ಆ್ಯಪ್ನಗರ

ಸ್ವಚ್ಛತೆಯಿಲ್ಲದ ಮನೆ ಅಸಹ್ಯವೆನ್ನುತ್ತಾಳೆ ಲಕ್ಷ್ಮಿ..! ಈ ತಪ್ಪುಗಳು ಆಗದಿರುವುದೇ ಶುಭ

ಶುಕ್ರವಾರವೆಂದರೆ ಅದು ಲಕ್ಷ್ಮಿಯ ದಿನ. ಶುಕ್ರವಾರ ಸಂಜೆ ನಾವು ಈ ತಪ್ಪುಗಳನ್ನು ಮಾಡುವುದರಿಂದ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಶುಕ್ರವಾರ ಸಂಜೆ ನಾವು ಯಾವ ತಪ್ಪುಗಳನ್ನು ಮಾಡಬಾರದು..?

Vijaya Karnataka Web 18 Sep 2020, 12:59 pm
ಲಕ್ಷ್ಮಿ ದೇವಿಯನ್ನು ವಿಶ್ವದಲ್ಲಿ ಧನ, ವೈಭವ ಮತ್ತು ಸಂಪತ್ತಿನ ದೇವತೆಯೆಂದು ಪರಿಗಣಿಸಲಾಗುತ್ತದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಪ್ರತ್ಯೇಕವಾಗಿ ಶುಕ್ರವಾರದಂದು ಪೂಜಿಸುತ್ತೇವೆ. ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಆ ಮನೆಯಲ್ಲಿ ಎಂದಿಗೂ ಸಂತೋಷ ಮತ್ತು ಸಂಪತ್ತಿನ ಕೊರತೆಯಿರದು ಎನ್ನುವ ನಂಬಿಕೆಯಿದೆ. ಆದರೆ ನಮಗೆ ಅರಿವಿಲ್ಲದೆ ಲಕ್ಷ್ಮಿ ಪೂಜೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ಪೂಜೆಯ ಫಲ ನಮಗೆ ದೊರೆಯದು. ಶುಕ್ರವಾರ ಸಂಜೆ ಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡದಿರಿ. ಲಕ್ಷ್ಮಿ ಪೂಜೆಯಲ್ಲಿ ಈ ವಿಷಯಗಳನ್ನು ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಿ.
Vijaya Karnataka Web never do these mistakes during friday evening lakshmi puja
ಸ್ವಚ್ಛತೆಯಿಲ್ಲದ ಮನೆ ಅಸಹ್ಯವೆನ್ನುತ್ತಾಳೆ ಲಕ್ಷ್ಮಿ..! ಈ ತಪ್ಪುಗಳು ಆಗದಿರುವುದೇ ಶುಭ


​ಶುಕ್ರವಾರ ಸಂಜೆ ಈ ತಪ್ಪು ಆಗದಿರಲಿ

ಮನೆಯ ಯಾವುದೇ ಸದಸ್ಯರು ಶುಕ್ರವಾರದಂದು ಸಂಜೆ ಮಾತ್ರವಲ್ಲ, ಇನ್ನಿತರ ದಿನಗಳಲ್ಲೂ ಕೂಡ ಮುಸ್ಸಂಜೆ ವೇಳೆ ಮಲಗಬಾರದು. ಮುಸ್ಸಂಜೆ ಸಮಯವನ್ನು ದೇವರನ್ನು ಪೂಜಿಸುವ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಲಗಿ ನಿದ್ರಿಸುವ ಬದಲು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಮುಸ್ಸಂಜೆ ವೇಳೆ ದೇವಾನು ದೇವತೆಗಳು ಸಕ್ರೀಯಗೊಂಡಿರುತ್ತಾರೆ. ಆದ್ದರಿಂದ ಈ ಸಮಯದಲ್ಲಿ ದೇವರನ್ನು ಪೂಜಿಸುವ ಬದಲು ಮಲಗಿಕೊಂಡಿದ್ದರೆ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯನ್ನು ಪ್ರವೇಶಿಸದೇ ಇರಲಾರದು. ಜೀವನ ಪರ್ಯಂತ ಆ ಮನೆಯ ಸದಸ್ಯರು ಸೋಮಾರಿತನದಿಂದ ಬದುಕಬೇಕಾಗುತ್ತದೆ.

2020 ಅಧಿಕ ಮಾಸ: ನೂತನ ವ್ಯಾಪಾರ, ವ್ಯವಹಾರದಿಂದ ಆರ್ಥಿಕ ಸಮಸ್ಯೆ ಖಂಡಿತ..!

​ಸ್ವಚ್ಛತೆಯಲ್ಲಿ ಗಮನ ಹರಿಸಿ

ಮನೆಯಲ್ಲಿ ಸ್ವಚ್ಛತೆಯನ್ನು ಯಾವಾಗಲು ನೋಡಿಕೊಳ್ಳಬೇಕು. ಮನೆಯು ಸ್ವಚ್ಛವಾಗಿದ್ದಷ್ಟು ದೇವರು ಮನೆಯಲ್ಲಿ ನೆಲೆಸುವರು. ವಿಶೇಷವಾಗಿ ಶುಕ್ರವಾರದಂದು ಸಂಪೂರ್ಣ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯನ್ನು ಶುದ್ಧಗೊಳಿಸಿದ ನಂತರ ಗಂಗಾಜಲವನ್ನು ಮನೆಯಲ್ಲಿ ಸಿಂಪಡಿಸಿ. ಲಕ್ಷ್ಮಿ ವಿಗ್ರಹವನ್ನೋ, ಫೋಟೋವನ್ನೋ ಇಟ್ಟು ಪೂಜಿಸಬೇಕು. ಸ್ವಚ್ಛತೆಯಿಲ್ಲದ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಲಾರಳು ಎನ್ನುವ ನಂಬಿಕೆಯಿದೆ. ಸ್ವಚ್ಛವಾದ ಮನೆ ಮಾತ್ರ ಕಲ್ಯಾಣ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ.

2020 ಅಧಿಕ ಮಾಸ: ಗುರುಬಲಕ್ಕೆ ಪ್ರತೀ ಗುರುವಾರ ಈ ವಸ್ತುಗಳನ್ನು ದಾನ ಮಾಡಿ..!

​ಮಾಂಸಾಹಾರ ಮತ್ತು ಮೀನನ್ನು ಸೇವಿಸದಿರಿ

ಶುಕ್ರವಾರದಂದು ಮಾಂಸಾಹಾರ ಮತ್ತು ಮೀನನ್ನು ಸೇವಿಸುವುದು ಶುಭವಲ್ಲ. ಅಷ್ಟು ಮಾತ್ರವಲ್ಲ, ಮದ್ಯವನ್ನು ಕೂಡ ಈ ದಿನ ಸೇವಿಸದಿರುವುದು ಉತ್ತಮ. ಪ್ರಾಣಿ - ಪಕ್ಷಿಗಳಿಗೆ ಶುಕ್ರವಾರದಂದು ಹಿಂಸೆಯನ್ನು ನೀಡಬಾರದು. ಸಂಜೆ ಸಮಯದಲ್ಲಿ ಯಾವುದೇ ಓರ್ವ ಸನ್ಯಾಸಿ ನಿಮ್ಮ ಮನೆಗೆ ಬಂದಾಗ ಆತನನ್ನು ಖಾಲಿ ಕೈಯಿಂದ ಕಳುಹಿಸಬಾರದು. ಸಂಜೆ ಸನ್ಯಾಸಿಗಳು ದೇವರುಗಳ ರೂಪದಲ್ಲಿ ಮನೆಗೆ ಬರುತ್ತಾರೆನ್ನುವ ನಂಬಿಕೆಯಿದೆ. ಆದ್ದರಿಂದ ಅವರನ್ನು ದಾನ ನೀಡುವ ಮೂಲಕ ನೆಗೆ ಸ್ವಾಗತಿಸಿ.

ಗುರುವಾರ ಪೂಜೆ: ಬಾಳೆ ಗಿಡಕ್ಕೇಕೆ ಪೂಜೆ..? ಪ್ರಯೋಜನ ತಿಳಿದರೆ ಪೂಜಿಸದೇ ಇರಲಾರಿರಿ..!

ಮಹಿಳೆಯರನ್ನು ಅವಮಾನಿಸದಿರಿ

ಋಗ್ವೇದದ ಪ್ರಕಾರ, ಯಾವ ಮನೆಯಲ್ಲಿ ಮಹಿಳೆಯರನ್ನು ನಿಂದಿಸಲಾಗುತ್ತದೆಯೋ, ಅವರಿಗೆ ಅವಮಾನ ಮಾಡುಲಾಗುತ್ತದೆಯೋ ಆ ಮನೆಯಲ್ಲಿ ಎಂದಿಗೂ ಲಕ್ಷ್ಮಿ ದೇವಿ ವಾಸಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಮಹಿಳೆಯರನ್ನು ಆ ಮನೆಯ ಲಕ್ಷ್ಮಿಯೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮನೆಯಲ್ಲಿನ ಮಹಿಳೆಯರ ಬಗ್ಗೆ ಗೌರವದ ಭಾವನೆ ಮತ್ತು ಪ್ರೀತಿಯಿರಬೇಕು. ಮಹಿಳೆಯರನ್ನು ಗೌರವಿಸುವ ಮನೆಯಲ್ಲಿ ಎಂದಿಗೂ ದೇವಾನು ದೇವತೆಗಳು ಸಂತೋಷದಿಂದಿರುತ್ತಾರೆ.

2020 ಅಧಿಕ ಮಾಸ: ಹುಡುಗಿಯರನ್ನು ಮನೆಗೆ ಆಹ್ವಾನಿಸಿದರೆ ಏನಾಗುತ್ತೆ ಗೊತ್ತಾ..?

​ಮನಸ್ಸಿನಲ್ಲಿ ಈ ಆಲೋಚನೆಗಳು ಇರದಿರಲಿ

ಶುಕ್ರವಾರದಂದು ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಹೊಂದಿರಬಾರದು. ಕಳ್ಳತನ ಮಾಡುವಂತಹ, ಜಗಳವಾಡುವಂತಹ ಅಥವಾ ಅಪ್ರಾಮಾಣಿಕ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಬಂದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಲಾರಳು. ಇಂತಹ ಆಲೋಚನೆಗಳಿದ್ದ ಮನೆಯವರ ಮೇಲೆ ಲಕ್ಷ್ಮಿ ದೇವಿಯು ಅತೃಪ್ತ ಭಾವನೆಯನ್ನು ಹೊಂದಿರುತ್ತಾಳೆ.

ಕುಂಭ ರಾಶಿಯವರು ಯಾವ ಲಕ್ಷ್ಮಿ ಮಂತ್ರ ಪಠಿಸಬೇಕು..? ಇದರಿಂದ ಧನಾಗಮನ ಖಂಡಿತ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ