ಸಿದ್ದು ಬಣ್ಣ ಶೀಘ್ರ ಬಯಲು: ಬಿಎಸ್ವೈ
ಗೋವಿಂದರಾಜು ಅವರಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿರುವ ವಿಷಯ ಬಹಿರಂಗ ಪಡಿಸುವಂತೆ ಸಿಬಿಐ ನಿರ್ದೇಶಕರಿಗೆ ಸಂಸದರಿಂದ ಪತ್ರ ಬರೆಸುವೆ ಎಂದು ಯಡಿಯೂರಪ್ಪ ಗುಡುಗಿದ್ದಾರೆ.
Vijaya Karnataka Web 22 Feb 2017, 1:22 pm
ಕಲಬುರಗಿ: ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿರುವ ವಿಷಯ ಬಹಿರಂಗ ಪಡಿಸುವಂತೆ ಸಿಬಿಐ ನಿರ್ದೇಶಕರಿಗೆ ಸಂಸದರಿಂದ ಪತ್ರ ಬರೆಸುವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಗುಡುಗಿದ್ದಾರೆ.
'ಸಿಬಿಐ ನಿಯಮದ ಪ್ರಕಾರ, ಸಂಸದರು ಪತ್ರ ಬರೆದರೆ ಅದನ್ನು ಅವರು ಬಹಿರಂಗಪಡಿಸಲು ಅವಕಾಶವಿದೆ. ಇದರಿಂದ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಲಿದೆ,'ಎಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
'ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ 65 ಕೋಟಿ ರೂ. ಪಾವತಿಯಾಗಿದೆ. ಈ ಕುರಿತು ತ್ರಿಪುರಾಂತಕ ಎಂಬುವವರು ಬರೆದ ಪತ್ರದ ಆಧಾರದ ಮೇಳೆ ತನಿಖೆ ಶುರುವಾಗಿದೆ,' ಎಂದು ಅವರು ಆರೋಪಿಸಿದರು.
ಹೆಚ್ಡಿಕೆ ದಾಖಲೆ ಬಿಡುಗಡೆ ಮಾಡಲಿ:
ನನ್ನ ಅವಧಿಯಲ್ಲಿ ಕೇಂದ್ರ ನಾಯಕರಿಗೆ ಹಣ ಸಂದಾಯ ಆಗಿದೆ ಎಂಬ ಆರೋಪ ಸುಳ್ಳು, ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಈ ವಿಚಾರವಾಗಿ ದಿನೇಶ್ ಗುಂಡೂರಾವ್ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
'ಸಿಬಿಐ ನಿಯಮದ ಪ್ರಕಾರ, ಸಂಸದರು ಪತ್ರ ಬರೆದರೆ ಅದನ್ನು ಅವರು ಬಹಿರಂಗಪಡಿಸಲು ಅವಕಾಶವಿದೆ. ಇದರಿಂದ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಲಿದೆ,'ಎಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
'ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ 65 ಕೋಟಿ ರೂ. ಪಾವತಿಯಾಗಿದೆ. ಈ ಕುರಿತು ತ್ರಿಪುರಾಂತಕ ಎಂಬುವವರು ಬರೆದ ಪತ್ರದ ಆಧಾರದ ಮೇಳೆ ತನಿಖೆ ಶುರುವಾಗಿದೆ,' ಎಂದು ಅವರು ಆರೋಪಿಸಿದರು.
ಹೆಚ್ಡಿಕೆ ದಾಖಲೆ ಬಿಡುಗಡೆ ಮಾಡಲಿ:
ನನ್ನ ಅವಧಿಯಲ್ಲಿ ಕೇಂದ್ರ ನಾಯಕರಿಗೆ ಹಣ ಸಂದಾಯ ಆಗಿದೆ ಎಂಬ ಆರೋಪ ಸುಳ್ಳು, ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಈ ವಿಚಾರವಾಗಿ ದಿನೇಶ್ ಗುಂಡೂರಾವ್ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.