ಆ್ಯಪ್ನಗರ

ಸಂಪತ್ತನ್ನು ಹೆಚ್ಚಿಸಲು ಗೂಬೆಯೇ ಪರಿಹಾರ..! ಗೂಬೆಯ ಮಹತ್ವ ಗೊತ್ತೇ..?

ಗೂಬೆ ನೋಡಲು ಸಾಮಾನ್ಯ ಒಂದು ಪಕ್ಷಿಯಾದರೂ ಅದನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಪೂಜಿಸುವುದರೊಂದಿಗೆ ಗೂಬೆಯನ್ನು ಪೂಜಿಸುವುದರ ಪ್ರಯೋಜನವೇನು ಗೊತ್ತೇ..? ದಾಂಪತ್ಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತೇ ಗೂಬೆ..!

TIMESOFINDIA.COM 19 Nov 2020, 3:08 pm
ಗೂಬೆ ಅಥವಾ ಉಲ್ಲೂ ಎಂದು ಕರೆಯಲ್ಪಡುವ ಪಕ್ಷಿ ಲಕ್ಷ್ಮಿ ದೇವಿಯೊಂದಿಗೆ ಇರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹೌದು, ಈ ಹಕ್ಕಿ ಯಾವಾಗಲೂ ತಾಯಿ ಲಕ್ಷ್ಮಿಯೊಂದಿಗೆ ಇರುತ್ತದೆ. ಈ ಪಕ್ಷಿಯು ಲಕ್ಷ್ಮಿ ದೇವಿಯ ವಾಹನ ಅಥವಾ ಆಕೆಯ ಪ್ರಯಾಣದ ಒಂದು ವಿಧಾನ ಎಂದು ಹಲವಾರು ಹೇಳುತ್ತಾರೆ. ಲಕ್ಷ್ಮಿ ದೇವಿ ಕಮಲದ ಮೇಲೆ ಹೇಗೆ ಆಸೀನಳಾಗಿರುತ್ತಾಳೋ ಹಾಗೇ ಗೂಬೆಯ ಮೇಲೆ ಕೂಡ ಆಸೀನಳಾಗಿ ಸುತ್ತುತ್ತಿರುತ್ತಾಳೆ. ಗೂಬೆ ಲಕ್ಷ್ಮಿ ದೇವಿಯ ಅತ್ಯಂತ ನೆಚ್ಚಿನ ಪಕ್ಷಿ.
Vijaya Karnataka Web Owl
ಗೂಬೆ


ಸರಳ ಶಿವ ಪೂಜೆ ಮಾಡುವುದು ಹೇಗೆ..? ಇಲ್ಲಿದೆ ಸರಳ ಶಿವ ಮಂತ್ರ

ಲಕ್ಷ್ಮಿ ವಾಹನ


2020 ಕಾರ್ತಿಕ ಮಾಸ: ತುಳಸಿ ವಿವಾಹದಿಂದ ಸಂಪತ್ತು, ಆರೋಗ್ಯ ಪ್ರಾಪ್ತಿ..!
ಗೂಬೆಯ ಮಹತ್ವ:
ಗೂಬೆಯನ್ನು ಸ್ಥಿತಿ ಪ್ರಜ್ಞಾ ಎಂದು ಕರೆಯಲಾಗುತ್ತದೆ, ಅಂದರೆ ಅಚಲ ನಿರ್ಧಾರವನ್ನು ಹೊಂದಿರುವುದು ಎಂದರ್ಥ. ಏಕೆಂದರೆ ಅದರ ದೊಡ್ಡ ದುಂಡಗಿನ ಕಣ್ಣುಗಳು ಕೇಂದ್ರೀಕೃತವಾಗಿರುತ್ತವೆ ಮತ್ತು ಚಲಿಸುವುದಿಲ್ಲ. ಆದ್ದರಿಂದ, ಇದು ಏಕಾಗ್ರತೆಯನ್ನು, ಜ್ಞಾನವನ್ನು ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಸಂಪತ್ತಿನ ದೇವತೆಯ ಜೊತೆಯಲ್ಲಿ, ಗೂಬೆ ಸಂಪತ್ತನ್ನು ಗಳಿಸುವ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಮತ್ತೊಂದೆಡೆ, ಗೂಬೆ ಲಕ್ಷ್ಮಿ ದೇವಿಯ ವಿರುದ್ಧವಾದ ಅಲಕ್ಷ್ಮಿಯನ್ನು ಅಂದರೆ ಲಕ್ಷ್ಮಿ ದೇವಿಯ ಸಹೋದರಿಯನ್ನು ಸಹ ಪ್ರತಿನಿಧಿಸುತ್ತದೆ.

ರಾಮನನ್ನು ದೇವನೆನ್ನಲು ಈ ಗುಣಗಳೇ ಕಾರಣ..! ನಿಮ್ಮಲ್ಲಿದೆಯೇ ಈ ಗುಣ..?
ಲಕ್ಷ್ಮಿ ದೇವಿಯು ಬುದ್ಧಿವಂತಿಕೆ, ಅದೃಷ್ಟ, ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸಿದರೆ, ಅಲಕ್ಷ್ಮಿ ದೇವಿಯು ದಾರಿದ್ರ್ಯ, ಬಡತನ, ಕಲಹ, ಜಗಳ, ಹೋರಾಟ, ದುರಾದೃಷ್ಟ ಇತ್ಯಾದಿಗಳನ್ನು ಪ್ರತಿನಿಧಿಸುತ್ತಾಳೆ. ಮತ್ತು ಗೂಬೆಯು ವಾಹನವಾಗಿ ಲಕ್ಷ್ಮಿಯನ್ನು ಕೂರಿಸಿಕೊಂಡಾಗ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತಾಳೆ. ಗೂಬೆಯು ಒಂದು ವೇಳೆ ಅಲಕ್ಷ್ಮಿಯೊಂದಿಗೆ ಪ್ರಯಾಣಿಸಿದರೆ ಅದು ಸಂಪತ್ತನ್ನು ಬುದ್ಧಿವಂತಿಕೆಯಿಂದ ಬಳಸಲು ಎಚ್ಚರ ನೀಡುತ್ತದೆ. ಮತ್ತು ನಿಮ್ಮ ಸಂಪತ್ತು ಎಲ್ಲೋ ಕಳೆದು ಹೋಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.

ಸ್ವಸ್ತಿಕವನ್ನು ಎಲ್ಲಿ ಹಾಕಬೇಕು..? ಪ್ರಯೋಜನ ತಿಳಿದರೆ ಇಂದೇ ಹಾಕುವಿರಿ..!
ಆದ್ದರಿಂದ, ಅನೇಕ ಪ್ರಸಿದ್ಧ ಕಂಪನಿಗಳು ತಮ್ಮ ಲೋಗೋದಲ್ಲಿ ಗೂಬೆಯನ್ನು ಬಳಸುವುದರಲ್ಲಿ ಆಶ್ಚರ್ಯವೇನಿಲ್ಲ. ಕೆಲವು ನಂಬಿಕೆಗಳು ಗೂಬೆಯನ್ನು ಅಶುಭವೆಂದು ಹೇಳಿದರೆ, ಇನ್ನು ಕೆಲವರು ಗೂಬೆಯನ್ನು ಸಂಪತ್ತಿನ ಸಂಕೇತವೆಂದು ನಂಬುತ್ತಾರೆ. ಆದ್ದರಿಂದ ಗೂಬೆಯನ್ನು ತಮ್ಮ ವ್ಯವಹಾರದ ಅಥವಾ ಕಂಪೆನಿಯ ಲೋಗೋವಾಗಿ ಬಳಸುತ್ತಾರೆ.

2020 ಕಾರ್ತಿಕ ಮಾಸ: ಕಾರ್ತಿಕ ಮಾಸ ಪವಿತ್ರವೆನ್ನಲು 11 ಕಾರಣಗಳಿವು..!
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವ ಸಲುವಾಗಿ ಗೂಬೆ ಅಥವಾ ಉಲ್ಲುವನ್ನು ಒಲಿಸಿಕೊಳ್ಳುವುದು ಕೂಡ ಶುಭವೆಂದು ಪರಿಗಣಿಸಲಾಗಿದೆ. ಗೂಬೆಯ ಶುಭ ದೃಷ್ಟಯು ನಿಮ್ಮ ಮೇಲೆ ಬಿದ್ದರೆ ಅದನ್ನು ಶುಭವೆಂದು ಹೇಳಲಾಗುತ್ತದೆ. ಗೂಬೆಯ ಶುಭ ದೃಷ್ಟಿ ಪಡೆಯುವುದು ಹೇಗೆ..?

ಗಣೇಶ ರುದ್ರಾಕ್ಷಿಯನ್ನು ಯಾಕೆ ಧರಿಸಬೇಕು..? ಪ್ರಯೋಜನ ತಿಳಿದರೆ ಇಂದೇ ಧರಿಸುವಿರಿ..!

ಗೂಬೆಯ ಪ್ರಯೋಜನ


ಮುರುಡೇಶ್ವರದ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ 11 ಆಕರ್ಷಕ ರಹಸ್ಯಗಳು..!
1. ಸಂಪತ್ತಿನ ಹೆಚ್ಚಳಕ್ಕಾಗಿ ಹೀಗೆ ಮಾಡಿ:
ನಿಮ್ಮ ಹಣವನ್ನು ನೀವು ಯಾವ ಸ್ಥಳದಲ್ಲಿ ಇರಿಸುತ್ತೀರೋ ಆ ಸ್ಥಳದಲ್ಲಿ ಗೂಬೆಯ ಚಿತ್ರ ಅಥವಾ ಗೂಬೆಯ ಫೋಟೋವನ್ನು ಇಡಬೇಕು. ನೀವು ಇದನ್ನು ಮನೆಯಲ್ಲೂ ಇಡಬಹುದು ಅಥವಾ ಕಛೇರಿಯಲ್ಲೂ ಕೂಡ ಇಡಬಹುದು. ಪ್ರದೋಷ್ ಅವಧಿಯಲ್ಲಿ ಈ ಚಿತ್ರವನ್ನು ಹಣ ಇಡುವ ಸ್ಥಳದಲ್ಲಿ ಅಥವಾ ಹಣದ ಮೇಲೆ ಇಡಿ. ಮತ್ತು ಇದು ವರ್ಷದುದ್ದಕ್ಕೂ ನಿಮ್ಮ ಆದಾಯವನ್ನು ಮತ್ತು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2020 ಕಾರ್ತಿಕ ಮಾಸ: ಕುಂಭದವರು ಗುಲಾಬಿ ಬಣ್ಣ ಬಳಸಿದರೆ ಕೆಲಸದಲ್ಲಿ ಪ್ರಗತಿ..!
2. ಸಂತೋಷದ ದಾಂಪತ್ಯ ಜೀವನಕ್ಕಾಗಿ ಹೀಗೆ ಮಾಡಿ:
ಹೊಸದಾಗಿ ಮದುವೆಯಾದ ಮಹಿಳೆಯರು ಗೂಬೆಯ ಉಗುರು ತೆಗೆದುಕೊಂಡು, ಅದರಿಂದ ಸಂಧೂರವನ್ನು ಹಣೆಗೆ ಇಟ್ಟುಕೊಳ್ಳಿ, ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಡಿ. ಇದನ್ನು ಮೇಕಪ್ ಪೆಟ್ಟಿಗೆಯಲ್ಲಿ ಇಡಬೇಕು. ಇದು ಆನಂದದಾಯಕ ಮತ್ತು ಜಗಳ ಮುಕ್ತ ದಾಂಪತ್ಯ ಜೀವನವನ್ನು ನಿಮಗೆ ನೀಡುತ್ತದೆ. ದಾಂಪತ್ಯ ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ.

ಉದ್ಯೋಗವಿದ್ದರೆ ಗೌರವ ಎನ್ನುತ್ತಾನೆ ಚಾಣಕ್ಯ..? ಇವುಗಳೇ ಜ್ಞಾನ ಮಾರ್ಗ..!
3. ಮನೆಯಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಹೀಗೆ ಮಾಡಿ:
ದೀಪಾವಳಿ ರಾತ್ರಿಯಲ್ಲಿ, ಗೂಬೆ ಗರಿ ಮತ್ತು ನವಿಲು ಗರಿಗಳನ್ನು ಕೆಂಪು ದಾರದೊಂದಿಗೆ ಕಟ್ಟಿ ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕು. ಈ ಪರಿಹಾರವು ಕುಟುಂಬಕ್ಕೆ ಬುದ್ಧಿವಂತಿಕೆ, ಉತ್ತಮ ಆರೋಗ್ಯ, ಸಂಪತ್ತು, ಜ್ಞಾನ ಮತ್ತು ಸಮೃದ್ಧಿಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಈ ಮೇಲಿನ ಕ್ರಮಗಳನ್ನು ನೀವು ದೀಪಾವಳಿ ದಿನದಂದು ಕೈಗೊಂಡರೆ ಉತ್ತಮ. ಇವುಗಳಿಂದ ನೀವು ಜೀವನದಲ್ಲಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ