2020 ಮಾರ್ಗಶೀರ್ಷ ಮಾಸ: ಮಂಗಳಕಾರ್ಯ ಮಾಡಿದರೆ ಸಂಪತ್ತು ನಿಮ್ಮದೇ..!
ಇಂದಿನಿಂದ 2020 ರ ಮಾರ್ಗಶೀರ್ಷ ಮಾಸ ಆರಂಭವಾಗಿ 2021 ರ ಜನವರಿ 13 ರವರೆಗೆ ಇರಲಿದೆ. ಮಾರ್ಗಶೀರ್ಷ ಮಾಸದ ಮಹತ್ವವೇನು ಗೊತ್ತಾ..? ಮಾರ್ಗಶೀರ್ಷ ಮಾಸದಲ್ಲಿ ಅನ್ನದಾನ ಮಾಡುವುದರ ಪ್ರಯೋಜನವೇನು..? ಈ ಮಾಸದಲ್ಲಿ ಬೆಳ್ಳಿ ದಾನ ಮಾಡುವುದರ ಪ್ರಯೋಜನವೇನು..?
ಈ 2 ಮದುವೆಗಳು ಮಾರ್ಗಶೀರ್ಷ ತಿಂಗಳಲ್ಲಿ ನಡೆದವು
ಪ್ರಾಚೀನ ಕಾಲದಲ್ಲಿ, ಹೊಸ ವರ್ಷದ ಆರಂಭವನ್ನು ಮಾರ್ಗಶೀರ್ಷ ಮಾಸದಿಂದಲೇ ಆರಂಭವೆಂದು ಪರಿಗಣಿಸಲಾಗಿತ್ತು. ಮಾರ್ಗಶೀರ್ಷ ತಿಂಗಳಲ್ಲಿ ಸನಾತನ ಸಂಸ್ಕೃತಿಯ ಎರಡು ಪ್ರಮುಖ ವಿವಾಹಗಳು ನಡೆದವು. ಶಿವ ವಿವಾಹ ಮತ್ತು ರಾಮ ವಿವಾಹ. ರಾಮ ಮಾರ್ಗಶೀರ್ಷ ತಿಂಗಳ ಶುಕ್ಲ ಪಂಚಮಿಯಲ್ಲಿ ಸೀತಾ ದೇವಿಯನ್ನು ವಿವಾಹವಾದನು. ಶಿವಪುರಾಣ, ರುದ್ರಸಂಹಿತಾ, ಪಾರ್ವತಿ ಖಂಡದ ಪ್ರಕಾರ, ಹಿಮಾವನನು ತನ್ನ ಮಗಳಾದ ಪಾರ್ವತಿ ದೇವಿಯನ್ನು ಸಪ್ರಋಷಿಗಳ ಆಶ್ರಯದಲ್ಲಿ ಶಿವನೊಂದಿಗೆ ಮಾರ್ಗಶೀರ್ಷ ತಿಂಗಳಲ್ಲಿ ವಿವಾಹ ಮಾಡಿಸಿದನು. ಅಂದಿನಿಂದ, ಈ ತಿಂಗಳ ಮಹತ್ವವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಮಾಡುವ ಪೂಜೆಯು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಎನ್ನುವ ನಂಬಿಕೆಯಿದೆ.
ರಾಮನಿಗೂ ಹನುಮನಿಗೂ ನಡೆದಿತ್ತು ಯುದ್ಧ..! ಹನುಮನ ಬಗ್ಗೆ ನಿಮಗೆಷ್ಟು ಗೊತ್ತು..?
ಸ್ಕಂದ ಪುರಾಣದಲ್ಲಿ ಹೀಗೆನ್ನಲಾಗಿದೆ
ಮಾರ್ಗಶೀರ್ಷೋಧಿಕಸ್ತಸ್ಮಾಸ್ತರ್ವದಾ ಚ ಮಮ ಪ್ರಿಯಃ ||
ಉಷಸ್ಯುಥ್ತಾಯ ಯೋ ಮತ್ರ್ಯಃ ಸ್ನಾನಂ ವಿಧಿವದಾಚರೇತ್ ||
ತುಷ್ಟೋಹಂ ತಸ್ಯ ಯಚ್ಛಾಮಿ ಸ್ವಾತ್ಮಾನಮಾಪಿ ಪುತ್ರಕ ||
ನಾನು ಯಾವಾಗಲೂ ಮಾರ್ಗಶೀರ್ಷ ತಿಂಗಳನ್ನು ಪ್ರೀತಿಸುತ್ತೇನೆ ಎಂದು ಭಗವಾನ್ ವಿಷ್ಣು ಹೇಳುತ್ತಾನೆ. ಯಾವುದೇ ಒಬ್ಬ ವ್ಯಕ್ತಿಯು ಮಾರ್ಗಶೀರ್ಷ ಮಾಸದಲ್ಲಿ ಮುಂಜಾನೆ ಬೇಗ ಎದ್ದು, ವಿಧಿ ವಿಧಾನಗಳ ಮೂಲಕ ಸ್ನಾನ ಮಾಡಿ ದೇವರನ್ನು ಪೂಜಿಸುತ್ತಾನೋ ಆ ವ್ಯಕ್ತಿಯ ಮೇಲೆ ದೇವರ ಆಶೀರ್ವಾದ ಸದಾಕಾಲ ಇರತ್ತದೆ ಎಂದು ಹೇಳಲಾಗಿದೆ. ಮಾರ್ಗಶೀರ್ಷ ಮಾಸವು ಸಪ್ತಮಿ, ಅಷ್ಟಮಿ ತಿಂಗಳ ಶೂನ್ಯ ದಿನಗಳನ್ನು ಒಳಗೊಂಡಿದೆ. ಮಾಸಶೂನ್ಯ ತಿಥಿಯಲ್ಲಿ ಮಂಗಳಕಾರ್ಯ ಮಾಡುವುದರಿಂದ ಆ ವಂಶ ಸಂಪತ್ತನ್ನು ಪಡೆಯುತ್ತದೆ ಎಂದು ಹೇಳಲಾಗಿದೆ.
ಅತ್ಯಾಚಾರಿಗಳಿಗೆ ಜನ್ಮ ಜನ್ಮಾಂತರಕ್ಕೂ ಶಿಕ್ಷೆ ತಪ್ಪಿದ್ದಲ್ಲ..! ಅಬ್ಬಾ.. ಇವುಗಳನ್ನು ಮಾಡಲೇಬೇಡಿ
ಬ್ರಾಹ್ಮಣರಿಗೆ ಭೋಜನವನ್ನು ನೀಡಿ
ಮಾರ್ಗಶೀರ್ಷ ತಿಂಗಳಲ್ಲಿ ದಿನದ ಕೇವಲ ಒಂದು ಸಮಯ ಆಹಾರವನ್ನು ಸೇವಿಸುವವನು ಮತ್ತು ಅವನ ಶಕ್ತಿಗೆ ಅನುಗುಣವಾಗಿ ಬ್ರಾಹ್ಮಣರಿಗೆ ಭೋಜನವನ್ನು ನೀಡುವವನು ತನ್ನೆಲ್ಲಾ ರೋಗಗಳಿಂದ ಮತ್ತು ಪಾಪಗಳಿಂದ ಮುಕ್ತಿಯನ್ನು ಹೊಂದುತ್ತಾನೆ. ಇದು ಎಲ್ಲಾ ರೀತಿಯ ಯೋಗಕ್ಷೇಮವನ್ನು ನಿಮಗೆ ಕರುಣಿಸುತ್ತದೆ. ಮಾರ್ಗಶೀರ್ಷ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಎರಡನೇ ಜನ್ಮದಲ್ಲಿ ರೋಗ ಮುಕ್ತ ಮತ್ತು ಬಲಶಾಲಿಯಾಗುತ್ತಾನೆ. ಆ ವ್ಯಕ್ತಿಯು ಉತ್ತಮ ಆರೋಗ್ಯವನ್ನು ಮತ್ತು ಸಂಪತ್ತನ್ನು ಹೊಂದಿರುತ್ತಾನೆ.
ಬಾವಿಗೆ ಹಾಲು ಹಾಕಿದರೆ ಬಡತನ ದೂರಾಗೋದು ಖಂಡಿತ..! ಸಂಪತ್ತು ನಿಮ್ಮದೇ
ಬೆಳ್ಳಿ ದಾನ
ಶಿವಪುರಾಣದ ಪ್ರಕಾರ, ಮಾರ್ಗಶೀರ್ಷ ಮಾಸದಲ್ಲಿ ಬೆಳ್ಳಿ ದಾನ ಮಾಡುವುದರಿಂದ ವೀರ್ಯ ಹೆಚ್ಚಾಗುತ್ತದೆ. ಮಾರ್ಗಶೀರ್ಷ ಮಾಸದಲ್ಲಿ ಅನ್ನದಾನ ಮಾಡುವುದಕ್ಕೆ ಸರ್ವಾಧಿಕ ಮಹತ್ವವಿದೆ. ಅಂದರೆ, ಮಾರ್ಗಶೀರ್ಷ ತಿಂಗಳಲ್ಲಿ, ಅನ್ನವನ್ನು ದಾನ ಮಾಡುವ ಜನರಿಗೆ ಮಾತ್ರ ಸಂಪೂರ್ಣ ಫಲ ಪ್ರಾಪ್ತವಾಗುತ್ತದೆ. ಮಾರ್ಗಶೀರ್ಷ ಮಾಸದಲ್ಲಿ ಅನ್ನದಾನ ಮಾಡುವ ವ್ಯಕ್ತಿಯು ತನ್ನೆಲ್ಲಾ ಪಾಪಗಳಿಂದ ಮುಕ್ತಿಯನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.
ಮಾರ್ಗಶೀರ್ಷ ಮಾಸ 2020: ಶಂಖವನ್ನು ಪೂಜಿಸಿದರೆ ಸಂಪತ್ತು ಖಚಿತ..!
ಮಥುರಾಪುರಿಯಲ್ಲಿ ವಾಸಿಸುವ ಪ್ರಾಮುಖ್ಯತೆ
ಸ್ಕಂದಪುರಾಣದ ಪ್ರಕಾರ, ಮಾರ್ಗಶೀರ್ಷ ತಿಂಗಳಲ್ಲಿ ಮಥುರಾಪುರಿಯಲ್ಲಿ ವಾಸಿಸುವ ಮಹತ್ವವನ್ನು ತಿಳಿಸಲಾಗಿದೆ. ಅಂದರೆ, ಒಂದು ಸಾವಿರ ವರ್ಷಗಳ ಕಾಲ ಪ್ರಯಾಗ ತೀರ್ಥಯಾತ್ರೆಯಲ್ಲಿ ಉಳಿದುಕೊಂಡು ಪಡೆದ ಫಲವು ಅಗಾನ (ಮಾರ್ಗಶೀರ್ಷ) ದಲ್ಲಿ ಮಥುರಾಪುರಿಯಲ್ಲಿ ವಾಸಿಸುವ ಮೂಲಕ ಪಡೆದುಕೊಳ್ಳಬಹುದು. ಮಾರ್ಗಶೀರ್ಷ ತಿಂಗಳಲ್ಲಿ ವಿಶ್ವದೇವರನ್ನು ಪೂಜಿಸಲಾಗುತ್ತದೆ ಮತ್ತು ಪೂರ್ವಜರ ಆತ್ಮದ ಶಾಂತಿಗಾಗಿ ಕೂಡ ಪೂಜೆಯನ್ನು ಮಾಡಲಾಗುತ್ತದೆ.
ಶ್ರೀ ರಾಮನನ್ನು ಪಡೆಯಲು ಇಂದಿಗೂ ಪರ್ವತದಲ್ಲಿದ್ದಾಳೆ ತ್ರಿಕುಟಾ..! ಇವು ಅಮರ ಪ್ರೇಮ ಕಥೆಗಳು