ಆ್ಯಪ್ನಗರ

ಮನೆಯಿಂದ ಹೊರಡುವಾಗ ಹೀಗೆ ಮಾಡಿದರೆ ಲಾಭ..! ಲಕ್ಷ್ಮಿಯನ್ನು ಒಲಿಸಿಕೊಳ್ಳೋದು ಹೇಗೆ..?

ತಾಯಿ ಲಕ್ಷ್ಮಿಯ ಅಸಮಾಧಾನವನ್ನು ತೆಗೆದುಹಾಕಲು ಇಂದು ನಾವು ನಿಮಗೆ ಕೆಲವು ವಿಶೇಷ ಕ್ರಮಗಳನ್ನು ಹೇಳುತ್ತಿದ್ದೇವೆ… ಇವುಗಳನ್ನು ಅನುಸರಿಸಿದರೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಲಕ್ಷ್ಮಿಯನ್ನು ಸಂತೋಷಗೊಳಿಸುವುದು ಹೇಗೆ..? ಶುಕ್ರವಾರದಂದು ಏನು ಮಾಡಬೇಕು.? ಪೌರ್ಣಮಿಯಂದು ಲಕ್ಷ್ಮಿಯನ್ನು ಹೇಗೆ ಪೂಜಿಸಬೇಕು..?

Vijaya Karnataka Web 18 Mar 2021, 6:46 pm
ನಮ್ಮೆಲ್ಲರ ಜೀವನದ ಒಂದಲ್ಲ ಒಂದು ಹಂತದಲ್ಲಿ ನಮ್ಮ ಕುಟುಂಬದಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಕುಟುಂಬದ ಜನರು ಪರಸ್ಪರ ಹೊಂದಾಣಿಕೆ ಹಾಳಾಗುತ್ತದೆ. ಪ್ರತಿಯೊಬ್ಬರೂ ಎಲ್ಲದರ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಮತ್ತು ಎಲ್ಲಾ ಜನರು ಮಾನಸಿಕ ಒತ್ತಡದಿಂದ ಸುತ್ತುವರೆದಿರುತ್ತಾರೆ. ವಾಸ್ತುವಿನ ಕೆಲವು ದೋಷದಿಂದಾಗಿ ಇದು ಸಂಭವಿಸಬಹುದು. ಅದೇ ಸಮಯದಲ್ಲಿ, ಲಕ್ಷ್ಮಿ ದೇವಿ ನಿಮ್ಮ ಮೇಲೆ ಕೋಪಗೊಂಡರೆ, ನಿಮ್ಮ ಕುಟುಂಬದಿಂದ ಸಂತೋಷ ಮತ್ತು ಶಾಂತಿ ಹೊರಬರುತ್ತದೆ ಎಂದು ಸಹ ನಂಬಲಾಗಿದೆ. ತಾಯಿ ಲಕ್ಷ್ಮಿಯ ಅಸಮಾಧಾನವನ್ನು ತೆಗೆದುಹಾಕಲು ಇಂದು ನಾವು ನಿಮಗೆ ಕೆಲವು ವಿಶೇಷ ಕ್ರಮಗಳನ್ನು ಹೇಳುತ್ತಿದ್ದೇವೆ… ಇವುಗಳನ್ನು ಅನುಸರಿಸಿದರೆ ಲಕ್ಷ್ಮಿ ದೇವಿಗೆ ನಿಮ್ಮ ಮೇಲಿದ್ದ ಅಸಮಾಧಾನವನ್ನು ಕಡಿಮೆ ಮಾಡಬಹುದು.
Vijaya Karnataka Web if you do these things goddess lakshmi will happy on you and you will get money
ಮನೆಯಿಂದ ಹೊರಡುವಾಗ ಹೀಗೆ ಮಾಡಿದರೆ ಲಾಭ..! ಲಕ್ಷ್ಮಿಯನ್ನು ಒಲಿಸಿಕೊಳ್ಳೋದು ಹೇಗೆ..?


​1. ಈಶಾನ್ಯದಲ್ಲಿ ಇವುಗಳನ್ನು ಇಡಿ

ಮನೆಯ ಈಶಾನ್ಯ ದಿಕ್ಕಿನಲ್ಲಿ ತಾಮ್ರದ ಪತ್ರ (ತಾಮ್ರದ ಹಾಳೆ), ಬೆಳ್ಳಿ ಪತ್ರ ಅಥವಾ ಭೋಜ ಪತ್ರದ ಮೇಲೆ ಶ್ರೀಯಂತ್ರವನ್ನು ಇಡಿ. ಈ ಶ್ರೀಯಂತ್ರವನ್ನು ಪ್ರತಿನಿತ್ಯ ಮನೆಯಲ್ಲಿಟ್ಟು ಪೂಜಿಸುವುದರಿಂದ ನಿಮಗೆ ವಿಶೇಷ ಲಾಭವಾಗುತ್ತದೆ ಮತ್ತು ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಸಂತೋಷಗೊಳ್ಳುತ್ತಾಳೆ.

ಸಪ್ತಪದಿಯೆಂದರೆ 7 ಸುತ್ತುಗಳಲ್ಲ, 4 ಸುತ್ತು ಎನ್ನುತ್ತಾರೆ ಈ ಜನ..! ಯಾವ ಸ್ಥಳವಿದು..?

​2. ಇವುಗಳನ್ನು ಮನಯಲ್ಲಿಟ್ಟುಕೊಳ್ಳಿ

ಪೌರಾಣಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ಶಂಖ, ಹಸುವಿನ ಸಗಣಿ, ನೆಲ್ಲಿಕಾಯಿ ಮತ್ತು ಬಿಳಿ ಬಣ್ಣದ ವಸ್ತುಗಳಲ್ಲಿ ವಾಸಿಸುತ್ತಾಳೆ ಎನ್ನುವ ಉಲ್ಲೇಖವಿದೆ. ಯಾವಾಗಲೂ ಅವುಗಳನ್ನು ಪೂಜೆಯಲ್ಲಿ ಬಳಸಿ. ಯಾವಾಗಲೂ ಮನೆಯಲ್ಲಿ ನೆಲ್ಲಿಕಾಯಿಯನ್ನು ಇಟ್ಟುಕೊಳ್ಳಿ. ಇದರಿಂದ ಲಕ್ಷ್ಮಿ ದೇವಿಯು ಸದಾಕಾಲ ನಿಮ್ಮ ಮನೆಯಲ್ಲಿ ವಾಸಿಸುತ್ತಾಳೆ. ಮತ್ತು ಶುಕ್ರವಾರ ಬಿಳಿ ಬಟ್ಟೆಗಳನ್ನು ಧರಿಸಿ ಲಕ್ಷ್ಮಿಯನ್ನು ಪೂಜಿಸಿ.

ಅಬ್ಬಾ.. ಮರೆತೂ ಇಲ್ಲಿ ತುಳಸಿ ನೆಡದಿರಿ..! ಆಹಾ.. ತುಳಸಿ ಸೇವನೆ ಎಷ್ಟು ಪ್ರಯೋಜನಕಾರಿ..

​3. ಮನೆಯಿಂದ ಹೊರಡುವಾಗ ಹೀಗೆ ಮಾಡಿ

ಲಕ್ಷ್ಮಿ ದೇವಿಗೆ ಯಾವಾಗಲೂ ಬಿಳಿ ಬಣ್ಣದ ವಸ್ತುಗಳೆಂದರೆ ಅತ್ಯಂತ ಪ್ರಿಯವೆನ್ನುವುದು ನಮಗೆಲ್ಲಾ ತಿಳಿದಿರುವ ವಿಷಯ. ಆದ್ದರಿಂದ, ಪ್ರಮುಖ ಕೆಲಸಕ್ಕಾಗಿ ಮನೆಯಿಂದ ಹೊರಡುವಾಗ, ಲಕ್ಷ್ಮಿ ದೇವಿಗೆ ಬಿಳಿ ಬರ್ಫಿಯನ್ನು ಅಥವಾ ಮೊಸರನ್ನು ಅರ್ಪಿಸಿ ಹಾಗೂ ನೀವು ಕೂಡ ಸೇವಿಸಿ. ಇದನ್ನು ಮಾಡುವುದರಿಂದ ನೀವು ಹೊರಟ ಕಾರ್ಯಗಳಲ್ಲಿ ಶುಭವಾಗುತ್ತದೆ ಮತ್ತು ಲಾಭವಾಗುತ್ತದೆ.

ಸುಮಂಗಲಿಯ ಕನಸು ಬಿದ್ದರೆ ಸಂಪತ್ತು ಖಚಿತ..! ಈ ವ್ಯಕ್ತಿಗಳ ಕನಸು ಬಿದ್ದರೆ ಏನರ್ಥ..?

​4. ಶುಕ್ರವಾರ ತಪ್ಪದೇ ಹೀಗೆ ಮಾಡಿ

ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತವಾದ ದಿನವಾಗಿದೆ. ಈ ವಿಶೇಷ ದಿನದಂದು, ಮನೆಯ ಪೂಜಾ ಸ್ಥಳದಲ್ಲಿ ಲಕ್ಷ್ಮಿ ದೇವಿ ಫೋಟೋವನ್ನೋ ಅಥವಾ ವಿಗ್ರಹವನ್ನೋ ಇಟ್ಟು, ಹಸುವಿನ ತುಪ್ಪದ ಎರಡು ಮುಖದ ದೀಪವನ್ನು ಬೆಳಗಿಸಿ. ಇದನ್ನು ಮಾಡುವುದರಿಂದ ನಿಮಗೆ ಹಣ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯು ನಿಮ್ಮೊಂದಿಗಿರಲು ಸಂತೋಷ ಪಡುತ್ತಾಳೆ.

ಶನಿ ದೋಷವಿದ್ದರೆ ಮರೆತೂ ಈ ಕೆಲಸಗಳನ್ನು ಮಾಡದಿರಿ..! ನಿಮ್ಮಲ್ಲಿದೆಯೇ ಶನಿ ದೋಷ..?

​5. ಅರಳಿ ಮರಕ್ಕೆ ಇವುಗಳನ್ನು ಅರ್ಪಿಸಿ

ಅರಳಿ ಮರದ ನೆರಳಿನಲ್ಲಿ ನಿಂತು, ನೀರು, ಸಕ್ಕರೆ, ತುಪ್ಪ ಮತ್ತು ಹಾಲನ್ನು ಕಬ್ಬಿಣದ ಪಾತ್ರೆಯಲ್ಲಿ ಬೆರೆಸಿ ಅರಳಿ ಮರದ ಬುಡದಲ್ಲಿ ಇಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಸಂತೋಷಗೊಂಡು ಸಮೃದ್ಧಿಯನ್ನು ತರುತ್ತಾಳೆ ಮತ್ತು ಆಕೆ ನಿಮ್ಮ ಮನೆಯಲ್ಲೇ ವಾಸವಾಗಿರುತ್ತಾಳೆ.

ಹಣವನ್ನು ಉಳಿಸಿ ಎನ್ನುತ್ತಾನೆ ಚಾಣಕ್ಯ..! ಹಣವನ್ನು ಉಳಿಸೋದು ಹೇಗೆ..?

​6. ದೀಪವನ್ನು ಹರಿಯುವ ನೀರಿನಲ್ಲಿ ಬಿಡಿ

ನಿಮ್ಮ ಕೈಯಲ್ಲಿ ಹಣ ನಿಲ್ಲದಿದ್ದರೆ, ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿದ ನಂತರ, ಬಣ್ಣವನ್ನು ಸಿಂಪಡಿಸಿ ಅದರಲ್ಲೂ ಗುಲಾಬಿ ಬಣ್ಣವನ್ನು ಸಿಂಪಡಿಸಿದರೆ ಉತ್ತಮ. ನಂತರ ಬಣ್ಣದ ಮೇಲೆ ಎರಡು ಶುದ್ಧ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ. ಮತ್ತು ಲಕ್ಷ್ಮಿ ದೇವಿಯನ್ನು ಮನಸ್ಸಿನಲ್ಲೇ ಆಹ್ವಾನಿಸಿ. ದೀಪವು ತಣ್ಣಗಾದ ನಂತರ, ಅದನ್ನು ಹರಿಯುವ ನೀರಿನಲ್ಲಿ ಹರಿಯಲು ಬಿಡಿ.

ಸಗಣಿಯ ಗಣೇಶನನ್ನು ಪೂಜಿಸಿದರೆ ಶಾಂತಿ, ಆರೋಗ್ಯ ಪ್ರಾಪ್ತಿ..! ಯಾವ ವಿಗ್ರಹವನ್ನು ಪೂಜಿಸಬೇಕು..?

​7. ಪೌರ್ಣಮಿಯಂದು ಹೀಗೆ ಮಾಡಿ

ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಂಡಿದ್ದಾಳೆ ಎನ್ನುವ ಭಾವನೆ ನಿಮಗೆ ಬಂದರೆ, ನಂತರ ಪ್ರತಿ ತಿಂಗಳ ಪೌರ್ಣಮಿ ದಿನದಂದು ಅಕ್ಕಿ ಮತ್ತು ಆಹಾರವನ್ನು ದಾನ ಮಾಡಿ. ಇದನ್ನು ಮಾಡುವುದರಿಂದ ನೀವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪ್ರಾರಂಭಿಸುತ್ತೀರಿ.

ಇಂದು ಗಣೇಶನಿಗೆ ದುರ್ವಾ ಅರ್ಪಿಸಿದರೆ ಶ್ರೀಮಂತರಾಗೋದು ಗ್ಯಾರೆಂಟಿ..! ಈ ಮಂತ್ರ ಪಠಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ