vijaya Karnataka Web 26 Jun 2021, 5:09 pm
ಕೆಲವು ಮನೆಗಳಲ್ಲಿ ಪತಿ - ಪತ್ನಿಯರ ಅಥವಾ ಗಂಡ - ಹೆಂಡತಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತದೆ. ಪರಿಣಾಮವಾಗಿ ಮನೆಯಲ್ಲಿ ಉದ್ವಿಗ್ನತೆ ಮತ್ತು ಅಶಾಂತಿ ಉಂಟಾಗುತ್ತದೆ. ಕೆಲವೊಮ್ಮೆ ವಾಸ್ತು ದೋಷವೇ ಇದಕ್ಕೆ ಮುಖ್ಯ ಕಾರಣವೆಂದು ಹೇಳಲಾಗುತ್ತದೆ. ಈ ವಾಸ್ತು ದೋಷಗಳನ್ನು ತೆಗೆದುಹಾಕಲು 7 ಪರಿಹಾರಗಳನ್ನು ಕೆಳಗೆ ನೀಡಲಾಗಿದೆ. ಈ 7 ಕ್ರಮಗಳನ್ನು ಮಾಡುವುದರಿಂದ, ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಲಾಗುತ್ತದೆ. ಮನೆಯಲ್ಲಿ ಶಾಂತಿ ಇರುತ್ತದೆ. ಆ 7 ಪರಿಹಾರ ಕ್ರಮಗಳಾವುವು ಗೊತ್ತೇ..? ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮಾರ್ಗಗಳಿವು..
Vijaya Karnataka Web these 7 simple steps to remove negativity and purify your house
ಮನೆಯಿಂದ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುವ 7 ಮಾರ್ಗಗಳಿವು..! ಇವುಗಳನ್ನು ಮನೆಯಲ್ಲಿಡಿ..


​ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದು

ವಾಸ್ತು ದೋಶದಿಂದಾಗಿ, ಅಥವಾ ಇನ್ಯಾವುದೇ ರೀತಿಯ ಸಮಸ್ಯೆಗಳಿಂದಾಗಿ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತಿರುತ್ತದೆ. ಆದ್ದರಿಂದ ಕಾಲಕಾಲಕ್ಕೆ ಮನೆಯಲ್ಲಿ ಹೋಮ - ಹವನ ಮಾಡುತ್ತಿರಬೇಕು. ಕುಟುಂಬದ ಜನರು ಒಟ್ಟಿಗೆ ಕುಳಿತು ಪೂಜೆ ಮಾಡಬೇಕು ಮತ್ತು ಮಂತ್ರಗಳನ್ನು ಪಠಿಸಬೇಕು. ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯ ಮನೆಯಲ್ಲಿ ದೀಪವನ್ನು ಬೆಳಗಿಸಿ. ಇವೆಲ್ಲವೂ ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.

ಮುಂಜಾನೆ ಅಂಗೈ ನೋಡುವುದರ ಪ್ರಯೋಜನವೇನು..? ಈ ಮಂತ್ರವನ್ನು ತ್ಪಪದೇ ಪಠಿಸಿ..!

​ತುಳಸಿಗೆ ದೀಪ ಬೆಳಗಿ

ಮನೆಯಲ್ಲಿ ತುಳಸಿ ಗಿಡವನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿ. ನಂತರ ಪ್ರತಿದಿನ ತಪ್ಪದೇ ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಬೆಳಗಬೇಕು. ಇದು ನಿಮ್ಮ ಮನೆಗೆ ಸಂಪತ್ತನ್ನು ತರುವುದು ಮಾತ್ರವಲ್ಲ. ಸಂತೋಷವನ್ನು ಕೂಡ ತರುತ್ತದೆ.

ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ 2021: ಇಲ್ಲಿದೆ ಮುಹೂರ್ತ, ಪೂಜೆ ವಿಧಾನ ಮತ್ತು ಪ್ರಯೋಜನ..!

​ಮನೆಯನ್ನು ಹೀಗೆ ಪ್ರವೇಶಿಸಿ

ನಿಮ್ಮ ಮನೆಯಲ್ಲಿ ಎರಡು ಬಾಗಿಲುಗಳಿದ್ದರೆ, ನೀವು ಮುಖ್ಯ ದ್ವಾರದ ಮೂಲಕ ಮನೆಯನ್ನು ಯಾವಾಗಲೂ ಪ್ರವೇಶಿಸಬೇಕು. ಹಿಂದಿನ ಬಾಗಿಲಿನ ಮೂಲಕ ಮನೆಯನ್ನು ಪ್ರವೇಶಿಸುವ ಅಭ್ಯಾಸವನ್ನು ಬಿಟ್ಟುಬಿಡುವುದು ಉತ್ತಮ.

ಶನಿ ಸಾಡೇಸಾತಿ ಯಾವಾಗ ಆರಂಭ..? ಇಲ್ಲಿದೆ ಇದರ ದುಷ್ಪರಿಣಾಮ, ಪರಿಹಾರ..!

​ಹುಣ್ಣಿಮೆಯ ದಿನದಂದು ಹೀಗೆ ಮಾಡಿ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಹುಣ್ಣಿಮೆಯ ದಿನವು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನವನ್ನು ಅತ್ಯಂತ ಪವಿತ್ರ ಮತ್ತು ಶುಭವೆಂದು ಪರಿಗಣಿಸಲಾಗಿದೆ. ಹುಣ್ಣಿಮೆಯ ದಿನ, ಗಂಗಾ ನೀರನ್ನು ಮನೆಯಾದ್ಯಂತ ಸಿಂಪಡಿಸಿ. ಇದು ಮನೆಯ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.

ಲಕ್ಷ್ಮಿ ದೇವಿಯ 9 ಸುಂದರ ದೇವಾಲಯಗಳಿವು..! ಇವುಗಳ ವಿಶೇಷತೆಗಳೇನು ಗೊತ್ತೇ..?

​ಮನೆಯನ್ನು ಹೀಗೆ ಒರೆಸಿ

ಮನೆಯನ್ನು ಒರೆಸುವ ನೀರಿಗೆ ಉಪ್ಪನ್ನು ಬೆರೆಸಿ ನಿಯಮಿತವಾಗಿ ಉಪ್ಪಿನ ನೀರಿನಿಂದ ಮನೆಯನ್ನು ಒರೆಸಿ. ಇದು ನಿಮ್ಮ ಮನೆಯಲ್ಲಿನ ಬ್ಯಾಕ್ಟೇರಿಯಾವನ್ನು ತೆಗೆದು ಹಾಕುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದ್ರೌಪದಿಯ 3 ಪಾಪಗಳೇ ಆಕೆಯನ್ನು ನರಕಕ್ಕೆ ತಳ್ಳಿತು..! ದ್ರೌಪದಿಯ 3 ಪಾಪಗಳಾವುವು..?

​ಇದನ್ನು ಮನೆಯಲ್ಲಿಡಿ

ನಗುವ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸಿ. ಬುದ್ಧನ ನಗುವಿನ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಇದು ಶಾಂತಿ ಮತ್ತು ಸಂತೋಷವನ್ನು ಮನೆಯಲ್ಲಿ ಉಳಿಯುವಂತೆ ಮಾಡುತ್ತದೆ ಎನ್ನುವ ನಂಬಿಕೆಯಿದೆ.

ತುಳಸಿ ಪ್ರಯೋಜನ: ಅಪೇಕ್ಷಿತ ವರನನ್ನು ಪಡೆಯಲು ತುಳಸಿಯನ್ನು ಬಳಸಿ..!

​ಇದನ್ನು ಕೂಡ ಮನೆಯಲ್ಲಿಡಿ

ತಾಮ್ರ ಅಥವಾ ಹಿತ್ತಾಳೆಯ ಆಮೆಯನ್ನು ನೀರಿನ ಜಾರ್‌ನಲ್ಲಿ ಇರಿಸಿ ಮತ್ತು ಅದನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಇದು ಮನೆಯ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ ಮತ್ತು ಮನೆಯಲ್ಲಿ ಹಣದ ಆಗಮನಕ್ಕೆ ದಾರಿ ಮಾಡಿಕೊಡುತ್ತದೆ.

ನಾವೇಕೇ ಓಂಕಾರ ಪಠಿಸಬೇಕು..? ಇಲ್ಲಿದೆ ಇದರ 13 ಅತ್ಯದ್ಭುತ ಲಾಭಗಳು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ