ಆ್ಯಪ್ನಗರ

Friday Tips: ಲಕ್ಷ್ಮಿ ದೇವಿಯನ್ನು ಸಂತುಷ್ಟಗೊಳಿಸಲು ಶುಕ್ರವಾರ ತಪ್ಪದೇ ಈ ಕೆಲಸ ಮಾಡಿ..!

ಶುಕ್ರವಾರವು ಮನೆಯ ಮಹಿಳೆಯರೆಲ್ಲಾ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸುವ ದಿನ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಆಕೆಯನ್ನು ಮೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಮತ್ತು ನಿಮ್ಮೊಂದಿಗೆ ಆಕೆ ಸದಾಕಾಲ ಇರಲು ಶುಕ್ರವಾರ ಇವುಗಳನ್ನು ಮಾಡಿ.

Authored byಮನಿಷಾ ಆನಂದ | Vijaya Karnataka Web 24 Feb 2023, 11:37 am
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಶುಕ್ರವಾರದ ದಿನ ಪೂಜಿಸುವುದರಿಂದ ಅಥವಾ ಉಪವಾಸ ವ್ರತವನ್ನು ಮಾಡುವುದರಿಂದ ನಮ್ಮ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಲಕ್ಷ್ಮಿಯನ್ನು ಪೂಜಿಸುವುದರ ಜೊತೆಗೆ ಲಕ್ಷ್ಮಿಯನ್ನು ಮೆಚ್ಚಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಂತೋಷವು ಈಗೀರುವ ಸಂತೋಷಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಲಕ್ಷ್ಮಿ ದೇವಿಯನ್ನು ಸಂತೋಷಗೊಳಿಸಲು, ನಿಮ್ಮ ಮನೆಯಲ್ಲೇ ನೆಲೆಸುವಂತೆ ಮಾಡಲು ಈ ಕ್ರಮಗಳನ್ನು ತೆಗೆದುಕೊಳ್ಳಬೇಕು.
Vijaya Karnataka Web these friday tips may help you to make goddess lakshmi happy
Friday Tips: ಲಕ್ಷ್ಮಿ ದೇವಿಯನ್ನು ಸಂತುಷ್ಟಗೊಳಿಸಲು ಶುಕ್ರವಾರ ತಪ್ಪದೇ ಈ ಕೆಲಸ ಮಾಡಿ..!


ಕೆಂಪು ಗುಲಾಬಿ

ಕೆಂಪು ಬಣ್ಣದ ಗುಲಾಬಿ ಹೂವುಗಳೆಂದರೆ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಕೆಂಪು ಗುಲಾಬಿ ಹೂವುಗಳಿಂದ ಪೂಜಿಸಿ ಮತ್ತು ಆಕೆಗೆ ಜೇನುತುಪ್ಪ ಬೆರೆಸಿದ ಪಾಯಸ ಅಥವಾ ಖೀರ್‌ನ್ನು ಅರ್ಪಿಸಬೇಕು. ನಂತರ ನೀವು ಕೂಡ ಅದನ್ನು ಸೇವಿಸಬೇಕು. ಹಾಗೂ ನಿಮ್ಮ ಇಡೀ ಕುಟುಂಬಕ್ಕೂ ಪ್ರಸಾದವಾಗಿ ವಿತರಿಸಬೇಕು. ಲಕ್ಷ್ಮಿ ದೇವಿಯ ಸಂತೋಷಕ್ಕಾಗಿ ಆಕೆಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಅರ್ಪಿಸಿ ಹಾಗೂ ನೀವು ಕೂಡ ಪ್ರಸಾದವಾಗಿ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸೌಹಾರ್ದತೆ ಹೆಚ್ಚುತ್ತದೆ ಮತ್ತು ನಿಮ್ಮ ಮನಸ್ಸು ಸಂತೋಷದಿಂದ ತುಂಬಿರುತ್ತದೆ.

PC: Pexel

Chanakya Niti : ಈ ಗುಣಗಳನ್ನು ರೂಢಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸುಲಭ

ಲಕ್ಷ್ಮಿ ದೇವಿಯನ್ನು ಪ್ರಸನ್ನಗೊಳಿಸುವುದು ಹೇಗೆ..?

ಶುಕ್ರವಾರ ಮುಂಜಾನೆ ಸ್ನಾನ ಮಾಡಿದ ನಂತರ, ಶುದ್ಧವಾದ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ. ದಿನವಿಡೀ ನಿಮ್ಮ ಮನಸ್ಸಿನಲ್ಲಿ ತಾಯಿ ಲಕ್ಷ್ಮಿಯನ್ನು ಸ್ಮರಿಸಿ. ಲಕ್ಷ್ಮಿ ದೇವಿಗೆ ನೀವು ಆರತಿ ಮಾಡುವಾಗ ಆರತಿಯಲ್ಲಿ ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ ಆರತಿಯನ್ನು ಮಾಡಬೇಕು. ನಂತರ ಮನೆಯ ಪ್ರತಿಯೊಂದು ಕೋಣೆಯಲ್ಲೂ ಈ ಆರತಿಯನ್ನು ತೋರಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಮತ್ತು ಲಕ್ಷ್ಮಿ ದೇವಿಯೂ ಸಂತುಷ್ಟಳಾಗುತ್ತಾಳೆ.

PC: Pexel

Kashi Vishwanath Temple: ಅಬ್ಬಾ.. ಮಾರ್ಚ್‌ 1 ರಿಂದ ಕಾಶಿ ವಿಶ್ವನಾಥನ ಆರತಿ ಇನ್ನೂ ದುಬಾರಿ..!

ಸ್ವಸ್ತಿಕ ಹಾಕಿ

ಶುಕ್ರವಾರದ ದಿನದಂದು ಈ ವಿಶೇಷ ವಿಧಾನದ ಮೂಲಕ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಬಹಳ ಮುಖ್ಯ. ಶುಕ್ರವಾರ ಒಂದು ಮರದ ಪೀಠದ ಮೇಲೆ ಸಿಂಧೂರದಿಂದ ಸ್ವಸ್ತಿಕ ಚಿಹ್ನೆಯನ್ನು ಹಾಕಿ. ಅದರ ಮೇಲೆ ಗೋಮತಿ ಚಕ್ರವನ್ನು ಇರಿಸಿ. ನಂತರ ಅದರ ಮೇಲೆ ಶ್ರೀಯಂತ್ರವನ್ನು ಇಟ್ಟು ಪೂಜೆಯನ್ನು ಮಾಡಬೇಕು. ಪೂಜೆಯ ನಂತರ ಗೋಮತಿ ಚಕ್ರವನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಅಥವಾ ಹಣ ಒಡುವ ಸ್ಥಳದಲ್ಲಿ ಅಥವಾ ನಿಮ್ಮ ತಿಜೋರಿಯಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಪ್ರತೀ ಶುಕ್ರವಾರ ಇದೇ ರೀತಿ ಪೂಜೆಯನ್ನು ಮಾಡಿ. ಇದರಿಂದ ನಿಮ್ಮಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ ಮತ್ತು ನೀವು ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತೀರಿ.

Shaligram: ಸಾಲಿಗ್ರಾಮವೇ ಭಗವಾನ್‌ ವಿಷ್ಣು: ಸಾಲಿಗ್ರಾಮವಿದ್ದರೆ ಈ ನಿಯಮಗಳು ಕಡ್ಡಾಯ

ಕನ್ಯೆಯರಿಗೆ ಆಹಾರ

ಶುಕ್ರವಾರದಂದು ಚಿಕ್ಕ ಹೆಣ್ಣು ಮಕ್ಕಳಿಗೆ ಊಟ ಹಾಕಿ ಕೈಲಾದಷ್ಟು ದಾನ ಮಾಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಶುಕ್ರವಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ ''ಓಂ ಶ್ರೀಂ ಶ್ರೀಂ ನಮಃ'' ಮಂತ್ರವನ್ನು 11 ಬಾರಿ ಜಪಿಸಿ. ಪ್ರತಿ ಶುಕ್ರವಾರ ಸಂಜೆ ಕೆಂಪು ಬತ್ತಿಯಿಂದ ದೀಪವನ್ನು ಬೆಳಗಿಸಿ ಈ ಮಂತ್ರವನ್ನು ಪಠಿಸಿ. ಕನಿಷ್ಠ 21 ಶುಕ್ರವಾರದಂದು ಇದನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.
Radha and Krishna: ಅದೆಷ್ಟೋ ದಂಪತಿಗಳಿಗೆ ಸ್ಪೂರ್ತಿ ಇವರ ಸಂಬಂಧ: ರಾಧಾ - ಕೃಷ್ಣರ

ಮನೆಯ ಮುಖ್ಯ ಬಾಗಿಲು ಸ್ವಚ್ಛವಾಗಿರಲಿ

ಮನೆಯ ಮುಖ್ಯ ದ್ವಾರವನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಮ್ಮ ಮನೆಯ ದ್ವಾರವು ಸ್ವಚ್ಛವಾಗಿದ್ದರೆ ಲಕ್ಷ್ಮಿ ದೇವಿಯು ಆಕರ್ಷಿಸುತ್ತಾಳೆ ಎನ್ನುವ ನಂಬಿಕೆಯಿದೆ. ಶುಕ್ರವಾರ ಮುಂಜಾನೆ ಮನೆಯ ಮುಖ್ಯಬಾಗಿಲಿನಲ್ಲಿ ನೀರನ್ನು ಚಿಮುಕಿಸಿ ಸ್ವಚ್ಛಗೊಳಿಸಿ. ಮುಖ್ಯ ಬಾಗಿಲಿನ ಮೇಲೆ ಶುಭ, ಲಾಭ ಮತ್ತು ಸ್ವಸ್ತಿಕ ಚಿಹ್ನೆಯನ್ನು ಹಾಕಿ. ಈ ದಿನ ನೀವು ಸೇವಿಸುವ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹುಳಿಯುಳ್ಳ ವಸ್ತುಗಳನ್ನು ತಪ್ಪಿಸಬೇಕು. ಮತ್ತು ಸಾತ್ವಿಕ ಆಹಾರವನ್ನು ಸೇವಿಸಿ. ಇದನ್ನು ಮಾಡುವುದರಿಂದ ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ.

PC: Pexel

Tirupati Temple: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ತಂತ್ರಜ್ಞಾನ: ಇನ್ನು ದರ್ಶನ ಸರಳ..!

ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ