ಕುಬೇರನ ಆಶೀರ್ವಾದ ಸಿಗುವುದು
ಮನೆಯಂಗಳದಲ್ಲಿದ್ದು ದುಷ್ಟಶಕ್ತಿಗಳನ್ನು ನಿಯಂತ್ರಿಸುವ ಶಕ್ತಿ ಮಾತ್ರವಲ್ಲ, ಮನೆಯೊಲಗಿನ ಸದಸ್ಯರ ಸಮಸ್ಯೆಗಳನ್ನು ಕೂಡ ನಿವಾರಿಸುವ ಶಕ್ತಿ ಈ ತುಳಸಿ ಗಿಡಕ್ಕಿದೆ. ಯಾವುದೇ ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ಹೊಂದಿದ್ದರೆ, ಅವನು ತನ್ನ ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ಸಸ್ಯವನ್ನು ನೆಡಬೇಕು. ಏಕೆಂದರೆ ಈಶಾನ್ಯದ ಈ ದಿಕ್ಕನ್ನು ಭಗವಾನ್ ಕುಬೇರನ ನಿರ್ದೇಶನವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದರಿಂದ ಕುಬೇರನು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ದೂರಾಗಿಸುವನು.
ವ್ಯಾಲಂಟೈನ್ಸ್ ದಿನ ಹೀಗೆ ಮಾಡಿದರೆ ಪ್ರೀತಿಸಿದವರನ್ನೇ ವಿವಾಹವಾಗುವಿರಿ..! ಹೀಗೆ ಮಾಡಿ
ಮನೆಯಲ್ಲಿ ಶಾಂತಿ ಇರುವುದು
ಯಾವ ಒಬ್ಬ ವ್ಯಕ್ತಿಯ ಮನೆಯಲ್ಲಿ ಎಲ್ಲಾ ಸಮಯದಲ್ಲೂ ಜಗಳ ಮತ್ತು ಉದ್ವಿಗ್ನತೆ ಇರುತ್ತದೆಯೋ, ಅವನು ಮನೆಯ ಆಗ್ನೇಯ ದಿಕ್ಕಿನಲ್ಲಿ ತುಳಸಿ ಸಸ್ಯವನ್ನು ನೆಡಬೇಕು. ಇದನ್ನು ಮಾಡುವುದರಿಂದ, ತುಳಸಿ ಸಸ್ಯವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಜಗಳ ಮತ್ತು ಉದ್ವಿಗ್ನತೆ ಕಡಿಮೆಯಾಗಿ, ಮನೆಯಲ್ಲಿ ಶಾಂತಿ ನೆಲೆಯಾಗಲು ಆರಂಭವಾಗುವುದು.
ನಿತ್ಯ ಪಠಿಸಿ ಶ್ರೀ ವೇಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ..! ಪ್ರಯೋಜನ ಅರಿಯುವಿರಿ
ತುಳಸಿಯನ್ನು ಈ ದಿಕ್ಕಿನಲ್ಲಿ ನೆಡಿ
ಮನೆಯಲ್ಲಿ ತುಳಸಿ ಸಸ್ಯವನ್ನು ನೆಡುವಾಗ ಯಾವಾಗಲೂ ಅಂಗಳ ಅಥವಾ ಮನೆಯ ಮಧ್ಯ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಮನೆಯ ಈ ಸ್ಥಳಗಳಲ್ಲಿ ತುಳಸಿ ನೆಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಮನೆಯ ಸದಸ್ಯರಲ್ಲಿ ಗುಣಾತ್ಮಕ ಬದಲಾವಣೆಯಾಗುವುದನ್ನು ನೀವು ನೋಡಬಹುದು. ಇದರಿಂದ ಕುಟುಂಬ ಸದಸ್ಯರ ನಡುವೆ ಬಾಂದವ್ಯ ಹೆಚ್ಚಾಗುತ್ತದೆ.
ಈ ವಿಷಯಗಳಿಂದ ದೂರಿದ್ದರೆ ಯಶಸ್ಸು, ಗೌರವ ಎನ್ನುತ್ತಾನೆ ಚಾಣಕ್ಯ..! ಹುಷಾರಾಗಿರಿ
ಈ ದಿಕ್ಕಿನತ್ತ ತುಳಸಿಯನ್ನು ನೆಡದಿರಿ
ತುಳಸಿ ಗಿಡವನ್ನು ಎಂದಿಗೂ ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಇದು ಆ ಮನೆಯಲ್ಲಿ ಅಶುಭ ಸ್ಥಿತಿಯನ್ನು ಉಂಟು ಮಾಡುವುದು ಮಾತ್ರವಲ್ಲದೇ, ಹೊರಗಿನಿಮದಲೂ ಅಶುಭ ಫಲವನ್ನು ನೀಡುತ್ತದೆ. ತುಳಸಿಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡುವುದರಿಂದ ಆ ಮನೆಯ ಸದಸ್ಯರು ಆರ್ಥಿಕ ಸಂಕಷ್ಟವನ್ನು ಎದುರಿಸಬೆಕಾಗುತ್ತದೆ. ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತದೆ.
ದುರ್ಗೆಗೆ ಕೆಂಪು ಹೂ, ಈ ಮಂತ್ರ ಪಠಿಸಿದರೆ ಅನಾರೋಗ್ಯವೇ ದೂರ..! ಇಂದು ಇದನ್ನೇ ಮಾಡಿ
ಅನಾರೋಗ್ಯ ಭಾದಿಸುವುದು
ತುಳಸಿ ಗಿಡವನ್ನು ಎಂದಿಗೂ ಖಾಲಿ ಜಾಗದಲ್ಲಿ ಅಥವಾ ಜಮೀನಿನಲ್ಲಿ ನೆಡಬಾರದು ಮತ್ತು ಯಾವಾಗಲೂ ಹೂಕುಂಡದಲ್ಲಿ ನೆಡಬಾರದು. ಯಾಕೆಂದರೆ ತುಳಸಿ ಗಿಡವನ್ನು ಭೂಮಿಯಲ್ಲಿ ನೆಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವಾಗಲೂ ತುಳಸಿಯನ್ನು ತುಳಸಿ ಕಟ್ಟೆಯಲ್ಲಿ ನೆಡಬೇಕು. ಇಲ್ಲದಿದ್ದರೆ ಕುಟುಂಬ ಸದಸ್ಯರು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
21 ಬಾರಿ ಈ ಮಂತ್ರ ಪಠಿಸಿದರೆ ಯಶಸ್ಸು ನಿಮ್ಮದೇ..! ಇವುಗಳನ್ನು ತಪ್ಪದೇ ಮಾಡಿ
ತುಳಸಿಯನ್ನು ಯಾರು ನೆಡಬೇಕು..?
ಮಾಂಸವನ್ನು ಸೇವಿಸುವ ಜನರು ತುಳಸಿಯನ್ನು ನೆಡಬಾರದು ಎಂದು ನಂಬಲಾಗಿದೆ. ಯಾಕೆಂದರೆ ತುಳಸಿಯನ್ನು ಸಾತ್ವಿಕ ರೀತಿಯಲ್ಲಿ ಪೂಜಿಸಲಾಗುತ್ತದೆ. ಅದ್ದರಿಂದ ಮಾಂಸ, ಮದ್ಯವನ್ನು ಸೇವಿಸದವರು ತುಳಸಿ ಸಸ್ಯವನ್ನು ನೆಡಬೇಕು. ಒಂದು ವೇಳೆ ಇಂತವರು ಸಿಗದಿದ್ದಾಗ ನೀವೇ ಮಾಂಸ, ಮದ್ಯವನ್ನು ಸೇವಿಸದೇ ಸ್ನಾನ ಮಾಡಡಿ ಶುದ್ಧರಾಗಿ ತುಳಸಿ ಗಿಡವನ್ನು ನೆಡಬಹುದು.
ಶಿವನಿಗೆ ಈ 2 ರಾಶಿಯವರೆಂದರೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ಪರಶಿವನ ಕೃಪೆ..?
ಈ ದಿನಗಳಲ್ಲಿ ತುಳಸಿ ಕೀಳದಿರಿ
ಏಕಾದಶಿ, ಭಾನುವಾರ ಮತ್ತು ಮಂಗಳವಾರ ತುಳಸಿ ಗಿಡವನ್ನು ಮುರಿಯಬಾರದು ಅಥವಾ ಕೀಳಬಾರದು ಎಂದು ನಂಬಲಾಗಿದೆ. ಏಕಾದಶಿ ದಿನವು ವಿಷ್ಣುವಿನ ದಿನವಾಗಿದ್ದು, ಈ ದಿನ ವಿಷ್ಣು ಮತ್ತು ಲಕ್ಷ್ಮಿ ತುಳಸಿಯಲ್ಲಿ ನೆಲೆಸುತ್ತಾರೆ. ಈ ದಿನ ವಿಷ್ಣುವಿಗೆ ತುಳಸಿಯನ್ನು ಅರ್ಪಿಸಬೇಕೇ ಕೊರತು ಕೀಳಬಾರದು. ಒಂದು ವೇಳೆ ಏಕಾದಶಿ ಪೂಜೆಗೆ ತುಳಸಿ ಬೇಕೆಂದರೆ ಮೊದಲಿನ ದಿನವೇ ನೀವು ತುಳಸಿಯನ್ನು ಕಿತ್ತಿಟ್ಟುಕೊಂಡು ಏಕಾದಶಿ ದಿನ ಅದನ್ನು ಶುದ್ಧಗೊಳಿಸಿ ವಿಷ್ಣುವಿಗೆ ಅರ್ಪಿಸಬಹುದು.
ಮಹಾಭಾರತದ ಭಗ್ನ ಪ್ರೇಮಿಗಳಿವರು..! ಓಡಿಹೋಗಿ ಮದುವೆಯಾಗಿದ್ದೇಕೇ..?
ತುಳಸಿ ಗಿಡ ಒಣಗಿದಾಗ ಏನು ಮಾಡಬೇಕು..?
ಕೆಲವೊಮ್ಮೆ ತುಳಸಿ ಗಿಡಗಳು ಕಟ್ಟೆಯಲ್ಲೇ ಒಣಗಿ ಹೋಗುವುದುಂಟು. ಹೆಚ್ಚಾಗಿ ಚಳಿಗಾಲದಲ್ಲಿ ಈ ಘಟನೆ ಸಂಭವಿಸುತ್ತದೆ. ಯಾವುದೇ ಕಾರಣದಿಂದಾಗಿ ತುಳಸಿ ಗಿಡ ಒಣಗಿದರೆ ಅದನ್ನು ಎಸೆಯಬಾರದು. ತುಳಸಿ ಗಿಡ ಒಣಗಿದಾಗ ಅದನ್ನು ಕಿತ್ತು ಬಾವಿ ಅಥವಾ ನದಿಯಲ್ಲಿ ಹಾಕಬೇಕು.
ಈ ಪಾದ.. ಪುಣ್ಯ ಪಾದ..! ಶಿವನ ಹೆಜ್ಜೆಗಳಿರುವ ಸ್ಥಳವನ್ನು ನೋಡಿದ್ದೀರಾ..?