ಆ್ಯಪ್ನಗರ

ಸೂರ್ಯ ಮಂತ್ರ ಪಠಿಸುವುದರ ಪ್ರಯೋಜನವೇನು ಗೊತ್ತೇ..? ಇಲ್ಲಿದೆ ಶಕ್ತಿಶಾಲಿ ಸೂರ್ಯ ಮಂತ್ರಗಳು..!

ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲೂ ಸಕಾರಾತ್ಮಕ, ಸಂತೋಷದ, ಯಶಸ್ಸು ಮತ್ತು ಸಮೃದ್ಧಿಯ ಬೆಳಕು ಮೂಡುವುದು. ಸೂರ್ಯ ಮಂತ್ರಗಳಾವುವು..? ಸೂರ್ಯ ಮಂತ್ರದ ಪ್ರಯೋಜನವೇನು..? ಯಾವ ಸೂರ್ಯ ಮಂತ್ರವನ್ನು ನಾವು ಪಠಿಸಬೇಕು..?

Vijaya Karnataka Web 10 May 2021, 7:58 am
ಭಗವಾನ್ ಸೂರ್ಯ ನಮ್ಮ ಆತ್ಮವನ್ನು ಪ್ರತಿನಿಧಿಸುತ್ತಾನೆ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯ ದೇವನಿಗೆ ವಿಶೇಷ ಪೂಜೆ ಪುನಸ್ಕಾರ ಮಾಡುವುದರಿಂದ ಬದುಕಲ್ಲಿ ಸಾಕಷ್ಟು ಬದಲಾವಣೆ ಹಾಗೂ ಧನಾತ್ಮಕ ರೀತಿಯಲ್ಲಿ ಯಶಸ್ಸು ದೊರೆಯುವುದು. ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ಅರ್ಘ್ಯ ಅಥವಾ ನೀರನ್ನು ಅರ್ಪಿಸುವುದರ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಸೂರ್ಯನಿಗೆ ಸಂಬಂಧಿಸಿದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರಿಂದ ಸಾಕಷ್ಟು ಉತ್ತಮ ಫಲವನ್ನು ಪಡೆದುಕೊಳ್ಳಬಹುದು.
Vijaya Karnataka Web here are the most powerful surya mantra chanting vidhi and its benefits
ಸೂರ್ಯ ಮಂತ್ರ ಪಠಿಸುವುದರ ಪ್ರಯೋಜನವೇನು ಗೊತ್ತೇ..? ಇಲ್ಲಿದೆ ಶಕ್ತಿಶಾಲಿ ಸೂರ್ಯ ಮಂತ್ರಗಳು..!



​ಸೂರ್ಯ ನಮಸ್ಕಾರದ ಮಂತ್ರ

ಸೂರ್ಯ ನಮಸ್ಕಾರ ಮಾಡುವಾಗ 12 ವಿಭಿನ್ನ ಯೋಗಾಸನವನ್ನು ಮಾಡಬೇಕಾಗುವುದು.

ಓಂ ಮಿತ್ರಾಯ ನಮಃ

ಓಂ ರವಿಯೇ ನಮಃ

ಓಂ ಸೂರ್ಯ ನಮಃ

ಓಂ ಭಾನವೇ ನಮಃ

ಇದನ್ನು ತಿಜೋರಿಯಲ್ಲಿಟ್ಟರೆ ಲಕ್ಷ್ಮಿ ಒಲಿಯುವಳು ಎನ್ನುತ್ತೆ ಲಾಲ್‌ ಕಿತಾಬ್‌..! ನಿಮ್ಮ ಸಮಸ್ಯೆಯೇ ದೂರಾಗುವುದು..

ಓಂ ಖಗಾಯ ನಮಃ

ಓಂ ಪುಷ್ನೇ ನಮಃ

ಓಂ ಹಿರಣ್ಯಗರ್ಭಾಯ ನಮಃ

ಓಂ ಮಾರಿಚೇಯ ನಮಃ

ಓಂ ಆದಿತ್ಯಾಯ ನಮಃ

ಈ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿದೆ ಹುಡುಗಿಯ ಆತ್ಮ..! ನೀವು ಕೇಳಿರದ ದೆವ್ವದ ಸ್ಥಳಗಳಿವು..

ಓಂ ಸಾವಿತ್ರೇ ನಮಃ

ಓಂ ಅರ್ಕಾಯ ನಮಃ

ಓಂ ಭಾಸ್ಕರಾಯ ನಮಃ

ಪ್ರಯೋಜನ: ಈ ಮಂತ್ರಗಳನ್ನು ಆಸನಗಳನ್ನು ಮಾಡುವಾಗ ಜಪಿಸಬೇಕು. ಆಗ ವ್ಯಾಯಾಮವು ಉತ್ತಮವಾಗಿ ನೆರವೇರುವುದು. ಜೊತೆಗೆ ವ್ಯಾಯಾಮದ ಸಂಪೂರ್ಣ ಫಲ ದೊರೆಯುವುದು.

ಪತಿ ಪತ್ನಿಯೊಂದಿಗೆ ಹೀಗಿದ್ದರೆ ಶ್ರೀಮಂತರಾಗುತ್ತಾರೆ ಎನ್ನುವನು ಚಾಣಕ್ಯ..! ಇವುಗಳನ್ನು ದಾನ ಮಾಡಬೇಡಿ..

​ಸೂರ್ಯ ಬೀಜ ಮಂತ್ರ

" ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ"

ಎಂದರೆ ಸೂರ್ಯನ ಅನುಗ್ರಹಕ್ಕಾಗಿ ನಮಸ್ಕಾರಗಳು ಎನ್ನುವುದನ್ನು ತಿಳಿಸುತ್ತದೆ. ಈ ಬೀಜ ಮಂತ್ರವನ್ನು ಜಪಿಸುವುದರಿಂದ ಸಮೃದ್ಧಿ ಮತ್ತು ಯಶಸ್ಸು ವೃದ್ಧಿಯಾಗುವುದು. ಇದು ಒಬ್ಬರ ಸ್ವಭಾವದಲ್ಲಿ ನಕಾರಾತ್ಮಕ ಪ್ರವೃತ್ತಿಯನ್ನು ತೆಗೆದುಹಾಕುವುದು ಎನ್ನುವ ನಂಬಿಕೆ ಇದೆ.

ನಂದಾ ದೇವಿ ಪರ್ವತದ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಈ ಪರ್ವತದ ನಿಗೂಢ ರಹಸ್ಯ..!

​ಸೂರ್ಯ ಗಾಯತ್ರಿ ಮಂತ್ರ

" ಓಂ ಭಾಸ್ಕರಾಯ ವಿದ್ಮಹೇ ಮಾರ್ತಂಡಾಯ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್"

ಈ ಮಂತ್ರವನ್ನು ಹೇಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮಂತ್ರವು ದೇಹವನ್ನು ಬಲಪಡಿಸುತ್ತದೆ. ಒಬ್ಬರ ಮನಸ್ಸನ್ನು ಶುದ್ಧೀಕರಿಸುತ್ತದೆ. ಅವರನ್ನು ಆಧ್ಯಾತ್ಮಿಕವಾಗಿ ಉನ್ನತಿಗೊಳಿಸುವುದು. ಇದು ಖ್ಯಾತಿ ಮತ್ತು ಯಶಸಸನ್ನು ತರಬಲ್ಲದು.

ಈ ನೀರನ್ನೇ ಕುಡಿಯಬೇಕು ಎನ್ನುತ್ತಾನೆ ಚಾಣಕ್ಯ..! ಮಾನಸಿಕ, ದೈಹಿಕ ಸಮಸ್ಯೆಗೆ ಇವುಗಳೇ

​ಸೂರ್ಯ ಮಂತ್ರ

" ನಮಃ ಸೂರ್ಯ ಶಾಂತಾಯ ಸರ್ವರೋಗ ನಿವಾರಿಣೆ

ಆಯುರ್ ಆರೋಗ್ಯ ಮೈಸ್ವೈರ್ಯಂ ದೇಹಿ ದೇವಾ ಜಗತ್ಪತೇ"

ಈ ಮಂತ್ರವನ್ನು ಜಪಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಅದನ್ನು ಬೇರು ಸಮೇತ ಕಿತ್ತುಹಾಕುವುದು. ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯವು ಸುಧಾರಣೆ ಕಾಣುವುದು.

ಲಕ್ಷ್ಮಿಗೆ ಪ್ರಿಯವಾದ 6 ವಸ್ತುಗಳಿವು..! ಪೂಜೆಯಲ್ಲಿ ಬಳಸಿದರೆ ಫಲ ದೊರೆಯುವುದು..

​ಆದಿತ್ಯ ಹೃದಯ ಮಂತ್ರ

" ಆದಿತ್ಯ ಹೃದಯ ಪುಣ್ಯಂ ಸರ್ವ ಸತ್ಯ ವಿಕಾಸನಂ

ಜಯವಾಹಂ ಜಾಬೆ ನಿತ್ಯಂ ಅಕ್ಷಯಂ ಪರಂ ಶಿವಂ."

ಈ ಮಂತ್ರವನ್ನು ನಿತ್ಯ ಜಪಿಸುವುದಿಂದ ಕೆಲಸದಲ್ಲಿ ಜ್ಞಾನ, ವೇಗ ಮತ್ತು ಯಶಸ್ಸು ದೊರೆಯುವುದು. ಜೊತೆಗೆ ವ್ಯಕ್ತಿಯನ್ನು ನಿರ್ಭಯನನ್ನಾಗಿ ಇರಿಸುತ್ತದೆ.

ಕೆಂಪು ಶ್ರೀಗಂಧ ಬಳಸಿದರೆ ಶ್ರೀಮಂತರಾಗೋದು ಗ್ಯಾರೆಂಟಿ..! ಒಮ್ಮೆ ಪ್ರಯತ್ನಿಸಿ ನೋಡಿ...

​ಯಶಸ್ಸಿಗೆ ಸೂರ್ಯ ಮಂತ್ರ

"ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ

ಸಿದ್ಧಿ ಸಿದ್ಧಿ ಕಾರಾಯಮನುಷ್ಯ ವಂಚಿತ ಪುರಾಯ

ಕಾಷ್ಟಂ ಚುರಾಯಂ ಓಂ ಹ್ರೀಂ ಸೂರ್ಯಾಯ ನಮೋ ನಮಃ"

ಜೀವನದಲ್ಲಿ ಯಾವುದೇ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕು ಎಂದಾದರೆ ಈ ಯಶಸ್ಸಿನ ಮಂತ್ರವನ್ನು ಜಪಿಸಬೇಕು.

ನಿಮ್ಮಲ್ಲಿ ಈ ಗುಣವಿದ್ದರೆ ನೀವೇ ಅದೃಷ್ಟವಂತರು..! ನಿಮ್ಮಲ್ಲಿದೆಯೇ ಈ ಗುಣ..?

​ಸೂರ್ಯ ಗಾಯತ್ರಿ ಮಂತ್ರ-2

" ಓಂ ಆದಿತ್ಯಾಯ ವಿದ್ಮಹೇ ಸಹಸ್ರ ಕಿರಣಾಯ ಧೀಮಹೀ

ತನ್ನೋ ಸೂರ್ಯ ಪ್ರಚೋದಯಾತ್"

ಈ ಮಂತ್ರವನ್ನು ಜಪಿಸುವುದರಿಂದ ಆತ್ಮವಿಶ್ವಾಸ ಮತ್ತು ಧೈರ್ಯ ಬರುತ್ತದೆ. ಇದು ಎಲ್ಲಾ ಪ್ರಯತ್ನಗಳಲ್ಲಿ ಜ್ಞಾನ, ಬುದ್ಧಿವಂತಿಕೆ, ಯಶಸ್ಸು ಮತ್ತು ಖ್ಯಾತಿಯನ್ನು ನೀಡುತ್ತದೆ.

ಸೋಮವಾರ ಈ ಮಂತ್ರ ಪಠಿಸಿದರೆ ಹಣದ ಮಳೆಯೇ ಸುರಿಯುವುದು..! ಈ 5 ಕ್ರಮಗಳನ್ನು ಪಾಲಿಸಿ..

​ಸೂರ್ಯ ವಶೀಕರಣ ಮಂತ್ರ

" ಓಂ ನಮೋ ಭಗವತೇ ಶ್ರೀ-ಸೂರ್ಯ ಹ್ರೀಂ ಸಹರಾ ಕಿರಣಾಯ ಐಂ

ಅತುಲ ಬಲ ಪರಾಕ್ರಮೇ ನವ ಗ್ರಹಾದಶ ದಿಕ್ ಪಾಲ ಲಕ್ಷ್ಮೀ ದೇವವೇ

ಧರ್ಮ ಕರ್ಮ ಸಾಹಿತ್ಯ ಅಮುಕಾ ನಾಥೆ ನಾಥೌ, ಮೋಹಯ್ ಮೋಹೌ ಅಕೌ ಕುರು

ವಾಶ್ ಕುರು ಕುರು ಸ್ವಾಹಾ"

ಚಾಣಕ್ಯನ ಪ್ರಕಾರ ಕೊರೊನಾ ನಿಯಂತ್ರಿಸುವುದು ಹೇಗೆ..? ಇಲ್ಲಿದೆ ಸೂಕ್ತ ಪರಿಹಾರ...

ಈ ಮಂತ್ರವನ್ನು ಜಪಿಸುವುದರಿಂದ ಪ್ರೀತಿಯ ಸಂಬಂಧ ಸುಧಾರಿಸುವುದು. ವೈವಾಹಿಕ ಸಂಬಂಧವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಸ್ನಾನ ಮಾಡಿದ ನಂತರ 108 ಬಾರಿ ಜಪಿಸಬೇಕು. ಬೆಲ್ಲದೊಂದಿಗೆ ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು.

​ಸಂತಾನ ಮಂತ್ರ

" ಓಂ ಭಾಸ್ಕರಾಯೇ ಪುತ್ರಂ ದೇಹಿ ಮಹತೇಜಸ್ ಧೀಮಹಿ ತನಃ ಸೂರ್ಯ ಪ್ರಚೋದಯಾತ್"

ಮಕ್ಕಳನ್ನುಹೊಂದಲು ಬಯಸುವ ದಂಪತಿಗಳು ಈ ಮಂತ್ರವನ್ನು ಜಪಿಸಬೇಕು. ಅನಂತ ಬೆಳಕು ಮತ್ತು ಶಕ್ತಿಯನ್ನು ಹೊಂದಿರುವ ಸೂರ್ಯ ದೇವನೇ ಸಂತಾನ ಭಾಗ್ಯ ಪಡೆಯಲು ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುವ ಪ್ರಾರ್ಥನೆಯಾಗಿದೆ.

ಈ 4 ಪುರುಷರು ಸ್ತ್ರೀಯರ ಸಹವಾಸ ಮಾಡಬಾರದು ಎನ್ನುತ್ತಾನೆ ಚಾಣಕ್ಯ..! ಪುರುಷರೇ ಎಚ್ಚರ..

​ಶತ್ರು ನಾಶ ಮಂತ್ರ

" ಶತ್ರು ನಶ್ಯ ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ"

ದೊಡ್ಡ ಶಕ್ತಿಯ ಸೂರ್ಯ ದೇವನೆ ಶತ್ರುವನ್ನು ಜಯಿಸಲು ಶಕ್ತಿ ನೀಡು ಎಂದು ಕೇಳಿಕೊಳ್ಳುವ ಮಾರ್ಗವಾಗಿದೆ.

ಹಣ ಕಳೆದುಕೊಳ್ಳುವುದು ಶುಭವೋ..? ಅಶುಭವೋ..? ಜಾನಪದ ನಂಬಿಕೆಯೇ ಉತ್ತರ..!

​ರೋಗ ನಿವಾರಣಾ ಮಂತ್ರ

"ಓಂ ಗ್ರುನಿಹ್ ಸೂರ್ಯ ಆದಿತ್ಯ"

ಉತ್ತಮ ಖ್ಯಾತಿ, ಉತ್ತಮ ದೃಷ್ಟಿ ಮತ್ತು ರೋಗಗಳ ಪರಿಹಾರಕ್ಕೆ ಈ ಮಂತ್ರವನ್ನು ಪ್ರತಿ ದಿನ 108 ಬಾರಿ ಪಠಿಸಬೇಕು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಸಂಪೂರ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ