ಹೊಸದಿಲ್ಲಿ: ಇಂಗ್ಲೆಂಡ್ ಸೀಮಿತ ಓವರ್ಗಳ ತಂಡದ ನಾಯಕ ಐಯಾನ್ ಮಾರ್ಗನ್ ಹಾಗೂ ಉಪ ನಾಯಕ ಜಾಸ್ ಬಟ್ಲರ್ ಅವರು ಜನಾಂಗೀಯ ನಿಂದನೆ ಟ್ವೀಟ್ ಮಾಡಿದ್ದಾರೆನ್ನಲಾಗುವ ಪ್ರಕರಣದ ತನಿಖೆಯನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಆರಂಭಿಸಿದೆ. 2019ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಐಯಾನ್ ಮಾರ್ಗನ್ ಹಾಗೂ ಜಾಸ್ ಬಟ್ಲರ್ ಅವರು ಭಾರತೀಯರನ್ನು ಅಪಹಾಸ್ಯ ಮಾಡಲು ಕೆಲ ಇಂಗ್ಲಿಷ್ ಮುರಿದ ಪದಗಳನ್ನು ಬಳಸಿದ್ದಾರೆಂಬ ಆರೋಪವನ್ನು ಎದುರಿಸುತ್ತಿದ್ದಾರೆ. 2017-18ರಲ್ಲಿ ಇವರಿಬ್ಬರೂ ಈ ರೀತಿಯ ಟ್ವೀಟ್ ಮಾಡಿದ್ದರೆಂದು ಯುಕೆ ಟೆಲಿಗ್ರಾಫ್ ವರದಿ ಮಾಡಿದೆ.
ಇವರಿಬ್ಬರು ಮಾಡಿರುವ ಸಂದೇಶದ ಸ್ಕ್ರೀನ್ಶಾಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. "ನಾನು ಯಾವಾಗಲೂ ಉತ್ತರಿಸುತ್ತೇನೆ ಸರ್ ನನ್ನಂತೆ ಬೇರೆ ಯಾರೂ ನನ್ನನ್ನು ಇಷ್ಟಪಡುವುದಿಲ್ಲ" ಎಂದು ಜಾಸ್ ಬಟ್ಲರ್ ಹೇಳಿದ್ದರೆ, ಅದಕ್ಕೆ, "ಸರ್, ನೀವು ಓಪನಿಂಗ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತೀರಿ," ಎಂದು ಐಯಾನ್ ವ್ಯಂಗ್ಯವಾಗಿ ಹೇಳಿದ್ದಾರೆ.
'ನಾವೆಲ್ಲಾ ಅವರಿಗೆ ಬ್ಲಡಿ ಇಂಡಿಯನ್ಸ್' : ಆಂಗ್ಲರ ನಿಜ ಬಣ್ಣ ಬಯಲು ಮಾಡಿದ ಫಾರೂಖ್!
ಕೋಲಾಹಲದ ನಂತರ ಕೆಲ ಸಂದೇಶಗಳನ್ನು ಅಳಿಸಲಾಗಿದ್ದರೂ, ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಎಂದು ಇಸಿಬಿ ನಿರ್ಧರಿಸುತ್ತದೆ. ಈ ಸಂದೇಶಗಳ ಸನ್ನಿವೇಶವು ಸ್ಪಷ್ಟವಾಗಿಲ್ಲವಾದರೂ, ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಏಕೆಂದರೆ ಟ್ವೀಟ್ಗಳನ್ನು ಹಂಚಿಕೊಳ್ಳುವ ಸಮಯದಲ್ಲಿ ಜೋಸ್ ಬಟ್ಲರ್ ಮತ್ತು ಐಯಾನ್ ಮೋರ್ಗಾನ್ ಇಬ್ಬರೂ ಇಂಗ್ಲೆಂಡ್ ಆಟಗಾರರಾಗಿ ಬೆಳೆಯುತ್ತಿದ್ದರು.
ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನವೇ ಇಂಗ್ಲೆಂಡ್ ತಂಡದ ಒಲ್ಲೀ ರಾಬಿನ್ಸನ್ ಅವರ ತಾವು ಎಂಟು ವರ್ಷಗಳ ಹಿಂದೆ ಮಾಡಿದ್ದ ಜನಾಂಗೀಯ ಹಾಗೂ ಲಿಂಗ ಸಂಬಂಧಿತ ಟ್ವೀಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಇಸಿಬಿ ಇದನ್ನು ತನಿಖೆ ನಡೆಸುತ್ತಿದೆ. ವೇಗಿ ಜೇಮ್ಸ್ ಅಂಡರ್ಸನ್ ಹಾಗೂ ಮತ್ತೊಬ್ಬ ಆಟಗಾರ ಕೂಡ ತಮ್ಮ ಹಳೆಯ ವಿವಾದಿತ ಪೋಸ್ಟ್ಗಳಿಂದ ಸಿಕ್ಕಿ ಬಿದ್ದಿದ್ದಾರೆ.
'ಡಬ್ಲ್ಯುಟಿಸಿ ಫೈನಲ್ಗೆ ಅಶ್ವಿನ್ ಕೈ ಬಿಟ್ಟರೆ ಭಾರತಕ್ಕೆ ದೊಡ್ಡ ಪ್ರಮಾದ' : ಪ್ರಸಾದ್ ಎಚ್ಚರಿಕೆ!
ಇಸಿಬಿ ವಕ್ತರಾರೊಬ್ಬರು ಮಾತನಾಡಿ," ಕಳೆದ ವಾರ ಆಕ್ರಮಣಕಾರಿ ಟ್ವೀಟ್ಗಳಿಗೆ ನಾವು ಎಚ್ಚರಿಕೆ ವಹಿಸಿದ್ದರಿಂದ, ಇತರ ವ್ಯಕ್ತಿಗಳ ಹಲವಾರು ಐತಿಹಾಸಿಕ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಲಾಗಿದೆ. ನಮ್ಮ ಕ್ರೀಡೆಯಲ್ಲಿ ತಾರತಮ್ಯಕ್ಕೆ ಸ್ಥಳವಿಲ್ಲ ಮತ್ತು ಅಗತ್ಯ ಬಿದ್ದರೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಬದ್ಧರಾಗಿದ್ದೇವೆ," ಎಂದು ಹೇಳಿದ್ದಾರೆ.
"ಎದ್ದಿರುವ ಕಳವಳಗಳು ಇದೀಗ ಒಂದಕ್ಕಿಂತ ಹೆಚ್ಚಿನದವುಗಳಾಗಿವೆ. ಹಿಂದಿನ ಸೋಶಿಯಲ್ ಮೀಡಿಯಾ ವಿಷಯಗಳ ಕುರಿತು ಸಮಯೋಚಿತ ಮತ್ತು ಸೂಕ್ತ ರೀತಿಯಲ್ಲಿ ಹೇಗೆ ವ್ಯವಹರಿಸುತ್ತೇವೆ ಎಂಬುದನ್ನು ಇಸಿಬಿ ಮಂಡಳಿಯು ಚರ್ಚಿಸುತ್ತದೆ. ಪ್ರತಿಯೊಂದು ಪ್ರಕರಣವನ್ನು ನಾವು ವೈಯಕ್ತಿಕ ಆಧಾರದ ಮೇಲೆ ತೆಗೆದುಕೊಳ್ಳುತ್ತೇವೆ ಹಾಗೂ ಎಲ್ಲಾ ಆಯಾಮದಲ್ಲೂ ನೋಡುತ್ತೇವೆ. ಹೆಚ್ಚಿನ ಹೇಳಿಕೆಗಳನ್ನು ನೀಡುವ ಮುನ್ನ ನಾವು ಇಸಿಬಿ ಮಂಡಳಿಯೊಂದಿಗೆ ಪ್ರಕರಣಗಳನ್ನು ನಿರ್ಣಯಿಸುತ್ತೇವೆ," ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಕಿವೀಸ್ ಎಡಗೈ ಬ್ಯಾಟ್ಸ್ಮನ್ಗಳಿಗೆ ಚಳ್ಳೆ ಹಣ್ಣು ತಿನ್ನಿಸುವ ಭಾರತದ ಬೌಲರ್ ಹೆಸರಿಸಿದ ಪಣೇಸರ್!
ಇವರಿಬ್ಬರು ಮಾಡಿರುವ ಸಂದೇಶದ ಸ್ಕ್ರೀನ್ಶಾಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. "ನಾನು ಯಾವಾಗಲೂ ಉತ್ತರಿಸುತ್ತೇನೆ ಸರ್ ನನ್ನಂತೆ ಬೇರೆ ಯಾರೂ ನನ್ನನ್ನು ಇಷ್ಟಪಡುವುದಿಲ್ಲ" ಎಂದು ಜಾಸ್ ಬಟ್ಲರ್ ಹೇಳಿದ್ದರೆ, ಅದಕ್ಕೆ, "ಸರ್, ನೀವು ಓಪನಿಂಗ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತೀರಿ," ಎಂದು ಐಯಾನ್ ವ್ಯಂಗ್ಯವಾಗಿ ಹೇಳಿದ್ದಾರೆ.
'ನಾವೆಲ್ಲಾ ಅವರಿಗೆ ಬ್ಲಡಿ ಇಂಡಿಯನ್ಸ್' : ಆಂಗ್ಲರ ನಿಜ ಬಣ್ಣ ಬಯಲು ಮಾಡಿದ ಫಾರೂಖ್!
ಕೋಲಾಹಲದ ನಂತರ ಕೆಲ ಸಂದೇಶಗಳನ್ನು ಅಳಿಸಲಾಗಿದ್ದರೂ, ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಎಂದು ಇಸಿಬಿ ನಿರ್ಧರಿಸುತ್ತದೆ. ಈ ಸಂದೇಶಗಳ ಸನ್ನಿವೇಶವು ಸ್ಪಷ್ಟವಾಗಿಲ್ಲವಾದರೂ, ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಏಕೆಂದರೆ ಟ್ವೀಟ್ಗಳನ್ನು ಹಂಚಿಕೊಳ್ಳುವ ಸಮಯದಲ್ಲಿ ಜೋಸ್ ಬಟ್ಲರ್ ಮತ್ತು ಐಯಾನ್ ಮೋರ್ಗಾನ್ ಇಬ್ಬರೂ ಇಂಗ್ಲೆಂಡ್ ಆಟಗಾರರಾಗಿ ಬೆಳೆಯುತ್ತಿದ್ದರು.
ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನವೇ ಇಂಗ್ಲೆಂಡ್ ತಂಡದ ಒಲ್ಲೀ ರಾಬಿನ್ಸನ್ ಅವರ ತಾವು ಎಂಟು ವರ್ಷಗಳ ಹಿಂದೆ ಮಾಡಿದ್ದ ಜನಾಂಗೀಯ ಹಾಗೂ ಲಿಂಗ ಸಂಬಂಧಿತ ಟ್ವೀಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಇಸಿಬಿ ಇದನ್ನು ತನಿಖೆ ನಡೆಸುತ್ತಿದೆ. ವೇಗಿ ಜೇಮ್ಸ್ ಅಂಡರ್ಸನ್ ಹಾಗೂ ಮತ್ತೊಬ್ಬ ಆಟಗಾರ ಕೂಡ ತಮ್ಮ ಹಳೆಯ ವಿವಾದಿತ ಪೋಸ್ಟ್ಗಳಿಂದ ಸಿಕ್ಕಿ ಬಿದ್ದಿದ್ದಾರೆ.
'ಡಬ್ಲ್ಯುಟಿಸಿ ಫೈನಲ್ಗೆ ಅಶ್ವಿನ್ ಕೈ ಬಿಟ್ಟರೆ ಭಾರತಕ್ಕೆ ದೊಡ್ಡ ಪ್ರಮಾದ' : ಪ್ರಸಾದ್ ಎಚ್ಚರಿಕೆ!
ಇಸಿಬಿ ವಕ್ತರಾರೊಬ್ಬರು ಮಾತನಾಡಿ," ಕಳೆದ ವಾರ ಆಕ್ರಮಣಕಾರಿ ಟ್ವೀಟ್ಗಳಿಗೆ ನಾವು ಎಚ್ಚರಿಕೆ ವಹಿಸಿದ್ದರಿಂದ, ಇತರ ವ್ಯಕ್ತಿಗಳ ಹಲವಾರು ಐತಿಹಾಸಿಕ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಲಾಗಿದೆ. ನಮ್ಮ ಕ್ರೀಡೆಯಲ್ಲಿ ತಾರತಮ್ಯಕ್ಕೆ ಸ್ಥಳವಿಲ್ಲ ಮತ್ತು ಅಗತ್ಯ ಬಿದ್ದರೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಬದ್ಧರಾಗಿದ್ದೇವೆ," ಎಂದು ಹೇಳಿದ್ದಾರೆ.
"ಎದ್ದಿರುವ ಕಳವಳಗಳು ಇದೀಗ ಒಂದಕ್ಕಿಂತ ಹೆಚ್ಚಿನದವುಗಳಾಗಿವೆ. ಹಿಂದಿನ ಸೋಶಿಯಲ್ ಮೀಡಿಯಾ ವಿಷಯಗಳ ಕುರಿತು ಸಮಯೋಚಿತ ಮತ್ತು ಸೂಕ್ತ ರೀತಿಯಲ್ಲಿ ಹೇಗೆ ವ್ಯವಹರಿಸುತ್ತೇವೆ ಎಂಬುದನ್ನು ಇಸಿಬಿ ಮಂಡಳಿಯು ಚರ್ಚಿಸುತ್ತದೆ. ಪ್ರತಿಯೊಂದು ಪ್ರಕರಣವನ್ನು ನಾವು ವೈಯಕ್ತಿಕ ಆಧಾರದ ಮೇಲೆ ತೆಗೆದುಕೊಳ್ಳುತ್ತೇವೆ ಹಾಗೂ ಎಲ್ಲಾ ಆಯಾಮದಲ್ಲೂ ನೋಡುತ್ತೇವೆ. ಹೆಚ್ಚಿನ ಹೇಳಿಕೆಗಳನ್ನು ನೀಡುವ ಮುನ್ನ ನಾವು ಇಸಿಬಿ ಮಂಡಳಿಯೊಂದಿಗೆ ಪ್ರಕರಣಗಳನ್ನು ನಿರ್ಣಯಿಸುತ್ತೇವೆ," ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಕಿವೀಸ್ ಎಡಗೈ ಬ್ಯಾಟ್ಸ್ಮನ್ಗಳಿಗೆ ಚಳ್ಳೆ ಹಣ್ಣು ತಿನ್ನಿಸುವ ಭಾರತದ ಬೌಲರ್ ಹೆಸರಿಸಿದ ಪಣೇಸರ್!