ಆ್ಯಪ್ನಗರ

ಪ್ರತಿಕೂಲ ಹವಾಮಾನಕ್ಕೆ ಒಗ್ಗಿಕೊಳ್ಳುವುದೊಂದೇ ದಾರಿ: ಹರ್ಷ ಭೋಗ್ಲೆ

ಆಗೊಮ್ಮೆ ಈಗೊಮ್ಮೆ ವಿಶ್ವಕಪ್‌ ಅಂಗಣಕ್ಕೆ ಮಳೆ ಭೇಟಿ ಕೊಡುತ್ತಿದ್ದು ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿದೆ. ಇದರ ನಡುವೆಯೇ ಟೀಮ್‌ ಇಂಡಿಯಾದಲ್ಲಿ 4ನೇ ಕ್ರಮಾಂಕದ ಚರ್ಚೆ ಮರುಕಳಿಸಿದೆ.

Agencies 13 Jun 2019, 5:42 pm
ಮುಂಬಯಿ: ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಇಂಗ್ಲೆಂಡ್‌ನ ಈಗಿನ ಪರಿಸ್ಥಿತಿ ನೋಡಿದರೆ, ಅಲ್ಲಿನ ಪ್ರತಿಕೂಲ ಹವಾಮಾನಕ್ಕೆ ಒಗ್ಗಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಹೇಳಿದ್ದಾರೆ.
Vijaya Karnataka Web ICC2


ಒಬ್ಬ ಸಭ್ಯ ಅತಿಥಿಯಂತೆ ಆಗೊಮ್ಮೆ ಈಗೊಮ್ಮೆ ವಿಶ್ವಕಪ್‌ ಅಂಗಣಕ್ಕೆ ಮಳೆ ಭೇಟಿ ಕೊಡುತ್ತಿದ್ದು ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿದೆ. ಇದರ ನಡುವೆಯೇ ಟೀಮ್‌ ಇಂಡಿಯಾದಲ್ಲಿ 4ನೇ ಕ್ರಮಾಂಕದ ಚರ್ಚೆ ಮರುಕಳಿಸಿದೆ. ಕೆ.ಎಲ್‌.ರಾಹುಲ್‌ ಕಾಯಂ ಸ್ಥಾನಕ್ಕೆ ಮರಳಿದ್ದು ಇನಿಂಗ್ಸ್‌ ಆರಂಭಿಸಲಿದ್ದಾರೆ.

ಇತ್ತೀಚಿಗೆ ಅವರ ವೃತ್ತಿಬದುಕಿನಲ್ಲಿ ಬಿರುಗಾಳಿ ಎದ್ದಿತ್ತು. ಆದಾಗ್ಯೂ ಧೃತಿಗೆಡದೆ ಶಾಂತಚಿತ್ತರಾಗಿದ್ದ ಅವರಿಗೆ ಇದೀಗ ದಿಢೀರನೆ ಇನಿಂಗ್ಸ್‌ ಆರಂಭಿಸುವ ಅವಕಾಶ ಕೂಡಿಬಂದಿದೆ. ಇದೊಂದು ಸುದೀರ್ಘ ಟೂರ್ನಿಯಾಗುವುದರಿಂದ 15 ಆಟಗಾರರಷ್ಟೇ ಅಲ್ಲದೆ, ಮೀಸಲು ಆಟಗಾರರು ಕೂಡ ಸದಾ ಸಿದ್ಧರಿರಬೇಕಾಗುತ್ತದೆ.

ಇನ್ನು ಮೀಸಲು ದಿನದ ವಿಚಾರ. ಇದು ಹೇಳುವುದಕ್ಕೇನೋ ಸುಲಭ. ಆದರೆ, ಅನುಷ್ಠಾನ ಕಷ್ಟ. ಬಿರುಗಾಳಿ ಮಳೆ ಅಥವಾ ಬರ ಪರಿಸ್ಥಿತಿಯನ್ನು ರೈತರೂ ಸೇರಿದಂತೆ ಪ್ರತಿಯೊಬ್ಬರೂ ದ್ವೇಷಿಸುತ್ತಾರೆ. ಆದರೂ ಬೆಳೆ ಬೆಳೆಯುವುದನ್ನು ನಿಲ್ಲಿಸುವುದಿಲ್ಲ. ಹಾಗೆಯೇ ಕ್ರಿಕೆಟಿಗರೂ ಸದ್ಯದ ಪರಿಸ್ಥಿತಿಗೆ ಒಗ್ಗಿಕೊಂಡು ಮುನ್ನುಗ್ಗಬೇಕಿದೆ ಎಂದು ಭೋಗ್ಲೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌