ಆ್ಯಪ್ನಗರ

Vaishakh Maas 2023 Rules: ವೈಶಾಖ ಮಾಸದಲ್ಲಿ ದೇವರ ಪೂಜೆಯನ್ನು ಮಾಡೋದು ಹೇಗೆ..?

ವೈಶಾಖ ಮಾಸವು ಹಿಂದೂ ಕ್ಯಾಲೆಂಡರ್‌ನ ಎರಡನೇ ಮಾಸವಾಗಿದೆ. ಈ ಬಾರಿ ವೈಶಾಖ ಮಾಸವು ಏಪ್ರಿಲ್‌ 21 ರಿಂದ ಆರಂಭವಾಗುತ್ತದೆ. ವೈಶಾಖ ಮಾಸದಲ್ಲಿ ಭಗವಾನ್ ವಿಷ್ಣುವಿನ ಆರಾಧನೆಗೆ, ಪೂಜೆಗೆ ವಿಶೇಷ ಮಹತ್ವವಿದೆ. ವೈಶಾಖ ಮಾಸದಲ್ಲಿ ನಾವು ದೇವರನ್ನು ಹೇಗೆ ಪೂಜಿಸಬೇಕು..? ವೈಶಾಖ ಮಾಸದಲ್ಲಿ ನಾವು ಯಾವೆಲ್ಲಾ ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ..?

Authored byಮನಿಷಾ ಆನಂದ | Agencies 19 Apr 2023, 2:51 pm

ಹೈಲೈಟ್ಸ್‌:

ಹೈಲೈಟ್ಸ್‌:
  • ವೈಶಾಖ ಮಾಸದ ನಿಯಮಗಳು
  • ವೈಶಾಖ ಮಾಸದ ಪೂಜೆ ವಿಧಾನ
  • ವೈಶಾಖ ಮಾಸದಲ್ಲಿ ದಾನದ ಮಹತ್ವ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Vaishakh Maas 2023
ವೈಶಾಖ ಮಾಸ 2023
ಚೈತ್ರ ಅಮಾವಾಸ್ಯೆಯ ನಂತರ ವೈಶಾಖ ಮಾಸವು ಪ್ರಾರಂಭವಾಗುತ್ತದೆ. ವೈಶಾಖ ಮಾಸವು ಹಿಂದೂ ಕ್ಯಾಲೆಂಡರ್‌ನ ಎರಡನೇ ಮಾಸವಾಗಿದೆ. ಈ ಬಾರಿ ವೈಶಾಖ ಮಾಸವು ಏಪ್ರಿಲ್‌ 21 ರಿಂದ ಆರಂಭವಾಗಿ ಮೇ 19 ರವರೆಗೆ ಇರುತ್ತದೆ. ಭಗವಾನ್ ವಿಷ್ಣುವಿನ ಆರಾಧನೆಗೆ ಈ ಮಾಸವು ಅತ್ಯಂತ ಪ್ರಾಶಸ್ತ್ಯವಾದ ಮಾಸವೆಂದು ಹೇಳಲಾಗುತ್ತದೆ. ನಾವಿಂದು ಈ ಲೇಖನದಲ್ಲಿ ವೈಶಾಖ ಮಾಸದ ನಿಯಮಗಳು, ಪೂಜೆ ವಿಧಿ - ವಿಧಾನಗಳ ಕುರಿತು ತಿಳಿದುಕೊಳ್ಳೋಣ.
Ayodhya Jalabhishek 2023: 156 ದೇಶಗಳ ನೀರಿನಿಂದ ಜಲಾಭಿಷೇಕಕ್ಕೆ ಸಿದ್ಧನಾದ ಅಯೋಧ್ಯೆ ರಾಮ..!

ಗೋಮಾತೆ - PC: Pixabay

1. ವೈಶಾಖ ಮಾಸದಲ್ಲಿ ದಾನ:
- ವೈಶಾಖ ಮಾಸದಲ್ಲಿ ಗೋಮಾತೆಗೆ ಆಹಾರ ಪದಾರ್ಥಗಳು ಮತ್ತು ಹುಲ್ಲು ಅಥವಾ ಮೇವನ್ನು ನೀಡಬೇಕು.
- ವೈಶಾಖ ಮಾಸದಲ್ಲಿ ಉಪವಾಸವಿದ್ದು ಸಂಜೆ ಸತ್ಯನಾರಾಯಣ ದೇವರ ಕಥೆ ಕೇಳಿ ಪ್ರಸಾದ ವಿತರಿಸಬೇಕು
- ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವನ್ನು ಪೂಜಿಸಿದ ನಂತರ ಆಹಾರ ಪದಾರ್ಥಗಳನ್ನು ದಾನ ಮಾಡಿ.
- ಈ ತಿಂಗಳು ಪಂಚ ಧಾನ್ಯಗಳು, ವಸ್ತ್ರಗಳು, ಪಂಚಮೇವ, ಮೇಕಪ್ ವಸ್ತುಗಳು, ಸತ್ತು, ಸೌತೆಕಾಯಿ, ಕಲ್ಲಂಗಡಿ, ತುಪ್ಪ, ಹಿಟ್ಟು, ಉಪ್ಪು, ಬೆಲ್ಲ, ಎಣ್ಣೆ, ಸಕ್ಕರೆ, ಫ್ಯಾನ್ ಇತ್ಯಾದಿಗಳನ್ನು ದಾನ ಮಾಡುವುದು ಲಾಭದಾಯಕ.
- ಈ ಮಾಸದಲ್ಲಿ ಜಲದಾನವನ್ನು ಪುಣ್ಯವೆಂದು ಪರಿಗಣಿಸಲಾಗುತ್ತದೆ. ದಾರಿಹೋಕರಿಗೆ ಈ ಮಾಸದಲ್ಲಿ ನೀರನ್ನು ನೀಡಬೇಕು.

Chaitra Amavasya Rules: ಚೈತ್ರ ಅಮಾವಾಸ್ಯೆಯ ದಿನ ಇವುಗಳನ್ನು ಮಾಡಿದರೆ ಪಿತೃ ದೋಷ ಫಿಕ್ಸ್..!
2. ವೈಶಾಖ ಮಾಸದಲ್ಲಿ ಪೂಜೆ ವಿಧಾನ:
- ವೈಶಾಖ ಮಾಸದಲ್ಲಿ ತುಳಸಿ ಮತ್ತು ಅರಳಿ ಮರವನ್ನು ಪೂಜಿಸಿ.
- ವೈಶಾಖ ಮಾಸದಲ್ಲಿ ಮಾಧವನ ರೂಪದಲ್ಲಿ ವಿಷ್ಣುವನ್ನು ತುಳಸಿ ಎಲೆಗಳಿಂದ ಪೂಜಿಸಿ.
- ಪೂಜೆಯ ಸಮಯದಲ್ಲಿ ವಿಷ್ಣುವಿಗೆ ಬಿಳಿ ಅಥವಾ ಹಳದಿ ಹೂವುಗಳನ್ನು ಅರ್ಪಿಸಿ.
- ಈ ತಿಂಗಳು ಪ್ರತಿದಿನ ಕನಿಷ್ಠ 11 ಬಾರಿ 'ಓಂ ಮಾಧವಾಯ ನಮಃ' ಎನ್ನುವ ಮಂತ್ರವನ್ನು ಪಠಿಸಿ.
- ಪೂಜೆಯ ಜೊತೆಗೆ ವಿಷ್ಣುವಿನ ಕೇಶವ, ಹರಿ, ಗೋವಿಂದ, ತ್ರಿವಿಕ್ರಮ, ಪದ್ಮನಾಭ, ಮಧುಸೂದನ, ಅಚ್ಯುತ ಮತ್ತು ಹೃಷಿಕೇಶ ನಾಮಗಳನ್ನು ಧ್ಯಾನಿಸಿ.
- ಈ ಮಾಸದಲ್ಲಿ ಮುಂಜಾನೆ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಅರ್ಪಿಸಬೇಕು.
- ತುಳಸಿ ಎಲೆಗಳನ್ನು ಸೇರಿಸಿ ಶ್ರೀ ವಿಷ್ಣುವಿಗೆ ಪಂಚಾಮೃತವನ್ನು ಅರ್ಪಿಸಿ.
- ಇದರೊಂದಿಗೆ ನರಸಿಂಹ, ಚಿತ್ರಗುಪ್ತ, ಶಿವನನ್ನೂ ಈ ಮಾಸದಲ್ಲಿ ಪೂಜಿಸಲಾಗುತ್ತದೆ.

ಕರಿದ/ಹುರಿದ ಪದಾರ್ಥ - PC: Pexel

Amavasya 2023: ಚೈತ್ರ ಅಮಾವಾಸ್ಯೆ 2023 ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ ಹೀಗಿದೆ..!
3. ವೈಶಾಖ ಮಾಸದ ನಿಯಮಗಳು-
- ವೈಶಾಖ ಮಾಸದಲ್ಲಿ ಹೊಸ ಎಣ್ಣೆ ಹಚ್ಚುವುದನ್ನು ನಿಷೇಧಿಸಲಾಗಿದೆ.
- ವೈಶಾಖದಲ್ಲಿ ಗಂಗಾ ಸ್ನಾನ ಮತ್ತು ದಾನವನ್ನು ಮಾಡಬೇಕು.
- ವೈಶಾಖ ಮಾಸದಲ್ಲಿ ಎಣ್ಣೆ ಮತ್ತು ಕರಿದ/ಹುರಿದ ಪದಾರ್ಥಗಳನ್ನು ತಿನ್ನುವುದನ್ನು ತ್ಯಜಿಸುವುದು ಆರೋಗ್ಯಕ್ಕೆ ಒಳ್ಳೆಯದು.
- ವೈಶಾಖ ಮಾಸದಲ್ಲಿ ರಾತ್ರಿ ಆಹಾರ ಸೇವನೆಯನ್ನು ಮಾಡಬಾರದು.
- ಜೀವನದ ದುಃಖಗಳನ್ನು ತೊಡೆದುಹಾಕಲು ಭಗವಾನ್ ಶ್ರೀ ವಿಷ್ಣು ಮತ್ತು ಪರಶುರಾಮರನ್ನು ಪೂಜಿಸಬೇಕು.
- ಇಡೀ ವೈಶಾಖ ಮಾಸದಲ್ಲಿ ನೆಲದ ಮೇಲೆ ಮಲಗಬೇಕು.

ವೈಶಾಖ ಮಾಸವು ಹಿಂದೂ ಕ್ಯಾಲೆಂಡರ್‌ನ ಎರಡನೇ ಮಾಸವಾಗಿದ್ದು, ಈ ಮಾಸದಲ್ಲಿ ಭಗವಾನ್‌ ವಿಷ್ಣುವನ್ನು ಅಥವಾ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸುವುದು ನಿಮಗೆ ಶುಭ ಫಲಗಳನ್ನು ನೀಡುತ್ತದೆ.
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ