ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಕನ್ನಡತಿ ಸೀತಾ ಕೇಶವ ಅವರು, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ 3ನೇ ಪಂದ್ಯವನ್ನು ಕ್ರೀಡಾಂಗಣದಲ್ಲಿ ನೇರವಾಗಿ ಕಣ್ತುಂಬಿಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಸೀತಾ ಕೇಶವ ಸಿಡ್ನಿಯಿಂದ ಕಳುಹಿಸಿದ ಲೇಖನವನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ. "ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2020-2021ರ ಏಕದಿನ, ಟಿ20, ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಳ ಬಗ್ಗೆ ಕೇಳುತ್ತಿದ್ದಾಗ ಸುಮಾರು ಒಂದು ವರ್ಷದಿಂದ ದೇಶವನ್ನೆಲ್ಲಾ ಆಕ್ರಮಿಸಿಕೊಂಡಿರುವ ಮಹಾಮಾರಿ ಕೊರೊನಾ ವೈರಸ್ ನಡುವೆ ಈ ಸರಣಿಗಳೆಲ್ಲಾ ನಡೆಯುತ್ತಾ ಎನ್ನುವ ಆತಂಕ ಸೃಷ್ಟಿಯಾಗಿತ್ತು. ಆದರೆ ದೇವರ ದಯೆಯಿಂದ ಸುಸೂತ್ರವಾಗಿ ಏಕದಿನ, ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಮ್ಯಾಚ್ಗಳು ಅದ್ಭುತ ಮನೋರಂಜನೆ ನೀಡಿ ಮುಗಿದಿವೆ.
ಏಕದಿನ ಸರಣಿ ಆಸ್ಟ್ರೇಲಿಯಾ ತಮ್ಮದಾಗಿಸಿಕೊಂಡರೆ, ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿತು. ನಾವೂ ಏಕದಿನ ಮತ್ತು ಟಿ20 ಮ್ಯಾಚ್ ನೋಡಲು ಹೋಗಿದ್ದೆವಾದರೂ ಸ್ವಲ್ಪ ನಿರಾಸೆಯಿಂದ ಹಿಂದಿರುಗುವಂತ್ತಾಯಿತು (ನಮ್ಮವರು ಸೋತಿದ್ದರಿಂದ). ಜೊತೆಗೆ ಮೊದಲ ಟೆಸ್ಟ್ ನಡೆದ ಅಡಿಲೇಡಿನಲ್ಲಿ ಭಾರತ ಹೀನಾಯ ಸೋತಿತ್ತು. ಆದರೆ, ನಂತರ ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 'ಮುಯ್ಯಿಗೆ ಮುಯ್ಯಿ' ಎನ್ನುವಂತೆ ಒಳ್ಳೆಯ ಪ್ರದರ್ಶನ ನೀಡಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
ಆಸೀಸ್ ಬೌಲರ್ಗಳಿಂದ 14 ಬಾರಿ ಪೆಟ್ಟು ತಿಂದು ದಾಖಲೆ ಬರೆದ ಪೂಜಾರ!
ಜನವರಿ 7ರಿಂದ ನಡೆದ ಸಿಡ್ನಿ ಟೆಸ್ಟ್ ಹೊತ್ತಿಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್(ಎಸ್ಸಿಜಿ)ನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ನಾರ್ದನ್ ಬೀಚ್ ಆರ್.ಎಸ್.ಎಲ್ ಕ್ಲಬ್ನಲ್ಲಿ ಡಿಸೆಂಬರ್ 22ರಂದು , ಒಟ್ಟು ಹತ್ತೊಂಬತ್ತು ಕೋವಿಡ್-19 ಪಾಸಿಟಿವ್ ಕೇಸ್ಗಳು ಕಂಡುಬಂದು ಮೂರು ವಾರಗಳ ಲಾಕ್ಡೌನ್ ಹೇರಿ ಕಟ್ಟುನಿಟ್ಟಿನ ನಿರ್ಭಂದನೆಗಳನ್ನು ತರಲಾಗಿತ್ತು. ಡಿಸೆಂಬರ್ 31ರ ನ್ಯೂ ಯಿಯರ್ ಫೈರ್ ವರ್ಕ್ಸ್ಗೂ ಕೂಡ ಪರ್ಮಿಟ್ ತೆಗೆದುಕೊಂಡು ಹೋಗುವಂತಹ ನಿರ್ಬದಗಳನ್ನು ಹೇರಲಾಗಿತ್ತು. ಒಂದು ತಂಡದಲ್ಲಿ ಗರಿಷ್ಠ ಐದು ಜನರಿಗೆ ಮಾತ್ರ ಅವಕಾಶ. ಹಿಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲೂ ಮಾಸ್ಕ್ ಕಡ್ಡಾಯ, ಧರಿಸದೇ ಇಲ್ಲದವರಿಗೆ 200 ಡಾಲರುಗಳ ದಂಡ, ಹೀಗೆ ಕಟು ನಿಯಮಗಳ ನಡುವೆ ಕೆಲ ನಿಮಿಷಗಳ ಕಾಲ ಮಾತ್ರ ಹೊಸ ವರ್ಷ ಆಚರಿಸಲಾಗಿತ್ತು.
ನಿಮ್ಮಿಂದ ಆಗದು ಎಂದವರ ಮುಂದೆಯೇ ಸರಣಿ ಗೆದ್ದು ಬೀಗಿದ ಭಾರತ: ಅನುಭವಿಸಿದ ನೋವು, ಅವಮಾನ ಒಂದಾ.. ಎರಡಾ..
ನಂತರ ಸಿಡ್ನಿ ಟೆಸ್ಟ್ ಬಗ್ಗೆ ಆತಂಕ ಶರುವಾಯ್ತು. ಮ್ಯಾಚ್ ನಡೆಯುತ್ತೋ ಇಲ್ಲವೋ ಎನ್ನುವ ಕುತೂಹಲ ಹೆಚ್ಚಾಗಿ ಪ್ರತಿದಿನದ ವಾರ್ತೆಯ ಕಡೆಗೆ ನಮ್ಮೆಲ್ಲರ ಮುತುವರ್ಜಿ ಹೆಚ್ಚಾಯಿತು. ಆದರೆ ಯಾವುದೇ ತೊಂದರೆ ಇಲ್ಲದೆ ನಿಗದಿಯಂತೆ ಪಂದ್ಯ ಆರಂಭವಾಯಿತು. ಇನ್ನು ಎಸ್ಸಿಜಿ ಕ್ರಿಕೆಟ್ ಮೈದಾನದಲ್ಲಿ ಸುಮಾರು 48 ಸಾವಿರ ಪ್ರೇಕ್ಷಕರು ಕೂತು ನೋಡುವಕಡೆ, ಕೋವಿಡ್ ಪ್ರಕರಣ ಕಾರಣ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಎಸ್ಸಿಜಿ ಸದಸ್ಯರಿಗೂ 'ಟಿಕೆಟೆಕ್'ನಿಂದ ಇ-ಮೇಲ್ ಮೂಲಕ ಆಯಾಯ ದಿವಸಗಳಿಗೆ ಟಿಕೆಟ್ ಕಳುಹಿಸುತ್ತಿದ್ದರು.
'ಭಾರತವನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು' : ಆಸೀಸ್ ಕೋಚ್ ಭಾವುಕ ಮಾತು!
ನಾವು ಪಂದ್ಯದ ಎರಡನೇ ಮತ್ತು ಮೂರನೇ ದಿನ ಆಟ ನೋಡಲು ಹೋಗಿ, ಭಾರತ ತಂಡದವರು ನೀಡಿದ ರನ್ಔಟ್ಗಳ ಪ್ರದರ್ಶನ ಕಂಡು ಮ್ಯಾಚ್ ಏನಪ್ಪ ಹೀಗೇ? ಎಂದು ಬೇಸರಗೊಂಡಿದ್ದೆವು. ನಾಲ್ಕನೇ ದಿನದಾಟದಲ್ಲೂ ಸುಮಾರು ಜನ ಆಸ್ಟ್ರೇಲಿಯಾಗೆ ಗೆಲುವು ಎನ್ನುತ್ತಿದ್ದರು. ಆದರೆ ಭಾರತ ತಂಡ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದಾಗ ಓಪನರ್ಗಳು ಉತ್ತಮ ಆಟವಾಡಿ ಒಳ್ಳೆಯ ಮೊತ್ತ ಸೇರಿಸಿದ್ದು ಭರವಸೆ ಮೂಡಿಸಿತು.
ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನ ಬಗ್ಗೆ ವಾರ್ನರ್ ಹೇಳಿದ್ದಿದು!
ಪಂದ್ಯದ ಐದನೇ ಹಾಗೂ ಅಂತಿಮ ದಿನ ರೋಹಿತ್ ಶರ್ಮ, ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್ ಅಮೋಘ, ಅಧ್ಬುತ ಆಟವಾಡಿದರು. ಕೊನೆಯಲ್ಲಿ ಅಶ್ವಿನ್ ಮತ್ತು ಹನುಮ ವಿಹಾರಿ ಮೈಕೈಗೆ ಸಿಕ್ಕಾಪಟ್ಟೆ ಪೆಟ್ಟು ತಿಂದರೂ ಕೂಡ ಜವಾಬ್ಧಾರಿಯುತ ಆಟವಾಡಿದರು. ಒತ್ತಡ, ಕುಹಕದ ಮಾತು, ನಿಂದನೆ ಎಲ್ಲಾ ಸಹಿಸಿಕೊಂಡು ದೃತಿಗೆಡದೆ, ಆತ್ಮವಿಶ್ವಾಸ ವಿಟ್ಟು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಐದನೇ ದಿನ ಪೂರ್ತಿ ಟೀಮ್ ಇಂಡಿಯಾ ಬ್ಯಾಟ್ ಮಾಡಿ 'ಡ್ರಾ' ಮಾಡಿಕೊಂಡು ಆಸ್ಟ್ರೇಲಿಯಾ ಎದುರು ಸಮಬಲ ಸಾಧಿಸಿದ್ದು 'ಮರೆಯಲಾಗದ ಅನುಭವ' ಎಂದನ್ನಿಸಿತ್ತು!".
ಏಕದಿನ ಸರಣಿ ಆಸ್ಟ್ರೇಲಿಯಾ ತಮ್ಮದಾಗಿಸಿಕೊಂಡರೆ, ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿತು. ನಾವೂ ಏಕದಿನ ಮತ್ತು ಟಿ20 ಮ್ಯಾಚ್ ನೋಡಲು ಹೋಗಿದ್ದೆವಾದರೂ ಸ್ವಲ್ಪ ನಿರಾಸೆಯಿಂದ ಹಿಂದಿರುಗುವಂತ್ತಾಯಿತು (ನಮ್ಮವರು ಸೋತಿದ್ದರಿಂದ). ಜೊತೆಗೆ ಮೊದಲ ಟೆಸ್ಟ್ ನಡೆದ ಅಡಿಲೇಡಿನಲ್ಲಿ ಭಾರತ ಹೀನಾಯ ಸೋತಿತ್ತು. ಆದರೆ, ನಂತರ ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 'ಮುಯ್ಯಿಗೆ ಮುಯ್ಯಿ' ಎನ್ನುವಂತೆ ಒಳ್ಳೆಯ ಪ್ರದರ್ಶನ ನೀಡಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
ಆಸೀಸ್ ಬೌಲರ್ಗಳಿಂದ 14 ಬಾರಿ ಪೆಟ್ಟು ತಿಂದು ದಾಖಲೆ ಬರೆದ ಪೂಜಾರ!
ಜನವರಿ 7ರಿಂದ ನಡೆದ ಸಿಡ್ನಿ ಟೆಸ್ಟ್ ಹೊತ್ತಿಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್(ಎಸ್ಸಿಜಿ)ನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ನಾರ್ದನ್ ಬೀಚ್ ಆರ್.ಎಸ್.ಎಲ್ ಕ್ಲಬ್ನಲ್ಲಿ ಡಿಸೆಂಬರ್ 22ರಂದು , ಒಟ್ಟು ಹತ್ತೊಂಬತ್ತು ಕೋವಿಡ್-19 ಪಾಸಿಟಿವ್ ಕೇಸ್ಗಳು ಕಂಡುಬಂದು ಮೂರು ವಾರಗಳ ಲಾಕ್ಡೌನ್ ಹೇರಿ ಕಟ್ಟುನಿಟ್ಟಿನ ನಿರ್ಭಂದನೆಗಳನ್ನು ತರಲಾಗಿತ್ತು. ಡಿಸೆಂಬರ್ 31ರ ನ್ಯೂ ಯಿಯರ್ ಫೈರ್ ವರ್ಕ್ಸ್ಗೂ ಕೂಡ ಪರ್ಮಿಟ್ ತೆಗೆದುಕೊಂಡು ಹೋಗುವಂತಹ ನಿರ್ಬದಗಳನ್ನು ಹೇರಲಾಗಿತ್ತು. ಒಂದು ತಂಡದಲ್ಲಿ ಗರಿಷ್ಠ ಐದು ಜನರಿಗೆ ಮಾತ್ರ ಅವಕಾಶ. ಹಿಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲೂ ಮಾಸ್ಕ್ ಕಡ್ಡಾಯ, ಧರಿಸದೇ ಇಲ್ಲದವರಿಗೆ 200 ಡಾಲರುಗಳ ದಂಡ, ಹೀಗೆ ಕಟು ನಿಯಮಗಳ ನಡುವೆ ಕೆಲ ನಿಮಿಷಗಳ ಕಾಲ ಮಾತ್ರ ಹೊಸ ವರ್ಷ ಆಚರಿಸಲಾಗಿತ್ತು.
ನಿಮ್ಮಿಂದ ಆಗದು ಎಂದವರ ಮುಂದೆಯೇ ಸರಣಿ ಗೆದ್ದು ಬೀಗಿದ ಭಾರತ: ಅನುಭವಿಸಿದ ನೋವು, ಅವಮಾನ ಒಂದಾ.. ಎರಡಾ..
ನಂತರ ಸಿಡ್ನಿ ಟೆಸ್ಟ್ ಬಗ್ಗೆ ಆತಂಕ ಶರುವಾಯ್ತು. ಮ್ಯಾಚ್ ನಡೆಯುತ್ತೋ ಇಲ್ಲವೋ ಎನ್ನುವ ಕುತೂಹಲ ಹೆಚ್ಚಾಗಿ ಪ್ರತಿದಿನದ ವಾರ್ತೆಯ ಕಡೆಗೆ ನಮ್ಮೆಲ್ಲರ ಮುತುವರ್ಜಿ ಹೆಚ್ಚಾಯಿತು. ಆದರೆ ಯಾವುದೇ ತೊಂದರೆ ಇಲ್ಲದೆ ನಿಗದಿಯಂತೆ ಪಂದ್ಯ ಆರಂಭವಾಯಿತು. ಇನ್ನು ಎಸ್ಸಿಜಿ ಕ್ರಿಕೆಟ್ ಮೈದಾನದಲ್ಲಿ ಸುಮಾರು 48 ಸಾವಿರ ಪ್ರೇಕ್ಷಕರು ಕೂತು ನೋಡುವಕಡೆ, ಕೋವಿಡ್ ಪ್ರಕರಣ ಕಾರಣ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಎಸ್ಸಿಜಿ ಸದಸ್ಯರಿಗೂ 'ಟಿಕೆಟೆಕ್'ನಿಂದ ಇ-ಮೇಲ್ ಮೂಲಕ ಆಯಾಯ ದಿವಸಗಳಿಗೆ ಟಿಕೆಟ್ ಕಳುಹಿಸುತ್ತಿದ್ದರು.
'ಭಾರತವನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು' : ಆಸೀಸ್ ಕೋಚ್ ಭಾವುಕ ಮಾತು!
ನಾವು ಪಂದ್ಯದ ಎರಡನೇ ಮತ್ತು ಮೂರನೇ ದಿನ ಆಟ ನೋಡಲು ಹೋಗಿ, ಭಾರತ ತಂಡದವರು ನೀಡಿದ ರನ್ಔಟ್ಗಳ ಪ್ರದರ್ಶನ ಕಂಡು ಮ್ಯಾಚ್ ಏನಪ್ಪ ಹೀಗೇ? ಎಂದು ಬೇಸರಗೊಂಡಿದ್ದೆವು. ನಾಲ್ಕನೇ ದಿನದಾಟದಲ್ಲೂ ಸುಮಾರು ಜನ ಆಸ್ಟ್ರೇಲಿಯಾಗೆ ಗೆಲುವು ಎನ್ನುತ್ತಿದ್ದರು. ಆದರೆ ಭಾರತ ತಂಡ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದಾಗ ಓಪನರ್ಗಳು ಉತ್ತಮ ಆಟವಾಡಿ ಒಳ್ಳೆಯ ಮೊತ್ತ ಸೇರಿಸಿದ್ದು ಭರವಸೆ ಮೂಡಿಸಿತು.
ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನ ಬಗ್ಗೆ ವಾರ್ನರ್ ಹೇಳಿದ್ದಿದು!
ಪಂದ್ಯದ ಐದನೇ ಹಾಗೂ ಅಂತಿಮ ದಿನ ರೋಹಿತ್ ಶರ್ಮ, ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್ ಅಮೋಘ, ಅಧ್ಬುತ ಆಟವಾಡಿದರು. ಕೊನೆಯಲ್ಲಿ ಅಶ್ವಿನ್ ಮತ್ತು ಹನುಮ ವಿಹಾರಿ ಮೈಕೈಗೆ ಸಿಕ್ಕಾಪಟ್ಟೆ ಪೆಟ್ಟು ತಿಂದರೂ ಕೂಡ ಜವಾಬ್ಧಾರಿಯುತ ಆಟವಾಡಿದರು. ಒತ್ತಡ, ಕುಹಕದ ಮಾತು, ನಿಂದನೆ ಎಲ್ಲಾ ಸಹಿಸಿಕೊಂಡು ದೃತಿಗೆಡದೆ, ಆತ್ಮವಿಶ್ವಾಸ ವಿಟ್ಟು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಐದನೇ ದಿನ ಪೂರ್ತಿ ಟೀಮ್ ಇಂಡಿಯಾ ಬ್ಯಾಟ್ ಮಾಡಿ 'ಡ್ರಾ' ಮಾಡಿಕೊಂಡು ಆಸ್ಟ್ರೇಲಿಯಾ ಎದುರು ಸಮಬಲ ಸಾಧಿಸಿದ್ದು 'ಮರೆಯಲಾಗದ ಅನುಭವ' ಎಂದನ್ನಿಸಿತ್ತು!".