ಆ್ಯಪ್ನಗರ

ಐಸಿಸಿ ವಿರುದ್ಧ ಸಿಡಿದೆದ್ದ ಅಭಿಮಾನಿಗಳು

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಮಳೆಯಿಂದಾಗಿ ನಾಲ್ಕನೇ ಪಂದ್ಯ ರದ್ದುಗೊಂಡಿದೆ. ಈ ನಡುವೆ ಐಸಿಸಿ ವ್ಯವಸ್ಥಿತವಾಗಿ ಆಯೋಜಿಸಲು ವಿಫಲವಾಗಿದೆ ಎಂದು ಅಭಿಮಾನಿಗಳು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Vijaya Karnataka Web 14 Jun 2019, 3:48 pm
ಲಂಡನ್: ಮಹೇಂದ್ರ ಸಿಂಗ್ ಧೋನಿ ಗ್ಲೌವ್ ವಿವಾದ ಸೇರಿದಂತೆ ಅನೇಕ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಶೋಧಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ವಿಶ್ವಕಪ್‌ನಂತಹ ಬೃಹತ್ ಟೂರ್ನಿಗಳನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ವಿಫಲವಾಗಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
Vijaya Karnataka Web icc-wc-rain


#ShameOnICC ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಐಸಿಸಿ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಯೆಂಬಂತೆ ಐಸಿಸಿ ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯಗಳು ಮಳೆಗೆ ಕೊಚ್ಚಿ ಹೋಗಿದೆ.

ಈ ಮೂಲಕ ತಂಡಗಿಂತಲೂ ಮಿಗಿಲಾಗಿ ಮಳೆಯೇ ಗರಿಷ್ಠ ಎಂಟು ಅಂಕಗಳನ್ನು ಸಂಪಾದಿಸಿದೆ. ಪದೇ ಪದೇ ಮಳೆ ಸುರಿಯುತಿದ್ದರೂ ಮೈದಾನ ಒಣಗಿಸಲು ಬೇಕಾದಷ್ಟು ಮೂಲ ಸೌಕರ್ಯಗಳು ಇಲ್ಲದೆ ಇರುವುದು ಪಂದ್ಯಗಳು ಸಂಪೂರ್ಣವಾಗಿ ರದ್ದುಗೊಳ್ಳಲು ಕಾರಣವಾಗಿದೆ.

ಮೈದಾನವನ್ನು ಸಂಪೂರ್ಣವಾಗಿ ನೀರಿನಿಂದ ಸಂರಕ್ಷಿಸುವಲ್ಲಿ ಐಸಿಸಿ ಎಡವಿದೆ. ಪರಿಣಾಮ ಪಿಚ್ ಹೊರತುಪಡಿಸಿ ಔಟ್ ಫೀಲ್ಡ್‌ನಲ್ಲಿ ಹೊಳೆ ನಿರ್ಮಾಣವಾಗುವಂತಾಗಿದೆ. ಇದು ಮೈದಾನ ಒಣಗಿಸಲು ತುಂಬಾನೇ ವಿಳಂಬವಾಗುತ್ತಿದೆ.

ನೀರನ್ನು ತೆರವುಗೊಳಿಸಲು ಬೇಕಾದಷ್ಟು ಮೆಶಿನ್‌ಗಳು ಇಲ್ಲದೇ ಇರುವುದು ಭಾರಿ ಹಿನ್ನಡೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಐಸಿಸಿ ಕಳಪೆ ಮಟ್ಟದ ವಿಶ್ವಕಪ್ ಆಯೋಜನೆಗೆ ಭಾರಿ ಟೀಕೆಗಳು ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌