ಆ್ಯಪ್ನಗರ

ಶನಿ ಪ್ರದೋಷದ ಶುಭ ಅವಧಿ ಯಾವಾಗ ಗೊತ್ತಾ? ಇಲ್ಲಿದೆ ಮಾಹಿತಿ..

ಶನಿವಾರದಂದು ಶನಿಮಹಾತ್ಮನಿಗೋಸ್ಕರ ಉಪವಾಸವನ್ನು ಮಾಡುತ್ತಾರೆ. ಶನಿವಾರದಂದು ಪ್ರದೋಷ ಬಂದಾಗ ಆ ದಿನ ಶಿವ ಮತ್ತು ಶನಿ ಇಬ್ಬರನ್ನೂ ಆರಾಧಿಸುವುದರಿಂದ ಹೆಚ್ಚು ಫಲ ಪ್ರಾಪ್ತಿಯಾಗುವುದು.

Vijaya Karnataka Web 7 Mar 2020, 6:48 am
ಪ್ರದೋಷ ಎಂದರೆ 3 ಗಂಟೆಗಳ ಒಂದು ಶುಭ ಅವಧಿಯಾಗಿರುತ್ತದೆ, ಅಂದರೆ ಸೂರ್ಯಾಸ್ತದ 1.5 ಗಂಟೆಗಳ ಮೊದಲು ಮತ್ತು ನಂತರದ ಅವಧಿ. ಇದನ್ನು ತಿಂಗಳಲ್ಲಿ ಎರಡು ಬಾರಿ ಅಂದರೆ, ಪ್ರತಿ ಮಾಸಾರ್ಧದ 13ನೇ ದಿನದಂದು ನಾವು ಗಮನಿಸಬಹುದು. ಈ ದಿನವು ಶಿವ ಮತ್ತು ನಂದಿಯ (ಬಸವ) ಆರಾಧನೆಗೆ ಸೂಕ್ತವೆಂದು ಪರಿಗಣಿಸಲಾಗಿದೆ.
Vijaya Karnataka Web shani pradosha 2020


ಶನಿವಾರದಂದು ಪ್ರದೋಷ ಬಂದಾಗ ಅದನ್ನು ಶನಿ ಪ್ರದೋಷ ಎಂದು ಕರೆಯಲಾಗುತ್ತದೆ. ಶನಿಮಹಾತ್ಮನು ಕರ್ಮಕಾರಕ ಗ್ರಹನಾಗಿದ್ದು, ಶನಿವಾರದಂದು ಆತನ ಪ್ರಭಾವ ಹೆಚ್ಚಾಗಿರುತ್ತದೆ. ಆದ್ದರಿಂದ ಶನಿಪ್ರದೋಷದ ದಿನದಂದು ಅವನನ್ನು ಆರಾಧಿಸಿ, ಶಿವನಿಗೆ ನಿಮ್ಮ ಪ್ರಾರ್ಥನೆ ಸಲ್ಲಿಸುವುದರಿಂದ ನಿಮ್ಮ ಪಾಪ ಮತ್ತು ಕರ್ಮದ ಪರಿಣಾಮಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ.

ಶನಿ ಪ್ರದೋಷ ವ್ರತ ಕೈಗೊಂಡರೆ ಜೀವನದ ಸಕಲ ಕಷ್ಟಗಳು ದೂರವಾಗುವುದು..

ಶನಿ ಪ್ರದೋಷದ ಮಹತ್ವ
ಹಿಂದೂ ಪುರಾಣದ ಪ್ರಕಾರ, ಶನಿವಾರವು ಶನಿಮಹಾತ್ಮ(ಶನಿಗ್ರಹ)ನಿಗೆ ಮೀಸಲಾದ ದಿನವಾಗಿದೆ. ಅವನು ಕರ್ಮಕಾರಕನಾಗಿರುವುದರಿಂದ ನಿಮ್ಮ ಜನ್ಮ ಕುಂಡಲಿಯಲ್ಲಿರುವ ಶನಿಯ ಸ್ಥಾನದ ಆಧಾರದ ಮೇಲೆ ಕರ್ಮ ಮತ್ತು ತೊಂದರೆಗಳಿಗೆ ಅವನನ್ನು ಹೋಲಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶನಿಯು ತರಬಹುದಾದ ದುಷ್ಪರಿಣಾಮಗಳಿಗೆ ಭಯಪಡುತ್ತಾರೆ. ಭಗವಂತನನ್ನು ಸಮಾಧಾನಪಡಿಸಲು ಮತ್ತು ಅಂತಹ ದುಷ್ಪರಿಣಾಮಗಳನ್ನು ತಪ್ಪಿಸಲು ಜನರು ಸಾಮಾನ್ಯವಾಗಿ ಶನಿವಾರದಂದು ಶನಿಮಹಾತ್ಮನಿಗೋಸ್ಕರ ಉಪವಾಸವನ್ನು ಮಾಡುತ್ತಾರೆ. ಶನಿವಾರದಂದು ಪ್ರದೋಷ ಬಂದಾಗ ಆ ದಿನ ಶಿವ ಮತ್ತು ಶನಿ ಇಬ್ಬರನ್ನೂ ಆರಾಧಿಸುವುದರಿಂದ ಹೆಚ್ಚು ಫಲ ಲಭಿಸುತ್ತದೆ.

ಶನಿವಾರದಂದು ಬರುವ ಶನಿಪ್ರದೋಷ ಆಚರಣೆಯ ಮಹತ್ವವೇನು ಗೊತ್ತಾ?

ಶನಿ ಪ್ರದೋಷ ವ್ರತಾಚರಣೆ
ಸಾಮಾನ್ಯವಾಗಿ ಜನರು ಪ್ರದೋಷದ ದಿನದಂದು ಕಟ್ಟುನಿಟ್ಟಾದ ಉಪವಾಸವನ್ನು ತಮ್ಮನ್ನು ತಾವು ತಿನ್ನುವುದು ಮತ್ತು ಕುಡಿಯುವುದರಿಂದ ದೂರವಿದ್ದು ಆಚರಿಸುತ್ತಾರೆ. ಸಂಜೆಯ ವೇಳೆ ಶನಿಮಹಾತ್ಮ (ಶನಿಗ್ರಹ) ಮತ್ತು ಶಿವನಿಗೆ ಪೂಜೆಯನ್ನು ಮಾಡುವ ಮೂಲಕ ಈ ಉಪವಾಸವನ್ನು ಕೊನೆಗೊಳಿಸುತ್ತಾರೆ. ಸೂರ್ಯಾಸ್ತದ 1.5 ಗಂಟೆಗಳ ಮೊದಲು ಮತ್ತು 1.5 ಗಂಟೆಗಳ ನಂತರದ ಸಮಯ, ಪ್ರದೋಷದ ಪೂಜೆಯನ್ನು ಮಾಡಲು ಸೂಕ್ತ. ನಿರ್ದಿಷ್ಟ ಸಂದರ್ಭಗಳಲ್ಲಿ, ಹಾಲು ಮತ್ತು ಹಣ್ಣುಗಳ ಸೇವನೆಯೊಂದಿಗೆ ಭಾಗಶಃ ಉಪವಾಸವನ್ನೂ ಸಹ ಆಚರಿಸಬಹುದು.

ಭಗಂತನಾದ ಶಿವನು ಶನಿಯ ದೈವ. ಶಿವನು ರೂಪಾಂತರ ಮತ್ತು ಲಯದ ಅಧಿಪತಿ, ಹಾಗೆಯೇ ಶನಿಯು ನ್ಯಾಯದ ಪ್ರಭುವಾಗಿದ್ದಾನೆ. ಶನಿಯು, ತಪ್ಪು ಮಾರ್ಗದಿಂದ ಒಬ್ಬ ವ್ಯಕ್ತಿಯು ಪಡೆದ ಖ್ಯಾತಿ, ಅಧಿಕಾರವನ್ನು ನಾಶಪಡಿಸುತ್ತಾನೆ, ಮತ್ತು ಆ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ನಂಬಿಕೆಯನ್ನು ಪುನಃ ಸ್ಥಾಪಿಸಿ, ಉತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾನೆ. ಈ ರೂಪಾಂತರವು ಶಿವನನ್ನು ತಲುಪುವ ಅಂತಿಮ ಮಾರ್ಗವಾಗಿದೆ

ನೀವು ದಾನ ಮಾಡಲು ಬಯಸುವಿರಾದರೆ ಈ ವಸ್ತುಗಳ ಆಯ್ಕೆ ಮಾಡದಿರಿ..!

ಎಲ್ಲಾ ಶಿವಾಲಯಗಳಲ್ಲಿ ಪ್ರದೋಷ ಪೂಜೆಯನ್ನು ವಿವಿಧ ವಸ್ತುಗಳನ್ನು ಬಳಸಿ, ವಿಶೇಷ ಅಭಿಷೇಕದೊಂದಿಗೆ (ಜಲಸಂಚಯನ ಪೂಜೆ) ನೆರೆವೇರಿಸಲಾಗುತ್ತದೆ. ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದ ಪ್ರತಿಯೊಂದು ಅಭಿಷೇಕದ ವಸ್ತುವಿನಲ್ಲೂ ತನ್ನದೇ ಆದ ಉಪಯುಕ್ತ ಗುಣಗಳಿವೆ. ಹಾಲು, ಜೇನುತುಪ್ಪ, ತುಪ್ಪ, ಅರಿಶಿನ, ಗಂಧ, ಗುಲಾಬಿ ಜಲ, ಅಕ್ಕಿ ಹಿಟ್ಟು ಮತ್ತು ಪಂಚಾಮೃತ (5 ವಸ್ತುಗಳ ಮಿಶ್ರಣ) ಗಳು ಅಭಿಷೇಕಕ್ಕೆ ಸಾಮಾನ್ಯವಾಗಿ ಬಳಸುವ ವಸ್ತುಗಳು. ಸಂಜೆಯ ಪೂಜೆಯ ನಂತರ ಪ್ರಸಾದ ಸೇವಿಸಿ ವ್ರತವನ್ನು (ಉಪವಾಸ) ಕೊನೆಗೊಳಿಸಲು ಪ್ರಸಾದವನ್ನು(ದೇವರ ನೈವೆದ್ಯ) ಭಕ್ತರಿಗೆ ವಿತರಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ