Tuesday Hanuman Pooja Remedies To Get Blessings Of Bajrangbali
Lord Hanuman : ಮಂಗಳವಾರದ ಈ ಎಲ್ಲಾ ಪರಿಹಾರಗಳು ನಿಮ್ಮನ್ನು ಕಷ್ಟದಿಂದ ದೂರ ಮಾಡುತ್ತವೆಯಂತೆ
ಮಂಗಳವಾರ ಭಕ್ತಿಯಿಂದ ಆಂಜನೇಯ ಸ್ವಾಮಿಯ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಅದೂ ಅಲ್ಲದೆ, ಮಂಗಳವಾರ ಮಾಡುವ ಕೆಲವೊಂದು ಪರಿಹಾರಗಳು ಬದುಕಿನಲ್ಲಿ ಒಳಿತಿಗೆ ಕಾರಣವಾಗುತ್ತವೆ ಎಂಬ ನಂಬಿಕೆ ಕೂಡಾ ಇದೆ.
Authored byಸುನೀಲ್ | Vijaya Karnataka Web23 Jan 2023, 3:30 pm
ಕಷ್ಟಗಳು ಇಲ್ಲದ ಜನರಿಲ್ಲ. ಬದುಕಿನಲ್ಲಿ ಒಂದಲ್ಲ ಒಂದು ಕಷ್ಟಗಳು ಕಾಡುತ್ತಲೇ ಇರುತ್ತವೆ. ಜೀವನ ಎಂದರೇನೇ ಹಾಗೆ... ಸುಖ ಕಷ್ಟಗಳ ಸಮ್ಮಿಲನ. ಎಂತಹ ಸಿರಿವಂತನಾದರೂ ಅವರ ಮಟ್ಟದಲ್ಲಿ ಒಂದಲ್ಲ ಒಂದು ಕಷ್ಟಗಳು ಇದ್ದೇ ಇರುತ್ತವೆ. ಅಂತೆಯೇ, ಇಂತಹ ಸಂದರ್ಭದಲ್ಲಿ ದೇವತಾರಾಧನೆಯಿಂದ ಕೊಂಚ ಮನಸ್ಸಿಗೆ ಸಮಾಧಾನವಾಗುತ್ತದೆ. ಏಕ ಭಕ್ತಿಯಿಂದ ಪೂಜಿಸಿದರೆ ದೇವರು ನಮ್ಮ ಕಷ್ಟಗಳನ್ನೆಲ್ಲಾ ಪರಿಹರಿಸುತ್ತಾರೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ಅದಕ್ಕೆಂದೇ ವಾರದ ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವ ಮೂಲಕ ಜನರು ಮಾನಸಿಕ ಸಮಾಧಾನವನ್ನು ಕಾಣುತ್ತಾರೆ. ಅಂತೆಯೇ, ಮಂಗಳವಾರ ಏನೆಲ್ಲಾ ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣ.
| Image Courtesy : iStock
ಆಂಜನೇಯ ಸ್ವಾಮಿಯ ಪೂಜೆ
ಪವನ ಪುತ್ರ ಹನುಮಂತನ ಪೂಜೆಗೆ ನಮ್ಮಲ್ಲಿ ಬಲು ಮಹತ್ವವಿದೆ. ಸಂಕಟ ಮೋಚನ ಎಂದೇ ಆಂಜನೇಯ ಸ್ವಾಮಿಗೆ ಹೆಸರು. ಶ್ರೀರಾಮ ಭಕ್ತ ಹನುಮಂತ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ವಾರದ ಪ್ರತಿದಿನ ಒಂದೊಂದು ದೇವರನ್ನು ಪೂಜಿಸುತ್ತಾ ಭಕ್ತರು ಮಾನಸಿಕ ನೆಮ್ಮದಿ ಕಾಣುತ್ತಾರೆ. ಅಂತೆಯೇ, ಮಂಗಳವಾರ ಮತ್ತು ಶನಿವಾರ ಹನುಮಂತ ದೇವರ ಪೂಜೆಗೆ ಮೀಸಲು. ಈ ದಿನ ಆಂಜನೇಯಸ್ವಾಮಿಯನ್ನು ಏಕಚಿತ್ತದಿಂದ ಪೂಜಿಸಿದರೆ ಬಂದಂತಹ ಕಷ್ಟಗಳು ಮತ್ತು ಬರುವಂತಹ ಕಷ್ಟಗಳು ದೂರವಾಗುತ್ತವೆ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಆಂಜನೇಯ ಸ್ವಾಮಿಯ ಆಶೀರ್ವಾದವಿದ್ದರೆ ಯಾವ ಕಷ್ಟವೂ ಹತ್ತಿರಕ್ಕೆ ಸುಳಿಯಲು ಎಂಬ ನಂಬಿಕೆ ಕೂಡಾ ನಮ್ಮಲ್ಲಿದೆ. | Image Courtesy : iStock
ಬಡವರಿಗೆ ಆಹಾರ ನೀಡಿ
ಹಿಂದೂ ಧರ್ಮದಲ್ಲಿ ದಾನಕ್ಕೆ ಬಲು ಮಹತ್ವ. ಅನ್ನದಾನ ಶ್ರೇಷ್ಠ ದಾನ ಎಂಬ ಮಾತು ಕೂಡಾ ನಮ್ಮಲ್ಲಿದೆ. ಅಂದರೆ, ಪ್ರತಿಯೊಬ್ಬರೂ ಅವರವರ ಯಥಾಶಕ್ತಿ ದಾನ ಧರ್ಮಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎನ್ನುತ್ತವೆ ನಮ್ಮ ಪ್ರಮುಖ ಗ್ರಂಥಗಳು. ಹೀಗೆ ನಿಸ್ವಾರ್ಥವಾಗಿ, ಶ್ರದ್ಧೆಯಿಂದ ಮಾಡುವ ಕಾರ್ಯಗಳಿಗೆ ಸದಾ ದೇವರ ಆಶೀರ್ವಾದ ಇರುತ್ತದೆ ಎಂಬುದು ನಂಬಿಕೆ. ಅಂತೆಯೇ, ಮಂಗಳವಾರ ಬಡವರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ಆಹಾರವನ್ನು ನೀಡುವುದು ಒಳ್ಳೆಯದು ಎಂಬ ನಂಬಿಕೆ ನಮ್ಮಲ್ಲಿದೆ. ಹಣವನ್ನು ನೀಡದೆ ಅವರಿಗೆ ಆಹಾರ ನೀಡಿ ಸತ್ಕರಿಸುವುದು ಬಹಳ ಮುಖ್ಯ. image by congerdesign from pixabay
ಇನ್ನು ಕೋತಿಗಳಿಗೆ ಆಹಾರ ನೀಡುವ ಮೂಲಕವೂ ಸಾಕಷ್ಟು ಮಂದಿ ಮಂಗಳವಾರದ ಪೂಜೆಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ದೇವರಿಗೆ ಪೂಜಿ ಸಲ್ಲಿಸಿದ ಬಳಿಕ ಮಂಗಗಳು ಹೆಚ್ಚಿರುವ ಸ್ಥಳಗಳಿಗೆ ಹೋಗಿ ಅವುಗಳಿಗೆ ಬೇಳೆ, ಬಾಳೆಹಣ್ಣು ಅಥವಾ ಕಡಲೆಕಾಯಿಯನ್ನು ನೀಡಬಹುದು. ಹೀಗೆ ಮಾಡುವುದರಿಂದಲೂ ಒಳಿತಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ. ನಿರ್ಮಲ ಹೃದಯದಿಂದ ಮಾಡುವ ಇಂತಹ ಸತ್ಕಾರ್ಯಗಳಿಗೆ ಸದಾ ದೇವರ ಆಶೀರ್ವಾದ ಇರುತ್ತದೆ, ಇಂತಹ ಕೆಲಸಗಳಿಂದ ಆಂಜನೇಯಸ್ವಾಮಿ ಪ್ರಸನ್ನರಾಗುತ್ತಾರೆ ಎಂಬ ನಂಬಿಕೆ ಭಕ್ತರದ್ದು. image by pdpics from pixabay
ನಿಮ್ಮ ಜಾತಕದಲ್ಲಿ ಶನಿಯ ಅಶುಭ ದೃಷ್ಟಿ ಇದ್ದರೆ ಮಂಗಳವಾರ ಆಂಜನೇಯಸ್ವಾಮಿಯ ಪೂಜೆ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಇದಕ್ಕಾಗಿ 108 ತುಳಸಿ ಎಲೆಗಳ ಮೇಲೆ ಶ್ರೀಗಂಧದಿಂದ ಶ್ರೀರಾಮನ ಹೆಸರನ್ನು ಬರೆದು ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ, ಹೀಗೆ ಮಾಡುವುದರಿಂದ ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆಯುವ ಜತೆಗೆ ಮಂಗಳ, ಶನಿ ಮತ್ತು ರಾಹುವಿಗೆ ಸಂಬಂಧಿಸಿದ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. image by emeraldwiz from pixabay
ಮಂಗಳವಾರ ಆಂಜನೇಯ ಸ್ವಾಮಿ ದೇಗುಲಕ್ಕೆ ಹೋಗಿ ಸಿಂಧೂರವನ್ನು ಹಚ್ಚಿ, ಗುಲಾಬಿ ಹಾರವನ್ನು ಅರ್ಪಿಸುವುದು ಕೂಡಾ ಒಳ್ಳೆಯದು ಎಂಬ ನಂಬಿಕೆ ಇದೆ. ಹೀಗೆ ಗುಲಾಬಿ ಮಾಲೆ ಅರ್ಪಣೆಯ ಬಳಿಕ ಅಲ್ಲಿಯೇ ಕುಳಿತು ಸುಂದರಕಾಂಡವನ್ನು ಪಠಿಸಿ. ಹೀಗೆ 11 ಮಂಗಳವಾರಗಳ ಕಾಲ ನಿರಂತರವಾಗಿ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬುದು ನಂಬಿಕೆ. ಅದೂ ಅಲ್ಲದೆ, ಮಂಗಳವಾರ ಹಾಗೂ ಶನಿವಾರದಂದು ಹನುಮಾನ್ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾವನ್ನು 108 ಬಾರಿ ಪಠಿಸಿದರೂ ದೇವರ ಅನುಗ್ರಹ ಸಿಗುತ್ತದೆ. ಇದರಿಂದ ಉತ್ತಮ ಫಲ ಲಭಿಸುತ್ತದೆ. ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬುದು ನಂಬಿಕೆ. | Image Courtesy : iStock
ಗಮನಿಸಿ : ಇಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳು, ಪರಿಹಾರಗಳು ಜನಮಾನಸದಲ್ಲಿರುವ ಧಾರ್ಮಿಕ ನಂಬಿಕೆ, ಮಾಹಿತಿಯನ್ನು ಆಧರಿಸಿವೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನೀವು ಇವುಗಳ ಸಂಪೂರ್ಣ ವಿವರಗಳನ್ನು ತಿಳಿಯಲು ಸಂಬಂಧಿತ ಪರಿಣತರನ್ನು ಸಂಪರ್ಕಿಸಬಹುದು.
"2007ರ ಸೆಪ್ಟೆಂಬರ್ನಿಂದ ಪತ್ರಿಕೋದ್ಯಮದ ಪಯಣ ಶುರು. ಪ್ರಮುಖ ದಿನಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ವೃತ್ತಿ ಜೀವನ ಆರಂಭ. ಇದಾದ ಆರು ತಿಂಗಳ ಬಳಿಕ ನ್ಯೂಸ್ ಚಾನೆಲ್ನಲ್ಲಿ ಕೆಲಸ. 2008ರಿಂದ ಶುರುವಾದ ಸುದ್ದಿ ವಾಹಿನಿಯ ಪಯಣ ನ್ಯೂಸ್ ಡೆಸ್ಕ್ನ ವಿವಿಧ ಜವಾಬ್ದಾರಿಗಳ ನಿರ್ವಹಣೆಯೊಂದಿಗೆ 2019ರ ತನಕ ಸಾಗಿತ್ತು. ಅಲ್ಲಿಂದ ಮತ್ತೊಂದು ಬದಲಾವಣೆಯ ಕ್ಷಣ. 2019ರಿಂದ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಕಲಿಕೆಯೊಂದಿಗೆ ಹೊಸ ಜೀವನ ಶುರು. ಇಲ್ಲಿಂದ ಈ ಕ್ಷಣದವರೆಗೆ ವಿಜಯ ಕರ್ನಾಟಕ ಬಳಗದೊಂದಿಗೆ ನನ್ನ ವೃತ್ತಿ ಬದುಕು ಸಾಗಿದೆ. ಇಷ್ಟು ವರ್ಷದ ಪಯಣದಲ್ಲಿ ವಿವಿಧ ಸಂಸ್ಥೆಗಳಲ್ಲಿ ಹಲವು ವಿಭಾಗಗಳಲ್ಲಿ ಕೆಲಸದ ಅನುಭವ ಪಡೆದ ತೃಪ್ತಿ ನನ್ನದು. ಎಲ್ಲಾ ಪತ್ರಕರ್ತರಿಗೂ ಪ್ರಮುಖವಾಗಿರುವ ಓದು ನನ್ನ ಹವ್ಯಾಸಗಳಲ್ಲಿ ಒಂದು. ಬಿಡುವಾದಾಗ ಪ್ರವಾಸಕ್ಕೆ ಹೋಗುವುದು ಕೂಡಾ ನನ್ನ ಜೀವನದ ಖುಷಿಯ ಭಾಗ. "... ಇನ್ನಷ್ಟು ಓದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.