ಆ್ಯಪ್ನಗರ

ರಾಷ್ಟ್ರೀಯ ಕ್ರೀಡಾ ದಿನಾಚರಣೆ; ಧ್ಯಾನ್‌ಚಂದ್ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು

ಮೇಜರ್ ಧ್ಯಾನ್ ಚಂದ್ ಭಾರತವಷ್ಟೇ ಅಲ್ಲ. ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಕ್ರೀಡಾಪಟು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ರನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಇಡಿ ಜಗತ್ತಿನಲ್ಲೇ ಧ್ಯಾನ್‌ಚಂದ್ ಸರಿಗಟ್ಟುವ ಆಟಗಾರನೂ ಯಾರೂ ಇರಲಿಲ್ಲ. 'ದಾದಾ' ಎಂಬ ಅಕ್ಕರೆಯ ಹೆಸರಿನಿಂದಲೇ ಕರೆಯಲ್ಪಡುವ ಧ್ಯಾನ್ ಚಂದ್ ಅವರಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿದೆ.

Indiatimes 29 Aug 2017, 6:13 pm
ಹೊಸದಿಲ್ಲಿ: ಮೇಜರ್ ಧ್ಯಾನ್ ಚಂದ್ ಭಾರತವಷ್ಟೇ ಅಲ್ಲ. ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಕ್ರೀಡಾಪಟು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ರನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಇಡಿ ಜಗತ್ತಿನಲ್ಲೇ ಧ್ಯಾನ್‌ಚಂದ್ ಸರಿಗಟ್ಟುವ ಆಟಗಾರನೂ ಯಾರೂ ಇರಲಿಲ್ಲ. 'ದಾದಾ' ಎಂಬ ಅಕ್ಕರೆಯ ಹೆಸರಿನಿಂದಲೇ ಕರೆಯಲ್ಪಡುವ ಧ್ಯಾನ್ ಚಂದ್ ಅವರಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿದೆ.
Vijaya Karnataka Web on national sports day here are eleven interesting facts about hockey wizard dhyan chand
ರಾಷ್ಟ್ರೀಯ ಕ್ರೀಡಾ ದಿನಾಚರಣೆ; ಧ್ಯಾನ್‌ಚಂದ್ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು


ಧ್ಯಾನ್‌ಚಂದ್ ಹುಟ್ಟುಹಬ್ಬ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. 1928, 1932 ಹಾಗೂ 1936ರಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದು ಕೊಟ್ಟಿರುವ ಧ್ಯಾನ್‌ಚಂದ್ ಒಟ್ಟು 400 ಅಂತರಾಷ್ಟ್ರೀಯ ಗೋಲುಗಳನ್ನು ಬಾರಿಸಿದ್ದರು. ಹಾಗೆಯೇ 1948ರಲ್ಲಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹಾಡಿದ್ದರು.

ಜನನ: 29 ಆಗಸ್ಟ್ 1905
ಮರಣ: 3 ಡಿಸೆಂಬರ್ 1979

ಧ್ಯಾನ್‌ಚಂದ್ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು

01. ಚಿಕ್ಕವನಾಗಿದ್ದಾಗ ರೆಸ್ಲಿಂಗ್‌ನತ್ತ ಧ್ಯಾನ್‌ಚಂದ್ ಅತಿ ಹೆಚ್ಚು ಅಭಿರುಚಿಯನ್ನು ಹೊಂದಿದ್ದರು.


02. 16ರ ಹರೆಯದಲ್ಲಿ ಸಿಪಾಯಿಯಾಗಿ ಬ್ರಿಟಿಷ್ ಸೇನೆಯನ್ನು ಸೇರಿದ್ದರು.


03. ಧ್ಯಾನ್‌ಚಂದ್ ನಿಜ ಹೆಸರು ಧ್ಯಾನ್ ಸಿಂಗ್ ಎಂದಾಗಿದೆ. ಆದರೆ ತಡ ರಾತ್ರಿವರೆಗೂ ಚಂದಿರನ ಬೆಳಕಲ್ಲಿ ಅಭ್ಯಾಸಿಸುತ್ತಿರುವುದರಿಂದ ಪ್ರೀತಿಯಿಂದ ಧ್ಯಾನ್‌ಚಂದ್ ಎಂದು ಹೆಸರಿಸಲಾಗಿತ್ತು.


04. 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಂದ್ ಅವರಿಗೆ ಜರ್ಮನ್ ಪೌರತ್ವವನ್ನು ನೀಡುವುದಾಗಿ ಹಿಟ್ಲರ್ ಘೋಷಿಸಿದ್ದರು. ಆದರೆ ಇದನ್ನು ಧ್ಯಾನ್‌ಚಂದ್ ಸ್ವೀಕರಿಸಲಿಲ್ಲ.




05. ಎದುರಾಳಿಗಳು ಧ್ಯಾನ್‌ಚಂದ್ ಬಗ್ಗೆ ಎಷ್ಟು ಭಯಭೀತಗೊಂಡಿದೆಯೆಂದರೆ ಹಾಲೆಂಡ್ ಅಧಿಕಾರಿಗಳು ಮ್ಯಾಗ್ನೆಟ್ ಹೊಂದಿದೆಯೇ ಎಂಬುದನ್ನು ಪರಿಶೀಲಿಸಲು ಅವರ ಹಾಕಿ ಸ್ಟಿಕ್‌ ಮುರಿದಿದ್ದರು.



06. 1936ರಲ್ಲಿ ಜರ್ಮನ್ ಗೋಲ್ ಕೀಪರ್ ಟಿಟೊ ವಾರ್ನ್‌ಹೋಲ್ಟ್ಜ್ ಜೊತೆ ಢಿಕ್ಕಿ ಹೊಡೆದ ಧ್ಯಾನ್‌ಚಂದ್ ತಮ್ಮ ಹಲ್ಲನ್ನು ಕಳೆದುಕೊಂಡಿದ್ದರು.


07. ಒಲಿಂಪಿಕ್ ಚಿನ್ನದ ಸಾಧನೆ

1928: ಆರ್ಮ್‌ಸ್ಟೆರ್‌ಡ್ಯಾಮ್
1932: ಲಾಸ್ ಏಜಂಲೀಸ್
1936: ಬರ್ಲಿನ್



08. 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರದಿಂದ ಗೌರವ


09. ಭಾರತೀಯ ಸೇನೆಯಲ್ಲಿ ಮೇಜರ್ ಪದವಿಯಲ್ಲಿ ನಿವೃತ್ತಿ


10. 400ಕ್ಕೂ ಹೆಚ್ಚು ಅಂತರಾಷ್ಟ್ರೀಯ ಗೋಲುಗಳು
ಹಾಕಿ ಮಾಂತ್ರಿಕ ಧ್ಯಾನ್‌ಚಂದ್ 10 ಸತ್ಯಗಳು:ವಿಡಿಯೋ ವೀಕ್ಷಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌