ಆ್ಯಪ್ನಗರ

ಸಿಎಂ ಸಿದ್ದರಾಮಯ್ಯ ದಾವೂದ್ ಚಿಕ್ಕಪ್ಪನೇ: ಪ್ರಹ್ಲಾದ್ ಜೋಶಿ

ಇತ್ತೀಚಿಗೆ ನೀವು ದಾವೂದ ಇಬ್ರಾಹಿಂರಂಥವರ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರಿ ಎಂದು ಕಿಡಿಕಾರಿರುವ ಸಂಸದ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ವಿಕ ಸುದ್ದಿಲೋಕ 11 Jul 2017, 10:23 am
ಬೆಂಗಳೂರು: ಇತ್ತೀಚಿಗೆ ನೀವು ದಾವೂದ ಇಬ್ರಾಹಿಂರಂಥವರ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರಿ ಎಂದು ಕಿಡಿಕಾರಿರುವ ಸಂಸದ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
Vijaya Karnataka Web siddaramaiah behaving like dawoods uncle prahlad joshi
ಸಿಎಂ ಸಿದ್ದರಾಮಯ್ಯ ದಾವೂದ್ ಚಿಕ್ಕಪ್ಪನೇ: ಪ್ರಹ್ಲಾದ್ ಜೋಶಿ


ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿಶೇಷವಾಗಿ ಮಂಗಳೂರಿನಲ್ಲಿ ಶಾಂತಿ ವಾತಾವರಣ ಹಾಗೂ ಮತೀಯ ಸಾಮರಸ್ಯ ಕದಡುವ ಗಲಭೆಗಳ ಕುರತು ಭಾನುವಾರ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ನೀಡಿದ ಹೇಳಿಕೆ ನಿಮ್ಮ ಹಾಗೂ ನಿಮ್ಮ ಪಕ್ಷ ರಾಜಕೀಯ ಬೆೇಳೆ ಬೇಯಿಸಿಕೊಳ್ಳಲು ಕೀಳುಮಟ್ಟಕ್ಕೆ ಹೋಗುತ್ತಿರೆಂಬುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಮಂಗಳೂರು ಗಲಭೆಗೆ ಕೇವಲ ಹಿಂದೂಗಳೇ ಕಾರಣವೆಂಬ ಅಪಪ್ರಜಾರ ಮಾಡುತ್ತ ಒಬ್ಬ ಪ್ರಾಮಾಣಿಕ ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆ ಮಾಡಿದ ಮತೀಯವಾದಿಗಳನ್ನು ಪತ್ತೆ ಮಾಡುವುದನ್ನು ಬಿಟ್ಟು ಕೋಮು ದಳ್ಳುರಿಯಲ್ಲಿ ನಿಮ್ಮ ದೇಹ ಬೆಚ್ಚಗೆ ಮಾಡಿಕೊಳ್ಳುವ ಕೆಟ್ಟಚಾಳಿ ಬಿಡಿ. ಕೊಲೆಯಾದ ಯುವಕ ಅಹಿಂದ ವರ್ಗಕ್ಕೆ ಸೇರಿದವನೆಂಬ ಕಳಕಳಿಯೂ ನಿಮಗಿಲ್ಲವೆ ಮಾನ್ಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ನಿಮ್ಮ ತಡವರಿಸಿದ ಉತ್ತರವನ್ನು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದು, ನಿಮ್ಮ ತಿಕ್ಕಲು ಹಾಗೂ ಪ್ರಚೋದನಕಾರಿ ಉತ್ತರವನ್ನು ಬೇಕಾದರೆ ಅದರ ಸಿಡಿ ತರಿಸಿಕೊಂಡು ನೋಡಿ. ಅದರಿಂದ ನಿಮಗೆ ಮುಸ್ಲಿಂ ತುಷ್ಟೀಕರಣದ ಹುಚ್ಚು ಎಷ್ಟು ಹಿಡಿದಿದೆ ಎಂದು ತಿಳಿಯುತ್ತದೆ ಎಂದಿದ್ದಾರೆ.

ಕೋಮುವಾದ, ಕೋಮುದಳ್ಳುರಿ, ಕೋಮು ಗಲಭೆ ಎಂದಾಕ್ಷಣ ನಿಮ್ಮ ಬಾಯಲ್ಲಿ ಹಿಂದೂಗಳು ಎಂಬ ಶಬ್ದ ತಕ್ಷಣವೇ ಬರುತ್ತದೆ. ಆದರೆ, ಮುಸ್ಲಿಂ ಎಂಬ ಪದ ಬಳಸುವಷ್ಟು ಧೈರ್ಯ ನಿಮಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಬಾರದು ಎಂಬದು ಹಳೇಯ ಮಾತು ಎಂದು ಟೀಕಿಸಿದ್ದಾರೆ.

'ನೀವು ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕೇವಲ ಅಲ್ಪಸಂಖ್ಯಾತರ ಮತಗಳಿಂದಲ್ಲ. ನಿಮ್ಮಲ್ಲಿ ಅಲ್ಪಸ್ವಲ್ಪ ಆತ್ಮಸಾಕ್ಷಿ ಉಳಿದಿದ್ದರೆ ಎಲ್ಲ ಧರ್ಮಕ್ಕೂ ಸೇರಿದ ಪ್ರತಿನಿಧಿಯಂತೆ ವರ್ತಿಸಿ. ಇಲ್ಲದಿದ್ದರೆ ರಾಜ್ಯದಲ್ಲಿಯ ಎಲ್ಲ ಕೋಮು ಗಲಭೆಯ ಮೂಲ ಸೂತ್ರದಾರ ನೀವೆ ಎಂಬುದು ತಿಳಿಯಲು ಜನತೆಗೆ ಬಹಳ ಹೊತ್ತು ಬೇಕಿಲ್ಲ. ಇತ್ತೀಚಿಗೆ ನೀವು ದಾವುದ್ ಇಬ್ರಾಹಿಂನ ಚಿಕ್ಕಪ್ಪನಂತೆ ವರ್ತಿಸುತ್ತಿರುವಿರೆಂಬ ಅನಿಸಿಕೆಯನ್ನು ಸತ್ಯ ಮಾಡುತ್ತಿರುವಿರಿ ಎಂದು ಸಂಸದ ಪ್ರಹ್ಲಾದ್ ಜೋಶಿ ಅವರು ಪತ್ರದಲ್ಲಿ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ