ಆ್ಯಪ್ನಗರ

ಸೂರ್ಯಾಸ್ತದ ನಂತರ ಯಾಕೆ ಉಪ್ಪು ಎರವಲು ಪಡೆಯುವುದಿಲ್ಲ ಗೊತ್ತಾ?

ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ್ನು ಲಕ್ಷ್ಮಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು.ಉಪ್ಪು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದರಿಂದ ದುಷ್ಟ ಶಕ್ತಿಗಳು ದೂರ ಸರಿಯುತ್ತವೆ.

Vijaya Karnataka Web 31 Oct 2019, 5:25 pm
ಮನುಷ್ಯ ದಿನ ನಿತ್ಯ ಬಳಸುವ ಆಹಾರ ವಸ್ತುಗಳಲ್ಲಿ ಉಪ್ಪು ಸಹ ಒಂದು. ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಲವಣ ರೂಪಕ್ಕೆ ಉಪ್ಪು ಎಂದು ಕರೆಯುತ್ತೇವೆ. ಉಪ್ಪಿನ ಸಹಾಯದಿಂದ ಕೆಲವು ಆಹಾರ ಪದಾರ್ಥಗಳನ್ನು ವರ್ಷಗಳ ಕಾಲ ಸಂರಕ್ಷಿಸಿ ಇಡಬಹುದು. ಆರೋಗ್ಯಕರ ಗುಣವನ್ನು ಹೊಂದಿರುವ ಉಪ್ಪಿಗೆ ಧಾರ್ಮಿಕ ವಿಷಯಗಳೊಂದಿಗೂ ನಂಟಿದೆ. ಮಾಟ-ಮಂತ್ರಗಳಲ್ಲಿ, ಕೆಟ್ಟ ದೃಷ್ಟಿ ನಿವಾರಣೆ ಸೇರಿದಂತೆ ಅನೇಕ ಸಾಂಪ್ರದಾಯಿಕ ಪದ್ಧತಿಗಳಲ್ಲೂ ಉಪ್ಪನ್ನು ಬಳಸುತ್ತಾರೆ.
Vijaya Karnataka Web salt


ಆಕಾಶ ನೋಡಿ ಶ್ವಾನ ಊಳಿಟ್ಟರೆ ಅದರರ್ಥ ಏನು ಗೊತ್ತಾ?

ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ್ನು ಲಕ್ಷ್ಮಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಲಕ್ಷ್ಮಿ ದೇವಿಯು ಸಾಮಾನ್ಯವಾಗಿ ಸಂಜೆಯ ವೇಳೆ ಮನೆಯನ್ನು ಪ್ರವೇಶ ಮಾಡುತ್ತಾಳೆ. ಅವಳು ಬರುವ ಹಾಗೂ ಇರುವ ಸಮಯವು ಅತ್ಯಂತ ಪವಿತ್ರವಾದದ್ದು. ಹಾಗಾಗಿ ಲಕ್ಷ್ಮಿ ಆಗಮಿಸುವ ಸಮಯದಲ್ಲಿ ಧನಾತ್ಮಕ ಹಾಗೂ ಸಕಾರಾತ್ಮಕ ವಾತಾವರಣವು ಮನೆಯಲ್ಲಿ ನೆಲೆಸಿರಬೇಕು ಎಂದು ಆಶಿಸುವರು. ಆದ್ದರಿಂದ ಸಂಜೆಯ ಸಮಯದಲ್ಲಿ ಹಣವನ್ನು ಮತ್ತು ಉಪ್ಪನ್ನು ಇತರರಿಗೆ ನೀಡಬಾರದು. ಸಂಧ್ಯಾ ಸಮಯವು ಲಕ್ಷ್ಮಿಗೆ ಶ್ರೇಷ್ಠವಾದ ಸಮಯ. ಸಂಜೆಯ ವೇಳೆ ಸೂರ್ಯನ ಕಿರಣವು ಮಾಯವಾಗುವುದು. ಅಂತಹ ಸಮಯದಲ್ಲಿ ಸಾಕಷ್ಟು ಋಣಾತ್ಮಕ ಶಕ್ತಿ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಂಜೆಯ ವೇಳೆ ಆದಷ್ಟು ಧನಾತ್ಮಕ ಕೆಲಸಗಳನ್ನು ಮಾಡಬೇಕು ಎಂದು ಹೇಳಲಾಗುವುದು.

ಸಂಜೆಯ ಸಮಯದಲ್ಲಿ ಉಪ್ಪನ್ನು ಇತರರಿಗೆ ನೀಡಿದರೆ ಲಕ್ಷ್ಮಿಯನ್ನೇ ಮನೆಯಿಂದ ಆಚೆ ಕಳಿಸಿದ ಹಾಗೆ ಆಗುವುದು. ಇದು ಲಕ್ಷ್ಮಿಗೆ ಅವಮಾನ ಮಾಡಿದಂತಾಗುವುದು. ಜೀವನದಲ್ಲಿ ಧನ-ಧಾನ್ಯವನ್ನು ಹೊಂದಲು ಬಯಸುತ್ತೇವೆ ಎಂದಾದರೆ ಮೊದಲು ಲಕ್ಷ್ಮಿ ದೇವಿಯನ್ನು ಖುಷಿ ಪಡಿಸುವ ಮತ್ತು ಆರಾಧಿಸುವ ಕಾರ್ಯ ನೆರವೇರವೇರಬೇಕು. ದೇವಿಗೆ ವಿಶೇಷ ಗೌರವ ಹಾಗೂ ಪೂಜೆಯನ್ನು ಸಲ್ಲಿಸುವುದರ ಮೂಲಕ ತಾಯಿಯ ಕೃಪೆಗೆ ಒಳಗಾಗಬಹುದು. ಜೊತೆಗೆ ಬಯಸಿದ ಸಿರಿ-ಸಂಪತ್ತು ಮನೆಯಲ್ಲಿ ತುಂಬಿರುತ್ತವೆ ಎಂಬ ನಂಬಿಕೆಯಿದೆ.

ಈ ಹಿನ್ನೆಲೆಯಲ್ಲಿಯೇ ಪುರಾತನ ಕಾಲದಿಂದಲೂ ಸಂಜೆ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವುದನ್ನು ನಿಷೇದಿಸಲಾಗಿದೆ. ಸೂರ್ಯಾಸ್ತದ ನಂತರ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವ ಪ್ರಕ್ರಿಯೆಯಿಂದಾಗಿ ಕೆಲವು ಸಮಸ್ಯೆಗಳು ಹಾಗೂ ಜೀವನದಲ್ಲಿ ಬದಲಾವಣೆಯು ಸಂಭವಿಸುವುದು. ಅಲ್ಲದೆ ಉಪ್ಪಿನೊಂದಿಗೆ ಕೆಲವು ನಂಬಿಕೆಗಳು ಹಾಗೂ ಭವಿಷ್ಯಗಳು ಬೆಸೆದುಕೊಂಡಿವೆ ಎಂದು ಸಹ ಹೇಳಲಾಗುವುದು. ಹಾಗಾದರೆ ಉಪ್ಪಿನೊಂದಿಗೆ ಇರುವ ಧಾರ್ಮಿಕ ಹಾಗೂ ಮೂಢನಂಬಿಕೆಗಳು ಯಾವವು ಎನ್ನುವುದನ್ನು ಮುಂದಿನ ವಿವರಣೆಯೊಂದಿಗೆ ಪರಿಶೀಲಿಸಿ.

ಉಪ್ಪು ಚೆಲ್ಲುವುದು
ಉಪ್ಪು ಅತ್ಯಂತ ಸೂಕ್ಷ್ಮ ಕಣಗಳೊಂದಿಗೆ ಕೂಡಿದೆ. ಅದನ್ನು ಲಕ್ಷ್ಮಿ ಎಂದು ಪರಿಗಣಿಸಲಾಗುವುದು. ಹಾಗಾಗಿ ಉಪ್ಪನ್ನು ಬಹಳ ಕಾಳಜಿಯಿಂದ ನಿರ್ವಹಿಸಬೇಕಾಗುವುದು. ಉಪ್ಪು ನೆಲಕ್ಕೆ ಚೆಲ್ಲುವುದು ಅಥವಾ ಅನಿರೀಕ್ಷಿತವಾಗಿ ಚಲ್ಲಿದರೂ ಅದೊಂದು ದುರಾದೃಷ್ಟ ಎಂದು ಪರಿಗಣಿಸಲಾಗುವುದು. ಉಪ್ಪನ್ನು ಚಲ್ಲಿದರೆ ಅದರಲ್ಲಿ ಇರುವ ಕಣಗಳಷ್ಟೇ ಕಣ್ಣೀರನ್ನು ಚೆಲ್ಲಬೇಕಾಗುವುದು ಎಂದು ಹೇಳಲಾಗುವುದು. ಹಾಗಾಗಿ ಅನಿರೀಕ್ಷಿತವಾಗಿ ಅಥವಾ ಅಚಾನಕ್ಕಾಗಿ ಉಪ್ಪು ನಿಮ್ಮಿಂದ ನೆಲಕ್ಕೆ ಬಿದ್ದರೆ, ಅದನ್ನು ತಕ್ಷಣ ಎತ್ತಿ ನಿಮ್ಮ ಎಡ ಭುಜದ ಮೇಲೆ ಹಾಕಿಕೊಳ್ಳಿ. ಹಾಗೆ ಮಾಡುವುದರಿಂದ ದುರಾದೃಷ್ಟ ಹಾಗೂ ಕೆಟ್ಟ ಶಕ್ತಿಯ ಪ್ರಭಾವವು ನಿಮ್ಮ ಮೇಲೆ ಉಂಟಾಗದು ಎನ್ನುವ ನಂಬಿಕೆಯಿದೆ.

ಕನಸಿನಲ್ಲಿ ಪ್ರಾಣಿಗಳು ಕಂಡರೆ ಅದರರ್ಥ ಏನು ಗೊತ್ತಾ?

ಜೇಬಿನಲ್ಲಿ ಉಪ್ಪನ್ನು ಇಟ್ಟುಕೊಳ್ಳಿ
ಉಪ್ಪು ಕೆಡುವಂತಹ ವಸ್ತುಗಳನ್ನು ಹಾಗೂ ದುಷ್ಟ ಶಕ್ತಿ ವಿರುದ್ಧ ಹೋರಾಡುವಂತಹ ಶಕ್ತಿಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿಯೇ ದೆವ್ವ ಮತ್ತು ಭೂತಗಳು ಉಪ್ಪಿಗೆ ಹೆದರುತ್ತವೆ ಎಂದು ಹೇಳಲಾಗುವುದು. ಉಪ್ಪು ದೈವಿಕ ಶಕ್ತಿ ಹೊಂದಿರುವುದರಿಂದ ನಾಶವಾಗುವ ಪರಿಸ್ಥಿತಿ ಹಾಗೂ ವಸ್ತುಗಳನ್ನು ಕಾಪಾಡುವ ಶಕ್ತಿಯನ್ನು ಪಡೆದುಕೊಂಡಿದೆ. ದೂರದ ಪ್ರಯಾಣ ಮಾಡುವಾಗ ಅಥವಾ ನಿಮ್ಮ ಇಷ್ಟದ ಸ್ಥಳಗಳಿಗೆ ಹೋಗುವಾಗ ಜೇಬಿನಲ್ಲಿ ಸ್ವಲ್ಪ ಸಮುದ್ರದ ಉಪ್ಪನ್ನು ಕೊಂಡೊಯ್ಯಬೇಕು ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ಪ್ರಯಾಣದಲ್ಲಿ ಉಂಟಾಗುವ ತೊಂದರೆ ಹಾಗೂ ಅಪಘಾತಗಳನ್ನು ತಡೆಯುವುದು ಎಂದು ಹೇಳಲಾಗುವುದು.

ಉಪ್ಪನ್ನು ಶುಕ್ರವಾರ ಖರೀದಿಸಬೇಕು
ಉಪ್ಪು ಲಕ್ಷ್ಮಿ ದೇವಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಹಾಗಾಗಿ ಮನೆಗೆ ಉಪ್ಪನ್ನು ತರಲು ಅಥವಾ ಖರೀದಿಸಲು ಶುಕ್ರವಾರ ಅತ್ಯಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗುವುದು. ಶುಕ್ರವಾರದಂದು ಉಪ್ಪನ್ನು ಖರೀದಿಸಿ ತಂದು, ಡಬ್ಬದಲ್ಲಿ ವರ್ಗಾಯಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಮನೆಗೆ ಆಗಮಿಸುವಳು. ಹಾಗೆಯೇ ಜೀವನದಲ್ಲಿ ಇರುವ ಆರ್ಥಿಕ ತೊಂದರೆಗಳು ಸುಧಾರಣೆ ಕಾಣುತ್ತವೆ. ಸಾಲ ಬಾಧೆ ಇದ್ದರೆ ನಿವಾರಣೆಯಾಗುವುದು ಎನ್ನುವ ನಂಬಿಕೆಯಿದೆ.

ನೀರು ಮತ್ತು ಉಪ್ಪು
ನಿತ್ಯವೂ ಮನೆಯನ್ನು ಸ್ವಚ್ಛಗೊಳಿಸುವ ಹಾಗೂ ಒರೆಸುವ ಪ್ರಕ್ರಿಯೆ ಇರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ನಿತ್ಯವೂ ನಾವು ನೆಲ ಒರೆಸುವಾಗ, ನೀರಿಗೆ ಒಂದು ಟೀ ಚಮಚ ಅಥವಾ ಚಿಟಕೆ ಉಪ್ಪನ್ನು ಬೆರೆಸಿ. ನಂತರ ಆ ನೀರಿನ ಸಹಾಯದಿಂದ ಮನೆಯನ್ನು ಒರೆಸಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಹಾಗೂ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎನ್ನುವ ನಂಬಿಕೆಯಿದೆ. ಅಲ್ಲದೆ ಸಾಕಷ್ಟು ರೋಗ ಪೀಡಿತ ಸೂಕ್ಷ್ಮಾಣುಗಳು ನಾಶವಾಗುತ್ತವೆ ಎಂದು ಹೇಳಲಾಗುವುದು.

ಗಾಜಿನ ಡಬ್ಬದಲ್ಲಿ ಉಪ್ಪು
ಸಾಮಾನ್ಯವಾಗಿ ಪ್ಲಾಸ್ಟಿಕ್ ಡಬ್ಬದಲ್ಲಿ ಉಪ್ಪನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಆದರೆ ಈ ಕ್ರಮವು ತಪ್ಪು. ಇದು ಋಣಾತ್ಮಕ ಶಕ್ತಿಯ ಆಗಮನಕ್ಕೆ ಆಹ್ವಾನ ನೀಡುವುದು. ಹಾಗಾಗಿ ಗಾಜಿನ ಡಬ್ಬದಲ್ಲಿ, ಮಣ್ಣಿನ ಪಾತ್ರೆಯಲ್ಲಿ ಅಥವಾ ಪಿಂಗಾಣಿ ಪಾತ್ರದಲ್ಲಿ ಉಪ್ಪನ್ನು ಸಂಗ್ರಹಿಸಿ ಇಡಬೇಕು. ಇದರಿಂದ ಉಪ್ಪು ಸಹ ಉತ್ತಮ ಗುಣಮಟ್ಟದೊಂದಿಗೆ ದೀರ್ಘ ಸಮಯ ಇರುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸುವುದು ಎನ್ನುವ ನಂಬಿಕೆಯಿದೆ.

ಮನೆಯಲ್ಲಿ ಇರುವೆ ಗೂಡು ಕಟ್ಟಿದರೆ ಅದರರ್ಥ ಏನು ಗೊತ್ತಾ?

ಮನೆಯಲ್ಲಿ ಶಾಂತಿ
ಕುಟುಂಬದಲ್ಲಿ ಗಂಡ ಹೆಂಡತಿಯ ನಡುವೆ, ಸಹೋದರ-ಸಹೋದರಿಯರ ನಡುವೆ, ಅಪ್ಪ-ಮಗನ ನಡುವೆ, ತಾಯಿ- ಮಗ ಹೀಗೆ ಕುಟುಂಬದಲ್ಲಿ ಇರುವ ಸದಸ್ಯರೇ ಪರಸ್ಪರ ಜಗಳವಾಡುತ್ತಾರೆ, ಮನಃಶಾಂತಿ ನಾಶವಾಗಿದೆ ಅಥವಾ ಮನೆಯಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯ ನಡೆಯುತ್ತಿಲ್ಲ ಎಂದಾದರೆ, ಒಂದು ಪುಟ್ಟ ಗಾಜಿನ ಡಬ್ಬಿಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ, ಮುಚ್ಚಳವನ್ನು ಮುಚ್ಚಿ. ಆ ಡಬ್ಬವನ್ನು ಮಲಗುವ ಕೋಣೆಯಲ್ಲಿ ಅಥವಾ ದೇವ ಮೂಲೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸುವುದು.

ಉಪ್ಪನ್ನು ವ್ಯರ್ಥ ಮಾಡಬಾರದು
ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಮನೆಗೆ ತರುವುದು ಅಥವಾ ತಂದು ಒಂದೆಡೆ ಸಂಗ್ರಹ ಇಡುವುದು ಮಾಡಬಾರದು. ಅಗತ್ಯಕ್ಕೆ ತಕ್ಕಷ್ಟು ಉಪ್ಪನ್ನು ಮನೆಗೆ ತಂದು ಅದನ್ನು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಆಗ ಲಕ್ಷ್ಮಿ ದೇವಿ ಮನೆಯಲ್ಲಿ ಅಗತ್ಯವಾದ ಸಮೃದ್ಧಿಯನ್ನು ಹೆಚ್ಚಿಸುವಳು ಹಾಗೂ ಮನಸ್ಸಿಗೆ ಸಂತೋಷ ನೀಡುವಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ