ಆ್ಯಪ್ನಗರ

ಪೂಜೆಯಲ್ಲಿ ಕರ್ಪೂರವನ್ನು ಬಳಸಲು ಕಾರಣವೇನು..? ಇಲ್ಲಿದೆ ಕರ್ಪೂರದ ಪ್ರಯೋಜನ

ಹಿಂದೂ ಧರ್ಮದಲ್ಲಿ ದೇವರ ಪೂಜೆ ಮಾಡುವಾಗ, ಆರತಿ ಬೆಳಗುವಾಗ ಕರ್ಪೂರವನ್ನೇ ಯಾಕೆ ಉಪಯೋಗಿಸುತ್ತಾರೆ ಗೊತ್ತಾ..? ಕರ್ಪೂರ ಮನೆಯಲ್ಲಿ ಉಪಯೋಗಿಸುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ..? ಇಲ್ಲಿದೆ ನೋಡಿ ಮನೆಯಲ್ಲಿ ಕರ್ಪೂರ ಬಳಸಲು ಕಾರಣ.

TNN & Agencies 25 Jun 2020, 3:03 pm
ಹಲವಾರು ಆಚರಣೆ ಹಾಗೂ ಸಂಪ್ರದಾಯಗಳಿಂದ ಕೂಡಿದ ಪವಿತ್ರ ಧರ್ಮ ಹಿಂದೂ ಧರ್ಮ. ಈ ಧರ್ಮದಲ್ಲಿ ಆಚರಿಸಲಾಗುವ ಪ್ರತಿಯೊಂದು ಆಚರಣೆಯೂ ಕೂಡ ತಾರ್ಕಿಕ ಅಂಶವನ್ನು ಒಳಗೊಂಡಿದೆ. ಅದರೆ ಕೆಲವರಿಗೆ ಈ ಆಚರಣೆಗಳನ್ನು ಯಾಕೆ ಮಾಡಲಾಗತ್ತದೆ ಎನ್ನುವುದರ ಅರಿವಿರುವುದಿಲ್ಲ. ನಮ್ಮ ಸಂಪ್ರದಾಯವಿದು, ನಮ್ಮ ಪೂರ್ವಜರು ನಡೆದು ಬಂದ ದಾರಿಯಿದು ಎಂದು ಅದನ್ನು ರೂಢಿಸಿಕೊಂಡು ಬರುತ್ತಾರೆ. ಸಾಂಪ್ರದಾಯಿಕ ಅಂಶಗಳಲ್ಲಿ ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಆರತಿ ಸಮಯದಲ್ಲಿ ಕರ್ಪೂರವನ್ನು ಬೆಳೆಗಿಸುವುದು ಕೂಡ ಒಂದಾಗಿದೆ.
Vijaya Karnataka Web Camphor
ಕರ್ಪೂರ


ಜಪಮಾಲೆ ಧರಿಸುವುದರ ಪ್ರಯೋಜನವೇನು..? ಯಾವೆಲ್ಲಾ ವಿವಿಧ ಜಪಮಾಲೆಗಳಿವೆ ನೋಡಿ

ಧಾರ್ಮಿಕ ಆಚರಣೆಯಲ್ಲಿ ಕರ್ಪೂರ ಬಳಸುವುದರ ಕಾರಣ


ಪ್ರತಿನಿತ್ಯ ಧ್ಯಾನ ಮಾಡಿದರೆ ಏನಾಗುತ್ತೆ ಗೊತ್ತಾ..? ಇಲ್ಲಿದೆ 10 ಧ್ಯಾನ ಮಂತ್ರಗಳು

ಪೂಜೆಯ ವೇಳೆ ಅಥವಾ ಆರತಿ ಬೆಳಗುವ ಸಮಯದಲ್ಲಿ ಕರ್ಪೂರವನ್ನು ಯಾಕೆ ಉಪಯೋಗಿಸಲಾಗುತ್ತದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಕರ್ಪೂರ ದಿಂದ ಆರತಿ ಬೆಳಗುವುದು ಕೂಡ ಒಂದು ಸಂಪ್ರದಾಯವಾಗಿದ್ದು, ಇದನ್ನು ಯುಗಯುಗಗಳಿಂದಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಹಾಗಾದರೆ ಕರ್ಪೂರವನ್ನು ಪೂಜೆಯಲ್ಲಿ ಬಳಸುವುದಾರೂ ಯಾಕೆ..? ಇದರ ತಾರ್ಕಿಕ ಹಾಗೂ ವೈಜ್ಞಾನಿಕ ಅಂಶಗಳು ಹೀಗಿದೆ.

ಕರ್ಪೂರ ಬೆಳಗಿಸುವುದರ ಮಹತ್ವ:
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಯಾವುದಾದರೊಬ್ಬ ವ್ಯಕ್ತಿ ಪಿತೃ ದೋಷ ಮತ್ತು ದೇವ ದೋಷ ದಿಂದ ಬಳಲುತ್ತಿದ್ದರೆ ಅಥವಾ ಈ ಎರಡು ದೋಷಗಳಲ್ಲಿ ಯಾವುದಾದರು ಒಂದು ದೋಷದಿಂದಲಾದರೂ ಬಳಲುತ್ತಿದ್ದರೆ ಅವರ ಮನೆಯಲ್ಲಿ ಕರ್ಪೂರವನ್ನು ಬೆಳಗಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಕರ್ಪೂರವನ್ನು ಹಚ್ಚಿದಾಗ ಅದರಿಂದ ಹೊರಹೊಮ್ಮಿದ ಜ್ವಾಲೆಯನ್ನು ಶಿವನ ಮೂರನೇ ಕಣ್ಣಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.

ನವಗ್ರಹ ಸ್ತೋತ್ರಗಳಾವುವು..? ಇಲ್ಲಿದೆ ನವಗ್ರಹ ಸ್ತೋತ್ರದ ಮಹತ್ವ ಹಾಗೂ ಪ್ರಯೋಜನ

ಕರ್ಪೂರವನ್ನು ಮನೆಯಲ್ಲಿ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಹಾಗೂ ಗುಣಾತ್ಮಕ ಶಕ್ತಿಯು ಆ ಮನೆಯಲ್ಲಿ ನೆಲೆಸುತ್ತದೆ. ಇನ್ನು ವೈಜ್ಞಾನಿಕವಾಗಿ ಕರ್ಪೂರ ಬೆಳಗುವುದರ ಮಹ್ವ ಹೇಳಬೇಕೆಂದರೆ, ಇದು ನಮ್ಮ ಸುತ್ತಮುತ್ತಲಿನಲ್ಲಿನ ಬ್ಯಾಕ್ಟೇರಿಯಾಗಳನ್ನು ನಾಶಗೊಳಿಸುತ್ತದೆ. ಹೋಮ, ಹವನ ಮತ್ತು ಆರತಿಯನ್ನು ಮನೆಯಲ್ಲಿ ಬೆಳಗುವುದರಿಂದ ನಮ್ಮ ಸುತ್ತಮುತ್ತಲಿನ ಪ್ರದೇಶವು ಸುಗಂಧಭರಿತವಾಗಿರುತ್ತದೆ. ಮತ್ತು ಸಾಕಷ್ಟು ರೋಗವನ್ನು ಗುಣಪಡಿಸುವ ಗುಣಗಳನ್ನು ಕೂಡ ಇದು ಹೊಂದಿದೆ. ಕರ್ಪೂರವು ಬೆಳಗುವುದರಿಂದ ಮಾನವನ ಅಹಂಕಾರ ಮರೆಯಾಗುತ್ತದೆ ಎನ್ನಲಾಗಿದೆ. ಕರ್ಪೂರ ಬೆಳಗುವುದರಿಂದ ಮನೆಯಲ್ಲಿ ಸಿರಿ, ಸಂಪತ್ತು ಮತ್ತು ಸಂತೋಷ ನೆಲೆಯಾಗುತ್ತದೆ ಎನ್ನುವ ನಂಬಿಕೆಯಿದೆ.

ಇಷ್ಟಾರ್ಥ ಸಿದ್ಧಿಗೆ ಶುಕ್ರವಾರದಂದು ವೈಭವ ಲಕ್ಷ್ಮಿ ಪೂಜೆ..ಮಾಡುವುದು ಹೇಗೆ..?

ಕರ್ಪೂರದ ಉಪಯೋಗ


ಅರಳಿ ಮರವನ್ನು ಪೂಜಿಸಿದರೆ ಲಾಭವೇನು ಗೊತ್ತಾ..? ಇದನ್ನು ಪೂಜಿಸುವುದು ಹೇಗೆ..?

ಕರ್ಪೂರ ಬೆಳಗಿಸುವುದರ ಧಾರ್ಮಿಕ ಪ್ರಯೋಜನ:
1) ನಕಾರಾತ್ಮಕ ಶಕ್ತಿಯು ದೂರಾಗುತ್ತದೆ.
2) ಮನೆಯಲ್ಲಿ ಗುಣಾತ್ಮಕ ಶಕ್ತಿಗಳ ನೆಲೆಯಾಗುತ್ತದೆ.
3) ಕರ್ಪೂರದಿಂದ ಹೊರಹೊಮ್ಮುವ ಬೆಳಕಿನಿಂದ ಹಾಗೂ ಸುಗಂಧದಿಂದ ದೇವರು ಪ್ರಸನ್ನಗೊಳ್ಳುತ್ತಾನೆ.
4) ದೇವರನ್ನು ಒಲಿಸಿಕೊಳ್ಳು ಇದ ಸರಳ ಉಪಾಯವಾಗಿದೆ.
5) ಕರ್ಪೂರದ ಬೆಳಕು ಚೈತನ್ಯವನ್ನು ತರುತ್ತದೆ.
6) ದೇವರ ಪೂಜೆಯಲ್ಲಿ ಬಳಸುವ ಸಾಮಾಗ್ರಿಗಳಲ್ಲಿ ಕರ್ಪೂರ ಕೂಡ ಒಂದಾಗಿದೆ.
7) ಕರ್ಪೂರವು ಉರಿದಂತೆ ನಮ್ಮ ಅಹಂಕಾರವೂ ಕೂಡ ಉರಿದು ನಾಶವಾಗುವುದು.
8) ಸದ್ಗುಣ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ.
9) ವಾಸ್ತು ದೋಷವಿರುವ ಕೋಣೆಯಲ್ಲಿ ಕರ್ಪೂರವನ್ನು ಬೆಳಗಿಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.
10) ಕರ್ಪೂರ ಬೆಳಗಿದರೆ ಅಶ್ವಮೇಧ ಯಾಗದ ಫಲ ಲಭ್ಯವಾಗುತ್ತದೆ.

ಗುಪ್ತ ನವರಾತ್ರಿಯಂದು ಪೂಜೆ ಹೇಗಿರಬೇಕು..? ಮನೆಗೆ ಈ ವಸ್ತುಗಳನ್ನು ತಪ್ಪದೇ ತನ್ನಿ

ಕರ್ಪೂರದ ವೈಜ್ಞಾನಿಕ ಪ್ರಯೋಜನ:
1) ಚರ್ಮದ ಸಮಸ್ಯೆಯನ್ನು ದೂರಾಗಿಸುತ್ತದೆ.
2) ಇರುವೆಗಳನ್ನು, ತಿಗಣೆಗಳನ್ನು ಸೇರಿದಂತೆ ಇನ್ನಿತರ ಬ್ಯಾಕ್ಟೇರಿಯಾಗಳನ್ನು ದೂರಾಗಿಸುತ್ತದೆ.
3)ಕರ್ಪೂರದ ಎಣ್ಣೆ ಕೂದಲುದುರವ ಸಮಸ್ಯೆಯನ್ನು, ತಲೆಹೊಟ್ಟಿನ ಸಮಸ್ಯೆಯನ್ನೂ ನಿವಾರಿಸುತ್ತದೆ.
4) ಚರ್ಮದ ಮೇಲಿನ ಕಲೆಯನ್ನು ತೆಗೆದು ಹಾಕಲು ಉಪಕಾರಿ.
5) ಮಕ್ಕಳ ಶೀತದ ಸಮಸ್ಯೆಯನ್ನು ನಿವಾರಿಸುತ್ತದೆ.

ದೇವರನ್ನು ಯಾವ ದಿಕ್ಕಿನಲ್ಲಿಟ್ಟು ಪೂಜಿಸಬೇಕು ಗೊತ್ತಾ..? ದಿಕ್ಕು ತಪ್ಪಿದ್ದರೆ ಇಲ್ಲಿದೆ ಪರಿಹಾರ

ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಆಚರಣೆಗೂ, ಪ್ರತಿಯೊಂದು ಸಂಪ್ರದಾಯಕ್ಕೂ ತನ್ನದೇ ಆದ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಪೂಜೆಯ ವೇಳೆ ಬಳಸುವ ಕರ್ಪೂರವು ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಪರಿಣಾಮಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ