ಆ್ಯಪ್ನಗರ

ಇಂದು ಗಣೇಶನಿಗೆ ದುರ್ವಾ ಅರ್ಪಿಸಿದರೆ ಶ್ರೀಮಂತರಾಗೋದು ಗ್ಯಾರೆಂಟಿ..! ಈ ಮಂತ್ರ ಪಠಿಸಿ

ಗಣೇಶನಿಗೆ ಪ್ರಿಯವಾದ ವಸ್ತುಗಳಲ್ಲಿ ದುರ್ವಾ ಅಥವಾ ಗರಿಕೆ ಕೂಡ ಒಂದು. ಬುಧವಾರ ಗಣೇಶನಿಗೆ ದುರ್ವಾವನ್ನೇಕೇ ಅರ್ಪಿಸಬೇಕು..? ಗಣೇಶನಿಗೆ ದುರ್ವಾ ಅರ್ಪಿಸುವುದರ ಪ್ರಯೋಜನವೇನು..? ಬುಧವಾರ ಗಣೇಶನಿಗೆ ಎಷ್ಟು ದುರ್ವಾವನ್ನು ಅರ್ಪಿಸಬೇಕು..? ಗಣೇಶನಿಗೆ ದುರ್ವಾ ಅರ್ಪಿಸುವಾಗ ಯಾವ ಮಂತ್ರ ಪಠಿಸಬೇಕು..?

Vijaya Karnataka Web 17 Mar 2021, 9:23 am
ಎಲ್ಲಾ ದೇವರುಗಳು ಮತ್ತು ದೇವತೆಗಳು ಅವರಿಗೆ ಪ್ರಿಯವಾದುದ್ದನ್ನು ಹೊಂದಿದ್ದಾರೆ. ಅಂದರೆ ಅವರ ಆರಾಧನೆಯಲ್ಲಿ ಬಳಸುವ ವಸ್ತು. ಅಂತೆಯೇ, ಗಣೇಶನು ಕೂಡ ದುರ್ವಾ ಅಥವಾ ಗರಿಕೆ ಹುಲ್ಲು ತುಂಬಾ ಇಷ್ಟಪಡುತ್ತಾನೆ ಮತ್ತು ದುರ್ವಾವನ್ನು ಅವನ ಆರಾಧನೆಯಲ್ಲಿ ಅರ್ಪಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬುಧವಾರವನ್ನು ಗಣಪತಿಗೆ ಸಮರ್ಪಿಸಲಾಗಿದೆ ಮತ್ತು ಈ ಬಾರಿ ಪಾಲ್ಗುಣ ತಿಂಗಳ ವಿನಾಯಕ ಚತುರ್ಥಿ ಕೂಡ ಈ ದಿನದಂದು ಬೀಳುತ್ತಿರುವುದು ಬಹಳ ಶುಭ ಕಾಕತಾಳೀಯವಾಗಿದೆ. ಈ ದಿನ ಗಣೇಶನನ್ನು ಆರಾಧಿಸುವುದರಿಂದ ನಮ್ಮ ಜೀವನದಿಂದ ಎಲ್ಲಾ ರೀತಿಯ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಯಶಸ್ಸನ್ನು ಸಾಧಿಸಲಾಗುತ್ತದೆ. ಇಂದು ಗಣೇಶನನ್ನು ಪೂಜಿಸುವುದರಿಂದ ಹಣದ ಸಮಸ್ಯೆ ದೂರಾಗುತ್ತದೆ ಮತ್ತು ಓರ್ವ ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತಾನೆ. ಹಾಗಾದರೆ ನಾವಿಂದು ಏನು ಮಾಡಬೇಕು..?
Vijaya Karnataka Web you should know the benefits of offering durva to lord ganesha on wednesday
ಇಂದು ಗಣೇಶನಿಗೆ ದುರ್ವಾ ಅರ್ಪಿಸಿದರೆ ಶ್ರೀಮಂತರಾಗೋದು ಗ್ಯಾರೆಂಟಿ..! ಈ ಮಂತ್ರ ಪಠಿಸಿ


​ದುರ್ವಾವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ

ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಂಸ್ಕೃತಿಗಳಲ್ಲಿ, ದುರ್ವಾ ಹುಲ್ಲನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಮಂಗಳಕರ ಕೆಲಸಗಳಲ್ಲಿ ದುರ್ವಾ ಹುಲ್ಲಿನ ಬಳಕೆ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಮದುವೆ ಅಥವಾ ಮುಂಡನ ದ ಎಲ್ಲಾ ಕಾರ್ಯಗಳು ಪ್ರಾರಂಭವಾಗುವ ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ ಮತ್ತು ಎಲ್ಲೆಲ್ಲಿ ಗಣಪತಿ ಇರುತ್ತದೆಯೋ ಅಲ್ಲಿ ಖಂಡಿತವಾಗಿಯೂ ದುರ್ವಾ ಹುಲ್ಲಿನ ಬಳಕೆ ಇದ್ದೇ ಇರುತ್ತದೆ. ದುರ್ವಾ ಹುಲ್ಲನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ.

ಕೆಲಸಕ್ಕೆ ಹೋಗುವ ಮುನ್ನ ಈ ಮಂತ್ರ ಪಠಿಸಿದರೆ ಯಶಸ್ಸು..! ಲಾಲ್‌ ಕಿತಾಬ್‌ನಲ್ಲಿದೆ ಪರಿಹಾರ

​ದುರ್ವಾ ಮತ್ತು ಸಮುದ್ರ ಮಂಥನದ ನಡುವಿನ ಸಂಬಂಧ

ದುರ್ವಾ ಕುರಿತಾದ ಪೌರಾಣಿಕ ನಂಬಿಕೆಯೆಂದರೆ, ಸಮುದ್ರ ಮಥಿಸುವ ಸಮಯದಲ್ಲಿ, ದೇವರುಗಳು ಮತ್ತು ರಾಕ್ಷಸರ ನಡುವೆ ಅಮೃತಕ್ಕಾಗಿ ಜಗಳವಾದಾಗ, ಅದೇ ಸಮಯದಲ್ಲಿ, ಕೆಲವೊಂದು ಅಮೃತದ ಹನಿಗಳು ಅಲ್ಲೇ ಪಕ್ಕದಲ್ಲಿ ದುರ್ವಾ ಬೆಳದಿದ್ದ ನೆಲದ ಮೇಲೆ ಬಿದ್ದವು. ಅಂದಿನಿಂದ ದುರ್ವಾ ಹುಲ್ಲು ಅಮರತ್ವವನ್ನು ಪಡೆದುಕೊಂಡಿತು. ಆದ್ದರಿಂದ ನಾವು ಎಷ್ಟೇ ಬಾರಿ ದುರ್ವಾವನ್ನು ಕಿತ್ತು ಹಾಕಿದರು ಅಲ್ಲಿ ಪದೇ ಪದೇ ದುರ್ವಾ ಬೆಳೆಯಲು ಇದೇ ಮುಖ್ಯ ಕಾರಣವಾಗಿದೆ.

ವಿನಾಯಕ ಚತುರ್ಥಿ 2021: ಈ ಮಂತ್ರ ಪಠಿಸಿದರೆ ಆಸ್ತಿ ವಿವಾದವೇ ದೂರ..! ಮನಸ್ಸಿಗೆ ಶಾಂತಿ..

​ಬುಧವಾರದಂದು ದುರ್ವಾ ಪರಿಹಾರ

ನಿಮ್ಮ ಮನೆಯಲ್ಲಿ ನಿರಂತರವಾಗಿ ಹಣದ ಸಮಸ್ಯೆ ಎದುರಾಗುತ್ತಿದ್ದರೆ ಮತ್ತು ಯಾವುದೇ ಕೆಲಸದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತಿಲ್ಲವಾದರೆ, ಆಗ ನೀವು ಬುಧವಾರ ದುರ್ವಾದ ಈ ಪರಿಹಾರವನ್ನು ಪ್ರಯತ್ನಿಸಬೇಕು. ಬುಧವಾರ ಬೆಳಗ್ಗೆ ಸ್ನಾನ ಮಾಡಿದ ನಂತರ ಗಣೇಶ ದೇವಸ್ಥಾನಕ್ಕೆ ಹೋಗಿ 11 ಅಥವಾ 21 ದುರ್ವಾ ಕಟ್ಟುಗಳನ್ನು ಅಥವಾ ಗಂಟುಗಳನ್ನು ಗಣೇಶನಿಗೆ ಅರ್ಪಿಸಿ. ಇದನ್ನು ಮಾಡುವುದರಿಂದ, ನಿಮ್ಮ ಕೆಲಸದಲ್ಲಿ ಎದುರಾಗುವ ಎಲ್ಲಾ ರೀತಿಯ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ನಿಮಗೆ ಎಂದಿಗೂ ಹಣದ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ.

ನಾಳೆ ವಿನಾಯಕ ಚತುರ್ಥಿ: ಇಲ್ಲಿದೆ ಪೂಜೆ ವಿಧಾನ, ಮಹತ್ವ ಮತ್ತು ಪ್ರಯೋಜನ..!

​ದುರ್ವಾದಿಂದ ಇದನ್ನು ಮಾಡಿ

ನಿಮ್ಮ ಕೈಯಲ್ಲಿ ಹಣವು ಉಳಿಯದಿದ್ದರೆ ಮತ್ತು ಯಾವಾಗಲೂ ವಿನಃ ಕಾರಣ ಹಣವು ಖರ್ಚಾಗುತ್ತಿದ್ದರೆ, ನೀವು ಬುಧವಾರ ಈ ಪರಿಹಾರವನ್ನು ಪ್ರಯತ್ನಿಸಬೇಕು. ನೀವು ಹಸಿರು ದುರ್ವಾ ಹುಲ್ಲನ್ನು ಕೆಂಪು ಹಸುವಿಗೆ ಬುಧವಾರ ಆಹಾರವಾಗಿ ನೀಡಿದರೆ, ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಮತ್ತು ಎಲ್ಲಾ ರೀತಿಯ ಜಗಳಗಳನ್ನು ಮತ್ತು ಮನಸ್ಥಾಪಗಳನ್ನು ಮನೆಯಿಂದ ತೆಗೆದುಹಾಕಲಾಗುತ್ತದೆ.

ಮಹಾಲಕ್ಷ್ಮಿಯ 18 ಪುತ್ರರ ಹೆಸರಿನಿಂದ ಹಣದ ಸಮಸ್ಯೆಯೇ ಮಾಯ..! ನಿತ್ಯ ಪಠಿಸಿದರೆ ಫಲ

​ಈ ಮಂತ್ರದೊಂದಿಗೆ ದುರ್ವಾವನ್ನು ಅರ್ಪಿಸಿ

ವಿನಾಯಕ ಚತುರ್ಥಿಯಂದು ಗಣಪತಿಗೆ ದುರ್ವಾವನ್ನು ಅರ್ಪಿಸುವ ಮೂಲಕ, ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಆಶಯವನ್ನು ಗಣಪತಿಯ ಮುಂದೆ ಇರಿಸಿದ ನಂತರ, ಈ ಕೆಳಗಿನ ಮಂತ್ರದೊಂದಿಗೆ 21 ದುರ್ವಾ ಗಂಟುಗಳನ್ನು ಅರ್ಪಿಸಿ.

ಮನೆಯಲ್ಲಿ ಈ 5 ಸಸ್ಯಗಳು ಒಣಗಿದರೆ ದುರಾದೃಷ್ಟ ಖಂಡಿತ..! ಎಚ್ಚರ..

'ಶ್ರೀ ಗಣೇಶಾಯ ನಮಃ ದುರ್ವಾಂಕುರಾನ್ ಸಮರ್ಪಯಾಮಿ'

21 ದುರ್ವಾಗಳನ್ನು ಸೇರಿಸುವ ಮೂಲಕ ಗಂಟು ಹಾಕಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಗಣಪತಿಯ ಮೇಲ್ಭಾಗಕ್ಕೆ ಯಾವಾಗಲೂ ದುರ್ವಾವನ್ನು ಅರ್ಪಿಸಿ. ದುರ್ವಾವನ್ನು ಮರೆತೂ ಕೂಡ ಆತನ ಪಾದಕ್ಕೆ ಅರ್ಪಿಸಬೇಡಿ.

ಹನುಮನನ್ನು ಪೂಜಿಸಿದರೆ ಸಾಲವೇ ಇರದು..! ಲಾಲ್‌ ಕಿತಾಬ್‌ನಲ್ಲಿದೆ ಪರಿಹಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ