ರಾಮ ನಾಮ ಸ್ಮರಣೆ
ದಶರಥ ಮತ್ತು ಕೌಸಲ್ಯೆಯ ಮಗನಾಗಿ ಜನಿಸಿದ ಸರ್ವೋಚ್ಚ ಮನೋಭಾವದ ಮಾನವನ ಅವತಾರವೇ ಶ್ರೀರಾಮನ ಅವತಾರ. ಪ್ರಕೃತಿಯಲ್ಲಿ ಎಲ್ಲೆಡೆ ರಾಮನು ಇರುತ್ತಾನೆ. ಆದರೆ ಅವನನ್ನು ನಾವು ತೆರೆದ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಆದರೆ ಆಂತರಿಕ ಕಣ್ಣುಗಳಿಂದ ರಾಮನನ್ನು ಕಾಣಬಹುದು. ಆತ್ಮ ಶುದ್ಧಿಯಿಂದ ರಾಮನನ್ನು ಕಂಡರೆ ಜನ್ಮವು ಪಾವನವಾಗುವುದು. ನಿಸ್ವಾರ್ಥ ಭಾವನೆಯಿಂದ ರಾಮನ ನಾಮ ಸ್ಮರಣೆ ಮಾಡಿದರೆ ಜೀವನವು ಬೆಳಗುವುದು. ಅಜ್ಞಾನ ಹಾಗೂ ಅತಿ ಆಸೆಯಿಂದ ಕೂಡಿದ ನಮ್ಮ ಕತ್ತಲ ಬದುಕಿಗೆ ಶ್ರೀ ರಾಮನು ಜ್ಞಾನ ಹಾಗೂ ಅರಿವಿನ ಬೆಳಕು ಚೆಲ್ಲುವುದರ ಮೂಲಕ ಬದುಕನ್ನು ಬೆಳಗುವನು.
ಮಹಾನ್ ದೈವ ಪುರುಷ ಶ್ರೀರಾಮ
ಮಾನವನ ಅವತಾರವನ್ನು ತಾಳಿ, ಮನುಕುಲದ ನಡುವೆಯೇ ಇದ್ದು, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ ದೇವ ರೂಪ ರಾಮ. ತನ್ನ ನಿಷ್ಕಲ್ಮಶವಾದ ಮನಸ್ಸಿನಿಂದ ಪಾಲಕರನ್ನು ಹಾಗೂ ಸಮಾಜವನ್ನು ಗೌರವಿಸಿದನು. ತನ್ನ ಪ್ರಜೆಗಳಿಗೆ ಸದಾ ಸಂತೋಷದ ಜೀವನವನ್ನು ಕರುಣಿಸಿದನು. ದುಷ್ಟ ರಾವಣನನ್ನು ಸೋಲಿಸಿ, ಇತರರಿಗೆ ಕೆಟ್ಟದನ್ನು ಮಾಡಿದರೆ ಜೀವನದಲ್ಲಿ ಕೆಟ್ಟದ್ದೇ ಸಂಭವಿಸುವುದು ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ದೈವ ಪುರುಷ ಶ್ರೀರಾಮ. ಶ್ರೀರಾಮನ ನಾಮ ಸ್ಮರಣೆಯನ್ನು ಮಾಡಿದರೆ ಮನುಕುಲದ ಜೀವನವು ಹಸನಾಗುವುದು. ರಾಮನಲ್ಲಿ ಭಕ್ತಿ ಹಾಗೂ ನಂಬಿಕೆಯಿಟ್ಟು ನಡೆದರೆ ಜೀವನವು ಸದಾ ಸಂತೃಪ್ತಿಯಿಂದ ಕೂಡಿರುವುದು.
ರಾಮನು ಸರ್ವಶಕ್ತನು
ಭಗವಾನ್ ಶ್ರೀರಾಮನು ಸರ್ವಾಂತರ್ಯಾಮಿ. ಅವನಿಗೆ ಅನೇಕ ಹೆಸರುಗಳಿಂದ ಕರೆಯಲಾಗುವುದು. ರಾಮನ ಹೆಸರುಗಳು ಬ್ರಹ್ಮಾಂಡದಲ್ಲಿ ಅತ್ಯಂತ ಬಲವಾದ ಮತ್ತು ಸಕಾರಾತ್ಮಕ ಕಂಪನಗಳಿಂದ ಕೂಡಿದೆ. ರಾಮನ ನಾಮಗಳನ್ನು ಜಪಿಸಿದರೆ ನಮ್ಮಲ್ಲಿಯೂ ಸಕಾರಾತ್ಮಕ ಬದಲಾವಣೆಗಳು ಆಂತರಿಕವಾಗಿ ಉಂಟಾಗುತ್ತವೆ. ಜೊತೆಗೆ ಮಾನಸಿಕವಾಗಿ ನಿರಾಳತೆ ಹಾಗೂ ನೆಮ್ಮದಿ ದೊರೆಯುವುದು. ರಾಮ ನಾಮದ ಧ್ಯಾನ ಮಾಡಿದರೆ ವ್ಯಕ್ತಿಯು ಜೀವನದಲ್ಲಿ ಸರ್ವೋಚ್ಚ ಮನೋಭಾವವನ್ನು ಪಡೆದುಕೊಳ್ಳುವನು.
ವಿನಾಶಕಾರಿ ಶಕ್ತಿ ದೂರವಾಗುವುದು
ಮನುಷ್ಯನಲ್ಲಿ ಸಾಮಾನ್ಯವಾಗಿ ಕೋಪ, ದ್ವೇಷ, ಸಿಟ್ಟು ಹಾಗೂ ವಿನಾಶದ ಪ್ರವೃತ್ತಿ ಇರುತ್ತದೆ. ಇವನ ಈ ಕೆಟ್ಟ ಗುಣಗಳೇ ಬಹುತೇಕ ಸಂದರ್ಭದಲ್ಲಿ ದಾರಿ ತಪ್ಪುವಂತೆ ಪ್ರೇರೇಪಿಸುತ್ತವೆ. ಹಾಗಾಗಿ ಮನುಷ್ಯ ಮೊದಲು ತನ್ನ ಭಾವನೆ ಹಾಗೂ ಸಂವೇದನೆಗಳ ಮೇಲೆ ಹತೋಟಿಯನ್ನು ಹೊಂದಬೇಕು. ಆಗಲೇ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ರಾಮನ ನಾಮ ಜಪಿಸಿದರೆ ವ್ಯಕ್ತಿ ತನ್ನಲ್ಲಿರುವ ಕೆಟ್ಟ ಹಾಗೂ ವಿನಾಶಕಾರಿ ಶಕ್ತಿಯಿಂದ ಮುಕ್ತನಾಗಿ, ತನ್ನಲ್ಲಿ ರಚನಾತ್ಮಕ ಶಕ್ತಿಯ ಹರಿವನ್ನು ಪಡೆದುಕೊಳ್ಳುವನು.
ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುವುದು
ನಿತ್ಯವೂ ರಾಮ ನಾಮ ಜಪ ಮಾಡಿದರೆ ವ್ಯಕ್ತಿ ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವನು. ಅಲ್ಲದೆ ಆತಂಕ, ಖಿನ್ನತೆಯಂತಹ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ರಾಮನ ನಾಮವು ದೇಹದಲ್ಲಿ ಗಮನಾರ್ಹ ಕಂಪನ ಉಂಟಾಗುವುದು. ಇದು ನಿದ್ರೆಯ ನರ ಕೋಶಗಳನ್ನು ಪ್ರಚೋದಿಸುವುದು. ಉಪ ಪ್ರಜ್ಞೆಯ ಮನಸ್ಸಿನ ಭಾಗವನ್ನು ಆಹ್ವಾನಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುವುದು. ಜೊತೆಗೆ ಹೆಚ್ಚು ಸೃಜನಶೀಲರಾಗಿ ಹಾಗೂ ಕಾರ್ಯ ಪ್ರವೃತ್ತರಾಗಿ ಇರಲು ಸಹಾಯ ಮಾಡುವುದು.
ಕೋಪವನ್ನು ಕಡಿಮೆ ಮಾಡುವುದು
ವ್ಯಕ್ತಿ ಕೆಟ್ಟ ನಡವಳಿಕೆ ಹಾಗೂ ಕೋಪದಲ್ಲಿ ಮುಳುಗಿದ್ದರೆ ಅವನನ್ನು ಸನ್ಮಾರ್ಗದಲ್ಲಿ ತರುವ ಶಕ್ತಿಯು ರಾಮ ನಾಮಕ್ಕೆ ಇದೆ. ರಾಮ ನಾಮವನ್ನು ಜಪಿಸಿದರೆ ಪಶ್ಚಾತ್ತಾಪದ ಭಾವನೆಗಳಿಂದ ಹೊರ ಬರಲು ಸಾಧ್ಯವಾಗುವುದು. ಜೊತೆಗೆ ಮಾನಸಿಕ ನೆಮ್ಮದಿ ಪಡೆದುಕೊಂಡು, ಜೀವನವನ್ನು ಸಂತೋಷದಲ್ಲಿ ಕಳೆಯುವರು.
ಆಯುರ್ವೇದ ಔಷಧಿಯ ರೂಪದಲ್ಲಿ ಕೆಲಸ ಮಾಡುವುದು
ರಾಮ ನಾಮ ಜಪಿಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆ ಉಂಟಾಗುವುದು. ಅದು ಆಯುರ್ವೇದ ಔಷಧಿಯ ರೂಪದಲ್ಲಿಯೂ ಕೆಲಸ ನಿರ್ವಹಿಸುವುದು. ದೇಹದಲ್ಲಿ ರಕ್ತ ಪರಿಚಲನೆ ಹಾಗೂ ಶುದ್ಧೀಕರಣದಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ರಾಮ ನಾಮ ಜಪದಿಂದ ಉಂಟಾಗುವ ಆಂತರಿಕ ಕಂಪನಗಳು ರಕ್ತ ಶುದ್ಧಿ ಹಾಗೂ ಉತ್ತಮ ಆರೋಗ್ಯವನ್ನು ಪ್ರಚೋದಿಸುವುದು.
ಹನುಮಂತನು ಅಪಾರ ಶಕ್ತಿಯನ್ನು ಪಡೆದನು
ಹನುಮಂತನು ಶ್ರೀರಾಮನ ಪರಮ ಭಕ್ತ. ಪುರಾಣ ಇತಿಹಾಸದಲ್ಲಿ ಹನುಮಂತನಿಗೆ ಸಂಬಂಧಿಸಿದಂತೆ ಅನೇಕ ಸಾಹಸ ಕಥೆಗಳು ಇರುವುದನ್ನು ನಾವು ಕಾಣಬಹುದು. ಹನುಮಂತನು ರಾಮ ನಾಮ ಜಪ ಮಾಡುವುದರಿಂದ ಅನೇಕ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದನು. ದ್ರೋಣಗಿರಿ ಪರ್ವತವನ್ನು ಹಿಮಾಲಯದಿಂದ ಲಂಕೆಗೆ ಸ್ಥಳಾಂತರಿಸಲು ಸಹಾಯ ಮಾಡಿದ ಶಕ್ತಿ ರಾಮ ನಾಮದಿಂದ ಪಡೆದುಕೊಂಡಿದ್ದನ್ನು ಎಂದು ಹೇಳಲಾಗುವುದು. ಆತ್ಮ ಮತ್ತು ಕರ್ಮಗಳ ಶುದ್ಧಿಗೆ ರಾಮ ನಾಮ ಜಪವನ್ನು ಮಾಡುವುದು ಸುಲಭ ಮಾರ್ಗ ಎನ್ನಲಾಗುವುದು.