ಆ್ಯಪ್ನಗರ

ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಬೇಕಾ..? ಈ ಪರಿಹಾರಗಳು ಸಹಕಾರಿಯಾಗಿದೆ..

ಹಣದ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಪರಿಹಾರ ಕ್ರಮಗಳನ್ನು ಮಾಡುವುದರಿಂದ ನೀವು ಲಕ್ಷ್ಮಿ ದೇವಿಯ ಅನುಗ್ರಹದಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಏನು ಮಾಡಬೇಕು..?

Vijaya Karnataka Web 3 Jan 2022, 9:44 am
ನಿಮ್ಮ ಕೈಗೆ ಹಣ ಬಂದ ಕೂಡಲೇ ಖರ್ಚು ಮಾಡುತ್ತಿದ್ದರೆ ಅಥವಾ ಎಷ್ಟೇ ದುಡಿದರೂ ಹಣ ಕೈಯಲ್ಲಿ ಹಣ ನಿಲ್ಲದಿದ್ದರೆ, ಇದರ ಹೊರತಾಗಿ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಕೆಲವು ಕ್ರಮಗಳನ್ನು ಅನುಸರಿಸಬಹುದು. . ನಾವಿಲ್ಲಿ ನಿಮಗೆ ಸಾಲ ಅಥವಾ ಹಣದ ಸಮಸ್ಯೆಯನ್ನು ಹೋಗಲಾಡಿಸಲು ಕೆಲವೊಂದು ಪರಿಹಾರಗಳನ್ನು ನೀಡಲಾಗಿದೆ. ಇದನ್ನು ಮಾಡುವುದರಿಂದ ನೀವು ಲಕ್ಷ್ಮಿ ದೇವಿಯ ಅನುಗ್ರಹದಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಏನು ಮಾಡಬೇಕು..?
Vijaya Karnataka Web if you want to get goddess lakshmi blessing then follow these tips
ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಬೇಕಾ..? ಈ ಪರಿಹಾರಗಳು ಸಹಕಾರಿಯಾಗಿದೆ..


​ದಾನ

ಪ್ರತಿ ತಿಂಗಳು ನಿಮ್ಮ ಗಳಿಕೆಯ ಸ್ವಲ್ಪ ಭಾಗವನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ನಿಮಗೆ ಹಣದ ಸಮಸ್ಯೆ ಇರುವುದಿಲ್ಲ. ಇದರಿಂದಾಗಿ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ವಿಶೇಷ ಅನುಗ್ರಹವನ್ನು ಹೊಂದುತ್ತಾಳೆ ಎಂದು ಹೇಳಲಾಗಿದೆ.

2022 ಪುಷ್ಯ ಮಾಸ: ಪ್ರತಿದಿನ ಈ ಸ್ತೋತ್ರ ಪಠಿಸಿದರೆ ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಳ್ಳುವುದು..!

​ತುಳಸಿ ಪೂಜೆ

ಮನೆಯಲ್ಲಿ ತುಳಸಿ ಗಿಡವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಈ ಗಿಡವಿಲ್ಲದಿದ್ದರೆ ಕಡ್ಡಾಯವಾಗಿ ಇಂದೇ ತಂದು ನೆಡಿ. ಅಲ್ಲದೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಗಿಡಕ್ಕೆ ಪೂಜೆ ಮಾಡಿ ತುಪ್ಪದ ದೀಪವನ್ನು ಹಚ್ಚಿ. ಇದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

ಶಿವ ಪಾರ್ವತಿ ನೆಚ್ಚಿನ ಮಂತ್ರಗಳಾವುವು..? ಈ ಮಂತ್ರಗಳನ್ನು ಪಠಿಸುವುದರ ಪ್ರಯೋಜನವೇನು.?

​ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ

ಪ್ರತಿ ಬುಧವಾರ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ. ಇದರಿಂದಾಗಿ ನಿಮ್ಮ ಮನೆಯ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ ಮತ್ತು ಆರ್ಥಿಕ ಮುಗ್ಗಟ್ಟು ಕೂಡ ದೂರವಾಗುತ್ತದೆ.

ಹಿಂದೂ ಧರ್ಮಈ 3 ವ್ಯಕ್ತಿಗಳೊಂದಿಗೆ ಎಷ್ಟೇ ಎಚ್ಚರಿಕೆಯಿಂದಿದ್ದರೂ ಸಾಲದು ಎನ್ನುತ್ತಾನೆ ಚಾಣಕ್ಯ..!

​ಮುರಿದ ಪಾತ್ರೆಗಳನ್ನು ಬಳಸಬೇಡಿ

ಮನೆಯಲ್ಲಿ ಒಡೆದ ಪಾತ್ರೆಗಳನ್ನು ಇಟ್ಟುಕೊಂಡಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವುದೇ ರೀತಿಯ ಮುರಿದ ಅಥವಾ ತುಂಡಾದ ಪಾತ್ರೆಗಳನ್ನು ಉಪಯೋಗಿಸಿ ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪೂಜಾ ವಿಧಿಗಳು2022 ರ ಮೊದಲ ದಿನದಂದು ಈ ಮಂತ್ರಗಳನ್ನು ಪಠಿಸಿದರೆ ವರ್ಷಪೂರ್ತಿ ಶನಿ ಅನುಗ್ರಹ

​ವಿಷ್ಣುವಿಗೆ ನೀರನ್ನು ಅರ್ಪಿಸಿ

ಪ್ರತಿ ಶುಕ್ರವಾರದಂದು ಭಗವಾನ್ ವಿಷ್ಣುವಿಗೆ ಶಂಖದಿಂದ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿಯೂ ನಿಮಗೆ ವಿಶೇಷ ಕೃಪೆಯನ್ನು ನೀಡುತ್ತಾಳೆ. ಅಲ್ಲದೆ, ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಅದನ್ನು ತಕ್ಷಣ ದೂರಾಗಿಸುತ್ತಾಳೆ.

ಪೂಜಾ ವಿಧಿಗಳು2022 ರ ಮೊದಲ ಅಮಾವಾಸ್ಯೆ: ಹೀಗೆ ಮಾಡಿದರೆ ಕಾಳಸರ್ಪ ದೋಷವೇ ದೂರಾಗುವುದು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ