ಆ್ಯಪ್ನಗರ

ಬಡ ಅಥ್ಲೀಟ್‌ಗಳನ್ನು ತಯಾರುಗೊಳಿಸಿ ಸಾವಿರ ಪದಕ ಗೆಲ್ಲಿಸಿದ 'ದ್ರೋಣಾಚಾರ್ಯ

ಮಗಳು ಸೂರ್ಯ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಕಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುವುದು ಎಸ್‌ ಲೋಕನಾಥನ್‌ ಅವರಿಗೆ ಹೆಮ್ಮೆಯ ವಿಷಯವಾಗಿದೆ.

TIMESOFINDIA.COM 10 Apr 2018, 12:43 pm
ತಿರುಚ್ಚಿ: ಮಗಳು ಸೂರ್ಯ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಕಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುವುದು ಎಸ್‌ ಲೋಕನಾಥನ್‌ ಅವರಿಗೆ ಹೆಮ್ಮೆಯ ವಿಷಯವಾಗಿದೆ.
Vijaya Karnataka Web lokanathan


ತಿರುಚ್ಚಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸೂರ್ಯ(27) ಕಾಮನ್‌ವೆಲ್ತ್‌ನ 10,000ಮೀ ಓಟದ ಸ್ಪರ್ಧೆಯಲ್ಲಿ 13ನೇ ಸ್ಥಾನ ತಲುಪಿದ್ದಕ್ಕೆ ಲೋಕನಾಥನ್‌ ಅವರಿಗೆ ಸ್ವಲ್ಪ ನಿರಾಸೆ ಉಂಟಾದರೂ ಮುಂದೆ ನಮ್ಮ ಮಗಳು ಖಂಡಿತವಾಗಿಯೂ ಉತ್ತಮ ಸಾಧನೆ ಮಾಡುತ್ತಾರೆ ಎಂಬ ಭರವಸೆ ಹೊಂದಿದ್ದಾರೆ.

ಮಗಳನ್ನು ಒಬ್ಬ ಉತ್ತಮ ಕ್ರೀಡಾಪಟುವಾಗಿ ಮಾಡುವುದರ ಜತೆಗೆ ಬಡ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗುವಂತೆ ಮಾಡಿರುವ ಕೀರ್ತಿ ಲೋಕನಾಥನ್‌ ಅವರದ್ದು.

ಲೋಕನಾಥ್‌ನ್ ಅವರು ಪುದುಕೋಟೈನಲ್ಲಿ 'ಕವಿನಾಡು ಯೂತ್‌ ಸ್ಪೋರ್ಟ್ಸ್‌ ಕ್ಲಬ್' ಸ್ಥಾಪಿಸಿ ಅಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಕರೆತಂದು ಈ ಸಂಸ್ಥೆಯಲ್ಲಿ ತರಬೇತಿ ನೀಡುವ ಮೂಲಕ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದು 9 ಜನ ಅಥ್ಲೀಟ್‌ಗಳು ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಅಥ್ಲೀಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿರುವುದು ಇವರ ಶ್ರಮ ಹಾಗೂ ಒಳ್ಳೆಯ ಮನಸ್ಸಿಗೆ ಸಂದ ಗೌರವ.

ಕಳೆದ ವರ್ಷ ಏಷ್ಯನ್‌ ಅಥ್ಲೀಟ್‌ ಚಾಂಪಿಯನ್‌ಶಿಪ್‌ನಲ್ಲಿ ಡಬಲ್‌ ಗೋಲ್ಡ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜಿ. ಲಕ್ಷ್ಮಣನ್ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಶಾಂತಿ ಸುಂದರರಾಜನ್‌ ಇವರಿಂದ ತರಬೇತಿ ಪಡೆದ ಕ್ರೀಡಾಪಟುಗಳಾಗಿದ್ದಾರೆ.

'ನಾನು ಚಿಕ್ಕವನಿದ್ದಾಗ ಉತ್ತಮ ಕ್ರೀಡಾಪಟುವಾಗಿದ್ದೆ. ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಬೇಕೆಂದು ಬಯಸಿದ್ದೆ. ಆದರೆ ಮನೆಯ ಆರ್ಥಿಕ ದುಃಸ್ಥಿತಿಯಿಂದಾಗಿ ನನ್ನ ಕನಸು ನೆರವೇರಲಿಲ್ಲ. ನಂತರ 80ನೇ ದಶಕದಿಂದ ಉತ್ತಮ ಕ್ರೀಡಾಪಟುಗಳಾಗಿರುವ ಬಡ ಮಕ್ಕಳನ್ನು ಗುರುತಿಸಿ ಅವರನ್ನು ಕರೆತಂದು ತರಬೇತಿ ನೀಡಲಾರಂಭಿಸಿದೆ. ನಾನು ಈ ಸಂಸ್ಥೆಯನ್ನು 2006ರಲ್ಲಿ ಸ್ಥಾಪಿಸಿದೆ. ಫಂಡ್‌ನ ಕೊರತೆಯಿದ್ದು ಹೆಚ್ಚಿನ ಸೌಲಭ್ಯ ಇಲ್ಲದಿದ್ದರೂ ರೋಡ್‌ನಲ್ಲಿಯೇ ತರಬೇತಿ ಮಾಡುತ್ತಾರೆ. ಇಲ್ಲಿ ತರಬೇತಿ ಪಡೆಯುವವರು ನೈಕ್‌ ಶೂ ಧರಿಸದಿದ್ದರೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನನ್ನ ಕ್ರೀಡಾಪಟುಗಳು ಇದುವರೆಗೆ 1000 ಪದಕ ಗೆದ್ದಿದ್ದಾರೆ' ಎನ್ನುತ್ತಾರೆ ಲೋಕನಾಥನ್‌.

ಯಾವುದಾರೂ ಸಂಸ್ಥೆ ಮುಂದೆ ಬಂದು ಕ್ರೀಡಾಪಟುಗಳಿಗೆ ಉತ್ತಮ ಪರಿಕರ ತೆಗೆಯಲು ಸಹಾಯ ಮಾಡಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ.

ಲೋಕನಾಥನ್‌ ತೆರಿಗೆ ಇಲಾಖೆಯಲ್ಲಿ ದುಡಿಯುತ್ತಿದ್ದು, ತಮ್ಮ ದುಡಿಮೆಯ ಬಹುತೇಕ ಭಾಗವನ್ನು ಬಡ ಮಕ್ಕಳ ತರಬೇತಿಗೆ ಹಾಕುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌