ಹಿಂದೂ ಪುರಾಣದ ಪ್ರಕಾರ, ವಿಷ್ಣುವನ್ನು 'ವಿಶ್ವದ ರಕ್ಷಕ' ಎಂದು ಕರೆಯಲಾಗಿದೆ. ಸಾಮಾನ್ಯವಾಗಿ ಸರ್ಪಗಳ ರಾಜ ಎಂದೆನಿಸಿಕೊಂಡ ಕಾಳಸ್ವರೂಪ ಶೇಷನಾಗ ಮತ್ತು ಲಕ್ಷ್ಮಿ ದೇವಿಯ ಜೊತೆ ಯೋಗ ನಿದ್ರೆಯ ಭಂಗಿಯಲ್ಲಿ ವಿಷ್ಣುವು ಪವಡಿಸಿರುತ್ತಾನೆ. ಹೀಗಾಗಿ ವಿಷ್ಣುವನ್ನು 'ಅನಂತಶಯನ'ನೆಂದೂ ಕರೆಯುತ್ತಾರೆ.
ಧರ್ಮಗ್ರಂಥಗಳಲ್ಲಿ ಅವರ ಭಂಗಿಯನ್ನು 'ಶಾಂತಾಕಾರಂ ಭುಜಗಶಯನಂ' ಎಂದು ವರ್ಣಿಸಲಾಗಿದೆ.ಇಲ್ಲಿ 'ಶಾಂತಾಕಾರಂ' ಎಂದರೆ ಶಾಂತಿಯುತ ರೂಪ. ಸಾವಿರ ತಲೆಗಳನ್ನುಳ್ಳ ವಿಷಪೂರಿತ ಹಾವಿನ ಮೇಲೆ ವಿಶ್ರಾಂತಿ ಪಡೆಯುವುದು ವಿಷ್ಣುಗೆ ಮಾತ್ರ ಸಾಧ್ಯ ಎಂದು ಹೇಳುವುದು ಇಲ್ಲಿನ ಉದ್ದೇಶವಾಗಿದೆ. ಶೇಷನಾಗನನ್ನು "ಆನಂದ", ಅಂದರೆ ಅಂತ್ಯವಿಲ್ಲದವನು ಎಂದೂ ಕರೆಯುತ್ತಾರೆ. ಪ್ರಳಯ ಸಂಭವಿಸಿದಾಗಲೂ ಯಾವುದೇ ಅಂತ್ಯವಿಲ್ಲದೆ ಶೇಷ, ಕಲ್ಪದ ಕೊನೆಯಲ್ಲಿ ಜಗತ್ತು ನಾಶವಾದರೂ, ಅಮರನಾಗಿದ್ದಾನೆ.
ಆದಿಶೇಷನ ಅವತಾರ ಬಲರಾಮನ ಕುರಿತಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ..!
ಶಕ್ತಿಯ ಸಂಕೇತ ಆದಿಶೇಷ
ಶೇಷನಾಗನು, ಎಲ್ಲಾ ಗ್ರಹಗಳು ಮತ್ತು ಬ್ರಹ್ಮಾಂಡವನ್ನು ಹಿಡಿದಿಟ್ಟುಕೊಂಡಿದ್ದಾನೆ ಎಂದು ಹೇಳಲಾಗಿದೆ. ಶೇಷನಾಗನನ್ನು ಬ್ರಹ್ಮಾಂಡದ ತಳಹದಿ ಎಂದು ಹೇಳಲಾಗುತ್ತದೆ. ಇಂತಹ ನಾಗನೇ ವಿಷ್ಣುವಿನ ಸೇವಕನಾಗಿರುವಾಗ, ವಿಷ್ಣುವೇ ಬ್ರಹ್ಮಾಂಡದ ಮೂಲ. ವಿಜ್ಞಾನದಿಂದಲೇ ವ್ಯಾಖ್ಯಾನಿಸಲಾಗಿರುವ ಪ್ರಕಾರ ಈ ಜಗತ್ತಿನಲ್ಲಿ ಗುರುತ್ವಾಕರ್ಷಣೆಯ ಶಕ್ತಿಯು ಗ್ರಹಗಳನ್ನು ನಿಖರವಾದ ಸ್ಥಾನದಲ್ಲಿ ಹಿಡಿದಿಡಲು ಸಹಾಯ ಮಾಡುತ್ತದೆ. ಸಂಕರ್ಷನ ಎಂಬ ಇನ್ನೊಂದು ಹೆಸರಿರುವ ಶೇಷನಾಗ ಎಂದರೆ, ಆಕರ್ಷಕ ಶಕ್ತಿ. ಸಂಕರ್ಶನ, ಎಲ್ಲವನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಸಂಸ್ಕೃತದಲ್ಲಿ 'ಶೇಷ' ಎಂದರೆ ಶಾಶ್ವತ ಮತ್ತು 'ನಾಗ' ಎಂದರೆ ಹಾವು. ಈ ಸರೀಸೃಪವು ಹಿಂದೂ ಧರ್ಮದಲ್ಲಿ ಶಕ್ತಿಯನ್ನು ಸಂಕೇತಿಸುತ್ತದೆ.
ಭಗವಾನ್ ವಿಷ್ಣುವಿನ ಕುರಿತಾದ ಅಚ್ಚರಿಯ ಈ ಸಂಗತಿಗಳು ನಿಮಗೆ ತಿಳಿದಿದೆಯೇ?
ವಿಷ್ಣು ಐದು ತಲೆಯ ಹಾವಿನ ಮೇಲೆ ಏಕೆ ಮಲಗುತ್ತಾನೆ ?
1. ಶೇಷ ನಾಗ ಎಲ್ಲಾ ನಾಗರ ಹಾವುಗಳ ರಾಜ ಮತ್ತು ಬ್ರಹ್ಮಾಂಡ ಸೃಷ್ಟಿಯ ಸಮಯದಲ್ಲಿ ಇರುವ ಪ್ರಾಥಮಿಕ ಜೀವಿಗಳಲ್ಲಿ ಒಬ್ಬನಾಗಿದ್ದನು.
2. ಅವನು ವಿಷ್ಣುವಿನ ಅಭಿವ್ಯಕ್ತಿಯಾಗಿದ್ದು, ವಿಷ್ಣುವಿಗೆ ವಿಶ್ರಾಂತಿ ಪಡೆಯಲು ಸುರುಳಿಯಾಕಾರದ ಆಸನವನ್ನು ರೂಪಿಸಿದ್ದಾನೆ.
3. ಪುರಾಣಗಳ ಪ್ರಕಾರ ಶೇಷ, ಬ್ರಹ್ಮಾಂಡದ ಎಲ್ಲಾ ಗ್ರಹಗಳನ್ನು ತನ್ನ ಅಡಿಯಲ್ಲಿ ಇಟ್ಟುಕೊಂಡು, ವಿಷ್ಣುವಿನ ಸ್ತುತಿಯನ್ನು ಹಾಡುತ್ತಾನೆ.
4. ಭೀಕರ ಚಂಡಮಾರುತದ ಸಮಯದಲ್ಲಿ ಯಮುನಾ ನದಿಯ ಮೂಲಕ ವಸುದೇವನು ಬಾಲ ಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ಯುತ್ತಿದ್ದಾಗ ಇದೇ ಆದಿಶೇಷನೇ ಮಳೆಯ ನೀರು ಬೀಳದಂತೆ ವಸುದೇವನ ನೆರಳಾಗಿ ಹಿಂಬಾಲಿಸಿತ್ತು.
5. ಇವನನ್ನು ಅನಂತ-ಶೇಷ ಅಥವಾ ಆದಿಶೇಷ ಎಂದೂ ಕರೆಯುತ್ತಾರೆ. ಇವನು ಬ್ರಹ್ಮಾಂಡ ವಿನಾಶದ ನಂತರವೂ ಅಸ್ತಿತ್ವದಲ್ಲಿರುತ್ತಾನೆ ಎಂದು ನಂಬಲಾಗಿದೆ.
6. ಶೇಷನನ್ನು ದ್ವಾಪರಯುಗದ ಕೃಷ್ಣನ ಸಹೋದರನಾದ ಬಲರಾಮ ಮತ್ತು ತ್ರೇತಾಯುಗದ ಶ್ರೀರಾಮನ ಸಹೋದರ ಲಕ್ಷ್ಮಣ ಎಂದು ನಂಬಲಾಗಿದೆ.
7. ಶೇಷನಾಗನ ದಂತಕಥೆಗಳ ಕಾರಣದಿಂದಾಗಿ, ಹಾವುಗಳನ್ನು ಇತ್ತೀಚಿನ ದಿನಗಳಲ್ಲಿ ಪೂಜಿಸುತ್ತಾರೆ. ಶಿವನ ಕೊರಳಿನಲ್ಲೂ ಹಾವಿಗೆ ಸ್ಥಾನವಿದೆ.
8. ಶೇಷನಾಗನ ಸಹೋದರ ವಾಸುಕಿಯನ್ನು ಸಮುದ್ರ ಮಂಥನದ ಸಮಯದಲ್ಲಿ ಕ್ಷೀರಸಾಗರವನ್ನು ಮಥಿಸುವ ಹಗ್ಗವಾಗಿ ಬಳಸಲಾಗಿತ್ತು. ಇದು ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಘಟನೆ ಎಂದೆನಿಸಿಕೊಂಡಿದೆ.
ಮಹಾಭಾರತ ಯುದ್ಧವನ್ನು ಒಂದು ನಿಮಿಷದಲ್ಲಿ ಕೊನೆಗೊಳಿಸಬಲ್ಲ ಸಾಮರ್ಥ್ಯವಿದ್ದ ಯೋಧ ಇವನು..!
ಧರ್ಮಗ್ರಂಥಗಳಲ್ಲಿ ಅವರ ಭಂಗಿಯನ್ನು 'ಶಾಂತಾಕಾರಂ ಭುಜಗಶಯನಂ' ಎಂದು ವರ್ಣಿಸಲಾಗಿದೆ.ಇಲ್ಲಿ 'ಶಾಂತಾಕಾರಂ' ಎಂದರೆ ಶಾಂತಿಯುತ ರೂಪ. ಸಾವಿರ ತಲೆಗಳನ್ನುಳ್ಳ ವಿಷಪೂರಿತ ಹಾವಿನ ಮೇಲೆ ವಿಶ್ರಾಂತಿ ಪಡೆಯುವುದು ವಿಷ್ಣುಗೆ ಮಾತ್ರ ಸಾಧ್ಯ ಎಂದು ಹೇಳುವುದು ಇಲ್ಲಿನ ಉದ್ದೇಶವಾಗಿದೆ. ಶೇಷನಾಗನನ್ನು "ಆನಂದ", ಅಂದರೆ ಅಂತ್ಯವಿಲ್ಲದವನು ಎಂದೂ ಕರೆಯುತ್ತಾರೆ. ಪ್ರಳಯ ಸಂಭವಿಸಿದಾಗಲೂ ಯಾವುದೇ ಅಂತ್ಯವಿಲ್ಲದೆ ಶೇಷ, ಕಲ್ಪದ ಕೊನೆಯಲ್ಲಿ ಜಗತ್ತು ನಾಶವಾದರೂ, ಅಮರನಾಗಿದ್ದಾನೆ.
ಆದಿಶೇಷನ ಅವತಾರ ಬಲರಾಮನ ಕುರಿತಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ..!
ಶಕ್ತಿಯ ಸಂಕೇತ ಆದಿಶೇಷ
ಶೇಷನಾಗನು, ಎಲ್ಲಾ ಗ್ರಹಗಳು ಮತ್ತು ಬ್ರಹ್ಮಾಂಡವನ್ನು ಹಿಡಿದಿಟ್ಟುಕೊಂಡಿದ್ದಾನೆ ಎಂದು ಹೇಳಲಾಗಿದೆ. ಶೇಷನಾಗನನ್ನು ಬ್ರಹ್ಮಾಂಡದ ತಳಹದಿ ಎಂದು ಹೇಳಲಾಗುತ್ತದೆ. ಇಂತಹ ನಾಗನೇ ವಿಷ್ಣುವಿನ ಸೇವಕನಾಗಿರುವಾಗ, ವಿಷ್ಣುವೇ ಬ್ರಹ್ಮಾಂಡದ ಮೂಲ. ವಿಜ್ಞಾನದಿಂದಲೇ ವ್ಯಾಖ್ಯಾನಿಸಲಾಗಿರುವ ಪ್ರಕಾರ ಈ ಜಗತ್ತಿನಲ್ಲಿ ಗುರುತ್ವಾಕರ್ಷಣೆಯ ಶಕ್ತಿಯು ಗ್ರಹಗಳನ್ನು ನಿಖರವಾದ ಸ್ಥಾನದಲ್ಲಿ ಹಿಡಿದಿಡಲು ಸಹಾಯ ಮಾಡುತ್ತದೆ. ಸಂಕರ್ಷನ ಎಂಬ ಇನ್ನೊಂದು ಹೆಸರಿರುವ ಶೇಷನಾಗ ಎಂದರೆ, ಆಕರ್ಷಕ ಶಕ್ತಿ. ಸಂಕರ್ಶನ, ಎಲ್ಲವನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಸಂಸ್ಕೃತದಲ್ಲಿ 'ಶೇಷ' ಎಂದರೆ ಶಾಶ್ವತ ಮತ್ತು 'ನಾಗ' ಎಂದರೆ ಹಾವು. ಈ ಸರೀಸೃಪವು ಹಿಂದೂ ಧರ್ಮದಲ್ಲಿ ಶಕ್ತಿಯನ್ನು ಸಂಕೇತಿಸುತ್ತದೆ.
ಭಗವಾನ್ ವಿಷ್ಣುವಿನ ಕುರಿತಾದ ಅಚ್ಚರಿಯ ಈ ಸಂಗತಿಗಳು ನಿಮಗೆ ತಿಳಿದಿದೆಯೇ?
ವಿಷ್ಣು ಐದು ತಲೆಯ ಹಾವಿನ ಮೇಲೆ ಏಕೆ ಮಲಗುತ್ತಾನೆ ?
1. ಶೇಷ ನಾಗ ಎಲ್ಲಾ ನಾಗರ ಹಾವುಗಳ ರಾಜ ಮತ್ತು ಬ್ರಹ್ಮಾಂಡ ಸೃಷ್ಟಿಯ ಸಮಯದಲ್ಲಿ ಇರುವ ಪ್ರಾಥಮಿಕ ಜೀವಿಗಳಲ್ಲಿ ಒಬ್ಬನಾಗಿದ್ದನು.
2. ಅವನು ವಿಷ್ಣುವಿನ ಅಭಿವ್ಯಕ್ತಿಯಾಗಿದ್ದು, ವಿಷ್ಣುವಿಗೆ ವಿಶ್ರಾಂತಿ ಪಡೆಯಲು ಸುರುಳಿಯಾಕಾರದ ಆಸನವನ್ನು ರೂಪಿಸಿದ್ದಾನೆ.
3. ಪುರಾಣಗಳ ಪ್ರಕಾರ ಶೇಷ, ಬ್ರಹ್ಮಾಂಡದ ಎಲ್ಲಾ ಗ್ರಹಗಳನ್ನು ತನ್ನ ಅಡಿಯಲ್ಲಿ ಇಟ್ಟುಕೊಂಡು, ವಿಷ್ಣುವಿನ ಸ್ತುತಿಯನ್ನು ಹಾಡುತ್ತಾನೆ.
4. ಭೀಕರ ಚಂಡಮಾರುತದ ಸಮಯದಲ್ಲಿ ಯಮುನಾ ನದಿಯ ಮೂಲಕ ವಸುದೇವನು ಬಾಲ ಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ಯುತ್ತಿದ್ದಾಗ ಇದೇ ಆದಿಶೇಷನೇ ಮಳೆಯ ನೀರು ಬೀಳದಂತೆ ವಸುದೇವನ ನೆರಳಾಗಿ ಹಿಂಬಾಲಿಸಿತ್ತು.
5. ಇವನನ್ನು ಅನಂತ-ಶೇಷ ಅಥವಾ ಆದಿಶೇಷ ಎಂದೂ ಕರೆಯುತ್ತಾರೆ. ಇವನು ಬ್ರಹ್ಮಾಂಡ ವಿನಾಶದ ನಂತರವೂ ಅಸ್ತಿತ್ವದಲ್ಲಿರುತ್ತಾನೆ ಎಂದು ನಂಬಲಾಗಿದೆ.
6. ಶೇಷನನ್ನು ದ್ವಾಪರಯುಗದ ಕೃಷ್ಣನ ಸಹೋದರನಾದ ಬಲರಾಮ ಮತ್ತು ತ್ರೇತಾಯುಗದ ಶ್ರೀರಾಮನ ಸಹೋದರ ಲಕ್ಷ್ಮಣ ಎಂದು ನಂಬಲಾಗಿದೆ.
7. ಶೇಷನಾಗನ ದಂತಕಥೆಗಳ ಕಾರಣದಿಂದಾಗಿ, ಹಾವುಗಳನ್ನು ಇತ್ತೀಚಿನ ದಿನಗಳಲ್ಲಿ ಪೂಜಿಸುತ್ತಾರೆ. ಶಿವನ ಕೊರಳಿನಲ್ಲೂ ಹಾವಿಗೆ ಸ್ಥಾನವಿದೆ.
8. ಶೇಷನಾಗನ ಸಹೋದರ ವಾಸುಕಿಯನ್ನು ಸಮುದ್ರ ಮಂಥನದ ಸಮಯದಲ್ಲಿ ಕ್ಷೀರಸಾಗರವನ್ನು ಮಥಿಸುವ ಹಗ್ಗವಾಗಿ ಬಳಸಲಾಗಿತ್ತು. ಇದು ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಘಟನೆ ಎಂದೆನಿಸಿಕೊಂಡಿದೆ.
ಮಹಾಭಾರತ ಯುದ್ಧವನ್ನು ಒಂದು ನಿಮಿಷದಲ್ಲಿ ಕೊನೆಗೊಳಿಸಬಲ್ಲ ಸಾಮರ್ಥ್ಯವಿದ್ದ ಯೋಧ ಇವನು..!