ಆ್ಯಪ್ನಗರ

ಬುಧವಾರ ಗಣೇಶನನ್ನು ಪೂಜಿಸಿದರೆ ಸಿಗುವ ಪ್ರಯೋಜನಗಳೇನು ಗೊತ್ತಾ?

ಬುಧವಾರ ಗಣೇಶನನ್ನು ಆರಾಧಿಸುವುದು ಅತ್ಯಂತ ಶ್ರೇಷ್ಠ. ಈ ದಿನ ಗಣೇಶನನ್ನು ಹೇಗೆ ಪೂಜಿಸಬೇಕು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

Vijaya Karnataka Web 4 Feb 2020, 7:02 pm
ಯಾವುದೇ ಕಾರ್ಯಗಳನ್ನು ಆರಂಭಿಸುವ ಮೊದಲು ನಾವು ವಿಘ್ನಗಳನ್ನು ನಿವಾರಿಸುವ ಗಣೇಶನನ್ನು ಪ್ರಾರ್ಥಿಸುತ್ತೇವೆ. ಸಕಲ ವರಗಳನ್ನು ಪಾಲಿಸುವ ಗಣೇಶನಿಗೆ ಬುಧವಾರ ಸಲ್ಲಿಸುವ ಪೂಜೆಯು ವಿಶೇಷವಾದದ್ದು. ಈ ದಿನ ಗಣೇಶನನ್ನು ಪೂಜಿಸಿದರೆ ಎಲ್ಲಾ ಕಷ್ಟಗಳು ನಿವಾರಣೆಯಾಗಿ ಭಕ್ತರ ಆಸೆಯನ್ನು ಈಡೇರಿಸುತ್ತಾನೆ. ಬುಧವಾರ ಗಣೇಶನನ್ನು ಆರಾಧಿಸುವುದು ಅತ್ಯಂತ ಶ್ರೇಷ್ಠ. ಈ ದಿನ ಗಣೇಶನನ್ನು ಹೇಗೆ ಪೂಜಿಸಬೇಕು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
Vijaya Karnataka Web how to worship lord ganesha


ಬುಧವಾರ ಗಣೇಶನ ಆರಾಧನೆ ಹೀಗಿರಲಿ
ಭಕ್ತರು ಬುಧವಾರದಂದು ಗಣೇಶನ ಜೊತೆಗೆ ದುರ್ಗಾದೇವಿಯನ್ನೂ ಪೂಜಿಸಬೇಕು. 'ಓಂ ಬು ಬುಧಾಯ ನಮಃ' ಈ ಮಂತ್ರವನ್ನು ಸ್ಪಟಿಕ ಮಣಿಯ ಜಪಮಾಲೆಯೊಂದಿಗೆ 108 ಬಾರಿ ಜಪಿಸಬೇಕು.ಬುಧವಾರದಂದು 21 ಗರಿಕೆಗಳನ್ನು ಅರ್ಪಿಸುವ ಮೂಲಕ ವಿನಾಯಕನನ್ನು ಸಂತುಷ್ಟಗೊಳಿಸಬಹುದು. ಜೊತೆಗೆ ಗಣೇಶನಿಗೆ ಪ್ರಿಯವಾದ ಮೋದಕ, ಲಡ್ಡನ್ನೂ ಪೂಜೆಯ ಸಂದರ್ಭದಲ್ಲಿ ಅರ್ಪಿಸಬಹುದು. ಬುಧವಾರ ಮಾತ್ರವಲ್ಲದೇ ಚತುರ್ಥಿಯಂದೂ ಗಣೇಶನನ್ನು ಪೂಜಿಸಬಹುದು.

ವಿಷ್ಣು ಪೂಜೆಯನ್ನು ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ..

ಬುಧವಾರದ ಗಣೇಶ ಪೂಜೆಯಿಂದ ಸಿಗುವ ಪ್ರಯೋಜನಗಳೇನು
  • ಗಣೇಶನು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತಾನೆ.
  • ನಿಮ್ಮ ಬುದ್ಧಿಶಕ್ತಿಯೂ ಗಣೇಶನ ಆಶೀರ್ವಾದದಿಂದ ತೀಕ್ಷ್ಣವಾಗುವುದು.
  • ನಿಮ್ಮಲ್ಲಿ ಮಾನಸಿಕ ಶಕ್ತಿ ಹೆಚ್ಚಾಗುವುದು.
  • ನಿಮ್ಮಲ್ಲಿರುವಂತಹ ಆಜ್ಞಾಚಕ್ರ ಜಾಗೃತವಾಗುವುದು.
  • ಭಕ್ತರ ಸೂಕ್ಷ್ಮ ದೇಹವು ಶುದ್ಧವಾಗುವುದು
  • ಹಣಕಾಸು ಸಮಸ್ಯೆಗಳಿದ್ದಲ್ಲಿ ನಿವಾರಣೆಯಾಗಿ, ಆರ್ಥಿಕವಾಗಿ ಬಲಗೊಳ್ಳುವಿರಿ.
ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದ ಹತ್ತು ಪೂಜೆಗಳು ಯಾವುವು ಗೊತ್ತಾ?
ಗಣೇಶನ ಪೂಜೆಗೆ ಈ ಸಾಮಾಗ್ರಿಗಳನ್ನು ಬಳಸಿ
1. ಮೋದಕ
2 ಗರಿಕೆ
3 ಗೊಂಡೆ ಹೂವು
4 ಶಂಖ
5. ಹಣ್ಣು, ಬಾಳೆಹಣ್ಣು, ಕಬ್ಬು ಇದ್ದರೆ ಒಳ್ಳೆಯದು.

ಆಂಜನೇಯನ ಆಶೀರ್ವಾದ ಪಡೆಯಲು ಈ ವಸ್ತುಗಳನ್ನು ಅರ್ಪಿಸಬೇಕು..!

ಗಣೇಶನ ಮನೆಯಲ್ಲಿ ಇಡುವ ಮುನ್ನ,
  • ಗಣೇಶನ ಮೂರ್ತಿಯ ಹಿಂಭಾಗವು ಗೋಡೆಗೆ ಅಭಿಮುಖವಾಗಿರಬೇಕು. ಯಾವುದೇ ಕಿಟಕಿ ಹಾಗೂ ಬಾಗಿಲುಗಳು ಗಣೇಶನ ಮೂರ್ತಿಯ ಹಿಂಭಾಗದಲ್ಲಿ ಇರಬಾರದು.
  • ಗಣೇಶನ ಮೂರ್ತಿಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬಾರದು.
  • ವಿನಾಯಕನ ವಿಗ್ರಹವನ್ನು ಇಡಲು ಸೂಕ್ತ ಜಾಗವೆಂದರೆ ಪೂರ್ವ ಅಥವಾ ಪಶ್ಚಿಮ ದಿಕ್ಕು.
  • ಗಣೇಶನ ವಿಗ್ರಹವನ್ನು ಶೌಚಾಲಯದ ಗೋಡೆಗೆ ತಾಗಿಕೊಂಡಿರುವ ಕೋಣೆಯಲ್ಲಿ ಇಡಬಾರದು.
  • ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಡುವುದಾದರೆ ಶುದ್ಧ ಲೋಹದ ವಿಗ್ರಹವನ್ನು ಇಟ್ಟು ಪೂಜಿಸಬೇಕು.
  • ಮನೆಯೊಳಗಿರುವ ಮೆಟ್ಟಿಲುಗಳ ಕೆಳಭಾಗದಲ್ಲಿ ಗಣೇಶನ ವಿಗ್ರಹವನ್ನು ಇಡಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ