ಒಬ್ಬರೇ ಹೊರಗಡೆ ಓಡಾಡುವುದನ್ನು ತಪ್ಪಿಸಿ
ಸೂರ್ಯಗ್ರಹಣವು ಡಿಸೆಂಬರ್ 4 ರಂದು ಬೆಳಿಗ್ಗೆ 10:59 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಗ್ರಹಣವು ಮಧ್ಯಾಹ್ನ 03:07 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯದಲ್ಲಿ ಅನೇಕ ನಕಾರಾತ್ಮಕ ಶಕ್ತಿಗಳು ಮೇಲುಗೈ ಸಾಧಿಸುತ್ತವೆ. ಅಲ್ಲದೆ, ಈ ಸಮಯದಲ್ಲಿ, ಹೆಚ್ಚು ವಾಮಾಚಾರಗಳಂತಹ ಕಾರ್ಯಗಳು ನಡೆಯುತ್ತದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಒಬ್ಬಂಟಿಯಾಗಿ ಮನೆಯಿಂದ ಹೊರಗೆ ಹೋಗಬೇಡಿ ಅಥವಾ ಅಂತಹ ಏಕಾಂತ ಸ್ಥಳ ಅಥವಾ ಸ್ಮಶಾನಕ್ಕೆ ಹೋಗಬೇಡಿ, ಇದರಿಂದ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ನಂಬಿಕೆಯಿದೆ.
ಈ ದಿನ ಅರಳಿ ಮರವನ್ನು ಮುಟ್ಟಿದರೆ ದಾರಿದ್ರ್ಯ ಸುತ್ತಿಕೊಳ್ಳೋದು ಗ್ಯಾರೆಂಟಿ..! ಯಾಕಿರಬಹುದು..?
ಈ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ
ಶನಿ ಅಮಾವಾಸ್ಯೆಯ ದಿನದಂದು ಸೂರ್ಯಗ್ರಹಣ ಸಂಭವಿಸಲಿದೆ, ಆದ್ದರಿಂದ ಈ ದಿನ ಶನಿಗೆ ಸಂಬಂಧಿಸಿದ ಸಾಸಿವೆ ಎಣ್ಣೆ, ಉದ್ದಿನಬೇಳೆ, ಕಬ್ಬಿಣ, ಕಪ್ಪು ಬಟ್ಟೆ ಇತ್ಯಾದಿಗಳನ್ನು ತರಬೇಡಿ. ಹೀಗೆ ಮಾಡುವುದರಿಂದ ಅನೇಕ ನಕಾರಾತ್ಮಕ ವಿಷಯಗಳನ್ನು ಎದುರಿಸಬೇಕಾಗುತ್ತದೆ. ಸಾಧ್ಯವಾದರೆ, ಗ್ರಹಣ ಕಾಲದಲ್ಲಿ ಈ ವಸ್ತುಗಳನ್ನು ದಾನ ಮಾಡುವುದು ತುಂಬಾ ಮಂಗಳಕರವಾಗಿರುತ್ತದೆ. ಹೀಗೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ.
ಇಲ್ಲಿನ ವಿಗ್ರಹಕ್ಕೆ ಹಾಲೆರೆದರೆ ಹಾಲಿನ ಬಣ್ಣವೇ ಬದಲಾಗುವುದು..! ಯಾಕೆ ಗೊತ್ತಾ..?
ಗರ್ಭಿಣಿಯರು ಈ ವಿಷಯವನ್ನು ನೆನಪಿನಲ್ಲಿಡಿ
ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಕೆಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಸಮಯದಲ್ಲಿ, ಯಾವುದೇ ತೀಕ್ಷ್ಣವಾದ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ ಅಥವಾ ಈ ವಸ್ತುಗಳನ್ನು ಬಳಸಬೇಡಿ ಮತ್ತು ಗ್ರಹಣದ ಸಮಯದಲ್ಲಿ ಹೊರಗೆ ಹೋಗಬೇಡಿ. ಇದರೊಂದಿಗೆ ಗ್ರಹಣ ಕಾಲದಲ್ಲಿ ಯಾವುದೇ ರೀತಿಯ ಸೂಜಿ ದಾರವನ್ನು ಬಳಸುವುದನ್ನು ಶಾಸ್ತ್ರಗಳಲ್ಲಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಗ್ರಹಣದ ಸಮಯದಲ್ಲಿ ಹಾನಿಕಾರಕ ಕಿರಣಗಳು ಆಹಾರವನ್ನು ಕಲುಷಿತಗೊಳಿಸುವುದರಿಂದ ಗರ್ಭಿಣಿಯರು ಆಹಾರ ಮತ್ತು ಪಾನೀಯವನ್ನು ತ್ಯಜಿಸಬೇಕು ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.
ಪೂಜಾ ವಿಧಿಗಳುಇವುಗಳನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಂಡು ನೋಡಿ ಲಕ್ಷ್ಮಿ ಒಲಿಯದಿದ್ದರೆ ಹೇಳಿ..!
ಇವರಿಗೆ ತೊಂದರೆ ಕೊಡಬೇಡಿ
ಶನಿಶ್ಚರೀ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಇರುವುದರಿಂದ ಗ್ರಹಣ ಕಾಲದಲ್ಲಿ ಮತ್ತು ಗ್ರಹಣದ ನಂತರವೂ ಬಡವರಿಗೆ ಹಾಗೂ ಅಸಹಾಯಕರಿಗೆ ಯಾವುದೇ ತೊಂದರೆಯನ್ನು ನೀಡಬಾರದು. ಏಕೆಂದರೆ ಶನಿದೇವನು ಈ ಜನರನ್ನು ಪ್ರತಿನಿಧಿಸುತ್ತಾನೆ ಮತ್ತು ಅವರಿಗೆ ಕಿರುಕುಳ ನೀಡುವುದರಿಂದ ಶನಿದೇವನ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ ಮತ್ತು ನಿಮ್ಮ ಈ ಕಾರ್ಯವನ್ನು ಶನಿಯು ಸಹ ಕ್ಷಮಿಸುವುದಿಲ್ಲ. ಹಾಗಾಗಿ ಇದನ್ನು ನಿಮ್ಮ ಅಭ್ಯಾಸವನ್ನಾಗಿ ಮಾಡಿಕೊಂಡರೆ ಒಳ್ಳೆಯದು.
ಹಿಂದೂ ಧರ್ಮದಿನಗಳಿಗನುಗುಣವಾಗಿ ಹಣೆಗೆ ತಿಲಕವಿಟ್ಟರೆ ಜೀವನ ಸುಖದಿಂದಿರುವುದು..! ಯಾವ ದಿನ ಯಾವ ತಿಲಕ..?
ಈ ರೀತಿಯ ಕೆಲಸದಿಂದ ದೂರವಿರಿ
ಗ್ರಹಣದ ಸಮಯದಲ್ಲಿ, ಯಾವುದೇ ರೀತಿಯ ಚರ್ಚೆ ಅಥವಾ ವಾದ - ವಿವಾದಗಳಿಂದ ದೂರವಿರಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಮತ್ತು ನಿಮ್ಮ ಸುತ್ತಮುತ್ತ ನಕಾರಾತ್ಮಕ ಶಕ್ತಿ ಉಳಿಯುತ್ತದೆ. ಆದ್ದರಿಂದ ಈ ದಿನ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಧ್ಯಾನ, ಜಪ ಮಾಡಬೇಕು. ಹೀಗೆ ಮಾಡುವುದರಿಂದ ಗ್ರಹಣದ ಅಶುಭ ಪರಿಣಾಮ ದೂರವಾಗುತ್ತದೆ ಮತ್ತು ಆ ಅವಧಿಯಲ್ಲಿ ಮಾಡುವ ಕಾರ್ಯವು ಪುಣ್ಯಕರವೆಂದು ಪರಿಗಣಿಸಲಾಗುತ್ತದೆ. ಗ್ರಹಣ ಮುಗಿದ ನಂತರ, ಪೂರ್ವಜರನ್ನು ಧ್ಯಾನಿಸಬೇಕು ಮತ್ತು ಅವರ ಹೆಸರಿನಲ್ಲಿ ಏನನ್ನಾದರೂ ದಾನ ಮಾಡಬೇಕು.
ಹಬ್ಬಗಳುಮಾಸಿಕ ಹಬ್ಬಗಳು: ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ನ ಪ್ರಮುಖ ಹಬ್ಬಗಳು,
ತಡವಾಗಿ ಮಲಗುವುದನ್ನು ತಪ್ಪಿಸಿ
ಸೂರ್ಯಗ್ರಹಣವು ಬೆಳಿಗ್ಗೆ ಮಾತ್ರ ಸಂಭವಿಸುತ್ತದೆ ಮತ್ತು ಮಧ್ಯಾಹ್ನದವರೆಗೆ ಇರುತ್ತದೆ, ಆದ್ದರಿಂದ ಈ ದಿನ ಬೆಳಿಗ್ಗೆ ತಡವಾಗಿ ಮಲಗುವುದನ್ನು ತಪ್ಪಿಸಿ ಮತ್ತು ಬೇಗನೆ ಎದ್ದು ನೀರಿಗೆ ಉಪ್ಪು ಸೇರಿಸಿ ಸ್ನಾನ ಮಾಡಿ. ಈ ದಿನ ಶನಿ ಅಮಾವಾಸ್ಯೆ ಕೂಡ ಗ್ರಹಣದಿಂದ ಕೂಡಿರುತ್ತದೆ, ಆದ್ದರಿಂದ ಶನಿ ದೇವರನ್ನು ಮೆಚ್ಚಿಸಲು ಇದು ತುಂಬಾ ಪ್ರಯೋಜನಕಾರಿ ದಿನವಾಗಿದೆ, ಆದ್ದರಿಂದ ಮರೆಯದೆ ಹೆಚ್ಚು ಹೊತ್ತು ಮಲಗದೇ ಬೇಗ ಎದ್ದು ಅರಳಿ ಮರಕ್ಕೆ ನೀರನ್ನು ನೀಡಬೇಕು ಎನ್ನುವ ನಂಬಿಕೆಯಿದೆ.
ಪೂಜಾ ವಿಧಿಗಳು2021 ರ ಕೊನೆಯ ಸೂರ್ಯಗ್ರಹಣ: ಯಾವ ಮಂತ್ರ ಪಠಿಸಬೇಕು..? ಈ ನಿಯಮಗಳನ್ನೇ
ಈ ವಿಷಯಗಳನ್ನು ನೆನಪಿನಲ್ಲಿಡಿ
ಗ್ರಹಣದ ಸಮಯದಲ್ಲಿ ಗಡ್ಡ ಮತ್ತು ಕೂದಲು ಕತ್ತರಿಸುವುದನ್ನು ಸಹ ತಪ್ಪಿಸಬೇಕು. ಅಲ್ಲದೆ, ಈ ಅವಧಿಯಲ್ಲಿ ಅಡುಗೆ ಮಾಡುವುದಾಗಲಿ ಅಥವಾ ಆಹಾರವನ್ನು ತಿನ್ನುವುದಾಗಲಿ ಮಾಡಬಾರದು. ಈಗಾಗಲೇ ಸಿದ್ಧಪಡಿಸಿದ ಆಹಾರದಲ್ಲಿ ತುಳಸಿ ಎಲೆಯನ್ನು ಹಾಕಿ ಮುಚ್ಚಿಟ್ಟು ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಧ್ಯಾನ ಮಾಡಿದ ನಂತರ ಆಹಾರ ಸೇವಿಸಬೇಕು.
ದೇವಾಲಯಗಳುಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಇತಿಹಾಸ, ಮಹತ್ವವೇನು ಗೊತ್ತೇ..? ತಿಳಿಯಿರಿ..