ಆ್ಯಪ್ನಗರ

ಲಕ್ಷ್ಮಿಗೆ ಪ್ರಿಯವಾದ 6 ವಸ್ತುಗಳಿವು..! ಪೂಜೆಯಲ್ಲಿ ಬಳಸಿದರೆ ಫಲ ದೊರೆಯುವುದು..

ಲಕ್ಷ್ಮಿ ದೇವಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು..? ಈ 6 ವಸ್ತುಗಳನ್ನು ಲಕ್ಷ್ಮಿ ದೇವಿಗೆ ತಪ್ಪದೇ ಅರ್ಪಿಸಿ... ಈ 6 ವಸ್ತುಗಳನ್ನು ನೀವು ಶುಕ್ರವಾರ ಮಾತ್ರವಲ್ಲ, ಪ್ರತಿದಿನವೂ ಕೂಡ ಲಕ್ಷ್ಮಿ ದೇವಿಗೆ ಅರ್ಪಿಸಬಹುದು..

Vijaya Karnataka Web 8 May 2021, 2:36 pm
ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನೀವು ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಲಕ್ಷ್ಮಿ ದೇವಿಯನ್ನು ಶ್ರದ್ಧಾ - ಭಕ್ತಿಯಿಂದ ಪೂಜಿಸಲಾಗುತ್ತದೆ. ಲಕ್ಷ್ಮಿಯ ಆಶೀರ್ವಾದದಿಂದ ಹಣದ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಸಂಪತ್ತಿನ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಧರ್ಮಗ್ರಂಥಗಳಲ್ಲಿ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಲಕ್ಷ್ಮಿ ದೇವಿಗೆ ಪ್ರಸಾದವನ್ನು ಅರ್ಪಿಸಬೇಕು. ಹಾಗಾದರೆ ಲಕ್ಷ್ಮಿ ದೇವಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು..? ಈ 6 ವಸ್ತುಗಳನ್ನು ಲಕ್ಷ್ಮಿ ದೇವಿಗೆ ತಪ್ಪದೇ ಅರ್ಪಿಸಿ... ಈ 6 ವಸ್ತುಗಳನ್ನು ನೀವು ಶುಕ್ರವಾರ ಮಾತ್ರವಲ್ಲ, ಪ್ರತಿದಿನವೂ ಕೂಡ ಲಕ್ಷ್ಮಿ ದೇವಿಗೆ ಅರ್ಪಿಸಬಹುದು..
Vijaya Karnataka Web goddess lakshmi always like these 6 things
ಲಕ್ಷ್ಮಿಗೆ ಪ್ರಿಯವಾದ 6 ವಸ್ತುಗಳಿವು..! ಪೂಜೆಯಲ್ಲಿ ಬಳಸಿದರೆ ಫಲ ದೊರೆಯುವುದು..



​ತೆಂಗಿನ ಕಾಯಿ

ತೆಂಗಿನಕಾಯಿಯನ್ನು ಹಿಂದೂ ಧರ್ಮದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿಯು ಲಕ್ಷ್ಮಿ ದೇವಿಗೆ ಅತ್ಯಂತ ಪ್ರೀತಿಯ ವಸ್ತುವಾದ್ದರಿಂದ ಇದನ್ನು ಶ್ರೀಫಲ ಎಂದೂ ಕರೆಯುತ್ತಾರೆ. ಲಕ್ಷ್ಮಿ ದೇವಿಗೆ ತೆಂಗಿನಕಾಯಿ ಲಡ್ಡುವನ್ನು, ಹಸಿ ತೆಂಗಿನಕಾಯಿಯನ್ನು ಮತ್ತು ನೀರು ತುಂಬಿದ ತೆಂಗಿನಕಾಯಿಯನ್ನು ಅರ್ಪಿಸುವ ಮೂಲಕ, ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಸಂತೋಷವನ್ನು ವ್ಯಕ್ತಪಡಿಸುತ್ತಾಳೆ ಮತ್ತು ಆಕೆಯ ಆಶೀರ್ವಾದವನ್ನು ನೀವು ಪಡೆದುಕೊಳ್ಳುತ್ತೀರಿ.

ನಾಳೆ ಮಾಸಿಕ ಶಿವರಾತ್ರಿ: ಇಲ್ಲಿದೆ ಮಹತ್ವ, ಪೂಜೆ ವಿಧಾನ, ಮಂತ್ರ ಮತ್ತು ಸಂಜೆ ಪೂಜೆ ವಿಧಾನ..!

​ಸಕ್ಕರೆ ಮಿಠಾಯಿ

ಸಕ್ಕರೆ ಮಿಠಾಯಿಯನ್ನು ಬತಾಶೆ ಎಂದೂ ಕರೆಯುತ್ತಾರೆ. ಸಕ್ಕರೆ ಮಿಠಾಯಿಯು ಚಂದ್ರನೊಂದಿಗೆ ಸಂಬಂಧವನ್ನು ಹೊಂದಿದೆ ಮತ್ತು ಚಂದ್ರನನ್ನು ಲಕ್ಷ್ಮಿ ದೇವಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿ ಕೂಡ ಸಕ್ಕರೆ ಮಿಠಾಯಿಯನ್ನು ಇಷ್ಟಪಡಲು ಇದು ಕೂಡ ಒಂದು ಮುಖ್ಯ ಕಾರಣ. ಲಕ್ಷ್ಮಿ ಪೂಜೆಯಲ್ಲಿ ಆಕೆಗೆ ಸಕ್ಕರೆ ಮಿಠಾಯಿಯನ್ನು ಭೋಗವಾಗಿ ಅರ್ಪಿಸಲಾಗುತ್ತದೆ.

ಕೆಂಪು ಶ್ರೀಗಂಧ ಬಳಸಿದರೆ ಶ್ರೀಮಂತರಾಗೋದು ಗ್ಯಾರೆಂಟಿ..! ಒಮ್ಮೆ ಪ್ರಯತ್ನಿಸಿ ನೋಡಿ...

ಸಿಂಘಾರ

ಲಕ್ಷ್ಮಿ ದೇವಿಯು ಇಷ್ಟ ಪಡುವ ಹಣ್ಣುಗಳಲ್ಲಿ ಸಿಂಘಾರ ಕೂಡ ಒಂದು. ತಾಯಿ ಲಕ್ಷ್ಮಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಹೆಚ್ಚು ಪ್ರೀತಿಸುತ್ತಾಳೆ ಎನ್ನುವ ನಂಬಿಕೆಯಿದೆ. ನೀರಿನಲ್ಲಿ ಉತ್ಪತ್ತಿಯಾಗುವ ಈ ಹಣ್ಣು ಲಕ್ಷ್ಮಿ ದೇವಿಯ ನೆಚ್ಚಿನ ಫಲವಾಗಲು ಇದು ಕೂಡ ಒಂದು ಕಾರಣ. ಇದು ಕಾಲೋಚಿತ ಹಣ್ಣು. ಆದ್ದರಿಂದ ನೀವು ಈ ಫಲವನ್ನು ಲಕ್ಷ್ಮಿ ದೇವಿಗೆ ಯಾವಾಗ ಬೇಕಾದರೂ ಅರ್ಪಿಸಬಹುದು.

ನಿಮ್ಮಲ್ಲಿ ಈ ಗುಣವಿದ್ದರೆ ನೀವೇ ಅದೃಷ್ಟವಂತರು..! ನಿಮ್ಮಲ್ಲಿದೆಯೇ ಈ ಗುಣ..?

​ವೀಳ್ಯದೆಲೆ

ಸಂಪತ್ತಿನ ದೇವತೆ ಎಂದು ಕರೆಯಲ್ಪಡುವ ತಾಯಿ ಲಕ್ಷ್ಮಿ ದೇವಿಯು ವೀಳ್ಯದೆಲೆಯನ್ನು ತುಂಬಾ ಪ್ರೀತಿಸುತ್ತಾಳೆ. ಪೂಜೆ ಮುಗಿದ ನಂತರ ಲಕ್ಷ್ಮಿ ದೇವಿಗೆ ವೀಳ್ಯದೆಲೆಯನ್ನು ಅರ್ಪಿಸಬೇಕು. ಭಗವಾನ್‌ ಗಣೇಶನನು ಕೂಡ ವೀಳ್ಯದೆಲೆಯನ್ನು ಹೆಚ್ಚು ಇಷ್ಟ ಪಡುತ್ತಾನೆ. ಇದು ತಾಯಿಯನ್ನು ಸಂತೋಷಪಡಿಸುತ್ತದೆ ಮತ್ತು ಆಶೀರ್ವಾದ ನೀಡುವಂತೆ ಮಾಡುತ್ತದೆ.

ಪತಿ ಪತ್ನಿಯೊಂದಿಗೆ ಹೀಗಿದ್ದರೆ ಶ್ರೀಮಂತರಾಗುತ್ತಾರೆ ಎನ್ನುವನು ಚಾಣಕ್ಯ..! ಇವುಗಳನ್ನು ದಾನ ಮಾಡಬೇಡಿ..

​ಮಖಾನಾ

ಮಖಾನಾ ನೀರಿನಲ್ಲಿ ಗಟ್ಟಿಯಾದ ಹೊದಿಕೆಯಲ್ಲಿ ಬೆಳೆಯುತ್ತದೆ ಮತ್ತು ಆದ್ದರಿಂದ ಇದನ್ನು ಎಲ್ಲಾ ರೀತಿಯಲ್ಲೂ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ನೀರಿನಲ್ಲಿ ಬೆಳೆಯುವ ಹಣ್ಣು ಮಖಾನಾವನ್ನು ಲಕ್ಷ್ಮಿ ಹೆಷ್ಚು ಇಷ್ಟ ಪಡುತ್ತಾಳೆ. ಲಕ್ಷ್ಮಿಗೆ ಮಖಾನವನ್ನು ಅರ್ಪಿಸುವುದರಿಂದ ಅವಳು ಹೆಚ್ಚು ಸಂತೋಷವನ್ನು ಪಡೆಯುತ್ತಾಳೆ ಮತ್ತು ತನ್ನ ಭಕ್ತರ ಆಶಯಗಳನ್ನು ಈಡೇರಿಸುತ್ತಾಳೆ.

ನಾಳೆ ಕೊನೆಯ ಶನಿ ಪ್ರದೋಷ: ಇಲ್ಲಿದೆ ಶುಭ ಯೋಗ, ಮುಹೂರ್ತ, ಪೂಜೆ ವಿಧಾನ ಮತ್ತು

​ಹಣ್ಣು ಮತ್ತು ಸಿಹಿ ತಿಂಡಿ

ಇದಲ್ಲದೆ, ನಿಮ್ಮ ಪೂಜ್ಯತೆಗೆ ಅನುಗುಣವಾಗಿ ನಿಮ್ಮ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನೀವು ಹಣ್ಣುಗಳನ್ನು, ಸಿಹಿತಿಂಡಿಗಳನ್ನು ಮತ್ತು ಒಣ ಹಣ್ಣುಗಳನ್ನು ಸಹ ಆಕೆಗೆ ಅರ್ಪಿಸಬಹುದು. ಇದು ತಾಯಿಯ ಆಶೀರ್ವಾದ ಪಡೆಯಲು ಸಹಕಾರ ಮಾಡುತ್ತದೆ.

ಈ 5 ವ್ಯಕ್ತಿಗಳ ನಡುವೆ ಹೋಗಬಾರದು ಎನ್ನುತ್ತಾನೆ ಚಾಣಕ್ಯ..! ಇವರ ನಡುವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ