ಇತರರಿಗೆ ಹಾನಿ ಮಾಡಬೇಡಿ
ನಿಮ್ಮ ಸ್ವಂತ ಜೀವನದ ಸಲುವಾಗಿ ಯಾವುದೇ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಕೊಲ್ಲಬೇಡಿ. ಎಲ್ಲಿ ಮನಸ್ಸು ಹಿಂಸೆಯಿಂದ ದೂರ ಸರಿಯುತ್ತದೋ ಅಲ್ಲಿ ಸಂತೋಷ ಇರುತ್ತದೆ ಎಂದು ಬುದ್ಧ ಹೇಳುತ್ತಾನೆ.
ಹಬ್ಬಗಳು2022 ಚಂದ್ರ ಗ್ರಹಣ: ಗ್ರಹಣದ ಸೂತಕ ಅವಧಿ, ಪಠಿಸಬೇಕಾದ ಮಂತ್ರ ಮತ್ತು ನಿಯಮಗಳು ಹೀಗಿವೆ..!
ಸತ್ಯ
3 ವಿಷಯಗಳನ್ನು ದೀರ್ಘಕಾಲ ಮುಚ್ಚಿಡಲಾಗುವುದಿಲ್ಲ, ಅವುಗಳೆಂದರೆ- ಸೂರ್ಯ, ಚಂದ್ರ ಮತ್ತು ಸತ್ಯ. ಪ್ರತಿದಿನ ಸೂರ್ಯನು ಹೇಗೆ ಗೋಚರಿಸುತ್ತಾನೋ, ಚಂದ್ರನು ಸಹ ಗೋಚರಿಸುತ್ತಾನೆ. ಅದೇ ರೀತಿಯಲ್ಲಿ ಸತ್ಯವು ಯಾವುದಾದರೂ ಒಂದಲ್ಲ ಒಂದು ಮಾರ್ಗದ ಮೂಲಕ ಹೊರ ಬರುತ್ತದೆ. ಆದ್ದರಿಂದ, ನಿಮ್ಮ ನಡವಳಿಕೆಯಲ್ಲಿ ಅಸತ್ಯವನ್ನು ತರಬೇಡಿ, ಅದರಿಂದ ದೂರವಿರುವುದು ಮನುಷ್ಯನಿಗೆ ಒಳ್ಳೆಯದು.
ಪೂಜಾ ವಿಧಿಗಳು2022 ಬುದ್ಧ ಪೂರ್ಣಿಮಾ: ಈ 10 ರೀತಿಯ ಪೂಜೆಯಿಂದ ಪುಣ್ಯ ಪ್ರಾಪ್ತಿ..! ಆ 10 ಕೆಲಸಗಳಾವುವು..?
ಜೀವನದ ಉದ್ದೇಶವನ್ನು ಸರಿಯಾಗಿ ಇಟ್ಟುಕೊಳ್ಳಿ
ಜೀವನದಲ್ಲಿ ಯಾವುದೇ ಉದ್ದೇಶ ಅಥವಾ ಗುರಿಯನ್ನು ತಲುಪುವುದಕ್ಕಿಂತ ಹೆಚ್ಚು ಮುಖ್ಯವಾದುದು ಆ ಪ್ರಯಾಣವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಅದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು.
ಪೂಜಾ ವಿಧಿಗಳು2022 ಬುದ್ಧ ಜಯಂತಿ: ಈ ದಿನದಂದು ಪಠಿಸಬೇಕಾದ ಬೌದ್ಧ ಮಂತ್ರಗಳಾವುವು ಗೊತ್ತೇ..
ಪ್ರೀತಿಯ ಮಾರ್ಗವನ್ನು ಅನುಸರಿಸಿ
ದುಷ್ಟತನವು ದುಷ್ಟತನದಿಂದ ಎಂದಿಗೂ ಕೊನೆಗೊಳ್ಳುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಮಾತ್ರ ಕೊನೆಗೊಳಿಸಬಹುದು, ಇದು ಅಕ್ಷಯ ಸತ್ಯ. ಆದ್ದರಿಂದ ದುಷ್ಟತನವನ್ನು, ದುಷ್ಟರನ್ನೂ ಪ್ರೀತಿಯಿಂದ ಕಾಣಲು ಪ್ರಯತ್ನಿಸಿ.
ಹಬ್ಬಗಳು2022 ನರಸಿಂಹ ಜಯಂತಿ: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ದೇವಾಲಯಗಳು..!
ಇತರರನ್ನು ತನ್ನಂತೆ ಅಂದುಕೊಳ್ಳುವುದು
ನಾನು ಹೇಗಿದ್ದೇನೆ, ಅವರು ಹಾಗೆಯೇ, ಮತ್ತು 'ಅವರಂತೆ, ನಾನು ಕೂಡ. ಈ ರೀತಿಯಾಗಿ, ಎಲ್ಲರನ್ನೂ ನಿಮ್ಮವರೆಂದು ಪರಿಗಣಿಸಿ, ಯಾರನ್ನೂ ಕೊಲ್ಲಬೇಡಿ, ಕೊಲ್ಲಲು ಪ್ರೇರೇಪಿಸಬೇಡಿ.
ದೇವಾಲಯಗಳುಒಂದಲ್ಲ 7 ಬದ್ರಿ ಧಾಮಗಳಿವೆ..! ಈ ಸಪ್ತ ಬದ್ರಿಗಳ ರಹಸ್ಯ ಮತ್ತು ಮಹತ್ವವೇನು ಗೊತ್ತೇ..?
ನಿಮ್ಮನ್ನು ನೀವು ಜಯಿಸಿ
ಜೀವನದಲ್ಲಿ ಸಾವಿರಾರು ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ಜಯಿಸುವುದು ಉತ್ತಮ. ಆಗ ಗೆಲುವು ಯಾವಾಗಲೂ ನಿಮ್ಮದಾಗಿರುತ್ತದೆ, ಅದನ್ನು ನಿಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.
ಹಿಂದೂ ಧರ್ಮಯಾವ ಪಾಪ ಮಾಡಿದರೆ ನರಕದಲ್ಲಿ ಏನು ಶಿಕ್ಷೆ ಗೊತ್ತಾ..? ಗರುಡ ಪುರಾಣದಲ್ಲಿದೆ ಉಲ್ಲೇಖ..!
ಇತರರಿಗೆ ಸಂತೋಷವನ್ನು ನೀಡಿ
ಮನುಷ್ಯ ನಾನು ಬದುಕಲು ಬಯಸುತ್ತೇನೆಯೇ ಹೊರತು ಸಾಯಲು ಬಯಸುವುದಿಲ್ಲ ಎಂದು ಆತನು ಭಾವಿಸುತ್ತಾನೆ. ಆದರೆ ಸಂತೋಷದ ಬಯಕೆ ದುಃಖಕ್ಕಾಗಿ ಅಲ್ಲ. ನನ್ನಂತೆಯೇ ಸುಖವನ್ನು ಬಯಸುವ ಜೀವಿಯನ್ನು ನಾನು ಕೊಂದರೆ, ಅದು ಅವನಿಗೆ ಸಂತೋಷವಾಗುತ್ತದೆಯೇ..? ಆದ್ದರಿಂದ ಮನುಷ್ಯನು ಪ್ರಾಣಿಗಳ ಗಾಯದಿಂದ ದೂರವಿರಬೇಕು. ಅವನು ಇತರರನ್ನು ಹಿಂಸೆಯಿಂದ ದೂರವಿಡಲು ಪ್ರಯತ್ನಿಸಬೇಕು.
ಮೂಢನಂಬಿಕೆಕೂದಲಿನ ಕನಸುಗಳು ಬಿದ್ದರೆ ಶೀಘೃದಲ್ಲೇ ನೀವು ಸಾಲದಿಂದ ಮುಕ್ತರಾಗುವಿರಿ..!
ವೈರತ್ವ ಬಿಡಬೇಕು
ವೈರತ್ವವನ್ನು ನಾನು ನಮ್ಮ ಮನಸ್ಸಿನಿಂದ ತೆಗೆದುಹಾಕಬೇಕು. ಆಗ ಮಾತ್ರ ನಾವು ನಿಜವಾದ ಸಂತೋಷವನ್ನು ಅನುಭವಿಸಲು ಸಾಧ್ಯ. ನಮ್ಮ ವೈರಿಯನ್ನು ಅಂದರೆ ನಮ್ಮನ್ನು ದ್ವೀಷಿಸುವವರನ್ನು ಸಹ ಪ್ರೀತಿಯಿಂದ ಕಾಣಬೇಕೇ ಹೊರತು ವೈರಿಗಳಂತೆ ಕಾಣಬಾರದು. ನಮ್ಮ ಈ ವರ್ತನೆಯು ವೈರಿಗಳ ಮನಸ್ಸಿನಲ್ಲೂ ಪ್ರೀತಿಯ ಬೀಜವನ್ನು ಬಿತ್ತುತ್ತದೆ.
ಪೂಜಾ ವಿಧಿಗಳುವೃಷಭ ಸಂಕ್ರಾಂತಿ 2022: ಸೂರ್ಯನನ್ನು ಹೀಗೆ ಪೂಜಿಸಿದರೆ ಸೂರ್ಯ ದೋಷವೇ ದೂರ..!
ಪ್ರಾಣಿ ಹಿಂಸೆ ಮಹಾಪಾಪ
ಮೊದಲು ಮೂರು ರೋಗಗಳಿದ್ದವು- ಆಸೆ, ಹಸಿವು ಮತ್ತು ವೃದ್ಧಾಪ್ಯ. ಪ್ರಾಣಿ ಹಿಂಸೆ ಹೆಚ್ಚಾದಂತೆ ರೋಗಗಳ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಹೋಯಿತು. ಇತ್ತೀಚಿನ ದಿನಗಳಲ್ಲಿ ದೇವರ ಹೆಸರಿನಲ್ಲೂ ಪ್ರಾಣಿಗಳಿಗೆ ಹಿಂಸೆಯನ್ನು ನೀಡಲಾಗುತ್ತಿದೆ. ಯಾಗದ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರಾಣಿ ಹಿಂಸೆ ಖಂಡಿತವಾಗಿಯೂ ಖಂಡನೀಯ ಮತ್ತು ಹೇಯ ಕೃತ್ಯ.
ಪೂಜಾ ವಿಧಿಗಳುಗಾಯತ್ರಿ ಮಂತ್ರವನ್ನು ವಿಧಿ ವಿಧಾನಗಳಂತೆ ಪಠಿಸೋದು ಹೇಗೆ..? ಈ ನಿಯಮಗಳನ್ನೇ
ಚರ್ಮವನ್ನು ಧರಿಸಬೇಡಿ
ಭಗವಾನ್ ಬುಧ್ಧನು ತನ್ನ ಅನುಯಾಯಿಗಳಿಗೆ ಹೀಗೆಂದು ಹೇಳಿದ್ದಾನೆ.. 'ಭಿಕ್ಷುಗಳೇ! ದೊಡ್ಡ ಚರ್ಮಗಳು ಸಿಂಹ, ಹುಲಿ ಮತ್ತು ಚಿರತೆಗಳ ಚರ್ಮವನ್ನು ಧರಿಸಬಾರದು. ಯಾರು ಅದನ್ನು ಧರಿಸುತ್ತಾರೋ ಅವರಿಗೆ ದುಕ್ಕತ್ ದೋಷ ಎದುರಾಗುತ್ತದೆ.'