If You Lose These Types Of Gold Ornaments Is Considered As Inauspicious
Gold Inauspicious Signs: ನಿಮ್ಮಲ್ಲಿನ ಈ ಚಿನ್ನದ ಆಭರಣ ಕಳೆದು ಹೋದರೆ ಅಶುಭವಂತೆ..!
ಸಾಮಾನ್ಯವಾಗಿ ನಮಗೆ ತಿಳಿದೋ, ತಿಳಿಯದೆಯೋ ನಾವು ಧರಿಸಿದ ಆಭರಣಗಳು ಕಳೆದು ಹೋಗುತ್ತವೆ. ನಾವು ಧರಿಸುವ ಯಾವ ಆಭರಣ ಕಳೆದು ಹೋದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಗೊತ್ತೇ..? ನಾವು ಧರಿಸುವ ಯಾವ ಆಭರಣ ಕಳೆದು ಹೋದರೆ ಅದು ಅಶುಭ ಸೂಚನೆ ಗೊತ್ತೇ..? ನಿಮ್ಮಲ್ಲಿರುವ ಇಂತಹ ಆಭರಣಗಳು ಕಳೆದು ಹೋಗಿರಬಹುದು ಎಚ್ಚರ..!
Vijaya Karnataka Web18 Jan 2023, 11:47 am
ಧಾರ್ಮಿಕ ಗ್ರಂಥಗಳಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನ ಅಥವಾ ಬೆಳ್ಳಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಅವುಗಳಲ್ಲಿ ಒಂದು ಚಿನ್ನ ಅಥವಾ ಬೆಳ್ಳಿಯ ವಸ್ತುಗಳು ಕಳೆದು ಹೋಗುವುದಾಗಿದೆ. ಹಿಂದೂ ಧರ್ಮದಲ್ಲಿ ಚಿನ್ನವನ್ನು ಪವಿತ್ರ ಲೋಹವೆಂದು ಪರಿಗಣಿಸಲಾಗಿದೆ. ಹಾಗಾದರೆ ಅಮೂಲ್ಯವಾದ ಲೋಹವೆಂದು ಪರಿಗಣಿಸಲ್ಪಟ್ಟ ಚಿನ್ನ ಕಳೆದು ಹೋದರೆ ಏನಾಗುವುದು..? ಚಿನ್ನಾಭರಣ ಕಳೆದುಕೊಳ್ಳುವುದರಿಂದ ಆಗುವ ಅನಾನುಕೂಲಗಳೇನು..?
ನಿಮ್ಮ ಚಿನ್ನದ ಉಂಗುರ ಎಲ್ಲೋ ಕಳೆದು ಹೋದರೆ, ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ಇದು ಹೇಳುತ್ತದೆ. ಇನ್ನು ಕೆಲವೆಡೆ ಚಿನ್ನ ಕಳೆದುಕೊಂಡರೆ ಅದನ್ನು ಶುಭವೆಂದು ಹೇಳುವ ನಂಬಿಕೆಯೂ ಇದೆ. PC: Pexel
ಕಿವಿಯಾಭರಣ
ಕಿವಿಯೋಲೆಗಳು, ಕಿವಿಗೆ ಸಂಬಂಧಿಸಿದ ಆಭರಣಗಳು ಅಥವಾ ಕಿವಿಗೆ ಧರಿಸಬಹುದಾದಂತಹ ಆಭರಣಗಳನ್ನು ನೀವು ಎಲ್ಲೋ ಕಳೆದುಕೊಂಡಿದ್ದರೆ, ಅದು ಅಶುಭ ಸುದ್ದಿಯನ್ನು ಪಡೆಯುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಿವಿಗೆ ಸಂಬಂಧಿಸಿದ ಆಭರಣಗಳು ಕಳೆದು ಹೋಗುವುದು ಅಶುಭ ಸೂಚನೆಯಾಗಿದೆ. Muhurat Calculation: ಇದನ್ನು ನೋಡಿ ಶುಭ ಕಾರ್ಯಗಳಿಗೆ ಶುಭ ಮುಹೂರ್ತವನ್ನಿಡಿ..!
ಮೂಗಿಗೆ ಧರಿಸುವ ಆಭರಣ
ನಿಮ್ಮ ಮೂಗಿಗೆ ಧರಿಸುವ ಆಭರಣವನ್ನು ನೀವು ಕಳೆದುಕೊಂಡರೆ, ಕರ್ಣ ಕುಂಡಲ ಅಥವಾ ಬೈತಲೆ ಬೊಟ್ಟನ್ನು ಕಳೆದುಕೊಂಡರೆ, ಅದನ್ನು ಜೀವನದಲ್ಲಿ ಎದುರಾಗುವ ವೈಫಲ್ಯದ ಸೂಚಕವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಕಳೆದುಕೊಳ್ಳುವಾಗ ಹೆಚ್ಚು ಜಾಗ್ರತೆಯನ್ನು ವಹಿಸುವುದು ಬಹಳ ಮುಖ್ಯ. Vishnu’s 10 Incarnations: ವಿಷ್ಣುವಿನ ದಶಾವತಾರಕ್ಕೂ ಮಾನವನ ಪ್ರಗತಿಗೂ ಇದೆ
ಚಿನ್ನದ ಬಳೆ ಅಥವಾ ಕಂಕಣವನ್ನು ಕಳೆದುಕೊಳ್ಳುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ, ಇದು ಗೌರವದ ನಷ್ಟವನ್ನು ತೋರಿಸುತ್ತದೆ. ಈ ಆಭರಣಗಳನ್ನು ಕಳೆದುಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಗೌರವಕ್ಕೆ ಧಕ್ಕೆಯುಂಟಾಗಬಹುದು. ಅಥವಾ ಯಾವುದೋ ಕಾರಣದಿಂದ ಸಮಾಜದಲ್ಲಿದ್ದ ನಿಮ್ಮ ಗೌರವ ಕಳೆಗುಂದಬಹುದು. Bhishma Story: ಭೀಷ್ಮ ಪಿತಾಮಹನ ಕುರಿತು ನೀವು ತಿಳಿದುಕೊಳ್ಳಲೇಬೇಕಾದ
ಸರ ಅಥವಾ ನೆಕ್ಲೇಸ್
ನಿಮ್ಮ ಕತ್ತಿನ ಸರ ಅಥವಾ ನೆಕ್ಲೇಸ್ ಕಳೆದುಹೋದರೆ, ಅದು ನಿಮ್ಮ ಸಂಪತ್ತು ಕಡಿಮೆಯಾಗುವ ಸಂಕೇತವಾಗಿದೆ. ಈ ಆಭರಣಗಳನ್ನು ಕಳೆದುಕೊಳ್ಳುವುದರಿಂದ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೂ ನೀವು ಎಲ್ಲೋ ಒಂದು ಕಡೆ ಹೋಗುತ್ತಿರುವಾಗ ನಿಮ್ಮಲ್ಲಿನ ಆಭರಣಗಳು ಕಳೆದು ಹೋದರೂ ಅದನ್ನು ಮುಂಬರುವ ನಷ್ಟದ ಸಂಕೇತವೆಂದು ಹೇಳಲಾಗುತ್ತದೆ.
ನಿಮ್ಮ ಕನಸಿನಲ್ಲಿ ಮನೆಯ ಆಭರಣಗಳು ಕಳ್ಳತನವಾಗುವುದನ್ನು ನೀವು ನೋಡಿದರೆ, ಅದು ನಿಮ್ಮನ್ನು ಪಿತೂರಿಯಲ್ಲಿ ಸಿಲುಕಿಸುವ ಮೂಲಕ ವ್ಯವಹಾರ ಅಥವಾ ಉದ್ಯೋಗದಲ್ಲಿ ಎದುರಾಳಿಯಿಂದ ನಷ್ಟದ ಸಂಕೇತವಾಗಿದೆ. ನಿಮ್ಮ ಎದುರಾಳಿ ಉದ್ಯಮಿಗಳಿಂದ ನಷ್ಟವನ್ನು ಅಥವಾ ಸಮಸ್ಯೆಗಳನ್ನು ಎದುರಿಸಬೇಕಾದ ಸನ್ನಿವೇಶವನ್ನು ಇದು ಸೂಚಿಸುತ್ತದೆ. Lord Shri Krishna : ಸುಂದರ ಬದುಕಿಗೆ ಶ್ರೀಕೃಷ್ಣನ ಸಂದೇಶಗಳು
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.