ಆ್ಯಪ್ನಗರ

ಶಿವನಿಗೆ ಗಂಗಾ ಜಲ ಅರ್ಪಿಸಿದರೆ ಉದ್ಯೋಗದಲ್ಲಿ ಪ್ರಗತಿ..! ಗಂಗೆಯೇ ಶ್ರೇಷ್ಠ

ಧರ್ಮಗ್ರಂಥಗಳಲ್ಲಿ ಗಂಗಾ ಜಲವನ್ನು ಅತ್ಯಂತ ಪವಿತ್ರವೆಂದು ಉಲ್ಲೇಖಿಸಲಾಗಿದೆ. ಇದರೊಂದಿಗೆ ಗಂಗಾ ಜಲದ ಮಹತ್ವ ಮತ್ತು ಪ್ರಯೋಜನದ ಕುರಿತು ಕೂಡ ಹೇಳಲಾಗಿದೆ. ಗಂಗಾ ಜಲದ ಪ್ರಯೋಜನವೇನು..? ಗಂಗಾ ಜಲದ ಮಹತ್ವವೇನು..? ಧರ್ಮಗ್ರಂಥವವು ಗಂಗಾ ಜಲದ ಬಗ್ಗೆ ಏನೆಂದು ಹೇಳುತ್ತದೆ..?

Vijaya Karnataka Web 19 Jan 2021, 3:39 pm
ಪೂಜಾ ವಿಧಿ - ವಿಧಾನಗಳಲ್ಲಿ ಗಂಗಾ ನೀರಿಗೆ ವಿಶೇಷ ಪ್ರಾಮುಖ್ಯತೆ ಇದೆ ಮತ್ತು ಆಶಯಗಳನ್ನು ಪೂರೈಸಲು ಗಂಗಾ ನೀರು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಗಂಗಾ ದೇವಿಯು ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆದಿರುವುದು ಇದೇ ಕಾರಣಕ್ಕಾಗಿ. ಗಂಗಾ ನೀರನ್ನು ಧರ್ಮಗ್ರಂಥಗಳಲ್ಲಿ ಅಮೃತವೆಂದು ಪರಿಗಣಿಸಲಾಗುತ್ತದೆ. ಗಂಗಾ ನೀರಿನ ಈ ತಂತ್ರಗಳಿಂದ ಜೀವನದ ಎಲ್ಲಾ ಸಮಸ್ಯೆಗಳು ನಾಶವಾಗುತ್ತವೆ ಎನ್ನುವ ನಂಬಿಕೆಯಿದೆ. ಅಲ್ಲದೆ, ನಮ್ಮೆಲ್ಲಾ ಆಸೆಗಳು ಕೂಡ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಗಂಗಾ ಜಲ ಯಾವೆಲ್ಲಾ ಸಮಸ್ಯೆಗಳಿಗೆ ಪರಿಣಾಮಕಾರಿ ತಿಳಿದುಕೊಳ್ಳಿ.
Vijaya Karnataka Web ಶಿವನಿಗೆ ಗಂಗಾ ಜಲ ಅರ್ಪಿಸಿದರೆ ಉದ್ಯೋಗದಲ್ಲಿ ಪ್ರಗತಿ..! ಗಂಗೆಯೇ ಶ್ರೇಷ್ಠ


ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ..? ಗುರುಸ್ವಾಮಿಗಳೆಂದರೆ ಯಾರು..?

1. ಗಂಗಾ ಜಲದಿಂದ ಹೀಗೆ ಮಾಡಿದರೆ ಮೋಕ್ಷ ಪ್ರಾಪ್ತಿ:

ಜ್ಯೋತಿಷ್ಯದ ಪ್ರಕಾರ, ಭಗವಾನ್ ಶಂಕರನಿಗೆ ಅಥವಾ ಶಿವನಿಗೆ ನಿಯಮಿತವಾಗಿ ಗಂಗಾ ನೀರನ್ನು ಅರ್ಪಿಸಬೇಕು. ಭಗವಾನ್‌ ಶಿವನಿಗೆ ಗಂಗಾ ನೀರನ್ನು ಅರ್ಪಿಸುವ ಮೂಲ ಶಿವನು ಅತ್ಯಂತ ಸಂತೋಷಗೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ಅಲ್ಲದೆ, ಹಾಗೆ ಮಾಡುವ ವ್ಯಕ್ತಿಯು ಮೋಕ್ಷ ಮತ್ತು ಶುಭ ಪ್ರಯೋಜನಗಳನ್ನು ಪಡೆಯುತ್ತಾನೆ ಎನ್ನುವ ಉಲ್ಲೇಖವಿದೆ. ಆದ್ದರಿಂದ ಗಂಗಾಧರನಾದ ಈಶ್ವರನಿಗೆ ಗಂಗಾಜಲವನ್ನು ಅರ್ಪಿಸಬೇಕು.

ಭಗವದ್ಗೀತೆಯ ಈ ಸಾಲು ಸಂಪತ್ತನ್ನೇ ನೀಡುವುದು..! ಇವು ಪ್ರಾಚೀನ ಪರಿಹಾರಗಳು

2. ಸಂಪತ್ತು ಮತ್ತು ಉದ್ಯೋಗ ಪಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಿ:

ಯಾವುದೇ ವ್ಯಕ್ತಿಯ ಜೀವನದಲ್ಲಿ ಹಣ ಮತ್ತು ಉದ್ಯೋಗ ಸಮಸ್ಯೆಗಳಿದ್ದರೆ, ಭಗವಾನ್‌ ಶಿವನಿಗೆ ಗಂಗಾ ನೀರನ್ನು ಅರ್ಪಿಸಿ. ಆದರೆ, ಶಿವನಿಗೆ ಗಂಗಾಜಲವನ್ನು ಅರ್ಪಿಸುವಾಗ ಯಾವಾಗಲೂ ಹಿತ್ತಾಳೆಯ ಕಮಂಡಲದಲ್ಲಿ ಅರ್ಪಿಸಬೇಕು. ಇದರ ನಂತರ ಅದರಲ್ಲಿ ಒಂದು ಬಿಲ್ವಪತ್ರೆ ಮತ್ತು ಕಮಲದ ಹೂವನ್ನು ಹಾಕಿ ಭೋಲೆನಾಥನಿಗೆ ಅರ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷವು ತುಂಬಿರುತ್ತದೆ ಎನ್ನುವ ನಂಬಿಕೆಯಿದೆ. ಇದರ ಜೊತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.

ಹನುಮಾನ್ ಪೂಜೆಯ ಬಗ್ಗೆ ನಿಮಗೆಷ್ಟು ಗೊತ್ತು..? ಈ ಧ್ಯಾನ ಮಂತ್ರವನ್ನೇ ಜಪಿಸಿ..!

3. ಸಾಲದಿಂದ ತೊಂದರೆಗೀಡಾಗಿದ್ದರೆ, ಈ ಕ್ರಮಗಳನ್ನು ತೆಗೆದುಕೊಳ್ಳಿ:
ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಸಾಲದಿಂದ ತೊಂದರೆಗೀಡಾಗಿದ್ದರೆ, ಆ ವ್ಯಕ್ತಿಯು ಗಂಗಾ ನೀರನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಆದರೆ ಗಂಗಾ ನೀರನ್ನು ಹಿತ್ತಾಳೆಯ ಬಾಟಲಿಯಲ್ಲಿ ತುಂಬಿಸಿ ಅದನ್ನು ನಿಮ್ಮ ಕೋಣೆಯಲ್ಲಿ ಈಶಾನ್ಯ ಕೋನದಲ್ಲಿ ಇಟ್ಟುಕೊಳ್ಳಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದನ್ನು ಮಾಡುವುದರಿಂದ ವ್ಯಕ್ತಿಯು ಸಾಲದಿಂದ ಪರಿಹಾರ ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ. ಇದರೊಂದಿಗೆ ಜೀವನದ ಇತರ ಸಮಸ್ಯೆಗಳೂ ಬಗೆಹರಿಯುತ್ತದೆ.

ಸಗಣಿ ದೀಪದಿಂದ ದೃಷ್ಟಿ ದೋಷ ಮಾಯ..! ಇಲ್ಲಿದೆ ದೃಷ್ಟಿ ದೋಷಕ್ಕೆ ಪರಿಹಾರ

4. ನಿಯಮಿತವಾಗಿ ಗಂಗಾ ನೀರನ್ನು ಬಳಸಿ:

ಒಬ್ಬ ವ್ಯಕ್ತಿಯು ಯಾವುದೇ ಕಾಯಿಲೆಯಿಂದ ತೊಂದರೆಗೀಡಾಗಿದ್ದರೆ, ಅಥವಾ ಒಂದು ಕುಟುಂಬವು ಸಾಮಾನ್ಯವಾಗಿ ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಪುರಾಣಗಳ ಪ್ರಕಾರ, ಅವನು ನಿಯಮಿತವಾಗಿ ಗಂಗಾ ನೀರನ್ನು ಸೇವಿಸಬೇಕು. ಇದನ್ನು ಮಾಡುವುದರಿಂದ ಆ ವ್ಯಕ್ತಿಯು ಆರೋಗ್ಯವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ. ಅಲ್ಲದೆ, ಅದನ್ನು ಮನೆಯಲ್ಲಿ ಇಡುವುದು ಯಾವಾಗಲೂ ಸಂತೋಷ ಮತ್ತು ಸಂಪತ್ತನ್ನು ಕಾಪಾಡುತ್ತದೆ. ಆದ್ದರಿಂದ, ಯಾವಾಗಲೂ ಗಂಗಾ ನೀರನ್ನು ಒಂದು ಹಿತ್ತಾಳೆಯ ಪಾತ್ರೆಯಲ್ಲಿ ತುಂಬಿಸಿಡಬೇಕು.

ಇದರಿಂದ ಹಣದ ಸಮಸ್ಯೆಯೇ ಬಾರದು ಎನ್ನುತ್ತಾನೆ ಚಾಣಕ್ಯ..! ಏನು ಮಾಡಬೇಕು..?

ಗಂಗೆಯೆಷ್ಟು ಪವಿತ್ರಳೋ ಅಷ್ಟೇ ಅದು ಪ್ರಯೋಜನಕಾರಿ ಕೂಡ.. ಗಂಗೆಯ ಪ್ರಯೋಜನವೇನೆಂಬುದನ್ನು ತಿಳಿದುಕೊಂಡಿರಲ್ಲವೇ..? ಇಂದಿನಿಂದ ನೀವು ಕೂಡ ಗಂಗಾ ಜಲವನ್ನು ಬಳಸಲು ಮತ್ತು ಮನೆಯಲ್ಲಿಟ್ಟುಕೊಳ್ಳಲು ಅಭ್ಯಾಸ ಮಾಡಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ