ಆ್ಯಪ್ನಗರ

ಪ್ರತಿದಿನ ನಿಮಗೆ ಈ ಅನುಭವವಾದರೆ ಆದಷ್ಟು ಬೇಗ ನೀವು ಶ್ರೀಮಂತರಾಗುವಿರಿ..!

ನಮಗೆ ಶ್ರೀಮಂತಿಕೆ ಬರುವ ಮುನ್ನ, ಧನಾಗಮನದ ಮುನ್ನ ಅಥವಾ ಅದೃಷ್ಟವು ಸಾಥ್‌ ನೀಡುವ ಮುನ್ನ ಈ ಎಲ್ಲಾ ಸೂಚನೆಗಳು ಗೋಚರಿಸುತ್ತವೆಯಂತೆ. ಆ ಸೂಚನೆಗಳಾವುವು..? ಶ್ರೀಮಂತರಾಗುವ ಮುನ್ನ ಯಾವೆಲ್ಲಾ ಲಕ್ಷಣಗಳು ಕಂಡು ಬರುತ್ತವೆ..? ಈ ಅನುಭವವು ನಿಮಗೆ ಧನಾಗಮನ ಮತ್ತು ಅದೃಷ್ಟದ ಸೂಚನೆಯಾಗಿದೆ.

Vijaya Karnataka Web 31 May 2022, 11:41 am
ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಹಣವನ್ನು ಸಂಪಾದಿಸುವ ಆಸೆಯನ್ನು ಹೊಂದಿರುತ್ತಾನೆ. ಪ್ರತಿಯೊಬ್ಬರೂ ಶ್ರೀಮಂತರಾಗಲು ಮತ್ತು ಪ್ರಪಂಚದ ಎಲ್ಲಾ ಸೌಕರ್ಯಗಳನ್ನು ಹೊಂದಲು ಬಯಸುತ್ತಾರೆ. ಜನರು ಅವರನ್ನು ಗುರುತಿಸಬೇಕು ಮತ್ತು ಜಗತ್ತಿನಲ್ಲಿ ಅವರ ಹೆಸರು ಅಚ್ಚಳಿಯದಂತೆ ಉಳಿಯಬೇಕೆಂದು ಹಂಬಲಿಸುತ್ತಾರೆ. ಆದರೆ ಎಲ್ಲರ ಅದೃಷ್ಟವೂ ಸಮಯ ಬಂದಾಗ ಮಾತ್ರ ಎಚ್ಚರಗೊಳ್ಳುತ್ತದೆ. ಆದರೆ ಅದೃಷ್ಟ ಎಚ್ಚೆತ್ತುಕೊಳ್ಳುವಾಗ ಯಾವೆಲ್ಲಾ ಸೂಚನೆಗಳು ಎದುರಾಗುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ..? ನೀವು ಒಳ್ಳೆಯ ದಿನಗಳನ್ನು ಹೊಂದುತ್ತಿರುವಾಗ ಅಥವಾ ನೀವು ಶ್ರೀಮಂತರಾಗುತ್ತೀರಿ ಎನ್ನುವಾಗ, ನಿಮ್ಮ ಸುತ್ತಲಿನ ವಾತಾವರಣದಲ್ಲಿ ಕೆಲವು ಉತ್ತಮ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಕೆಲವು ಒಳ್ಳೆಯ ಘಟನೆಗಳು ಎದುರಾಗುತ್ತದೆ. ಶ್ರೀಮಂತರಾಗುವ ಲಕ್ಷಣಗಳಾವುವು ಗೊತ್ತೇ..?
Vijaya Karnataka Web these signs indicate that you will become rich soon and luck will support you
ಪ್ರತಿದಿನ ನಿಮಗೆ ಈ ಅನುಭವವಾದರೆ ಆದಷ್ಟು ಬೇಗ ನೀವು ಶ್ರೀಮಂತರಾಗುವಿರಿ..!



​ಕಪ್ಪು ಇರುವೆಗಳ ಸಾಲು

ನಿಮ್ಮ ಮನೆಯಲ್ಲಿ ಅಕಸ್ಮಾತ್ ಕಪ್ಪು ಇರುವೆಗಳು ಸಾಲಾಗಿ ಓಡಾಡುತ್ತಿರುವುದು ಕಂಡುಬಂದರೆ ಮತ್ತು ಅವು ಆಹಾರ ಪದಾರ್ಥಗಳನ್ನು ಬಾಯಲ್ಲಿ ಹಿಡಿದು ಓಡಾಡುತ್ತಿರುವುದನ್ನು ನೋಡಿದರೆ, ಅದು ತುಂಬಾ ಶುಭ ಸಂಕೇತವಾಗಿದೆ. ಈಗ ಲಕ್ಷ್ಮಿ ದೇವಿಯ ಅನುಗ್ರಹವು ನಿಮ್ಮ ಮೇಲೆ ಬೀರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ದೇವಾಲಯಗಳುಪ್ರಪಂಚದ ಅತ್ಯದ್ಭುತ ಆರಾಧನಾ ಮನೆಯಾದ ಅಕ್ಷರಧಾಮದ ಬಗ್ಗೆ ನಿಮಗೇನಾದರೂ ಗೊತ್ತೇ..?

​ಈ ದಿಕ್ಕಿನಲ್ಲಿ ಪಕ್ಷಿಗಳ ಗೂಡು

ಪಕ್ಷಿ ಅಥವಾ ಪಾರಿವಾಳದಂತಹ ಚಿಕ್ಕ ಮತ್ತು ಮುದ್ದಾದ ಪಕ್ಷಿಗಳು ನಿಮ್ಮ ಮನೆಯ ಯಾವುದೇ ಸ್ಥಳದಲ್ಲಿ ಗೂಡು ಕಟ್ಟಿದರೆ ಅದು ತುಂಬಾ ಶುಭ ಸಂಕೇತವಾಗಿದೆ. ಈ ಗೂಡನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕಟ್ಟಿದರೆ ಅದು ಹೆಚ್ಚು ಮಂಗಳಕರವಾಗಿರುತ್ತದೆ.

ಹಬ್ಬಗಳುಮಾಸಿಕ ಹಬ್ಬಗಳು: ಜೂನ್‌ ತಿಂಗಳಲ್ಲಿ ನೀವು ಆಚರಿಸಲೇಬೇಕಾದ ಪ್ರಮುಖ ಹಬ್ಬಗಳು, ವ್ರತಗಳು ಹೀಗಿವೆ..!

​ಮುಂಜಾನೆ ಹಸುವಿನ ಕೂಗು

ಬೆಳಿಗ್ಗೆ ಹಸು ಮನೆ ಬಾಗಿಲಿಗೆ ಬಂದು ಕೂಗುತ್ತಿದ್ದರೆ ಅದನ್ನು ದೇವರ ಆಶೀರ್ವಾದ ಎಂದು ಭಾವಿಸಿ ಹಸುವಿಗೆ ರೊಟ್ಟಿ ಅಥವಾ ಪಾಲಕ್ ನ್ನು ತಿನ್ನಲು ನೀಡಬೇಕು. ಇದರರ್ಥ ಲಕ್ಷ್ಮಿ ದೇವಿಯೇ ಬಂದು ನಿಮ್ಮ ಮನೆ ಬಾಗಿಲು ತಟ್ಟಿದ್ದಾಳೆ ಎಂದರ್ಥ.

ಹಿಂದೂ ಧರ್ಮಮುಂಜಾನೆ ಎದ್ದಾಕ್ಷಣ ಈ ಕೆಲಸ ಮಾಡಿದರೆ ಯಶಸ್ಸು ಖಂಡಿತ ಎನ್ನುತ್ತಾನೆ ಚಾಣಕ್ಯ..!

​ಹಸಿರಾದ ತುಳಸಿ ಗಿಡ

ತುಳಸಿ ಗಿಡವು ನಿಮ್ಮ ಮನೆಯಲ್ಲಿ ತುಂಬಾ ದಟ್ಟವಾಗಿ ಮತ್ತು ಹಸಿರಾಗಿದ್ದರೆ, ಆ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯೂ ಬರುತ್ತದೆ ಎಂದು ನಂಬಬೇಕು.

ಪೂಜಾ ವಿಧಿಗಳುಇಂದು ಶನಿ ಜಯಂತಿ: ಈ 20 ಪರಿಹಾರ ಕ್ರಮಗಳನ್ನು ತೆಗೆದುಕೊಂಡರೆ ಜೀವನದಲ್ಲಿ

​ಇವುಗಳ ಕನಸು

ಒಂದು ದಿನ ನೀವು ನಿಮ್ಮ ಕನಸಿನಲ್ಲಿ ಪೊರಕೆ, ಗೂಬೆ, ಆನೆ, ನವಿಲು, ಶಂಖ, ಬಾಳೆಹಣ್ಣು ಅಥವಾ ಹಲ್ಲಿಯನ್ನು ಕಂಡರೆ, ಶ್ರೀಮಂತರಾಗುವ ನಿಮ್ಮ ಕನಸು ಶೀಘ್ರದಲ್ಲೇ ಈಡೇರಲಿದೆ ಎಂದು ಭಾವಿಸಿ.

ಮೂಢನಂಬಿಕೆಮನೆಯಲ್ಲಿ ಈ ಘಟನೆಗಳು ನಡೆದರೆ ಅಶುಭ ಎನ್ನುತ್ತೆ ಶಕುನ ಶಾಸ್ತ್ರ..! ನಿಮ್ಮ ಮನೆಯಲ್ಲೂ ನಡೆದಿದೆಯೇ..?

​ಮುಂಜಾನೆ ಇವುಗಳನ್ನು ನೋಡುವುದು

ಬೆಳಗ್ಗೆ ಮನೆಯಿಂದ ಕಛೇರಿಗೆ ಹೋಗುವಾಗ, ಪ್ರತಿದಿನ 5 ದಿನ ಯಾರಾದರೂ ಗುಡಿಸುವುದನ್ನು ನೀವು ನೋಡಿದರೆ, ಈಗ ನಿಮ್ಮ ಎಲ್ಲಾ ತೊಂದರೆಗಳು ದೂರವಾಗಲಿವೆ, ತಾಯಿ ಲಕ್ಷ್ಮಿಯ ಆಶೀರ್ವಾದವು ನಿಮ್ಮ ಮೇಲೆ ಇರಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ದೇವಾಲಯಗಳುಈ ಶನಿ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡಿದರೆ ಶನಿ ದೋಷವೇ ಮಾಯ..!

​ಮುಂಜಾನೆ ಹಣದ ದರ್ಶನ

ಬೆಳಗ್ಗೆ ಮನೆಯ ಹೊರಗೆ ಹಣ ಬಿದ್ದಿರುವುದು ಕಂಡು ಬಂದರೆ ಅದು ಹಣದ ಆಗಮನದ ಸಂಕೇತವೂ ಹೌದು. ಶೀಘ್ರದಲ್ಲೇ ಹಣವು ನಿಮ್ಮನ್ನು ಹುಡುಕಿಕೊಂಡು ಬರುವುದು.

ಹಬ್ಬಗಳು2022 ಶನಿ ಜಯಂತಿ: ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಂತ್ರಕ್ಕಾಗಿ ಈ ಲೇಖನ ಓದಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ