ಆ್ಯಪ್ನಗರ

ಧೋನಿಗೆ ಆಕ್ರಮಣಕಾರಿಯಾಗಿ ಆಡುವ ಲೈಸನ್ಸ್ ನೀಡಿ: ಭಜ್ಜಿ

ಮುಂಬರುವ ವಿಶ್ವಕಪ್‌ನಲ್ಲಿ ಕ್ರೀಸಿಗಿಳಿದ ತಕ್ಷಣ ಹಾಯಾಗಿ ಆಡಲು ಮಹೇಂದ್ರ ಸಿಂಗ್ ಧೋನಿಗೆ ಟೀಮ್ ಮ್ಯಾನೇಜ್‌ಮೆಂಟ್ ಅವಕಾಶ ನೀಡಬೇಕು ಎಂದು ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 18 May 2019, 2:47 pm
ಹೊಸದಿಲ್ಲಿ: ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಎಸೆತದಿಂದಲೇ ಹಾಯಾಗಿ ಆಡಲು ಮಹೇಂದ್ರ ಸಿಂಗ್ ಧೋನಿಗೆ ಬೇಕಾಗಿರುವ ಸ್ವಾತಂತ್ರ್ಯವನ್ನು ನೀಡಬೇಕು ಎಂದು 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web ms-dhoni-10


ಐಪಿಎಲ್ 2019ನೇ ಆವೃತ್ತಿಯಲ್ಲಿ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ನಾಯಕತ್ವದಡಿಯಲ್ಲಿ ಭಜ್ಜಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೀಗ ತಮ್ಮ ಸಹ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.

ಕ್ರೀಸಿಗಿಳಿದ ಬೆನ್ನಲ್ಲೇ ಹಾಯಾಗಿ ಆಡಲು ಆರಂಭಿಸಿದರೆ ಧೋನಿ ಅತಿ ಹೆಚ್ಚು ಯಶಸ್ಸನ್ನು ಸಾಧಿಸುತ್ತಾರೆ ಎಂಬುದು ನನ್ನ ನಂಬಿಕೆ. ಅನೇಕ ಪಂದ್ಯಗಳಲ್ಲಿ ಇದು ನಿಜವೆನಿಸಿದೆ. ಹಾಗಾಗಿ ಧೋನಿ ಹಾಗೂ ಹಾರ್ದಿಕ್ ಪಾಂಡ್ಯಗೆ ತಾವು ಬಯಸಿದಂತೆ ಆಡಲು ತಂಡದ ವ್ಯವಸ್ಥಾಪಕ ಮಂಡಳಿ ಅನುವು ಮಾಡಿಕೊಡಬೇಕು. ಅಲ್ಲದೆ ಯಾವುದೇ ನಿಯಂತ್ರಣಗಳನ್ನು ಹೇರಬಾರದು ಎಂದು ಭಜ್ಜಿ ವಿವರಿಸಿದರು.

ಅಗ್ರ ಕ್ರಮಾಂಕ ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಕಟ್ಟಬಹುದು. ಬಳಿಕ ಧೋನಿ ಆಕ್ರಮಣಕಾರಿಯಾಗಿ ಆಡಬಹುದು ಎಂದು ಸೇರಿಸಿದರು.

ಧೋನಿ ಈಗಲೂ ಬೃಹತ್ ಸಿಕ್ಸರ್ ಬಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಉಲ್ಲೇಖಿಸಲು ಭಜ್ಜಿ ಮರೆಯಲಿಲ್ಲ. ಅಲ್ಲದೆ ಆಕ್ರಮಣಕಾರಿ ಆಟದ ಮೂಲಕ ಬೌಲರ್‌ಗಳ ಮೇಲೆ ನಿಯಂತ್ರಣ ಸಾಧಿಸಲಿದ್ದಾರೆ ಎಂದರು.

ಅದೇ ಹೊತ್ತಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಕೆಎಲ್ ರಾಹುಲ್ ಸೂಕ್ತ ಎಂಬುದನ್ನು ಒತ್ತಿ ಹೇಳಿದರು.

ಏತನ್ಮಧ್ಯೆ ವಿಶ್ವದ ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಜತೆಗೆ ಜಸ್ಪ್ರೀತ್ ಬುಮ್ರಾ ಭಾರತದ ಪಾಲಿಗೆ ಗೇಮ್ ಚೇಂಜರ್ ಎನಿಸಿಕೊಳ್ಳಲಿದ್ದಾರೆ ಎಂದರು. ಬುಮ್ರಾ ಜಗತ್ತಿನ ಅತ್ಯುತ್ತಮ ಫಾಸ್ಟ್ ಬೌಲರ್ ಎಂದು ಸಚಿನ್ ತೆಂಡೂಲ್ಕರ್ ಕೊಂಡಾಡಿದ್ದಾರೆ. ಅವರು 'ಬೌಲಿಂಗ್‌ನ ವಿರಾಟ್ ಕೊಹ್ಲಿ' ಎಂದು ಶ್ಲಾಘಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌