ಆ್ಯಪ್ನಗರ

ಇದು ಧನಾಗಮನದ ಮುನ್ಸೂಚನೆಯಂತೆ..ನಿಮಗೂ ಕೂಡ ಹೀಗಾಗಿದೆಯಾ..?

ಲಕ್ಷ್ಮಿ ದೇವಿಗೆ ಸಂತೋಷವಾದಾಗ ಆಕೆ ಯಾರ ಮನೆಯನ್ನು ಕೂಡ ಪ್ರವೇಶಿಸಬಹುದು. ಲಕ್ಷ್ಮಿ ಬರುವ ಮುನ್ಸೂಚನೆಗಳು ಯಾವುವು ಗೊತ್ತಾ..? ಈ ರೀತಿ ಘಟನೆಗಳು ಸಂಭವಿಸಿದರೆ ಲಕ್ಷ್ಮಿಯು ನಿಮ್ಮ ಮನೆಗೆ ಬರತ್ತಾಳಂತೆ.

Navbharat Times 28 May 2020, 11:31 am
ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಜನ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಇನ್ನು ಕೆಲವರು ಉದ್ಯೋಗವನ್ನೇ ಕಳೆದುಕೊಂಡ ಉದಾಹರಣೆಗಳು ಬಹಳಷ್ಟಿವೆ. ಎಲ್ಲರೂ ಕೂಡ ಒಳ್ಳೆಯ ದಿನವನ್ನೇ ನಿರೀಕ್ಷಿಸುತ್ತಾರೆ. ಉದ್ಯೋಗವಿಲ್ಲದವರು ಹೊಸ ಕೆಲಸದ ಮೂಲಕ ಹಣ ಸಂಪಾದಿಸಲು ಯೋಚಿಸಿದರೆ, ಈಗಾಗಲೇ ಆರ್ಥಿಕ ನಷ್ಟದಲ್ಲಿರುವವರು ತಮ್ಮ ಆರ್ಥಿಕ ಪರಿಸ್ಥಿತಿ ಮೊದಲಿದ್ದ ಹಾಗೇ ಹೇಗೆ ಸರಿ ಮಾಡಿಕೊಳ್ಳುವುದು ಎನ್ನುವುದರ ಕುರಿತು ಚಿಂತಿತರಾಗಿದ್ದಾರೆ.
Vijaya Karnataka Web Lakshmi Devi Enter Signs
ಲಕ್ಷ್ಮಿ ಆಗಮನದ ಸೂಚನೆ


ಮೊಬೈಲ್‌ ಫೋನ್‌ಗಳಿಂದ ನಮ್ಮ ಅದೃಷ್ಟ ಬದಲಾಗುತ್ತಾ..? ಅದು ಹೇಗೆ..?

ಲಕ್ಷ್ಮಿ ದೇವಿ


ಲಕ್ಷ್ಮಿ ಯಾವಾಗಲೂ ಚಂಚಲೆ. ಆಕೆ ಒಂದೆಡೆ ಸ್ಥಿರವಾಗಿ ನೆಲೆನಿಲ್ಲಲಾರಳು. ಲಕ್ಷ್ಮಿ ದೇವಿಯು ಒಬ್ಬ ವ್ಯಕ್ತಿಗೆ ಒಲಿಯುತ್ತಾಳೆಂದಾದರೆ ಆಕೆ ಈ ಕೆಳಗಿನ ಸೂಚನೆಯನ್ನು ನೀಡುತ್ತಾಳಂತೆ. ಲಾಕ್‌ಡೌನ್‌ ಸಮಯದಲ್ಲಿ ನಿಮಗೂ ಕೂಡ ಈ ರೀತಿ ಸೂಚನೆಗಳು ಆಗಿರಬಹುದು. ಈ ಸೂಚನೆಗಳು ಕಂಡರೆ ಸದ್ಯದಲ್ಲೇ ನೀವು ಸಾಕಷ್ಟು ಹಣವನ್ನು ಗಳಿಸುವಿರಿ ಎನ್ನುವ ನಂಬಿಕೆ ಇದೆ. ಕೆಲವರು ಈ ಸೂಚನೆಗಳನ್ನು ನಮಬಿದರೆ, ಇನ್ನು ಕೆಲವರು ಇದು ನೈಸರ್ಗಿಕವಾದದ್ದು ಇದು ಮೂಢನಂಬಿಕೆಯೆಂದು ಹೇಳುತ್ತಾರೆ. ಅದೇನೇ ಇರಲಿ ಇಲ್ಲಿದೆ ನೋಡಿ ಕೆಲವರ ನಂಬಿಕೆಯ ಪ್ರಕಾರ ಲಕ್ಷ್ಮಿ ಅಗಮಿಸುವ ಮುನ್ಸೂಚನೆ:

ಬೆಳ್ಳುಳ್ಳಿಯು ಆರ್ಥಿಕ, ಸಾಂಸಾರಿಕ ಹಾಗೂ ಆರೋಗ್ಯದ ಸಮಸ್ಯೆಯನ್ನೂ ನಿವಾರಿಸುತ್ತದೆಯೇ..?

1) ಮನೆಯ ಮೇಲೆ ಕೋಗಿಲೆ ಕೂಗಿದರೆ:

ಮನೆಯ ಮೇಲೆ ಕೋಗಿಲೆ ಕೂಗಿದರೆ ಕೆಲವರು ಶುಭವೆಂದರೆ, ಇನ್ನು ಕೆಲವರು ಅದನ್ನು ಅಶುಭವೆಂದು ಹೇಳುತ್ತಾರೆ. ಕೋಗಿಲೆಯ ಕೂಗು ಸಂತೋಷವನ್ನುಂಟು ಮಾಡಿದರೆ ಅದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಕೋಗಿಲೆಯ ಕೂಗು ಶುಭವೇ ಅಥವಾ ಅಶುಭವೇ ಎನ್ನುವುದು ಅದು ಕೂಗಿದ ದಿಕ್ಕು ಮತ್ತು ಸಮಯವನ್ನು ಆಧರಿಸಿರುತ್ತದೆ. ಆಗ್ನೇಯ ದಿಕ್ಕಿನಲ್ಲಿ ಕೋಗಿಲೆಯು ಕುಳಿತು ಕೂಗಿದರೆ ಮುಂಜಾನೆ ಸಮಯ ಕೂಗಿದರೆ ಅದು ಅಶುಭದ ಮುನ್ಸೂಚನೆಯೆಂದು ಪರಿಗಣಿಸಲಾಗುತ್ತದೆ. ಸಂಜೆ ಕೂಗಿದರೆ ಶುಭ ವೆಂದು ಅಂದಾಜಿಸಲಾಗುತ್ತದೆ ಹಾಗೂ ಮಧ್ಯಾಹ್ನ ಕೂಗಿದರೂ ಕೂಡ ಶುಭವೆಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಕೋಗಿಲೆಯು ನೀವು ಮನೆಯಿಂದ ಹೊರಗೆ ಹೋಗುವಾಗ ಕೋಗಿಲೆಯು ಮಾವಿನ ಮರವೆನ್ನೇರಿ ಕೂಗಿದರೆ ಅದು ಶುಭದ ಸಂಕೇತವಾಗಿದೆ. ಸದ್ಯದಲ್ಲೇ ನಿಮ್ಮ ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ ಎಂಬರ್ಥವನ್ನು ಹೊಂದಿದೆ.

ಈ ಕನಸುಗಳು ಬಿದ್ದರೆ ನೀವು ಪ್ರೀತಿಸಿದವರು ನಿಮ್ಮ ಬಾಳ ಸಂಗಾತಿಯಾಗುತ್ತಾರೆ

ಕೋಗಿಲೆ


2) ಹಲ್ಲಿ ದೇಹದ ಯಾವ ಭಾಗದಲ್ಲಿ ಬಿದ್ದರೆ ಒಳಿತು..?
ಹಲ್ಲಿಯ ಕುರಿತು ಸಾಕಷ್ಟು ನಂಬಿಕೆಗಳು ಮತ್ತು ಮೂಢನಂಬಿಕೆಗಳಿವೆ. ಅವುಗಳಲ್ಲಿ ಒಂದು ಹಲ್ಲಿ ಮೈಮೇಲೆ ಬೀಳುವುದು. ಹಲ್ಲಿಯು ಯಾವ ಭಾಗದಲ್ಲಿ ಬಿದ್ದಿದೆ ಎನ್ನುವುದರ ಮೇಲೆ ಅದು ಶುಭವೋ ಅಥವಾ ಅಶುಭವೋ ಎಂದು ಹೇಳಲಾಗುತ್ತದೆ. ಒಂದು ವೇಳೆ ಹಲ್ಲಿಯು ಇದ್ದಕ್ಕಿದ್ದಂತೆ ನಿಮ್ಮ ಬಲಗೈ ಮೇಲೆ ಬಿದ್ದು, ನಂತರ ಅದು ಮೇಲಕ್ಕೇರಲು ಪ್ರಯತ್ನಿಸಿದರೆ ನಿಮಗೆ ಶುಭ ವಾಗುತ್ತದೆಯಂತೆ. ಇದು ನಿಮ್ಮ ಪ್ರಗತಿಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಹಲ್ಲಿ ನೋಡಲು ಸುಂದರವಾಗಿಲ್ಲದಿದ್ದರೂ ಕೂಡ ಅದು ಕೆಲವೊಮ್ಮೆ ಸಂಪತ್ತು ಆಗಮಿಸುವ ಸೂಚನೆಯನ್ನು ನೀಡುತ್ತದೆ.

ಮುಸ್ಸಂಜೆ ವೇಳೆ ಯಾವ ಕೆಲಸಗಳನ್ನು ಮಾಡಬಾರದು ಗೊತ್ತಾ..? ಮಾಡಿದರೆ ಏನಾಗುತ್ತೆ..?

3) ಈ ರೀತಿಯಾಗಿ ಇರುವೆಗಳು ಕಾಣಿಸಿಕೊಂಡರೆ:
ಎಲ್ಲಾ ರೀತಿಯ ಇರುವೆಗಳು ಶುಭವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಕ್ಕಿ ಅಥವಾ ಧಾನ್ಯವನ್ನು ಬಾಯಿಯಲ್ಲಿ ಹಿಡಿದುಕೊಂಡು ಸಾಗುತ್ತಿರುವ ಕಪ್ಪು ಇರುವೆಯನ್ನು ಮಾತ್ರ ನೀವು ನೋಡಿದರೆ ಅದು ನಿಮಗೆ ಶುಭವಾಗಿದೆ. ಮನೆಯಲ್ಲಿ ಕೆಂಪು ಇರುವೆಗಳನ್ನು ನೋಡುವುದು ಒಳ್ಳೆಯದಲ್ಲ. ಮನೆಯಲ್ಲಿ ಕೆಂಪು ಇರುವೆಗಳಿದ್ದರೆ ಅದು ಅ ಮನೆಗೆ ಕೆಟ್ಟದ್ದೆಂಬ ಮಾತಿದೆ. ಕೆಂಪು ಇರುವೆಗಳು ಕಾಣಿಸಿಕೊಂಡರೆ ಸಾಲದ ಹೊರೆಯು ಹೆಚ್ಚಾಗುತ್ತದೆಂದು ಹೇಳಲಾಗಿದೆ.

ಕಪ್ಪು ಇರುವೆ


4) ಎರಡು ತಲೆಯ ಹಾವು:
ಈ ರೀತಿಯ ಹಾವುಗಳು ನಮ್ಮ ಪ್ರಕೃತಿಯಲ್ಲಿ ಬಹಳ ಅಪರೂಪವಾಗಿದೆ. ನಿಮ್ಮ ಮನೆಯಲ್ಲಿ ನೀವು ಎಂದಾದರೂ ಎರಡು ತಲೆಯ ಹಾವನ್ನು ನೋಡಿದರೆ ಅದು ನಿಮಗೆ ತುಂಬಾನೇ ಶುಭಕರವಾಗಿದೆ. ಅದು ಮನೆಯಿಂದ ಯಾವ ದಾರಿಯಲ್ಲಿ ಹೋಗಲು ಇಚ್ಛಿಸುತ್ತದೆಯೋ ಅದೇ ದಾರಿಯಲ್ಲಿ ಹೊರ ಹೋಗಲು ಬಿಡಬೇಕು. ಈ ಹಾವು ವಿಷಕಾರಿ ಹಾವಲ್ಲ. ಈ ರೀತಿಯ ಹಾವುಗಳು ಎಮದಿಗೂ ಕೂಡ ಯಾರನ್ನು ಕೂಡ ಸಾಯಿಸಲಾರದು. ಈ ರೀತಿ ಹಾವಿನ ಆಗಮನವು ಧನಾಗಮನವನ್ನು ಸೂಚಿಸುತ್ತದೆ.

ಮೆಹಂದಿ ಶಾಸ್ತ್ರವನ್ನು ಆಚರಿಸಲು ಕಾರಣವೇನು ಗೊತ್ತಾ..? ಇದು ಮೂಢನಂಬಿಕೆಯೇ..?

5) ಸಂಸಾರದಲ್ಲಿ ಸಂತಸ:
ಲಕ್ಷ್ಮಿ ಮನೆಗೆ ಬಂದಾಗ ಆ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಆ ಮನೆಯ ಸದಸ್ಯರಲ್ಲಿನ ಅಹಂ, ವೈರತ್ವ, ಜಗಳಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಲಕ್ಷ್ಮಿ ನೆಲೆಯಾದ ಜಾಗದಲ್ಲಿ ಯಾವಾಗಲು ಸಂತೋಷ ತುಂಬಿರುತ್ತದೆ. ಗಂಡ ಹೆಂಡತಿಯ ನಡುವೆ, ಕುಟುಂಬದ ಸದಸ್ಯರ ನಡುವೆ ಪ್ರೀತಿ, ಬಾಂದವ್ಯ, ಸಾಮರಸ್ಯ ಮೊಳಕೆಯೊಡೆಯುತ್ತದೆ. ಇದರರ್ಥ ಲಕ್ಷ್ಮಿ ದೇವಿಯು ನಿಮ್ಮನ್ನು ಆಶೀರ್ವದಿಸಿದಳೆಂದು ಹೇಳಲಾಗುತ್ತದೆ.

ಈ ಕನಸುಗಳು ನಿಮಗೆ ಬಿದ್ದರೆ ಲಕ್ಷ್ಮಿ ನಿಮ್ಮನ್ನು ಹುಡುಕಿಕೊಂಡು ಬರುತ್ತಾಳೆ

ಈ ಮೇಲಿನ ಲಕ್ಷಣಗಳಾಗಿರಬಹುದು ಅಥವಾ ಘಟನೆಗಳಾಗಿರಬಹುದು ನಿಮಗೂ ಆಗಿದ್ದರೆ ಒಮ್ಮೆ ಇದರತ್ತ ಗಮನ ಹರಿಸಿ. ಕೆಲವರು ಇದನ್ನು ನಂಬುತ್ತಾರೆ. ಇನ್ನು ಕೆಲವರು ಇದನ್ನು ಮೂಢನಂಬಿಕೆಯೆಂದು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ