ಆ್ಯಪ್ನಗರ

ಹೋಮ ಮಾಡುವುದರಿಂದ ಯಾವೆಲ್ಲಾ ಸಮಸ್ಯೆಗಳು ದೂರಾಗುತ್ತದೆ ಗೊತ್ತಾ..?

ಹೋಮ ಮಾಡುವುದರಿಂದ ಆರೊಗ್ಯದ ಸಮಸ್ಯೆಗಳನ್ನು ನಿವಾರಿಸಕೊಳ್ಳಬಹುದಂತೆ. ಇದು ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಹೋಮ ಮಾಡುವುದರಿಂದ ಯಾವೆಲ್ಲಾ ಆರೋಗ್ಯದ ಸಮಸ್ಯೆಗಳು ದೂರಾಗುತ್ತದೆ ನೋಡಿ:

Vijaya Karnataka Web 27 May 2020, 4:50 pm
ಹಿಂದೂ ಧರ್ಮದಲ್ಲಿ ಹೋಮ ಹವನಾದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರತಿ ಶುಭ ಕಾರ್ಯಕ್ರಮಗಳಲ್ಲೂ ಹೋಮ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಹೋಮವನ್ನು ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಎಂದು ಹೇಳಲಾಗಿದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಹೋಮ ಮಾಡುವುದರಿಂದ ಪರಿಸರವು ಕೂಡ ಶುದ್ಧಿಯಾಗುತ್ತದೆಯಂತೆ. ಹೋಮ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯು ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ. ಹೋಮ ಮಾಡುವುದರಿಂದಾಗುವ ಪ್ರಯೋಜನಗಳಾವುವು ಗೊತ್ತಾ..?
Vijaya Karnataka Web here is a various benefits of homa
ಹೋಮ ಮಾಡುವುದರಿಂದ ಯಾವೆಲ್ಲಾ ಸಮಸ್ಯೆಗಳು ದೂರಾಗುತ್ತದೆ ಗೊತ್ತಾ..?


​ರೋಗದಿಂದ ಮುಕ್ತಗೊಳಿಸುತ್ತದೆ

ಹೋಮ ಮಾಡುವುದರಿಂದ ಯಾವುದೇ ರೀತಿಯ ಮಾರಕ ಮತ್ತು ಅಪಾಯಕಾರಿ ರೋಗವನ್ನು ತೊಡೆದು ಹಾಕಬಹುದಾಗಿದೆ. ಹೋಮದ ಸಮಯದಲ್ಲಿ ಆ ಹೊಗೆಯನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ. ಹೋಮದ ಸಮಯದಲ್ಲಿ ಹೊಗೆ ದೇಹದೊಳಗೆ ಹೋಗಿ ಟೈಫಾಯ್ಡ್‌ನಂತಹ ತೀವ್ರ ಮತ್ತು ಮಾರಣಾಂತಿಕ ಕಾಯಿಲೆಯನ್ನು ತರುವ ಬ್ಯಾಕ್ಟೇರಿಯಾಗಳನ್ನು ತೆಗೆದು ಹಾಕುತ್ತದೆ. ಇದಲ್ಲದೇ ಸಂಪೂರ್ಣ ದೇಹವು ಶುದ್ಧವಾಗುತ್ತದೆ. ಆದರೆ ಮೆದುಳು, ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಯಿರುವವರು ಹೋಮದಿಂದ ದೂರವಿರಬೇಕು.

ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ

ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ನೆಲೆಯಾಗಿದ್ದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಆ ಮನೆಯಲ್ಲಿ ಹೋಮವನ್ನು ಮಾಡಬೇಕು. ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ. ಹೋಮದಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗಿ ಗುಣಾತ್ಮಕ ಶಕ್ತಿಯು ನೆಲೆಯಾಗುತ್ತದೆ.

​ಸೂಕ್ಷ್ಮಜೀವಿಗಳ ನಾಶ

ಯಜ್ಞದ ಸಮಯದಲ್ಲಿ ಹೋಮಕ್ಕೆ ಅರ್ಪಿಸುವ ವಸ್ತುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹೋಮದ ಸಮಯದಲ್ಲಿ ವಸ್ತುಗಳನ್ನು ಹೋಮ ಕುಂಡಕ್ಕೆ ಅರ್ಪಿಸುವುದರಿಂದ ಚಿಕ್ಕ ವೈರಸ್‌ಗಳು ನಾಶವಾಗುತ್ತದೆ. ವಾತಾವರಣವನ್ನು ಶುದ್ಧೀಕರಿಸುತ್ತದೆ. ಹೀಗೆ ಶುದ್ಧವಾದ ವಾತಾವರಣದಲ್ಲಿ ಯಾವ ವೈರಸ್‌ಗಳು ಇರಲು ಸಾಧ್ಯವಿಲ್ಲ ಎನ್ನುವುದು ನಂಬಿಕೆಯಾಗಿದೆ.

​ಉತ್ತಮ ಆರೋಗ್ಯಕ್ಕೆ ಸಹಕಾರಿ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಯಾವುದೇ ಔಷಧಿಗಳನ್ನು ತೆಗೆದುಕೊಂಡರು ಗುಣಮುಖಗೊಳ್ಳದ ರೋಗಿಗಳಿಗೆ ಹೋಮದ ಹೊಗೆಯನ್ನು ನೀಡುತ್ತಾರೆ. ಇದು ಅವರ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಮತ್ತು ಬಹುಬೇಗ ಅನಾರೋಗ್ಯದಿಂದ ಹೊರಬರುವಂತೆ ಮಾಡುತ್ತದೆ ಎನ್ನಲಾಗಿದೆ. ಆದರೆ ಈ ಪ್ರಕ್ರಿಯೆಯು ದೇಹದಲ್ಲಿ ಯಾವ ಅಂಶಗಳ ಕೊರತೆಯಿದೆ ಮತ್ತು ಅದಕ್ಕೆ ಯಾವ ಔಷಧಿ ಸೂಕ್ತ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಬ್ರಾಹ್ಮಿ, ಗುಗ್ಗುಲು, ನಾಗಕೇಸರ, ಚಂದನ, ಕರ್ಪೂರ, ಅಗರ ಈ ರೀತಿಯ ವಸ್ತುಗಳನ್ನು ಅವರ ಅನಾರೋಗ್ಯಕ್ಕೆ ಕಾರಣವೇನೆಂಬೂದನ್ನು ತಿಳಿದು ಅದನ್ನು ತುಪ್ಪ ಮತ್ತು ಸಕ್ಕರೆಯಲ್ಲಿ ಬೆರೆಸಿ ಹೋಮಕ್ಕೆ ಅರ್ಪಿಸಲಾಗುತ್ತದೆ.

​ದುಷ್ಟ ಗ್ರಹಗಳ ಪ್ರಭಾವವನ್ನು ತೊಡೆದು ಹಾಕುತ್ತದೆ

ಆಗಾಗ ಜಾತಕದಲ್ಲಿ ಕಂಡುಬರುವ ಗ್ರಹಗಳ ಚಲನೆಯು ವ್ಯಕ್ತಿಯ ಜೀವನದ ಮೇಲೆ, ಆತನ ದಿನನಿತ್ಯದ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇಂತಹ ಸಮಸ್ಯೆಗಳನ್ನು ಅಂದರೆ ಗ್ರಹಗತಿಗಳಿಂದ ಉಂಟಾಗುವ ಸಮಸ್ಯೆಗಳನ್ನು ಹೋಮದಿಂದ ನಿವಾರಿಸಿಕೊಳ್ಳಬಹುದು.

​ಮನಸ್ಸಿನ ಗೊಂದಲವನ್ನು ನಿವಾರಿಸುತ್ತದೆ

ವ್ಯಕ್ತಿಯು ಹೋಮ - ಹವನಾದಿಗಳ ಮೂಲಕ ಮಾನಸಿಕ ಶಾಂತಿಯನ್ನು ಪಡೆಯುತ್ತಾನೆ ಮತ್ತು ಅದು ಆ ವ್ಯಕ್ತಿಯ ಮನಸ್ಸಿನಲ್ಲಿ ಧಾರ್ಮಿಕ ನಂಬಿಕೆಯನ್ನು ಬಲಪಡಿಸುತ್ತದೆ. ಸಂತೋಷಕರ ಜೀವನವನ್ನು ತಮ್ಮದಾಗಿಸಿಕೊಳ್ಳಲು ಹೋಮವನ್ನು ಮಾಡಬೇಕು. ಹೋಮ ಮಾಡುವುದರಿಂದ ಮನೆಯಲ್ಲಿರುವ ಕುಟುಂಬದ ಸದಸ್ಯರಲ್ಲಿ ಮಾನಸಿಕ ಶಾಂತಿಯು ನೆಲೆಯಾಗಲು ಸಹಕಾರಿಯಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ