ಆ್ಯಪ್ನಗರ

ಈ 5 ಮರಗಳನ್ನು ಪೂಜಿಸಿದರೆ ಹಣದ ಕೊರತೆಯೇ ಇರೋದಿಲ್ಲ..! ಆ ಮರಗಳಾವುವು..?

ಹಿಂದೂ ಧರ್ಮಗ್ರಂಥಗಳಲ್ಲಿ ಈ 5 ಮರಗಳಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಈ 5 ಮರಗಳನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣದ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗಿದೆ. ಆ 5 ಮರಗಳು ಯಾವುವು..? ಈ ಮರಗಳನ್ನು ಪೂಜಿಸುವುದು ಹೇಗೆ..?

Vijaya Karnataka Web 22 Jul 2021, 8:51 am
ಮರಗಿಡಗಳಿಲ್ಲದ ಪರಿಸರವನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಹಸಿರು ಸಂಪತ್ತು ಭೂಮಿಗೆ ಆಧಾರ ಎಂದು ವಿಜ್ಞಾನ ಹೇಳುತ್ತದೆ. ಹಿಂದೂ ಸಂಸ್ಕೃತಿಯಲ್ಲೂ ಸಹ ಮರ, ಗಿಡಗಳನ್ನು ಪೂಜನೀಯವಾಗಿ ಕಾಣಲಾಗುತ್ತದೆ. ಧರ್ಮ ಗ್ರಂಥಗಳಲ್ಲಿ, ಹಿಂದೂ ಸಂಸ್ಕೃತಿಯಲ್ಲಿ ಕೆಲವು ಗಿಡಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಅಂತಹ ಐದು ವಿಶೇಷ ಮರಗಳನ್ನು ತಿಳಿಯೋಣ. ಈ 5 ಮರಗಳನ್ನು ಪೂಜಿಸಿದರೆ ನಿಮ್ಮ ಜೀವನವು ಹೇಗೆ ಸಮೃದ್ಧಿಯಾಗುತ್ತದೆ ಎಂದು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.
Vijaya Karnataka Web worship these 5 holy trees it will remove your all money problems
ಈ 5 ಮರಗಳನ್ನು ಪೂಜಿಸಿದರೆ ಹಣದ ಕೊರತೆಯೇ ಇರೋದಿಲ್ಲ..! ಆ ಮರಗಳಾವುವು..?


​ಬನ್ನಿ ಮರ

ಬನ್ನಿ ಮರವು ಧರ್ಮ ಗ್ರಂಥಗಳಲ್ಲಿ ಪವಿತ್ರವಾದ ಮರಗಳಲ್ಲಿ ಒಂದು. ಪ್ರತಿದಿನ ಸಂಜೆ ಬನ್ನಿ ಮರದ ಕೆಳಗೆ ಎಳ್ಳಿನ ದೀಪವನ್ನು ಬೆಳಗಿಸಿದರೆ ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಸಂಜೆ ಮನೆಯಲ್ಲಿ ಪೂಜಿಸಿದ ನಂತರ ದೇವಾಲಯದ ಬನ್ನಿ ಮರದ ಕೆಳಗೆ ಎ‍ಳ್ಳಿನ ದೀಪವನ್ನು ಬೆಳಗಿಸಿ.

ಚಾತುರ್ಮಾಸದ 4 ತಿಂಗಳು ಈ ವಸ್ತುಗಳನ್ನೇ ಸೇವಿಸಿ..! ಇಲ್ಲದಿದ್ದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ..

ನೀವು ಬನ್ನಿ ಮರವನ್ನು ಮನೆಯ ಅಂಗಳದಲ್ಲಿ ನೆಡಲು ಬಯಸಿದರೆ, ನಿಮ್ಮ ಮನೆಯ ಪಶ್ಚಿಮ ದಿಕ್ಕಿಗೆ ನೆಡಿವುದು ವಾಸ್ತು ಪ್ರಕಾರ ಸೂಕ್ತ. ನಿಮಗೆ ವಾಸ್ತು ಶಾಸ್ತ್ರದ ಅರಿವಿಲ್ಲದಿದ್ದರೆ ಸೂಕ್ತ ಜ್ಯೋತಿಷಿಗಳ ಬಳಿ ಹೋಗುವುದು ಅನಿವಾರ್ಯ. ಏಕೆಂದರೆ ಬೇರೆ ದಿಕ್ಕಿನಲ್ಲಿ ಬನ್ನಿ ಮರವನ್ನು ನೆಟ್ಟರೆ ಶನಿಯು ಹೆಗಲೇರುತ್ತಾನೆ. ಬನ್ನಿ ಮರವನ್ನು ನೆಟ್ಟ ಜಾಗವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿ. ಬನ್ನಿ ಮರದ ಕೆಳಗೆ ಪ್ರತಿ ಶನಿವಾರ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸುವುದರಿಂದ ಶನಿ ದೋಷಕ್ಕೆ ಪರಿಹಾರ ಸಿಗುತ್ತದೆ.

4 ಮುಖದ ರುದ್ರಾಕ್ಷಿ: ಇದನ್ನು ಯಾರು ಧರಿಸಬೇಕು.? ಇಲ್ಲಿದೆ ಪ್ರಯೋಜನ, ಮಹತ್ವ, ಧಾರಣೆ ವಿಧಾನ..!

​ಅರಳಿ ಮರ

24 ಗಂಟೆಯೂ ಆಮ್ಲಜನಕವನ್ನು ನೀಡುವ ಮರವೇಂದರೆ ಅದು ಅರಳಿ ಮರ. ಇದು ಆರೋಗ್ಯ ದೃಷ್ಟಿಕೋನದಿಂದ ಪ್ರಯೋಜನಕರಿ ಹಾಗೂ ಧಾರ್ಮಿಕ ದೃಷ್ಟಿಕೋನದಿಂದಲೂ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಪೂರ್ವಜರು ಅರಳಿ ಮರದಲ್ಲಿ ವಾಸಿಸುತ್ತಾರೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗುತ್ತದೆ. ಅರಳಿ ಮರವನ್ನು ಪೂಜಿಸುವ ಮೂಲಕ ನಮ್ಮ ಪ್ರಾರ್ಥನೆಗಳು ದೇವರಿಗೆ ನೇರವಾಗಿ ತಲುಪುತ್ತದೆ, ಆದ್ದರಿಂದ. ಅರಳಿ ಮರದ ಕೆಳಗೆ ಪ್ರತಿ ಶನಿವಾರ ದೀಪವನ್ನು ಬೆಳಗಿಸುವ ಮೂಲಕ, ಶನಿ ದೇವರ ಕೃಪೆಗೆ ಪಾತ್ರರಾಗುತ್ತೀರಿ.

​ಮನಿ ಪ್ಲಾಂಟ್‌

ವಾಸ್ತು ಪ್ರಕಾರ ಮನಿ ಪ್ಲಾಂಟ್‌ ಬಹಳ ವಿಶೇಷವೆಂದು ಹೇಳಲಾಗುತ್ತದೆ. ಈ ಸಸ್ಯ ನೋಡಲು ಕೂಡ ಆಕರ್ಷಕ ಮತ್ತು ಸುಂದರವಾಗಿರುತ್ತದೆ. ಇದು ಸಕಾರಾತ್ಮಕ ಶಕ್ತಿಯನ್ನು ಸಹ ನೀಡುತ್ತದೆ . ನೀವು ಮನಿ ಪ್ಲಾಂಟ್‌ ಅನ್ನು ಮನೆಯ ಒಳಗೆ ಕೂಡ ನೆಡಬಹುದು ಅಥವಾ ಮನೆಯೊಳಗೆ ನೆಡಲು ಸಾಧ್ಯವಾಗದಿದ್ದರೆ ಬಾಟಲಿಯಲ್ಲಿ ಹಾಕಿ ಮನೆಯೊಳಗೆ ನೀರಿನಲ್ಲಿ ಇಡಬಹುದು. ಪ್ರತಿ ದಿನ ಈ ಸಸ್ಯವನ್ನು ನೋಡುವುದರಿಂದ ನಿಮ್ಮೊಳಗೆ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ.

ಚಾತುರ್ಮಾಸದಲ್ಲಿ ಮರೆತೂ ಇವುಗಳನ್ನು ತಿನ್ನದಿರಿ..! ಈ ತಪ್ಪುಗಳಿಂದ ನರಕ ಗ್ಯಾರೆಂಟಿ..

​ಬಾಳೆ ಗಿಡ

ಬಾಳೆ ಗಿಡಕ್ಕೆ ಹಿಂದೂ ಧರ್ಮದ ಪ್ರಕಾರ ವಿಶೇಷ ಪ್ರಾಮುಖ್ಯತೆ ಇದೆ . ಬಾಳೆ ಗಿಡವನ್ನು ಗುರುವಾರ ಪೂಜಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಬಾಳೆ ಗಿಡವನ್ನು ಪೂಜಿಸುವುದರಿಂದ ನಿಮ್ಮ ಗುರು ಬಲ ಪ್ರಾಪ್ತಿಯಾಗುತ್ತದೆ. ಹಾಗು ವಿಷ್ಣುವಿನ ಅನುಗ್ರಹವು ದೊರೆಯುತ್ತದೆ. ಪ್ರತಿ ಗುರುವಾರ ಬಾಳೆ ಗಿಡಕ್ಕೆ ಕಡಲೆ ಬೆಳೆ ಮತ್ತು ಬೆಲ್ಲವನಿಟ್ಟು ಪೂಜೆ ಮಾಡಿ. ಗುರುವಾರ ಉಪವಾಸ ಮಾಡಿ ಬಾಳೆ ಗಿಡವನ್ನು ಪೂಜಿಸಿ ಅರ್ಘ್ಯವನ್ನು ಅರ್ಪಿಸಿ.

ಬುಧವಾರ ತುಳಸಿ ಎಲೆ ತಿಂದರೆ ಎಲ್ಲವೂ ಶುಭ..! ಬುಧವಾರ ಏನು ಮಾಡಬೇಕು..?

​ತುಳಸಿ ಗಿಡ

ತುಳಸಿಯನ್ನು ವಿಷ್ಣುವಿನ ಅಚ್ಚುಮೆಚ್ಚಿನ ಗಿಡವೆಂದು ಪರಿಗಣಿಸಲಾಗಿದೆ ಮತ್ತು ಇದು ಲಕ್ಷ್ಮಿ ದೇವಿಯ ರೂಪ ಎಂದು ಕೂಡ ಹೇಳಲಾಗಿದೆ. ತುಳಸಿ ಗಿಡದ ಕೆಳಗೆ ಪ್ರತಿದಿನ ತುಪ್ಪದ ದೀಪವನ್ನು ಬೆಳಗಿಸಿದರೆ ನಿಮ್ಮ ಮನೆಯಲ್ಲಿನ ಸಂಪತ್ತು ಹೆಚ್ಚಾಗುತ್ತದೆ ಮತ್ತು ಲಕ್ಷ್ಮಿ ದೇವಿಯೂ ಸಹ ನಿಮ್ಮೊಂದಿಗೆ ನೆಲೆಸುತ್ತಾಳೆ. ತುಳಸಿ ಗಿಡಕ್ಕೆ ಪ್ರತಿದಿನ ಅರ್ಘ್ಯವನ್ನು ಅರ್ಪಿಸಬೇಕು. ತುಳಸಿ ಗಿಡಕ್ಕೆ ಭಾನುವಾರದಂದು ಯಾವುದೇ ಕಾರಣಕ್ಕೂ ಅರ್ಘ್ಯವನ್ನು ಅರ್ಪಿಸಬಾರದು. ಹಾಗೇಯೆ ತುಳಸಿ ಎಲೆಗಳನ್ನು ಏಕಾದಶಿಯ ದಿನದಂದು ಕೀಳಬಾರದು.

ಮಹಾಭಾರತದಲ್ಲಿ 21 ಬಾರಿ ಸೋಲುಂಡಿದ್ದ ಮಹಾ ಪರಾಕ್ರಮಿ ಅರ್ಜುನ..! ಹೇಗೆ ಗೊತ್ತಾ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ