ಆ್ಯಪ್ನಗರ

ಪಂಚಾಂಗ ಶ್ರವಣ

ಶ್ರೀದುರ್ಮುಖಿ ನಾಮ ಸಂವತ್ಸರದಲ್ಲಿ ಜನರು ಸಂತೋಷಭರಿತರಾಗಿರುತ್ತಾರೆ. ಮೋಡಗಳು ಗಾಳಿಯಿಂದ ಚದುರಿ ಹೋಗಿ ಕೆಲವು ಕಡೆ ಸಾಧಾರಣ ಮಳೆಯಾಗುತ್ತದೆ

Vijaya Karnataka Web 3 Apr 2016, 5:46 pm
ಶ್ರೀದುರ್ಮುಖಿ ನಾಮ ಸಂವತ್ಸರದಲ್ಲಿ ಜನರು ಸಂತೋಷಭರಿತರಾಗಿರುತ್ತಾರೆ. ಮೋಡಗಳು ಗಾಳಿಯಿಂದ ಚದುರಿ ಹೋಗಿ ಕೆಲವು ಕಡೆ ಸಾಧಾರಣ ಮಳೆಯಾಗುತ್ತದೆ. ಸಸ್ಯಗಳು ಮಧ್ಯಮವಾಗಿ ಫಲಿಸುತ್ತವೆ. ಚಿನ್ನ, ಮುತ್ತು, ಶ್ರೀಗಂಧ, ಬೆಳ್ಳಿ ಇವು ದುರ್ಲಭವಾಗುತ್ತವೆ. ಪಶುಗಳಿಗೆ ಮೇವು ಹೇರಳವಾಗಿ ದೊರೆಯುತ್ತದೆ. ಕಬ್ಬಿಣ, ಸೀಸ, ತಾಮ್ರ ಮೊದಲಾದ ಲೋಹಗಳು ಹೇರಳವಾಗಿ ದೊರೆಯುತ್ತವೆ.
Vijaya Karnataka Web panchanga
ಪಂಚಾಂಗ ಶ್ರವಣ


ಗ್ರಹಣ ವಿಚಾರಕ್ಕೆ ಬಂದಾಗ ಈ ಬಾರಿ ಯಾವುದೇ ಗ್ರಹಣಗಳು ನಮ್ಮ ದೇಶಕ್ಕೆ ಗೋಚರವಾಗುವುದಿಲ್ಲ. ಆ ಕಾರಣ ಗ್ರಹಾಚರಣೆಯಿಲ್ಲ. ರವಿಚಾರ ಫಲದ ಪ್ರಕಾರ ಏಪ್ರಿಲ್ 13ರಂದು ಸೂರ್ಯನು ಮೇಷರಾಶಿಯನ್ನು ಪ್ರವೇಶಿಸಿದಾಗ ಸಸ್ಯಗಳಿಗೆ ಅಭಿವೃದ್ಧಿ, ಸುಭಿಕ್ಷವೂ, ಆರೋಗ್ಯವೂ ಉಂಟಾಗುತ್ತದೆ.

ಜೂನ್ 22 ರಂದು ರವಿ ಆರಿದ್ರಾ ನಕ್ಷತ್ರವನ್ನು ಪ್ರವೇಶಿಸುವುದರಿಂದ ಪ್ರಪಂಚಕ್ಕೆ ಪೀಡೆ, ಸಸ್ಯನಾಶ, ಅಲ್ಪವೃಷ್ಟಿ ಯುಂಟಾಗುತ್ತದೆ. ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಬಿತ್ತನೆ ಮಾಡುವುದು ಸೂಕ್ತವಲ್ಲ. ಚಂದ್ರಾಚಾರ ಫಲವನ್ನು ಲೆಕ್ಕ ಹಾಕುವಾಗ ಈ ಬಾರಿ ಚೈತ್ರ ಶುಕ್ಲ ಪ್ರಥಮಾ ಸೋಮವಾರ ಬಂದಿದೆ. ಹಾಗಾಗಿ ಸುಭಿಕ್ಷ, ಕ್ಷೇಮ, ಆರೋಗ್ಯ, ಸುವೃಷ್ಟಿಗಳು ಉಂಟಾಗುತ್ತವೆ. ಈ ಬಾರಿಯ ಸಂಕ್ರಾಂತಿ ಪುರುಷನ ಹೆಸರು ರಾಕ್ಷಸೀ. ಗೋಚಾರ ಫಲವನ್ನು ಲೆಕ್ಕ ಹಾಕುವಾಗ ಮುಖ್ಯವಾಗಿ ಗುರು, ಶನಿಗ್ರಹಗಳ ಚಲನೆಯನ್ನು ಲೆಕ್ಕ ಹಾಕಲಾಗುತ್ತದೆ. ಕಾರಣ ರವಿ, ಕುಜ, ಬುಧ, ಶುಕ್ರ ಗ್ರಹಗಳ ಚಲನೆ ಕಡಿಮೆಯಿರುತ್ತದೆ. ಹಾಗಾಗಿ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಶ್ರೀ ದುರ್ಮುಖಿ ನಾಮ ಸಂವತ್ಸರದಲ್ಲಿ ಗುರುವು ವರ್ಷಾದಿಯಿಂದ ಆಗಸ್ಟ್ 11ರವರೆಗೆ ಸಿಂಹರಾಶಿಯಲ್ಲಿ ಇರುತ್ತಾನೆ. ಆ ನಂತರ ವರ್ಷಾಂತ್ಯದವರೆಗೂ ಕನ್ಯಾರಾಶಿಯಲ್ಲಿ ಇರುತ್ತಾನೆ. ಶನಿ ಗ್ರಹವು ಜನವರಿ 26, 2016ರಿಂದ ವೃಶ್ಚಿಕ ರಾಶಿಯಲ್ಲೂ ಜನವರಿ 26, 2017ರವರೆಗೆ ಧನೂ ರಾಶಿಯಲ್ಲಿ ಸಂಚರಿಸುತ್ತಾನೆ.
ಮಾಹಿತಿ : ಒಂಟಿ ಕೊಪ್ಪಲ್ ಪಂಚಾಂಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ