ಆ್ಯಪ್ನಗರ

ನೀರಾದ ಗಂಗೆ ಮನುಷ್ಯನನ್ನು ವಿವಾಹವಾಗಿದ್ದು ಹೇಗೆ..? ಇದೊಂದು ವಿಚಿತ್ರವೇ ಸರಿ..!

ಗಂಗೆ ಸ್ವರ್ಗದಿಂದ ಭೂಮಿಗೆ ಬರಲು ಕಾರಣವೇನು..? ಗಂಗೆಯು ಜನಿಸಿದ್ದಾದರೂ ಹೇಗೆ..? ಹರಿಯುವ ನೀರಾದ ಗಂಗೆ, ದೈವೀ ಸ್ವರೂಪಳಾದ ಗಂಗೆ ಮಾನವನನ್ನು ವಿವಾಹವಾದದ್ದು ಹೇಗೆ..? ಇಲ್ಲದೆ ಗಂಗೆಯ ಪ್ರೇಮ ಕಥೆ..!

Vijaya Karnataka Web 18 May 2021, 5:49 pm
ಗಂಗಾ ಮಾತೆಯು ವೈಶಾಖ ಶುಕ್ಲ ಸಪ್ತಮಿ ತಿಥಿಯ ದಿನದಂದು ಧರೆಯಲ್ಲಿ ಉಗಮಗೊಂಡಳು ಎನ್ನುವ ಉಲ್ಲೇಖವಿದೆ. ಈ ಬಾರಿ ಈ ದಿನಾಂಕ ಇಂದು ಅಂದರೆ ಮೇ 18 ರಂದು ಬಂದಿದೆ. ಹೌದು, ಇಂದು ಗಂಗಾ ಮಾತೆಯು ಭೂಮಿಯಲ್ಲಿ ಜನಿಸಿದ ದಿನ. ಗಂಗಾ ದೇವಿಯ ಜನನದ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಇದರ ಜೊತೆಗೆ, ಗಂಗೆ ಸ್ವರ್ಗದಿಂದ ಭೂಮಿಗೆ ಬರುವ ರಹಸ್ಯವನ್ನೂ ಹೇಳಲಾಗುತ್ತದೆ. ಅಷ್ಟೇ ಅಲ್ಲ, ಗಂಗಾ ದೇವಿಯ ಮಾನವ ರೂಪದಲ್ಲಿ ಪ್ರೀತಿಯ ಕುತೂಹಲಕಾರಿ ಕಥೆಯೂ ಇದೆ. ಗಂಗೆಯು ಜನಿಸಿದ್ದಾದರೂ ಹೇಗೆ..? ಹರಿಯುವ ನೀರಾದ ಗಂಗೆ, ದೈವೀ ಸ್ವರೂಪಳಾದ ಗಂಗೆ ಮಾನವನನ್ನು ವಿವಾಹವಾದದ್ದು ಹೇಗೆ..?
Vijaya Karnataka Web you should know how goddess ganga marry a human
ನೀರಾದ ಗಂಗೆ ಮನುಷ್ಯನನ್ನು ವಿವಾಹವಾಗಿದ್ದು ಹೇಗೆ..? ಇದೊಂದು ವಿಚಿತ್ರವೇ ಸರಿ..!



​ಶ್ರೀಹರಿ ಮತ್ತು ಗಂಗಾ ದೇವಿಯ ನಡುವಿನ ಸಂಬಂಧ

ವಾಮನ ಪುರಾಣದ ಪ್ರಕಾರ, ವಿಷ್ಣು ತನ್ನ ಒಂದು ಪಾದವನ್ನು ಆಕಾಶದ ಕಡೆಗೆ ವಾಮನ ರೂಪದಲ್ಲಿ ಎತ್ತಿದಾಗ, ನಂತರ ಬ್ರಹ್ಮ ದೇವನು ತನ್ನ ಕಮಂಡಲದಲ್ಲಿ ನೀರನ್ನು ತುಂಬಿಸಿಕೊಂಡು ಭಗವಾನ್‌ ವಿಷ್ಣುವಿನ ಪಾದಗಳನ್ನು ತೊಳೆದನು. ಈ ನೀರಿನ ವೇಗದಿಂದ ಗಂಗೆಯು ಬ್ರಹ್ಮನ ಕಮಂಡಲದಲ್ಲಿ ಜನಿಸಿದಳು. ಭಗವಾನ್ ಬ್ರಹ್ಮನು ಗಂಗೆಯನ್ನು ಹಿಮಾಲಯಕ್ಕೆ ಒಪ್ಪಿಸಿದನು, ಹೀಗಾಗಿ ಪಾರ್ವತಿ ದೇವತೆ ಮತ್ತು ಗಂಗಾ ಇಬ್ಬರೂ ಸಹೋದರಿಯರಾದರು. ವಾಮನನ ಪಾದಕ್ಕೆ ಆದ ಗಾಯವು ಆಕಾಶವನ್ನು ಛಿದ್ರಗೊಳಿಸಿತು ಮತ್ತು ಗಂಗೆಯು ಮೂರು ಭಾಗವಾಗಿ ಉಕ್ಕಿ ಹರಿಯಲು ಕಾರಣವಾಯಿತು ಎಂಬ ಕಥೆಯೂ ಇದೆ. ಒಂದು ನೀರಿನ ಹರಿವು ಭೂಮಿಗೆ ಹೋಯಿತು, ಒಂದು ಸ್ವರ್ಗಕ್ಕೆ ಮತ್ತು ಒಂದು ಪಾತಾಳ ಲೋಕಕ್ಕೆ ಹರಿಯಲು ಆರಂಭವಾಯಿತು.

ಗಣೇಶನ ಈ 4 ಮಂತ್ರ ಪಠಿಸಿದರೆ ಉತ್ತಮ ಆರೋಗ್ಯ ಪ್ರಾಪ್ತಿ..! ನೀವೂ ಈ ಮಂತ್ರ ಪಠಿಸಿ..

​ಗಂಗಾ ದೇವಿ ಮತ್ತು ಪರಶಿವನ ಪ್ರೀತಿ

ಪಾರ್ವತಿ ದೇವಿಯಂತೆ ಗಂಗೆಯು ಕೂಡ ಶಿವನನ್ನು ತನ್ನ ಗಂಡನನ್ನಾಗಿ ಪಡೆಯಲು ಬಯಸಿದ್ದಳೆಂದು ಶಿವ ಪುರಾಣದಲ್ಲಿ ಒಂದು ದಂತಕಥೆಯಿದೆ. ಪಾರ್ವತಿ ದೇವಿಯು ಗಂಗೆಯು ತನಗೆ ಸೌತಿಯಾಗುತ್ತಿಳೆಂದು ಎಂದಿಗೂ ಅಂದುಕೊಂಡವಳಲ್ಲ. ಅದೇನೇ ಇದ್ದರೂ, ಗಂಗೆಯು ಶಿವನನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸನ್ನು ಮಾಡಿದಳು. ಅವಳ ತಪಸ್ಸಿನಿಂದ ಸಂತಸಗೊಂಡ ಶಿವನು ತನ್ನೊಂದಿಗೆ ಇರಲು ವರವನ್ನು ಕೊಟ್ಟನು. ಈ ವರದಿಂದಾಗಿ, ಗಂಗಾ ತನ್ನ ಪೂರ್ಣ ವೇಗದಿಂದ ಭೂಮಿಯ ಮೇಲೆ ಇಳಿಯುವಾಗ, ಭಗವಾನ್ ಶಿವನು ಭೂಮಿಯನ್ನು ಪ್ರವಾಹದಿಂದ ರಕ್ಷಿಸಲು ಅವುಗಳನ್ನು ತನ್ನ ಜಟೆಗಳಲ್ಲಿ ಸುತ್ತಿಕೊಂಡನು, ಹೀಗೆ ಗಂಗೆಯು ಶಿವನೊಂದಿಗೆ ಸೇರುತ್ತಾಳೆ.

ನಿನ್ನೆ ಕೇದರಾನಾಥ ಇಂದು ಬದ್ರಿನಾಥ: ಪಂಚ ಬದ್ರಿನಾಥದ ಮಹಿಮೆಯೇನು ಗೊತ್ತೇ..?

​ಗಂಗೆಯನ್ನು ಶಿವನ ಎರಡನೇ ಹೆಂಡತಿಯೆಂದು ಪರಿಗಣಿಸಲಾಗುತ್ತದೆ

ಮರಾಠಿ ಜಾನಪದ ಕಥೆಗಳಲ್ಲೂ ಇದೇ ರೀತಿಯ ವಿಷಯಗಳು ಕಂಡುಬರುತ್ತವೆ. ಇಲ್ಲಿ ಗಂಗಾ ಶಿವನ ಎರಡನೇ ಹೆಂಡತಿ ಎಂದು ಹೇಳಲಾಗುತ್ತದೆ. ಪಾರ್ವತಿಗೂ ಮತ್ತು ಗಂಗೆಗೂ ನಡುವೆ ಮನಸ್ಥಾಪ ಉಂಟಾದಾಗ. ಪಾರ್ವತಿಯ ಕೋಪದಿಂದ ಗಂಗೆಯನ್ನು ರಕ್ಷಿಸಲು, ಶಿವನು ಅವಳನ್ನು ತನ್ನ ಜಟೆಗಳಲ್ಲಿ ಮರೆಮಾಡುತ್ತಾನೆ. ಗಂಗೆಯ ಹುಟ್ಟಿನ ಬಗ್ಗೆ ಮತ್ತು ನದಿ ರೂಪದಲ್ಲಿ ಆಕೆಯ ಗೋಚರಿಸುವಿಕೆಯ ಬಗ್ಗೆ ಅನೇಕ ಕಥೆಗಳಿರುವಂತೆಯೇ, ಆಕೆಯ ಪ್ರೀತಿಯ ಅನೇಕ ಕಥೆಗಳು ಮಾನವ ರೂಪದಲ್ಲಿವೆ.

ಜೀವನವನ್ನು ಸುಲಭಗೊಳಿಸುವ ಶಕ್ತಿಶಾಲಿ ಮಂತ್ರಗಳಿವು..! ಪಠಿಸುವುದು ಹೇಗೆ ತಿಳಿಯಿರಿ..

​ಗಂಗೆಯು ಮನುಷ್ಯನನ್ನು ಮದುವೆಯಾದದ್ದು ಹೇಗೆ ಗೊತ್ತಾ..?

ಬ್ರಹ್ಮ ದೇವನ ಶಾಪದಿಂದಾಗಿ, ಗಂಗಾ ನದಿಯ ರೂಪದಲ್ಲಿ ಭೂಮಿಗೆ ಬಂದಳು ಮತ್ತು ಮತ್ತೊಂದೆಡೆ ಮಹಾಭಿಷನು ಹಸ್ತಿನಾಪುರದ ರಾಜ ಶಾಂತನು ಆಗಿ ಹುಟ್ಟಬೇಕಾಯಿತು. ಒಮ್ಮೆ, ಬೇಟೆಯನ್ನು ಆಡುವಾಗ ಶಾಂತನು ಗಂಗಾ ತೀರವನ್ನು ತಲುಪಿದಾಗ, ಗಂಗಾ ಮಾನವ ರೂಪದಲ್ಲಿ ಶಾಂತನುಗೆ ಕಾಣಿಸಿಕೊಂಡಳು ಮತ್ತು ಇಬ್ಬರೂ ಪ್ರೀತಿಯಲ್ಲಿ ಸಿಲುಕಿದರು.

ಶಂಕರಾಚಾರ್ಯ ಜಯಂತಿ 2021: ಶಂಕರಾಚಾರ್ಯರ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಹತ್ವ..!

ಶಾಂತನು ಮತ್ತು ಗಂಗೆಯ ಪ್ರೀತಿ ಸಂಕೇತವಾಗಿ ಅವರಿಬ್ಬರಿಗೆ 8 ಜನ ಮಕ್ಕಳಿದ್ದರು, ಅದರಲ್ಲಿ ಗಂಗೆ ತನ್ನ ಏಳು ಜನ ಮಕ್ಕಳಿಗೆ ಜಲ ಸಮಾಧಿಯನ್ನು ನೀಡಿದಳು ಮತ್ತು ದೇವವ್ರತ ಭೀಷ್ಮ ಎಂಟನೇ ಮಗುವಾಗಿ ಜನಿಸಿದನು. ಆದರೆ ಗಂಗೆಗೆ ದೇವವ್ರತ ಭೀಷ್ಮನಿಗೆ ಜಲ ಸಮಾಧಿಯನ್ನು ನೀಡಲು ಸಾಧ್ಯವಾಗಲಿಲ್ಲ. ಗಂಗೆಯ ಎಂಟು ಮಕ್ಕಳನ್ನು ವಸು ಎಂದು ಹೇಳಲಾಗುತ್ತದೆ, ಶಾಪವನ್ನು ಮುಕ್ತಗೊಳಿಸಲು ಗಂಗೆ ಅವರಿಗೆ ನೀರಿನ ಸಮಾಧಿಯನ್ನು ನೀಡುತ್ತಿದ್ದಳು. ಆದರೆ ಎಂಟನೇ ಮಗುವನ್ನು ಶಾಪದಿಂದ ಮುಕ್ತಗೊಳಿಸಲು ಗಂಗೆ ವಿಫಲಳಾದಳು.

ಗಣೇಶನ ಈ 14 ಮೂರ್ತಿಗಳ ಆರಾಧನೆಯೇ ಪವಾಡ..! ಆರೋಗ್ಯದ ಸಮಸ್ಯೆಯೂ ದೂರ..

ಗಂಗಾ ದೇವಿ ಪ್ರೀತಿಯ ಈ ವಿಶಿಷ್ಟ ಕಥೆ

ಮಹಾಭಾರತದ ದಂತಕಥೆಯ ಪ್ರಕಾರ, ಗಂಗಾ ದೇವಿಯು ತನ್ನ ತಂದೆ ಬ್ರಹ್ಮನೊಂದಿಗೆ ಒಮ್ಮೆ ದೇವರಾಜ ಇಂದ್ರನ ಸಭೆಗೆ ಬಂದಳು. ಭೂಮಿಯ ಮಹಾ ರಾಜ ಮಹಾಭಿಷಾ ಕೂಡ ಇಲ್ಲಿ ಉಪಸ್ಥಿತರಿದ್ದನು. ಮಹಾಭಿಷನನ್ನು ನೋಡಿದ ಗಂಗೆ ಆಕರ್ಷಿತಳಾದಳು ಮತ್ತು ಮಹಾಭಿಷಾ ಕೂಡ ಗಂಗಾಳನ್ನು ನೋಡಿದ ಮೇಲೆ ತನ್ನ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡನು.

ಇವುಗಳು ಮನೆಗೆ ಬಂದರೆ ದೈವಿಕ ಅನುಗ್ರಹ ಪ್ರಾಪ್ತಿ..! ದೇವರ ಆಶೀರ್ವಾದ ಪಡೆಯುವಿರಿ..

ಗಂಗೆಯು ಸಭೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಅವಳ ಸೆರಗು ಜಾರಿ ಭುಜದ ಮೇಲೆ ಕುಳಿತುಕೊಳ್ಳುತ್ತದೆ. ಸಭೆಯಲ್ಲಿ ಹಾಜರಿದ್ದ ಎಲ್ಲಾ ದೇವರು-ದೇವತೆಗಳು ಸೌಜನ್ಯದಿಂದ ಕಣ್ಣುಮುಚ್ಚಿದರು, ಆದರೆ ಗಂಗೆಯಲ್ಲಿ ಕಳೆದುಹೋದ ಮಹಾಭಿಷರು ಅವಳನ್ನು ದಿಟ್ಟಿಸುತ್ತಾ ಇದ್ದರು ಮತ್ತು ಗಂಗೆ ಕೂಡ ಅವನನ್ನು ನೋಡುತ್ತಲೇ ಇದ್ದಳು. ಇದನ್ನು ಕಂಡು ಕೋಡಗೊಂಡ ಬ್ರಹ್ಮ ದೇವನು ನೀವು ಘನತೆಗೆ ಅರ್ಹರಾದವರಲ್ಲ ಹಾಗಾಗಿ ನೀವು ಸ್ವರ್ಗ ಲೋಕವನ್ನು ತೊರೆದು ಭೂಮಿಯಲ್ಲಿ ಇರುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ. ಆದ್ದರಿಂದ ಗಂಗೆ ಭೂಮಿಗೆ ಬರಬೇಕಾಯಿತು.

ಕೋವಿಡ್‌ನಲ್ಲಿ ಕೃಷ್ಣನ ಈ ಮಂತ್ರ ಪಠಿಸಿದರೆ ಕಷ್ಟವೇ ಇಲ್ಲ..! ದ್ರೌಪದಿ ಪಠಿಸಿದ ಮಂತ್ರಗಳಿವು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ