ಆ್ಯಪ್ನಗರ

ರಕ್ಷಾ ಬಂಧನ 2022: ರಾಖಿ ಹಬ್ಬದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..!

ಈ ಬಾರಿ ಇಂಗ್ಲಿಷ್‌ ಕ್ಯಾಲೆಂಡರ್‌ ಪ್ರಕಾರ, ಆಗಸ್ಟ್‌ 11 ರ ಗುರುವಾರದಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುವುದು. ರಕ್ಷಾ ಬಂಧನ ಹಬ್ಬದ ದಿನದಂದು ನಾವು ಯಾವ ಕೆಲಸವನ್ನು ಮಾಡಬೇಕು..? ಯಾವ ಕೆಲಸವನ್ನು ಮಾಡಬಾರದು ಗೊತ್ತೇ..?

Vijaya Karnataka Web 11 Aug 2022, 1:22 pm
ರಕ್ಷಾ ಬಂಧನವು ಸಹೋದರ ಸಹೋದರಿಯರ ಹಬ್ಬವಾಗಿದೆ. ಈ ದಿನ ಸಹೋದರಿ ತನ್ನ ಸಹೋದರನ ಕೈ ಮಣಿಕಟ್ಟಿಗೆ ರಾಖಿಯನ್ನು ಕಟ್ಟುತ್ತಾಳೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಬಾರಿ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ 11 ರ ಗುರುವಾರದಂದು ಆಚರಿಸಲಾಗುವುದು. ರಕ್ಷಾ ಬಂಧನ ಹಬ್ಬದ ದಿನದಂದು ನಾವು ಯಾವ ಕೆಲಸ ಮಾಡಬೇಕು..? ಯಾವ ಕೆಲಸ ಮಾಡಬಾರದು ಎಂಬುದನ್ನು ನೋಡೋಣ..
Vijaya Karnataka Web raksha bandhan 2022 know the dos and donts on this day
ರಕ್ಷಾ ಬಂಧನ 2022: ರಾಖಿ ಹಬ್ಬದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..!


​ರಕ್ಷಾ ಬಂಧನ ಹಬ್ಬ

ಶ್ರಾವಣ ಮಾಸದ ಹುಣ್ಣಿಮೆಯ ಪ್ರಮುಖ ಹಬ್ಬವೆಂದರೆ ರಕ್ಷಾ ಬಂಧನದ ದಿನ. ಈ ದಿನದಂದು ಸಹೋದರಿಯರು ತಮ್ಮ ಸಹೋದರನಿಗೆ ರಕ್ಷಣೆಯ ದಾರವನ್ನು ಕಟ್ಟುತ್ತಾರೆ. ಇದರೊಂದಿಗೆ ಎಲ್ಲಾ ಹೊಸ ಮತ್ತು ಹಳೆಯ ವಸ್ತುಗಳಿಗೂ ಸಹ ರಾಖಿಯನ್ನು ಕಟ್ಟಬೇಕು. ವಾಹನ, ಟಿವಿ, ಇತ್ಯಾದಿ ವಸ್ತುಗಳಿಗೂ ರಾಖಿಯನ್ನು ಕಟ್ಟಬಹುದು.

ಪೂಜಾ ವಿಧಿಗಳು

ಶ್ರಾವಣ ಪೂರ್ಣಿಮಾ 2022: ಅಣ್ಣ - ತಂಗಿಯ ನಡುವೆ ಪ್ರೀತಿ ಹೆಚ್ಚಾಗಲು ಹೀಗೆ ಮಾಡಿ ಸಾಕು..!

​ಜನೆವು ಬದಲಿಗೆ

ಈ ದಿನ ಉತ್ತರ ಭಾರತದಲ್ಲಿಯೂ ದಾರವನ್ನು ಬದಲಾಯಿಸುವ ಕೆಲಸ ನಡೆಯುತ್ತದೆ, ಇದನ್ನು ಶ್ರಾವಣಿ ಉಪಕರ್ಮ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ಅಬಿತ್ತಮ ಎಂದು ಕರೆಯಲಾಗುತ್ತದೆ.

ಪೂಜಾ ವಿಧಿಗಳು

ರಕ್ಷಾ ಬಂಧನ 2022: ರಾಖಿ ಕಟ್ಟುವ ಮುನ್ನ ಈ 4 ಕೆಲಸಗಳನ್ನು ಮರೆಯದೇ ಮಾಡಿ..!

​ಸ್ನಾನ ದಾನ, ತರ್ಪಣ ಕರ್ಮ

ಇದನ್ನು ಶ್ರಾವಣಿ ಅಥವಾ ಋಷಿ ತರ್ಪಣ ಎಂದೂ ಕರೆಯುತ್ತಾರೆ. ಈ ದಿನ ಪೂರ್ವಜರಿಗೆ ತರ್ಪಣವನ್ನೂ ಅರ್ಪಿಸಲಾಗುತ್ತದೆ. ಸ್ನಾನ ಮತ್ತು ದಾನ: ಈ ಪವಿತ್ರ ದಿನದಂದು ನದಿಯಲ್ಲಿ ಸ್ನಾನವನ್ನು ಸಹ ಮಾಡಲಾಗುತ್ತದೆ. ತೀರ್ಥ ಅವಗಾಹನ, ದಶಾಸನ, ಹೇಮಾದ್ರಿ ಸಂಕಲ್ಪ ಮತ್ತು ತರ್ಪಣ ಇತ್ಯಾದಿಗಳನ್ನು ಶ್ರಾವಣ ಪೂರ್ಣಿಮೆಯಂದು ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ. ಶ್ರಾವಣ ಪೂರ್ಣಿಮೆಯಲ್ಲೂ ದಾನಕ್ಕೆ ಮಹತ್ವವಿದೆ. ಈ ದಿನ ದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ.

ಪೂಜಾ ವಿಧಿಗಳು

ರಕ್ಷಾ ಬಂಧನ 2022: ರಾಖಿ ಕಟ್ಟುವಾಗ ಪೂಜೆ ತಟ್ಟೆಯಲ್ಲಿ ಈ ವಸ್ತುಗಳು ಇರಲೇಬೇಕು..!

​ವ್ರತ

ಈ ದಿನದ ಉಪವಾಸಕ್ಕೂ ಹೆಚ್ಚಿನ ಮಹತ್ವವಿದೆ. ಉತ್ತರ ಮತ್ತು ಮಧ್ಯ ಭಾರತದ ಮಹಿಳೆಯರು ಉಪವಾಸವನ್ನು ಆಚರಿಸುತ್ತಾರೆ ಮತ್ತು ತಮ್ಮ ಪುತ್ರರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಆದ್ದರಿಂದಲೇ ಇದನ್ನು ಉತ್ತರ ಭಾರತದಲ್ಲಿ ಕಜರಿ ಪೂನಂ ಎಂದೂ ಕರೆಯುತ್ತಾರೆ.

ಪೂಜಾ ವಿಧಿಗಳು

ಶ್ರಾವಣ ಮಂಗಳವಾರ: ಸಮಸ್ಯೆಗಳು ನಿಮ್ಮನ್ನು ಬೆಂಬಿಡದೆ ಕಾಡುತ್ತಿದ್ದರೆ ಹನುಮನಿಗೆ

​ಇವರನ್ನು ಪೂಜಿಸಲಾಗುತ್ತದೆ

ಶಿವನನ್ನು, ಪಾರ್ವತಿ ದೇವಿಯನ್ನು, ಶ್ರೀ ಕೃಷ್ಣನನ್ನು, ಹನುಮಂತನನ್ನು, ಚಂದ್ರನನ್ನು, ವಿಷ್ಣುವನ್ನು ಮತ್ತು ತಾಯಿ ಲಕ್ಷ್ಮಿಯನ್ನು ಈ ದಿನ ಪೂಜಿಸಲಾಗುತ್ತದೆ.

ಪೂಜಾ ವಿಧಿಗಳು

ಶ್ರಾವಣ ಮಾಸ 2022: ಜೀವನದಲ್ಲಿ ಬದಲಾವಣೆಯಾಗಬೇಕಾದರೆ ನವಿಲು ಗರಿಯನ್ನು ಹೀಗಿಡಿ..!

​ಈ 5 ಕೆಲಸಗಳನ್ನು ಮಾಡಬೇಡಿ

- ಈ ದಿನ ಸಹೋದರಿಯರಿಗೆ ಯಾವುದೇ ರೀತಿಯಲ್ಲಿ ಕಿರಿಕಿರಿ ಮಾಡಬೇಡಿ.

- ಭದ್ರ ಮತ್ತು ರಾಹು ಕಾಲದಲ್ಲಿ ರಾಖಿ ಕಟ್ಟಬೇಡಿ. ಇದು ಇಬ್ಬರಿಗೂ ಅಶುಭವನ್ನು ತರುತ್ತದೆ.

- ರಾಖಿ ಕಟ್ಟುವಾಗ ಸಹೋದರನ ಮುಖ ದಕ್ಷಿಣ ದಿಕ್ಕಿಗೆ ಇರಬಾರದು.

ಹಬ್ಬಗಳು

ರಕ್ಷಾ ಬಂಧನ 2022: ಈ ಮುಹೂರ್ತದಲ್ಲಿ ರಾಖಿ ಕಟ್ಟಲೇಬೇಡಿ..! ಇಲ್ಲಿದೆ ರಾಖಿ ಶು

- ಸಹೋದರ ಮತ್ತು ಸಹೋದರಿ ಒಬ್ಬರಿಗೊಬ್ಬರು ಟವೆಲ್ ಅಥವಾ ಕರವಸ್ತ್ರವನ್ನು ಉಡುಗೊರೆಯಾಗಿ ನೀಡುತ್ತಾರೆ. ಮೊಣಚಾದ ಅಥವಾ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ.

- ಮುರಿದ ಅಕ್ಷತೆಯಿಂದ ತಿಲಕವನ್ನು ಹಚ್ಚಬೇಡಿ ಮತ್ತು ಕಪ್ಪು ಬಣ್ಣವನ್ನು ಬಳಸಬಾರದು.

ಹಿಂದೂ ಧರ್ಮ

ಮೊಹರಂ 2022: ಪವಿತ್ರ ಮೊಹರಂ ಹಬ್ಬದ ಐತಿಹಾಸಿಕ ಹಿನ್ನೆಲೆಯೇನು ಗೊತ್ತೇ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ