ಭಾರತದ ಅತಿದೊಡ್ಡ ಶ್ರೀ ಸಿದ್ಧಿವಿನಾಯಕ ದೇವಾಲಯವಿದು..! ಎಲ್ಲಿದೆ ಗೊತ್ತಾ..?
ಶ್ರೀ ಸಿದ್ಧಿವಿನಾಯಕ ದೇವಾಲಯವು ಗುಜರಾತಿನ ಮಹೇಮದಾಬಾದ್ನಲ್ಲಿನ ಅದ್ಭುತ ಗಣೇಶ ದೇವಾಲಯವಾಗಿದೆ. ಈ ವಿನಾಯಕ ದೇವಾಲಯದಲ್ಲಿನ ಗಣೇಶನ ವಿಗ್ರಹವು ಮುಂಬೈನ ಗಣೇಶ ದೇವಾಲಯದ ವಿಗ್ರಹದ ವಿನ್ಯಾಸವನ್ನು ಹೋಲುತ್ತದೆ. ಶ್ರೀ ಸಿದ್ಧಿವಿನಾಯಕ ದೇವಾಲಯದ ಮಹತ್ವವೇನು..? ಈ ದೇವಾಲಯದ ವಿನ್ಯಾಸದ ಬಗ್ಗೆ ತಿಳಿದುಕೊಳ್ಳಿ..
TNN & Agencies 2 Dec 2021, 1:10 pm
ಹೈಲೈಟ್ಸ್:
ಹೈಲೈಟ್ಸ್:
ಹೈಲೈಟ್ಸ್ ಮಾತ್ರವೇ ಓದಲು ಆ್ಯಪ್ ಡೌನ್ಲೋಡ್ ಮಾಡಿ- ಶ್ರೀ ಸಿದ್ಧಿವಿನಾಯಕ ಗಣೇಶ ದೇವಾಲಯ
- ಗುಜರಾತ್ನ ಗಣೇಶ ದೇವಾಲಯ
- ಶ್ರೀ ಸಿದ್ಧಿವಿನಾಯಕ ಗಣೇಶ ದೇವಾಲಯದ ವಿನ್ಯಾಸ
ಸಿದ್ಧಿವಿನಾಯಕ ದೇವಾಲಯವು ಗುಜರಾತಿನ ಮಹೇಮದಾಬಾದ್ ನಗರದಲ್ಲಿ ನೆಲೆಗೊಂಡಿರುವ ಶಕ್ತಿಮಯ ಗಣೇಶ ದೇವಾಲಯವಾಗಿದೆ. ಈ ದೇವಾಲಯವು ಅಹಮದಾಬಾದ್ನಿಂದ ಡಾಕೋರ್ ರಸ್ತೆಯ ಮೂಲಕ ವಾತ್ರಾಕ್ ಮಹೇಮದಾಬಾದ್ ದಡದಲ್ಲಿ ಕೇವಲ 25 ಕಿಮೀ ದೂರದಲ್ಲಿದೆ. ಈ ಶ್ರೀ ಸಿದ್ಧಿವಿನಾಯಕ ದೇವಾಲಯವು ರಚನೆಯಲ್ಲಿ ಮತ್ತು ಅಂತರ್ನಿರ್ಮಿತ ಲಿಫ್ಟ್ ಸೌಲಭ್ಯವನ್ನು ಹೊಂದಿರುವ ಅತಿದೊಡ್ಡ ದೇವಾಲಯವಾಗಿದೆ. ಗುರುವಾರದಂದು ನೀವು ಪಠಿಸಲೇಬೇಕಾದ ಮಂತ್ರಗಳಿವು..! ಇವುಗಳ ಮಹತ್ವ ತಿಳಿಯಿರಿ..
ಇಂದು ಗುರು ಪ್ರದೋಷ: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ನಿಯಮ ಮತ್ತು ಮಂತ್ರಗಳು..!
ಅಹಮದಾಬಾದ್ ಬಳಿ ಇರುವ ಗಣೇಶ ದೇವಸ್ಥಾನವು (ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಮಹೇಮದಾಬಾದ್, ಗುಜರಾತ್) ಒಂದು ವಿಶೇಷವಾದ ದೇವಸ್ಥಾನವಾಗಿದೆ. ಈ ಗಣಪತಿ ದೇವಾಲಯದ ಆಕಾರವು ಗಣೇಶನ ವಿಗ್ರಹವನ್ನು ಹೋಲುತ್ತದೆ. ಮುಂಬೈ ಸಿದ್ಧಿವಿನಾಯಕ ದೇವಸ್ಥಾನದಿಂದ ತಂದ ಜ್ಯೋತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿಯೇ ಈ ದೇವಾಲಯಕ್ಕೆ ಸಿದ್ಧಿವಿನಾಯಕ ಎಂಬ ಹೆಸರೂ ಇದೆ. ಈ ಬೃಹತ್ ದೇವಾಲಯವು ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ಜಗತ್ಪ್ರಸಿದ್ಧವಾಗಿದೆ. ಈ ದೇವಾಲಯವನ್ನು 600,000 ಚದರ ಅಡಿಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಗಣೇಶನ ವಿಗ್ರಹದ ಬೃಹತ್ ಪ್ರತಿಕೃತಿಯಾಗಿ ನಿರ್ಮಿಸಲಾಗಿದೆ.
ಪೂಜಾ ವಿಧಿಗಳುಶನಿ ಅಮಾವಾಸ್ಯೆಯಂದೇ ಸೂರ್ಯಗ್ರಹಣ: ಇವುಗಳನ್ನು ಮಾಡಿದರೆ ಶನಿ ದೋಷ
ಶ್ರೀ ಸಿದ್ಧಿವಿನಾಯಕ ದೇವಾಲಯ ಎಲ್ಲಿದೆ..?
ಗಣೇಶ ದೇವನಿಗೆ ಸಂಬಂಧಿಸಿದ ಈ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಅಹಮದಾಬಾದ್ ಬಳಿಯ ಮಹೇಮದಾಬಾದ್ ಬಳಿ ವಾತ್ರಾಕ್ ನದಿಯ ದಡದಲ್ಲಿದೆ. ಈ ಅದ್ಭುತ ಗಣೇಶ ದೇವಾಲಯವು 73 ಅಡಿ ಎತ್ತರವನ್ನು ಹೊಂದಿದ್ದು, ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಂತೆಯೇ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದೆ. ದೇಶದ ಅತಿ ದೊಡ್ಡ ಗಣೇಶನ ದೇವಾಲಯವು ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಪ್ರತಿ ವರ್ಷ ದೇವಸ್ಥಾನ ತೆರೆಯುತ್ತಿದ್ದಂತೆ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಪೂಜಾ ವಿಧಿಗಳುಗುರುವಾರ ಈ ಕೆಲಸ ಮಾಡಿದರೆ ಅದೃಷ್ಟ..! ವಿಷ್ಣು ಮತ್ತು ಬೃಹಸ್ಪತಿಯನ್ನು ಪೂಜಿಸಿ..
ಹಿಂದೂ ಧರ್ಮಈ ದಿನ ಅರಳಿ ಮರವನ್ನು ಮುಟ್ಟಿದರೆ ದಾರಿದ್ರ್ಯ ಸುತ್ತಿಕೊಳ್ಳೋದು ಗ್ಯಾರೆಂಟಿ..!
ಪ್ರತಿ ಮಂಗಳವಾರ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜೆಗೆಂದು ಬಂದು ಸೇರುತ್ತಾರೆ. ದೇವಸ್ಥಾನದ ಭೂಮಿ ಪೂಜೆಯನ್ನು ಮಾರ್ಚ್ 9, 2011 ರಂದು ವಾತ್ರಾಕ್ ನದಿಯ ದಡದಲ್ಲಿರುವ ಮಹೇಮದಾಬಾದ್ನಲ್ಲಿ ನಡೆಸಲಾಯಿತು. ಈ ದೇವಾಲಯದ ನಿರ್ಮಾಣಕ್ಕೆ ಸುಮಾರು 14 ಕೋಟಿ ರೂಪಾಯಿಗಳಷ್ಟು ಹಣವನ್ನು ವೆಚ್ಚ ಮಾಡಲಾಗಿದೆ. ಈ ದೇವಾಲಯವು 120 ಅಡಿ ಉದ್ದ, 71 ಅಡಿ ಎತ್ತರ, 80 ಅಡಿ ಅಗಲ ಮತ್ತು ನೆಲದಿಂದ 56 ಅಡಿ ಎತ್ತರವನ್ನು ವಿಗ್ರಹವು ಒಳಗೊಂಡಿದೆ.
ದೇವಾಲಯಗಳುಇಲ್ಲಿನ ವಿಗ್ರಹಕ್ಕೆ ಹಾಲೆರೆದರೆ ಹಾಲಿನ ಬಣ್ಣವೇ ಬದಲಾಗುವುದು..! ಯಾಕೆ
ಶ್ರೀ ಸಿದ್ಧಿವಿನಾಯಕ ದೇವಾಲಯದ ವಿನ್ಯಾಸ:
ಮಹೇಮದಾಬಾದ್ನ ಈ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನದಲ್ಲಿ ಎಲ್ಲಿಯೂ ಸಿಮೆಂಟ್ ಅಥವಾ ಕಬ್ಬಿಣವನ್ನು ಬಳಸಿಲ್ಲ ಆದರೆ ನೆಲದಿಂದ 20 ಅಡಿ ಕೆಳಗೆ ಬಂಡೆಯ ಅಡಿಪಾಯವಿದೆ ಮತ್ತು ಅದನ್ನು ಒಂದೇ ಬಂಡೆಯ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ವಿಶ್ವದ ಇತರ 10 ದೇಶಗಳಲ್ಲಿನ ಗಣೇಶನ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಐದು ಅಂತಸ್ತಿನ ಈ ದೇವಸ್ಥಾನದ ಎರಡನೇ ಮಹಡಿಯಲ್ಲಿ ಭಕ್ತರಿಗೆ ಭಜನೆ ಕೀರ್ತನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಇತರೆ ಕಾರ್ಯಕ್ರಮಗಳನ್ನು ಮಾಡಲು ಪ್ರತ್ಯೇಕ ಸಭಾಂಗಣವನ್ನು ಕೂಡ ನಿರ್ಮಿಸಲಾಗಿದೆ.
ಪೂಜಾ ವಿಧಿಗಳುಇವುಗಳನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಂಡು ನೋಡಿ ಲಕ್ಷ್ಮಿ ಒಲಿಯದಿದ್ದರೆ ಹೇಳಿ..!
ಹಿಂದೂ ಧರ್ಮದಿನಗಳಿಗನುಗುಣವಾಗಿ ಹಣೆಗೆ ತಿಲಕವಿಟ್ಟರೆ ಜೀವನ ಸುಖದಿಂದಿರುವುದು..! ಯಾವ ದಿನ
ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿ ಕಾಣಸಿಗುವುದು ಇಲ್ಲಿನ ಗಣೇಶನ ದರ್ಶನ, ಪೂಜೆ ಮತ್ತು ಇತರೆ ಹೊರಾಂಗಣದ ನೋಟ. ಗಿಡಮೂಲಿಕೆಗಳ ಉದ್ಯಾನವನ, ಇತರ ಸಣ್ಣ ದೇವಾಲಯಗಳು, ಯಾತ್ರಾರ್ಥಿಗಳಿಗೆ ವಸತಿ, ರೆಸ್ಟೋರೆಂಟ್ ಮತ್ತು ಕೆಫೆಟೇರಿಯಾವನ್ನು ನಾವಿಲ್ಲಿ ನೋಡಿ ಕಣ್ಮನ ತುಂಬಿಕೊಳ್ಳಬಹುದಾಗಿದೆ. ಈ ದೇವಾಲಯದಲ್ಲಿ ಗಣೇಶನ ಅಖಂಡ ಜ್ವಾಲೆಯೂ ಉರಿಯುತ್ತದೆ. ಇದು ಇಡೀ ಭಾರತದಲ್ಲಿರುವ ಏಕೈಕ ದೇವಾಲಯವಾಗಿದ್ದು, ಅದರ ಮೇಲ್ಭಾಗದಲ್ಲಿ ಗಣೇಶನನ್ನು ಕೂರಿಸಲಾಗಿದೆ, ಇಲ್ಲಿ ಭಕ್ತರಿಗೆ ಲಿಫ್ಟ್ ಸೌಲಭ್ಯವನ್ನು ಕೂಡ ಮಾಡಲಾಗಿದೆ.
ಹಬ್ಬಗಳುಮಾಸಿಕ ಹಬ್ಬಗಳು: ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ನ ಪ್ರಮುಖ ಹಬ್ಬಗಳು,
ಮಹೇಮದಾಬಾದ್ನಲ್ಲಿನ ಈ ಗಣೇಶನ ವಿಗ್ರಹವು ಅತ್ಯಂತ ಆಕರ್ಷಣೀಯವಾದ ವಿಗ್ರಹವಾಗಿದೆ. ಕೇವಲ ಕಲ್ಲಿನಿಂದ ಮಾತ್ರ ನಿರ್ಮಿಸಲಾದ ಈ ದೇವಾಲಯದಲ್ಲಿ ಗಣೇಶ ಚತುರ್ಥಿ ಸೇರಿದಂತೆ ಇನ್ನಿತರ ಗಣೇಶನಿಗೆ ಸಮರ್ಪಿತವಾದ ಹಬ್ಬಗಳನ್ನು ಮತ್ತು ದಿನಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಇಂದು ಗುರು ಪ್ರದೋಷ: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ನಿಯಮ ಮತ್ತು ಮಂತ್ರಗಳು..!
ಅಹಮದಾಬಾದ್ ಬಳಿ ಇರುವ ಗಣೇಶ ದೇವಸ್ಥಾನವು (ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಮಹೇಮದಾಬಾದ್, ಗುಜರಾತ್) ಒಂದು ವಿಶೇಷವಾದ ದೇವಸ್ಥಾನವಾಗಿದೆ. ಈ ಗಣಪತಿ ದೇವಾಲಯದ ಆಕಾರವು ಗಣೇಶನ ವಿಗ್ರಹವನ್ನು ಹೋಲುತ್ತದೆ. ಮುಂಬೈ ಸಿದ್ಧಿವಿನಾಯಕ ದೇವಸ್ಥಾನದಿಂದ ತಂದ ಜ್ಯೋತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿಯೇ ಈ ದೇವಾಲಯಕ್ಕೆ ಸಿದ್ಧಿವಿನಾಯಕ ಎಂಬ ಹೆಸರೂ ಇದೆ. ಈ ಬೃಹತ್ ದೇವಾಲಯವು ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ಜಗತ್ಪ್ರಸಿದ್ಧವಾಗಿದೆ. ಈ ದೇವಾಲಯವನ್ನು 600,000 ಚದರ ಅಡಿಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಗಣೇಶನ ವಿಗ್ರಹದ ಬೃಹತ್ ಪ್ರತಿಕೃತಿಯಾಗಿ ನಿರ್ಮಿಸಲಾಗಿದೆ.
ಪೂಜಾ ವಿಧಿಗಳುಶನಿ ಅಮಾವಾಸ್ಯೆಯಂದೇ ಸೂರ್ಯಗ್ರಹಣ: ಇವುಗಳನ್ನು ಮಾಡಿದರೆ ಶನಿ ದೋಷ
ಶ್ರೀ ಸಿದ್ಧಿವಿನಾಯಕ ದೇವಾಲಯ ಎಲ್ಲಿದೆ..?
ಗಣೇಶ ದೇವನಿಗೆ ಸಂಬಂಧಿಸಿದ ಈ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಅಹಮದಾಬಾದ್ ಬಳಿಯ ಮಹೇಮದಾಬಾದ್ ಬಳಿ ವಾತ್ರಾಕ್ ನದಿಯ ದಡದಲ್ಲಿದೆ. ಈ ಅದ್ಭುತ ಗಣೇಶ ದೇವಾಲಯವು 73 ಅಡಿ ಎತ್ತರವನ್ನು ಹೊಂದಿದ್ದು, ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಂತೆಯೇ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದೆ. ದೇಶದ ಅತಿ ದೊಡ್ಡ ಗಣೇಶನ ದೇವಾಲಯವು ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಪ್ರತಿ ವರ್ಷ ದೇವಸ್ಥಾನ ತೆರೆಯುತ್ತಿದ್ದಂತೆ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಪೂಜಾ ವಿಧಿಗಳುಗುರುವಾರ ಈ ಕೆಲಸ ಮಾಡಿದರೆ ಅದೃಷ್ಟ..! ವಿಷ್ಣು ಮತ್ತು ಬೃಹಸ್ಪತಿಯನ್ನು ಪೂಜಿಸಿ..
ಹಿಂದೂ ಧರ್ಮಈ ದಿನ ಅರಳಿ ಮರವನ್ನು ಮುಟ್ಟಿದರೆ ದಾರಿದ್ರ್ಯ ಸುತ್ತಿಕೊಳ್ಳೋದು ಗ್ಯಾರೆಂಟಿ..!
ಪ್ರತಿ ಮಂಗಳವಾರ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜೆಗೆಂದು ಬಂದು ಸೇರುತ್ತಾರೆ. ದೇವಸ್ಥಾನದ ಭೂಮಿ ಪೂಜೆಯನ್ನು ಮಾರ್ಚ್ 9, 2011 ರಂದು ವಾತ್ರಾಕ್ ನದಿಯ ದಡದಲ್ಲಿರುವ ಮಹೇಮದಾಬಾದ್ನಲ್ಲಿ ನಡೆಸಲಾಯಿತು. ಈ ದೇವಾಲಯದ ನಿರ್ಮಾಣಕ್ಕೆ ಸುಮಾರು 14 ಕೋಟಿ ರೂಪಾಯಿಗಳಷ್ಟು ಹಣವನ್ನು ವೆಚ್ಚ ಮಾಡಲಾಗಿದೆ. ಈ ದೇವಾಲಯವು 120 ಅಡಿ ಉದ್ದ, 71 ಅಡಿ ಎತ್ತರ, 80 ಅಡಿ ಅಗಲ ಮತ್ತು ನೆಲದಿಂದ 56 ಅಡಿ ಎತ್ತರವನ್ನು ವಿಗ್ರಹವು ಒಳಗೊಂಡಿದೆ.
ದೇವಾಲಯಗಳುಇಲ್ಲಿನ ವಿಗ್ರಹಕ್ಕೆ ಹಾಲೆರೆದರೆ ಹಾಲಿನ ಬಣ್ಣವೇ ಬದಲಾಗುವುದು..! ಯಾಕೆ
ಶ್ರೀ ಸಿದ್ಧಿವಿನಾಯಕ ದೇವಾಲಯದ ವಿನ್ಯಾಸ:
ಮಹೇಮದಾಬಾದ್ನ ಈ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನದಲ್ಲಿ ಎಲ್ಲಿಯೂ ಸಿಮೆಂಟ್ ಅಥವಾ ಕಬ್ಬಿಣವನ್ನು ಬಳಸಿಲ್ಲ ಆದರೆ ನೆಲದಿಂದ 20 ಅಡಿ ಕೆಳಗೆ ಬಂಡೆಯ ಅಡಿಪಾಯವಿದೆ ಮತ್ತು ಅದನ್ನು ಒಂದೇ ಬಂಡೆಯ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ವಿಶ್ವದ ಇತರ 10 ದೇಶಗಳಲ್ಲಿನ ಗಣೇಶನ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಐದು ಅಂತಸ್ತಿನ ಈ ದೇವಸ್ಥಾನದ ಎರಡನೇ ಮಹಡಿಯಲ್ಲಿ ಭಕ್ತರಿಗೆ ಭಜನೆ ಕೀರ್ತನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಇತರೆ ಕಾರ್ಯಕ್ರಮಗಳನ್ನು ಮಾಡಲು ಪ್ರತ್ಯೇಕ ಸಭಾಂಗಣವನ್ನು ಕೂಡ ನಿರ್ಮಿಸಲಾಗಿದೆ.
ಪೂಜಾ ವಿಧಿಗಳುಇವುಗಳನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಂಡು ನೋಡಿ ಲಕ್ಷ್ಮಿ ಒಲಿಯದಿದ್ದರೆ ಹೇಳಿ..!
ಹಿಂದೂ ಧರ್ಮದಿನಗಳಿಗನುಗುಣವಾಗಿ ಹಣೆಗೆ ತಿಲಕವಿಟ್ಟರೆ ಜೀವನ ಸುಖದಿಂದಿರುವುದು..! ಯಾವ ದಿನ
ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿ ಕಾಣಸಿಗುವುದು ಇಲ್ಲಿನ ಗಣೇಶನ ದರ್ಶನ, ಪೂಜೆ ಮತ್ತು ಇತರೆ ಹೊರಾಂಗಣದ ನೋಟ. ಗಿಡಮೂಲಿಕೆಗಳ ಉದ್ಯಾನವನ, ಇತರ ಸಣ್ಣ ದೇವಾಲಯಗಳು, ಯಾತ್ರಾರ್ಥಿಗಳಿಗೆ ವಸತಿ, ರೆಸ್ಟೋರೆಂಟ್ ಮತ್ತು ಕೆಫೆಟೇರಿಯಾವನ್ನು ನಾವಿಲ್ಲಿ ನೋಡಿ ಕಣ್ಮನ ತುಂಬಿಕೊಳ್ಳಬಹುದಾಗಿದೆ. ಈ ದೇವಾಲಯದಲ್ಲಿ ಗಣೇಶನ ಅಖಂಡ ಜ್ವಾಲೆಯೂ ಉರಿಯುತ್ತದೆ. ಇದು ಇಡೀ ಭಾರತದಲ್ಲಿರುವ ಏಕೈಕ ದೇವಾಲಯವಾಗಿದ್ದು, ಅದರ ಮೇಲ್ಭಾಗದಲ್ಲಿ ಗಣೇಶನನ್ನು ಕೂರಿಸಲಾಗಿದೆ, ಇಲ್ಲಿ ಭಕ್ತರಿಗೆ ಲಿಫ್ಟ್ ಸೌಲಭ್ಯವನ್ನು ಕೂಡ ಮಾಡಲಾಗಿದೆ.
ಹಬ್ಬಗಳುಮಾಸಿಕ ಹಬ್ಬಗಳು: ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ನ ಪ್ರಮುಖ ಹಬ್ಬಗಳು,
ಮಹೇಮದಾಬಾದ್ನಲ್ಲಿನ ಈ ಗಣೇಶನ ವಿಗ್ರಹವು ಅತ್ಯಂತ ಆಕರ್ಷಣೀಯವಾದ ವಿಗ್ರಹವಾಗಿದೆ. ಕೇವಲ ಕಲ್ಲಿನಿಂದ ಮಾತ್ರ ನಿರ್ಮಿಸಲಾದ ಈ ದೇವಾಲಯದಲ್ಲಿ ಗಣೇಶ ಚತುರ್ಥಿ ಸೇರಿದಂತೆ ಇನ್ನಿತರ ಗಣೇಶನಿಗೆ ಸಮರ್ಪಿತವಾದ ಹಬ್ಬಗಳನ್ನು ಮತ್ತು ದಿನಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.